Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಕಾವೇರಿ ಸಂಕ್ರಮಣ ಯಾವಾಗ? ಎಷ್ಟೊತ್ತಿಗೆ ತೀರ್ಥೋದ್ಭವ?
ತುಲಾ ಸಂಕ್ರಮಣಕ್ಕೆ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ. ಸೂರ್ಯ ಪ್ರತಿ ತಿಂಗಳು ತನ್ನ ರಶಿ ಬದಲಾಯಿಸುತ್ತಲೇ ಇರುತ್ತಾನೆ, ಆದರೆ ಸೂರ್ಯ ಕೆಲವೊಂದು ರಾಶಿಗೆ ಸಂಚರಿಸಿದಾಗ ಅದಕ್ಕೆ ತುಂಬಾನೇ ಮಹತ್ವವಿದೆ, ಉದಾಹರಣೆಗೆ ಮಕರ ಸಂಕ್ರಾಂತಿ, ತುಲಾ ಸಂಕ್ರಾಂತಿ. ಈ ಅಕ್ಟೋಬರ್ 18ಕ್ಕೆ ಸೂರ್ಯ ತುಲಾ ರಾಶಿಗೆ ಸಂಚರಿಸಲಿದೆ. ಈ ದಿನ ತುಂಬಾ ವಿಶೇಷವಾದದ್ದು ಏಕೆಂದರೆ ಈ ದಿನ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಕ್ತರಿಗೆ ದರ್ಶನ ನೀಡುವ ದಿನವಾಗಿದೆ. ಇದನ್ನು ಕಾವೇರಿ ಸಂಕ್ರಮಣ ಎಂದು ಕರೆಯಲಾಗುವುದು.

ಕಾವೇರಿಯ ತೀರ್ಥೋದ್ಭವ
ಕಾವೇರಿಯ ತೀರ್ಥೋದ್ಭವ ವಿಜ್ಞಾನವನ್ನು ಮೀರಿದ ವಿಸ್ಮಯಗಳಲ್ಲಿ ಒಂದಾಗಿದೆ. ಕಾವೇರಿಯ ಉಗಮಸ್ಥಳವಾದ ಭಾಗಮಂಡಲದಲ್ಲಿ ಈ ದಿನದಂದೇ ಕಾವೇರಿಯಲ್ಲಿ ತೀರ್ಥ ಉಕ್ಕಿ ಬರುತ್ತದೆ, ವರ್ಷದ ಇತರ ಯಾವುದೇ ದಿನದಲ್ಲಿ ಕಂಡು ಬರದ ವಿಸ್ಮಯ ತುಲಾ ಸಂಕ್ರಮಣದಂದು ಸಂಭವಿಸುತ್ತದೆ.
ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಹರಿಯುವುದನ್ನು ನೋಡಲು ಬರುವ ಲಕ್ಷಾಂತರ ಭಕ್ತರು'
ತುಲಾ ಸಂಕ್ರಾಂತಿಯಂದು ಕಾವೇರಿ ತೀರ್ಥ ರೂಪದಲ್ಲಿ ಉಕ್ಕಿ ಬರುವುದನ್ನು ನೋಡಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಂದ ತೀರ್ಥ ಪಡೆದು ತಮ್ಮ ಮನೆಗಳಿಗೆ ಕೊಂಡೊಯ್ಯುವ ಆಚರಣೆ ಕೊಡಗಿನಲ್ಲಿದೆ. ಗಂಗೆಯಷ್ಟೇ ಪವಿತ್ರವಾದದ್ದು ಈ ತೀರ್ಥ. ಈ ತೀರ್ಥವನ್ನು ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡಿದರೆ ಪುಣ್ಯಸ್ಥಾನದ ಫಲ ಸಿಗುವುದು.
ಹುಟ್ಟು-ಸಾವಿನಲ್ಲಿಯೂ ಈ ತೀರ್ಥ ಬಳಕೆ ಮಾಡುತ್ತಾರೆ
ಕಾವೇರಿ ಸಂಕ್ರಮಣದಂದು ಉಕ್ಕಿ ಬರುವ ತೀರ್ಥವನ್ನು ಸಂಗ್ರಹಿಸಿ ಅದನ್ನು ಬಾಟಲಿಗಳಲ್ಲಿ ತುಂಬಿ ಮನೆ-ಮನೆಗಳಲ್ಲಿ ಇಟ್ಟಿರುತ್ತಾರೆ. ಮಗು ಜನಿಸಿದಾಗ ಈ ತೀರ್ಥ ನೀರನ್ನು ಕುಡಿಸುತ್ತಾರೆ. ವ್ಯಕ್ತಿ ಸಾಯುವಾಗಲೂ ಸ್ವರ್ಗಪ್ರಾಪ್ತಿಯಾಗಲೆಂದು ಈ ತೀರ್ಥ ನೀರನ್ನು ಬಿಡುತ್ತಾರೆ. ಮನೆಯನ್ನು ಶುದ್ಧ ಮಾಡಿದ ಈ ತೀರ್ಥವನ್ನು ಚಿಮುಕಿಸುತ್ತಾರೆ.
ತುಲಾ ಸಂಕ್ರಮಣದಂದು ಈ ಆಚರಣೆಯನ್ನು ಮಾಡಲಾಗುವುದು
ತುಲಾ ಸಂಕ್ರಮಣದಂದು ಕಾವೇರಿ ತಾಯಿಯ ಕಣಿ ಪೂಜೆ ಮಾಡುವುದು ತುಂಬಾನೇ ವಿಶೇಷ. ಈ ದಿನ ಮನೆ-ಮನೆಗಳಲ್ಲಿ ದೋಸೆ ಹಾಗೂ ಸಿಹಿ ಕುಂಬಳಕಾಯಿ ಪಲ್ಯ ಮಾಡುತ್ತಾರೆ. ಗದ್ದೆಗೆ ಸಂಕ್ರಮಣಕ್ಕೆಂದೇ ವಿಶೇಷ ಬಳ್ಳಿ ಸಿಗುತ್ತದೆ ಅದನ್ನು ತಂದು ಕೋಲಿನಲ್ಲಿ ಚುಚ್ಚಿ ಅದಕ್ಕೆ ಕೆಂಪು ಹೂಗಳನ್ನು ಇಟ್ಟು ಅದರ ಕೆಳಗಡೆ ಕುಡಿ ಬಾಳೆಯ ಎಲೆಯನ್ನು ಇಟ್ಟು ಅದರಲ್ಲಿ ತುಪ್ಪ, ದೋಸೆ, ಸಿಹಿ ಕುಂಬಳಕಾಯಿ ಪಲ್ಯ, ದೀಪ ಹಚ್ಚಿ ಕಾವೇರಿ ಮಾತೆಗೆ ವಂದಿಸಿ ಬರುತ್ತಾರೆ.
ಮನೆಯ ಬಾವಿಗಳಿಗೆ ಕೂಡ ಪೂಜೆ ಸಲ್ಲಿಸುತ್ತಾರೆ. ಈ ದಿನ ಎಲ್ಲಾ ಬಾವಿಗಳಲ್ಲಿ ನೀರು ತೀರ್ಥ ರೂಪದಲ್ಲಿ ಗುಳ್ಳೆ-ಗುಳ್ಳೆಯಾಗಿ ಉಕ್ಕಿ ಬರುವುದು ಮತ್ತೊಂದು ವಿಶೇಷ.
ತೀರ್ಥೋದ್ಭವ ಯಾವಾಗ?
ಕಾವೇರಿ ಸಂಕ್ರಮಣ ದಿನಾಂಕ : ಅಕ್ಟೋಬರ್ 17 ಮಧ್ಯರಾತ್ರಿ 1:41ಕ್ಕೆ
ಕಾವೇರಿ ಸಂಕ್ರಮಣ ಪುಣ್ಯಕಾಲ ಸಮಯ: ಬೆಳಗ್ಗೆ 06:17ರಿಂದ ಮಧ್ಯಾಹ್ನ 12:12ರವೆರೆಗ
ಕಾವೇರಿ ಸಂಕ್ರಮಣ ತರ್ಪಣ ಮಹಾ ಪುಣ್ಯಕಾಲ ಸಮಯ: ಬೆಳಗ್ಗೆ 6:17ರಿಂದ 8:16ರವರೆಗೆ
ಕಾವೇರಿ ಸಂಕ್ರಮಣ ಪುಣ್ಯಕಾಲ ವಾರ: ಬುಧವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











