Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Solar Eclipse 2026: ಮೊದಲ ಸೂರ್ಯಗ್ರಹಣ.. ಈ 3 ರಾಶಿಯವರು ಎಚ್ಚರ! ಯಾರಿಗೆಲ್ಲಾ ಲಾಭ ನೋಡಿ
ವರ್ಷದ ಮೊದಲ ಸೂರ್ಯಗ್ರಹಣ! ಈ 3 ರಾಶಿಯವರು ಎಚ್ಚರ.. ಗ್ರಹಣ ಕಾಲದಲ್ಲಿ ಮರೆತೂ ಈ ತಪ್ಪು ಮಾಡಬೇಡಿ! ಹೌದು, 2026ರ ಮೊದಲ ಸೂರ್ಯಗ್ರಹಣವು (First Solar Eclipse of 2026) ಫೆಬ್ರವರಿ 17ರಂದು ಫಾಲ್ಗುಣ ಅಮಾವಾಸ್ಯೆಯ ದಿನ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸದಿದ್ದರೂ, ಇದರ ಜ್ಯೋತಿಷ್ಯ ಪ್ರಭಾವ ಕೆಲವು ರಾಶಿಗಳ ಜೀವನ, ವೃತ್ತಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಅವಧಿಯಲ್ಲಿ ಎಚ್ಚರಿಕೆ ಹಾಗೂ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪವಿತ್ರ ಮಹಾಶಿವರಾತ್ರಿ ಪರ್ವದ ಬೆನ್ನಲ್ಲೇ ಬರುವ ಈ ಗ್ರಹಣ (Surya Grahan 2026), ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:31 ರಿಂದ 7:57ರವರೆಗೆ ಇರಲಿದೆ. ಭಾರತದಲ್ಲಿ ಗೋಚರತೆ ಇಲ್ಲದ ಕಾರಣ ಸೂತಕ ಕಾಲ ಪರಿಗಣಿಸುವುದಿಲ್ಲ. ಆದರೂ, ಜ್ಯೋತಿಷ್ಯೀಯವಾಗಿ ವೈಯಕ್ತಿಕ ಜೀವನ, ಆರೋಗ್ಯ, ವೃತ್ತಿ ಮತ್ತು ಅದೃಷ್ಟದ ಮೇಲೆ ಪರಿಣಾಮ ಬೀರಲಿದೆ.

ಶನಿ ಆಳುವ ಕುಂಭ ರಾಶಿಯಲ್ಲಿ ನಡೆಯಲಿರುವ ಈ ಸೂರ್ಯಗ್ರಹಣವನ್ನು ಸಾಮಾನ್ಯ ಗ್ರಹಣಕ್ಕಿಂತ ಹೆಚ್ಚು ಪ್ರಬಲ ಹಾಗೂ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಎಲ್ಲಾ 12 ರಾಶಿಗಳ ಮೇಲೂ ಇದರ ಪ್ರಭಾವವಿದ್ದರೂ, ನಿರ್ದಿಷ್ಟವಾಗಿ ಮೂರು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಗ್ರಹಣದ ಪ್ರಭಾವ ಸುಮಾರು 15 ದಿನಗಳ ಕಾಲ ಇರುತ್ತದೆ.
ಹಾಗಾಗಿ, ಈ ಅವಧಿಯಲ್ಲಿ ಎಚ್ಚರಿಕೆ, ಸಂಯಮ ಮತ್ತು ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತಿ ಮುಖ್ಯ. ಕರ್ಕ, ಸಿಂಹ ಮತ್ತು ಕುಂಭ ರಾಶಿಗಳವರು ಹೆಚ್ಚು ಜಾಗರೂಕರಾಗಿರಬೇಕು. ಈ ಮೂರು ರಾಶಿಗಳ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.
ಕರ್ಕ
ಕರ್ಕ (ಕಟಕ) ರಾಶಿಯವರಿಗೆ ಈ ಸೂರ್ಯಗ್ರಹಣ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಎಚ್ಚರಿಕೆಯ ಸಮಯ. ಒತ್ತಡ, ಆತಂಕ, ಹೊಸ / ಹಳೆಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿ, ಅಪಾಯಕಾರಿ ಕೆಲಸಗಳಿಂದ ದೂರವಿರಿ. ಗ್ರಹಣದ ಬಳಿಕ ಕನಿಷ್ಠ ಒಂದು ವಾರದವರೆಗೆ ಯಾವುದೇ ಮಹತ್ವದ ನಿರ್ಧಾರ ಅಥವಾ ಹೊಸ ಹೂಡಿಕೆ ಬೇಡ. ಆರೋಗ್ಯ ಮತ್ತು ಮಾನಸಿಕ ಸ್ಥಿತಿಗೆ ಗಮನ ನೀಡಿ.
ಸಿಂಹ
ಸಿಂಹ ರಾಶಿಯವರಿಗೆ ಈ ಸೂರ್ಯಗ್ರಹಣದ ಅವಧಿ ಸವಾಲಿನದ್ದಾಗಿರಬಹುದು. ಆತುರದ ಅಥವಾ ಭಾವನಾತ್ಮಕ ನಿರ್ಧಾರಗಳು ಭವಿಷ್ಯದಲ್ಲಿ ಗಂಭೀರ ಪರಿಣಾಮ ಬೀರಬಲ್ಲವು. ವೃತ್ತಿ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ದೊಡ್ಡ ಹೂಡಿಕೆ, ಒಪ್ಪಂದ ಅಥವಾ ಪಾಲುದಾರಿಕೆಯ ಮೊದಲು ಮರುಚಿಂತನೆ ಮಾಡಿ. ಯೋಚಿಸದ ಹೆಜ್ಜೆಗಳು ಆರ್ಥಿಕ ನಷ್ಟ ಅಥವಾ ವ್ಯಾಪಾರದಲ್ಲಿ ತೊಂದರೆಗಳಿಗೆ ಕಾರಣವಾಗಬಲ್ಲವು.
ಈ ಅವಧಿಯಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು, ಭಾವನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಅತ್ಯಂತ ಮಹತ್ವದ್ದಾಗಿದೆ. ಸಮಾಧಾನದಿಂದ ಕೆಲಸಗಳನ್ನು ನಿರ್ವಹಿಸುವ ಮೂಲಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು ಸೂಕ್ತ.
ಕುಂಭ
ಸೂರ್ಯಗ್ರಹಣವು ಕುಂಭ ರಾಶಿಯಲ್ಲೇ ನಡೆಯಲಿದ್ದು, ಬುಧ ಮತ್ತು ಶುಕ್ರ ಗ್ರಹಗಳೂ ಇರಲಿವೆ. ಇದು ಹಲವು ಆಲೋಚನೆ ಹಾಗೂ ಗೊಂದಲಗಳನ್ನುಂಟು ಮಾಡಬಹುದು. ಈ ಸಮಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರ್ಥಿಕ ವ್ಯವಹಾರ ಮತ್ತು ಹೂಡಿಕೆಗಳಲ್ಲಿ ನಷ್ಟದ ಅಪಾಯವಿರಬಹುದು, ಎಚ್ಚರದಿಂದಿರಿ.
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವಿಶೇಷ ಗಮನ ಅಗತ್ಯ. ಒತ್ತಡ ಕಡಿಮೆ ಮಾಡಲು ಧ್ಯಾನ, ಯೋಗ ಅಥವ ಹಗುರವಾದ ದೈಹಿಕ ಚಟುವಟಿಕೆಗಳನ್ನು ಆಶ್ರಯಿಸಿ. ಈ ಅವಧಿಯಲ್ಲಿ ತಾಳ್ಮೆ ಮತ್ತು ಸಂಯಮ ಕಾಯ್ದುಕೊಳ್ಳುವುದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. ಸಂಕಷ್ಟ ನಿರ್ವಹಣೆಗೆ ಇದು ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









