Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ವೈವಾಹಿಕ ಬದುಕಿನ ಸಮಸ್ಯೆ ಬಗೆಹರಿಯಲು ನವರಾತ್ರಿ ಈ ಪರಿಹಾರ ಕ್ರಮ ಒಳ್ಳೆಯದು
ಒಂದು ಮನೆ ಮನೆಯಾಗಿರಬೇಕು ಎಂದರೆ ಆ ಮನೆಯಲ್ಲಿ ನೆಮ್ಮದಿ ಇರಬೇಕು, ಗಂಡ-ಹೆಂಡತಿ ನಡುವೆ ಒಳ್ಳೆಯ ಬಾಂಧವ್ಯ ಇರಬೇಕು. ಇದನ್ನು ನೋಡಿ ಬೆಳೆಯುವ ಮಕ್ಕಳು ತಾವು ಕೂಡ ತಮ್ಮ ಪೋಷಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ.
ಗಂಡ-ಹೆಂಡತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಆ ಮನೆಯ ವಾತಾರಣ ಹಾಳಾಗುವುದು, ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲು ನವರಾತ್ರಿ ಸಮಯದಲ್ಲಿ ದುರ್ಗೆಯನ್ನು ಆರಾಧಿಸಿದರೆ ಒಳ್ಳೆಯದು. ನವರಾತ್ರಿಯಲ್ಲಿ ಈ ರೀತಿ ಮಾಡಿದರೆ ಮನೆಯ ವಾತಾವರಣ ಉತ್ತಮವಾಗುವುದು ಎಂದು ಹೇಳಲಾಗುವುದು.

ದುರ್ಗೆಯನ್ನು ಆರಾಧಿಸಿ
ದುರ್ಗಾ ಮಂತ್ರ ಪಠಣೆ ಮಾಡುತ್ತಾ ದುರ್ಗೆಯನ್ನು ಆರಾಧಿಸಿ, ಅಲ್ಲದೆ ಶ್ರೀವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜಿಸಿ.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ
ಪತಿ-ಪತ್ನಿ ಜೊತೆಯಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಕುಟುಂಬದ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದರಿಂದ ನಿಮ್ಮಲ್ಲಿ ಧನಾತ್ಮಕ ಆಲೋಚನೆ ಹೆಚ್ಚುವುದು, ಅಲ್ಲದೆ ಕುಟುಂಬ ಜೊತೆಗೆ ಹೀಗೆ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡುವುದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಬಗೆಹರಿಯಲಿದೆ.
ಗಾಯತ್ರಿ ಮಂತ್ರ ಪಠಿಸಿ
ದಿನಾ ಬೆಳಗ್ಗೆ ಗಾಯತ್ರಿ ಮಂತ್ರ ಪಠಿಸಿ, ಈ ಮಂತ್ರಕ್ಕೆ ನಿಮ್ಮ ಮನೆಯಲ್ಲಿ ನೆಮ್ಮದಿ, ಸಂತೋಷ ಹೆಚ್ಚಿಸುವ ಶಕ್ತಿಯಿದೆ. ಆದಷ್ಟು ಮನೆಯಲ್ಲಿ ಖುಷಿ-ಖುಷಿಯಾಗಿ ಓಡಾಡಿ, ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ದುರ್ಗಾ ಗಾಯತ್ರಿ ಮಂತ್ರ
ಓಂ ಕಾತ್ಯಾಯನಾಯ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್ ||
ಬೇರೆಯವರ ವಕ್ರದೃಷ್ಟಿ ನಿಮ್ಮ ಕುಟುಂಬದ ಮೇಲೆ ಬೀಳದಿರಲು
ಅಷ್ಟಮಿಯಂದು ಸ್ವಲ್ಪ ಸಾಸಿವೆ ತೆಗೆದು ನಿಮ್ಮ ಹಾಗೂ ಸಂಗಾತಿಯ ತಲೆಗೆ ಸುತ್ತಿ ಹೊರಗಡೆ ಎಸೆಯಿರಿ, ಅಲ್ಲದೆ ಮನೆಯ ಎದುರುಗಡೆ ದೃಷ್ಟಿಬೊಂಬೆ ಇಡಿ.
ಮಂಗಳ ಗ್ರಹ ದೋಷವಿದ್ದರೆ
ಮಂಗಳ ಗ್ರಹದ ದೋಷವಿದ್ದರೆ ಶನಿವಾರ ಮತ್ತು ಮಂಗಳವಾರದ ದಿನ ದುರ್ಗೆ ಹಾಗೂ ಹನುಮಂತನಿಗೆ ಪೂಜೆ ಸಲ್ಲಿಸಿ, ಇದರಿಂದ ವೈವಾಹಿಕ ಬದುಕಿನಲ್ಲಿನ ಸಮಸ್ಯೆ ಕಡಿಮೆಯಾಗಲಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿ
ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಮನೆಯನ್ನು ಶುದ್ಧವಾಗಿಟ್ಟುಕೊಳ್ಳಿ, ಮನೆಯ ಅಲಂಕಾರಕ್ಕೆ ಗಮನ ನೀಡಿ, ಮನೆ ಎಷ್ಟು ಆಕರ್ಷಕವಾಗ ಇಡುತ್ತೀರೋ ನಿಮ್ಮ ಮನಸ್ಸಿನ ಒತ್ತಡ ಕೂಡ ಕಡಿಮೆಯಾಗಲಿದೆ.
ಶಂಖ ಊದಿ
ಪ್ರತಿದಿನ ಪೂಜೆ ಬಳಿಕ ಶಂಖ ಊದಿ, ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುವುದು. ಮನೆಯೊಳಗಿನ ಎಲ್ಲಾ ನಕರಾತ್ಮಕ ಹೊರ ಹೋಗುತ್ತೆ, ಇದರಿಂದ ನಿಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿರಲಿದೆ.
ಅಲ್ಲದೆ ನವರಾತ್ರಿಯ ಸಮಯದಲ್ಲಿ ಈ ಕಾರ್ಯಗಳನ್ನು ಮಾಡುವುದು ಕೂಡ ಶುಭ ಎಂದು ಪರಿಗಣಿಸಲಾಗಿದೆ:
ನವರಾತ್ರಿಗೆ ಚಿನ್ನ ಅಥವಾ ಬೆಳ್ಳಿ ನಾಣ್ಯ ಖರೀದಿ ಮಾಡುವುದು ಒಳ್ಳೆಯದು
ತುಳಸಿ ಗಿಡವಿಲ್ಲ ಎಂದಾದರೆ ನೆಟ್ಟು ಅರೈಕೆ ಮಾಡಿ
ಮನೆಗೆ ದೇವರ ಫೋಟೋ ತನ್ನಿ
ಇರುವೆಗಳಿಗೆ ಧಾನ್ಯಗಳನ್ನು ಹಾಕಿ ಇದರಿಂದ ಸಮಸ್ಯೆ ದೂರಾಗಲಿದೆ.
ಕೊನೆಯದಾಗಿ: ಎಲ್ಲವೂ ನಂಬಿಕೆ, ನಾವು ನಂಬಿಕೆಯಿಂದ ಒಂದ ಕಾರ್ಯ ಮಾಡಿದರೆ ಖಂಡಿತ ನೆರವೇರುವುದು. ಇಂಥ ಧಾರ್ಮಿಕ ಸಂದರ್ಭಗಳಲ್ಲಿ ನಾವು ಏನಾದರೂ ಮಾಡುವಾಗ ದೇವರು ನನ್ನ ಜೊತೆ ಇದ್ದಾರೆ ಎಂಬ ನಂಬಿಕೆ ಬರುವುದು, ಎಲ್ಲಾ ಸವಾಲು ಎದುರಿಸಬಲ್ಲೆ ಎಂಬ ಧೈರ್ಯ ಮೂಡುವುದು. ನಮ್ಮ ಸಂಸಾರ ಚೆನ್ನಾಗಿರಬೇಕು ಎಂದು ನಾವು ಮಾಡುವ ಪ್ರತಿಯೊಂದು ಕಾರ್ಯದಿಂದಾಗಿ ಬದುಕಿನಲ್ಲಿ ಒಳಿತಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
