Latest Updates
-
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ
New Year 2026: ನಿಮ್ಮ ರಾಶಿ ಪ್ರಕಾರ ಈ ದಾನ ಮಾಡಿ! ವರ್ಷವಿಡೀ ಸುಖ-ಸಮೃದ್ಧಿ ಖಚಿತ.. ಯಾವುದು ಶುಭ?
ಹೊಸ ವರ್ಷ 2026 ಆರಂಭಕ್ಕೆ ದಿನಗಣನೆ ಶುರುವಾಗಿದೆ. ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ದಾನ ಮಾಡಿ, ವರ್ಷವಿಡೀ ಸಮೃದ್ಧಿ ಪಡೆಯಿರಿ. ಹೌದು, ಹೊಸ ವರ್ಷದ ಆರಂಭದಲ್ಲಿ ಈ ದಾನ ಮಾಡಿದರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತೆ. ಪೌಷ ಪೂರ್ಣಿಮೆಯಂದು (New Year 2026) ಗಂಗಾ ಸೇರಿದಂತೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಪುಣ್ಯಕರ.
ಈ ವರ್ಷದ ಪೂರ್ಣಿಮೆಯು ವಿಶೇಷ ಶುಭ ಯೋಗದಲ್ಲಿ ಬಂದಿರುವುದರಿಂದ, ದಾನ-ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. 2026ರ ಹೊಸ ವರ್ಷದೊಂದಿಗೆ (New Year 2026) ಪೌಷ ಪೂರ್ಣಿಮೆಯು ಒಟ್ಟಿಗೆ ಬಂದಿರುವುದು ವಿಶೇಷ. ಈ ಶುಭ ದಿನ ರಾಶಿಚಕ್ರದ ಪ್ರಕಾರ ದಾನ ಮಾಡುವುದರಿಂದ ಇಡೀ ವರ್ಷ ಧನ-ಸಮೃದ್ಧಿ ಲಭಿಸುತ್ತದೆ.

ಪೌಷ ಪೂರ್ಣಿಮೆಯ ದಿನಾಂಕ
ಪೌಷ ಪೂರ್ಣಿಮಾ ತಿಥಿಯು (Paush Purnima 2026 Date) 2026ರ ಜನವರಿ 2ರಂದು ಸಂಜೆ 6:53ಕ್ಕೆ ಪ್ರಾರಂಭವಾಗಲಿದೆ. ಜನವರಿ 3ರಂದು ಮಧ್ಯಾಹ್ನ 3:32ಕ್ಕೆ ಅಂತ್ಯಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಸ್ನಾನ ಮತ್ತು ದಾನಕ್ಕಾಗಿ ಪೌಷ ಪೂರ್ಣಿಮೆಯನ್ನು 2026ರ ಜನವರಿ 3ರಂದು ಆಚರಿಸಲಾಗುತ್ತದೆ.
ನಿಮ್ಮ ರಾಶಿ ಪ್ರಕಾರ ಈ ದಾನ ಮಾಡಿ
ಮೇಷ
ಮೇಷ ರಾಶಿಯವರು ಕೆಂಪು ವಸ್ತ್ರ, ಮಸೂರ ಬೇಳೆ, ಜೇನುತುಪ್ಪ ಅಥವಾ ಕೆಂಪು ಹಣ್ಣುಗಳನ್ನು ದಾನ ಮಾಡಿ. ಇದರಿಂದ ಧೈರ್ಯ, ಶಕ್ತಿ, ಸಂಪತ್ತು ಹೆಚ್ಚಿ, ಸಾಲದಿಂದ ಮುಕ್ತಿ ದೊರೆಯುತ್ತದೆ.
ವೃಷಭ
ವೃಷಭ ರಾಶಿಯವರು ಕಂಬಳಿ, ಬಿಳಿ ಸಿಹಿ, ಅಕ್ಕಿ, ತುಪ್ಪ, ಮೊಸರು ಅಥವಾ ಬಿಳಿ ಎಳ್ಳು ದಾನ ಮಾಡಿ. ಇದು ಸುಖ-ಸೌಕರ್ಯ ಮತ್ತು ವೈಭವ ಹೆಚ್ಚಲು ಸಹಕಾರಿ.
ಮಿಥುನ
ಮಿಥುನ ರಾಶಿಯವರು ಹಸಿರು ಹೆಸರು ಬೇಳೆ, ಹಸಿರು ತರಕಾರಿ, ನೆಲ್ಲಿಕಾಯಿ, ಹಸಿರು ವಸ್ತ್ರ ಅಥವಾ ಲೇಖನ ಸಾಮಗ್ರಿಗಳನ್ನು ದಾನ ಮಾಡಿ. ಇದರಿಂದ ವ್ಯಾಪಾರ, ವೃತ್ತಿಯಲ್ಲಿ ಪ್ರಗತಿ ಕಾಣಬಹುದು.
ಕರ್ಕಾಟಕ
ಕರ್ಕಾಟಕ ರಾಶಿಯವರು ಹಾಲು, ಅಕ್ಕಿ, ಬಿಳಿ ಸಿಹಿ, ಬೆಳ್ಳಿ, ಕಲ್ಲುಸಕ್ಕರೆ ಅಥವಾ ನೀರನ್ನು ದಾನ ಮಾಡಬಹುದು. ಇದು ಮಾನಸಿಕ ಶಾಂತಿ ಮತ್ತು ಲಕ್ಷ್ಮೀ ಕೃಪೆ ನೀಡುತ್ತದೆ.
ಸಿಂಹ
ಸಿಂಹ ರಾಶಿಯವರು ಗೋಧಿ, ತಾಮ್ರದ ವಸ್ತು, ಬೆಲ್ಲ, ಕೇಸರಿ ಬಟ್ಟೆ ಅಥವಾ ಕೆಂಪು ಹೂವುಗಳನ್ನು ದಾನ ಮಾಡಿ. ಇದರಿಂದ ಮಾನ-ಸಮ್ಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಕನ್ಯಾ
ಕನ್ಯಾ ರಾಶಿಯವರು ಹಸಿರು ವಸ್ತ್ರ, ಹಸಿರು ಹೆಸರು ಬೇಳೆ, ಹಸಿರು ತರಕಾರಿ ಮತ್ತು ತುಪ್ಪವನ್ನು ದಾನ ಮಾಡಿ. ಇದು ಆರೋಗ್ಯ ಸಂಬಂಧಿ ಲಾಭ ನೀಡುತ್ತದೆ.
ತುಲಾ
ತುಲಾ ರಾಶಿಯವರು ಬಿಳಿ ವಸ್ತ್ರ, ಇತ್ರ, ಸುಗಂಧಯುಕ್ತ ವಸ್ತು, ಅಕ್ಕಿ ಮತ್ತು ತುಪ್ಪವನ್ನು ದಾನ ಮಾಡಿ. ಇದು ಸಂಪತ್ತು, ಐಶ್ವರ್ಯ ಮತ್ತು ವೈಭವವನ್ನು ಹೆಚ್ಚಿಸುತ್ತದೆ.
ವೃಶ್ಚಿಕ
ವೃಶ್ಚಿಕ ರಾಶಿಯವರು ಬೆಲ್ಲ, ಕೆಂಪು ವಸ್ತ್ರ, ಮಸೂರ ಬೇಳೆ, ಕೆಂಪು ಹಣ್ಣು ಅಥವಾ ಅಗತ್ಯವಿರುವವರಿಗೆ ಹಣವನ್ನು ದಾನ ಮಾಡಿ. ಇದರಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ.
ಧನು
ಧನು ರಾಶಿಯವರು ಕಡಲೆ ಬೇಳೆ, ಬಾಳೆಹಣ್ಣು, ಹಳದಿ ವಸ್ತ್ರ, ಅರಿಶಿನ, ಕೇಸರಿ ಅಥವಾ ಜೋಳವನ್ನು ದಾನ ಮಾಡಿ. ಇದು ಮಕ್ಕಳ ಕಲ್ಯಾಣ ಮತ್ತು ಪ್ರಗತಿಗೆ ಕಾರಣವಾಗುತ್ತದೆ.
ಮಕರ
ಮಕರ ರಾಶಿಯವರು ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಉದ್ದಿನ ಬೇಳೆ ಅಥವಾ ಕಂಬಳಿಗಳನ್ನು ದಾನ ಮಾಡಿ. ಇದರಿಂದ ಶನಿ ದೋಷ ಕಡಿಮೆಯಾಗಿ, ವೃತ್ತಿ ಅಡೆತಡೆಗಳು ನಿವಾರಣೆಯಾಗುತ್ತವೆ.
ಕುಂಭ
ಕುಂಭ ರಾಶಿಯವರು ಕಪ್ಪು ಕಂಬಳಿ, ಎಳ್ಳು, ಉದ್ದಿನ ಬೇಳೆ, ಪಾದರಕ್ಷೆ ಅಥವಾ ಹಣವನ್ನು ದಾನ ಮಾಡಿ. ಈ ದಾನ ಆರ್ಥಿಕ ತೊಂದರೆಗಳಿಂದ ಮುಕ್ತಿ ನೀಡುತ್ತದೆ.
ಮೀನ
ಮೀನ ರಾಶಿಯವರು ಕಡಲೆ ಬೇಳೆ, ಹಳದಿ ವಸ್ತ್ರ, ಕಡಲೆ ಹಿಟ್ಟಿನ ಲಡ್ಡು, ಅರಿಶಿನ ಅಥವಾ ಆಹಾರ ಸಾಮಗ್ರಿಗಳನ್ನು ದಾನ ಮಾಡಿ. ಇದರಿಂದ ಆರ್ಥಿಕ ನಷ್ಟ ತಪ್ಪಿ, ಸ್ಥಿರತೆ ಕಾಪಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











