Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಡಿಸೆಂಬರ್ 27ಕ್ಕೆ ಮಂಡಲಪೂಜೆ: 41 ದಿನದ ಕಠಿಣ ವ್ರತದ ಬಳಿಕ ಮಾಡುವ ಈ ಪೂಜೆಯ ಮಹತ್ವವೇನು?
ಡಿಸೆಂಬರ್ 27ಕ್ಕೆ ಮಂಡಲ ಪೂಜೆ, ಈ ಮಂಡಲ ಪೂಜೆಯನ್ನು ಶಬರಿಮಲೆ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಮಾಡಲಾಗುವುದು. ಮಂಡಲಪೂಜೆಯ ಮಹತ್ವವೇನು? ಈ ಪೂಜೆ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಮಂಡಲಪೂಜೆ ಎಂದರೇನು?
ಮಂಡಲ ಪೂಜೆಗೆ ಮುನ್ನ 41 ದಿನಗಳ ಕಠಿಣ ವ್ರತ ನಿಯಮಗಳನ್ನು ಪಾಲಿಸಿ ಮಾಡುವ ಪೂಜೆ ಇದಾಗಿದೆ. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು, ಈ 41 ದಿನ ವ್ರತ ಪಾಲಿಸುವವರು ಮಾಂಸ, ಮದ್ಯಗಳಿಂದ ದೂರ ಇರಬೇಕು, ಸ್ತ್ರೀಯರನ್ನು ದೈಹಿಕವಾಗಿ ಸಂಪರ್ಕ ಮಾಡುವಂತಿಲ್ಲ.
ಹೀಗೆ ಕಠಿಣ ನಿಮಯವನ್ನು ಪಾಲಿಸಿ ಮಾಡುವ ಪೂಜೆ ಇದಾಗಿದೆ. ಮಂಡಲಪೂಜೆ ಅಯ್ಯಪ್ಪಸ್ವಾಮಿ ಭಕ್ತರಿಗೆ ತುಂಬಾ ವಿಶೇಷವಾದದ್ದು. ಈ ದಿನದಂದು ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು, ಈ ದಿನ ದೇವರ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಮಂಡಲ ಪೂಜೆಯ ನಿಯಮಗಳೇನು?
ಮಂಡಲಪೂಜೆ ಮಾಡುವ ಭಕ್ತನು 41 ದಿನಗಳ ಕಾಲ ಮಾಲಾಧಾರಿಯಾಗಿರುತ್ತಾನೆ, ಗುರುಸ್ವಾಮಿ ಮಾಲೆ ತೊಡಿಸುತ್ತಾರೆ, ಈ ಮಾಲೆಯನ್ನು 41 ದಿನಳ ವ್ರತ ನಿಯಮ ಪಾಲಿಸಿ ದೇವಾಲಯಕ್ಕೆ ಹೋಗಿ ಬಂದ ಬಳಿಕವಷ್ಟೇ ಬಿಚ್ಚಬೇಕು.
* ಮಂಡಲಪೂಜೆ ವ್ರತವನ್ನು ಮಾಡುವವರು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು, ಸಂಜೆಯೂ ಸ್ನಾನ ಮಾಡಿ ದೀಪವನ್ನು ಬೆಳಗಬೇಕು.
* ಈ ಸಮಯದಲ್ಲಿ ಯಾವುದೇ ಕೆಟ್ಟ ಕೃತ್ಯ ಮಾಡಬಾರದು, ಸುಳ್ಳು ಹೇಳಬಾರದು, ಯಾರನ್ನೂ ಬೈಯ್ಯಬಾರದು.
* ದೇವರಿಗೆ ಪ್ರತಿನಿತ್ಯ ಪಂಚಗವ್ಯ ಅಭಿಷೇಕ ಮಾಡಬೇಕು.
* ಮಂಡಲ ಪೂಜೆಯಂದು ಭಕ್ತನು ತಾನು ಇಚ್ಛಿಸಿದ ಅಥವಾ ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರಬೇಕು.
ನದಿ ಸ್ನಾನ
ಮಂಡಲಪೂಜೆ ವ್ರತ ನಿಯಮವನ್ನು ಪಾಲಿಸುವವರು ನದಿಸ್ನಾನ ಮಾಡಬೇಕು ಎಂದು ಹೇಳಲಾಗುವುದು. ನದಿಸ್ನಾನ ಮಾಡುವುದರಿಂದ ಪುಣ್ಯ ಲಭಿಸುವುದು ಅಲ್ಲದೆ ಈ ಸಮಯದಲ್ಲಿ ನದಿ ಸ್ನಾನ ಮಾಡಿದರೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು.
* ವ್ರತ ನಿಯಮ ಪಾಲಿಸುವವರು ಕಪ್ಪು ಅಥವಾ ಖಾವಿ ಬಟ್ಟೆಯನ್ನು ಮಾತ್ರ ಧರಿಸಬೇಕು.
* ವ್ರತ ಪಾಲಿಸುವವರು ಬೆಡ್ನಲ್ಲಿ ಮಲಗಬಾರದು, ನೆಲದಲ್ಲಿಯೇ ಮಲಗಬೇಕು.
ಶಬರಿಮಲೆಯಲ್ಲಿ ವಿಶೇಷ ಪೂಜೆ
ಮಂಡಲಪೂಜೆ ಸಮಯದಲ್ಲಿ ಶಬರಿಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. 41 ದಿನಗಳ ಕಠಿಣ ವ್ರತ ನಿಯಮ ಪಾಲಿಸಿ ಅಯ್ಯಪ್ಪ ಭಕ್ತರು ಈ ಕ್ಷೇತ್ರಕ್ಕೆ ಬರುತ್ತಾರೆ. ಈ ದಿನ ಗುರುವಾಯುರ್ನಲ್ಲಿಯೂ ವಿಶೇಷ ಪೂಜೆ ಇರಲಿದೆ, ಇನ್ನು ಅನೇಕ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು. ಭಕ್ತರು ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸದ ಬಳಿಕವಷ್ಟೇ ಮಂಡಲ ಪೂಜೆ ವ್ರತ ಸಂಪೂರ್ಣವಾಗುವುದು.
ಮಂಡಲಕಾಲ
ಮಂಡಲಕಾಲ ನವೆಂಬರ್ 17ರಿಂದ ಶುರುವಾಗಿದೆ, ಡಿಸೆಂಬರ್ 27ಕ್ಕೆ ಮಂಡಲಪೂಜೆ.
ಮಂಡಲಪೂಜೆ
ಸೂರ್ಯೋದಯ: ಡಿಸೆಂಬರ್ 27, ಬೆಳಗ್ಗೆ 07:10ಕ್ಕೆ
ಸೂರ್ಯಾಸ್ತ: ಡಿಸೆಂಬರ್ 27 ಸಂಜೆ 05:44ಕ್ಕೆ
ಮಂಡಲ ಪೂಜೆಯ ಪ್ರಯೋಜನಗಳು
* ಮಂಡಲಪೂಜೆ ಮಾಡುವುದರಿಂದ ಆತ್ಮಶುದ್ಧಿಯಾಗುವುದು.
* ಭಕ್ತಿಯಿಂದ ಬೇಡಿಕೊಂಡ ಆಸೆಗಳು ಈಡೇರುವುದು
* ಕಷ್ಟಗಳು ದೂರಾಗುವುದು.
* 1-9 ವರ್ಷದ ಹೆಣ್ಮಕ್ಕಳು, ಮುಟ್ಟಿನ ಚಕ್ರ ನಿಂತ ಹೆಣ್ಮಕ್ಕಳು ವ್ರತವನ್ನು ಮಾಡಬಹುದು.
ಅಯ್ಯಪ್ಪ ಸ್ವಾಮಿ ಗಾಯತ್ರಿ ಮಂತ್ರ
ಓಂ ಭೂತಾದಿಪಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ಶಾಸ್ತಾ ಪ್ರಚೋದಯಾತ್||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications