Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಚಂದ್ರ ಗೋಚರ 2025: ಮಹಾನವಮಿಯಂದು ಮಕರ ರಾಶಿಗೆ ಚಂದ್ರ ಸಂಚಾರ..ಯಾರಿಗಿದೆ ಅದೃಷ್ಟದ ದಿನಗಳು!
ನವರಾತ್ರಿಯ ಸಮಯದಲ್ಲಿ ಎಲ್ಲಾ ಕಡೆಗೂ ದುರ್ಗೆಯು ಆರಾಧನೆ ನಡೆಯುತ್ತಿದೆ. ಹಾಗೆ ಈ ಸಮಯದಲ್ಲಿ ಹಲವು ಗ್ರಹಗಳ ಸಂಚಾರದಿಂದ ಹಲವು ರೀತಿಯ ಶುಭ ಹಾಗೂ ಲಾಭಗಳಿಗೆ ಕಾರಣವಾಗುವ ವಿದ್ಯಮಾನಗಳು ನಡೆಯುತ್ತಿವೆ. ಮಹಾನವಮಿಯ ದಿನದಂದು ಅದ್ಭುತ ಯೋಗ ಹಾಗೂ ಗ್ರಹಗಳಲ್ಲಿನ ಬದಲಾವಣೆಯು ನಿಮಗೆ ಅಚ್ಚರಿಯ ಫಲಿತಾಂಶ ತರಲಿದೆ.
ಅಕ್ಟೋಬರ್ ಮಾಸದ ಮೊದಲ ದಿನವೇ ಚಂದ್ರನ ಸ್ಥಾನ ಬದಲಾವಣೆಯಿಂದಾಗಿ ಹಲವರಲ್ಲಿ ಶುಭಯೋಗ ಬರಲಿದೆ. ಅಕ್ಟೋಬರ್ 1 ರಂದು ಚಂದ್ರನು ತನ್ನ ರಾಶಿ ಚಿಹ್ನೆಯನ್ನು ಬದಲಾಯಿಸುತ್ತಾನೆ. ಚಂದ್ರನನ್ನು ಜ್ಯೋತಿಷ್ಯದಲ್ಲಿ ಶುಭ ತರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಚಂದ್ರನ ಮನೆ ಉತ್ತಮವಾಗಿರಲಿದ್ಯೋ ಅವರಿಗೆ ಅತ್ಯುತ್ತಮ ಲಾಭಗಳಿರಲಿವೆ.

ಚಂದ್ರನು ಅಕ್ಟೋಬರ್ 1 ರಂದು ಮಧ್ಯಾಹ್ನ 2:27 ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಸಾಗುತ್ತಾನೆ. ಅದೇ ರಾಶಿಯಲ್ಲಿ ಚಂದ್ರನು ಮುಂದಿನ ಎರಡು ದಿನಗಳ ಕಾಲ ಚಲಿಸಲಿದ್ದಾನೆ. ಅನಂತರ ಚಂದ್ರನು ಮೀನ ರಾಶಿಗೆ ಚಲಿಸಲಿದ್ದಾನೆ. ಚಂದ್ರನನ್ನು ಶಾಂತಿ, ಸಂಪತ್ತು, ಹಣ, ವೈವಾಹಿಕ ಸಂತೋಷದಂತಹ ವಿಚಾರದಲ್ಲಿ ಶುಭ ತರುವಂತಹ ವಿಚಾರ ಎನ್ನಬಹುದು. ಹಾಗಾದ್ರೆ ಚಂದ್ರ ಗೋಚರದಿಂದಾಗಿ ಯಾರಿಗೆ ಶುಭವಾಗುತ್ತಿದೆ. ಯಾರಲ್ಲಿ ಲಾಭಕರ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧನು ರಾಶಿ
ವಿಷ್ಣುವಿನ ಅಧಿಪತಿ ಗುರುವು ಧನು ರಾಶಿಯನ್ನು ಆಳುತ್ತಾನೆ. ಆದ್ರೆ ಚಂದ್ರನ ಸಂಚಾರದಿಂದಾಗಿ ಧನು ರಾಶಿಯ ಜನರಲ್ಲಿ ಪ್ರಯೋಜನಗಳಿವೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಅತಿಥಿಗಳು ಮನೆಗೆ ಆಗಮಿಸುತ್ತಾರೆ. ಸೇವಾ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳು ಮೆಚ್ಚುಗೆ ಪಡೆಯುತ್ತವೆ. ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಉಂಟಾಗುತ್ತದೆ. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಬಹುದು. ನೀವು ಚಿಂತೆ ಮತ್ತು ಒತ್ತಡದಿಂದ ಮುಕ್ತರಾಗುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಚಂದ್ರನ ಗೋಚರದಿಂದಾಗಿ ವೈವಾಹಿಕ ಜೀವನ ವಿಚಾರದಲ್ಲಿ ಉತ್ತಮ ದಿನಗಳಿವೆ. ಈ ಎರಡು ದಿನಗಳಲ್ಲಿ ನಿಮ್ಮ ಬಾಳ ಸಂಗಾತಿ ಅಥವಾ ಪ್ರೀತಿ ಪಾತ್ರರಿಂದ ನಿಮಗೆ ಮಧುರ ಅನುಭವಗಳಿವೆ. ಅನೇಕರಲ್ಲಿ ಈ ಸಮಯ ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ. ಪ್ರಯಾಣದಲ್ಲಿ ನಿಮಗೆ ಸುಖಕರ ಫಲಿತಾಂಶ ಇರಲಿದೆ. ಬಹಳ ಸಮಯದಿಂದ ನಿಮಗೆ ಕಾಡಿದಂತಹ ಅನಾರೋಗ್ಯ ಸಮಸ್ಯೆಯೊಂದರಿಂದ ಪರಿಹಾರ ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಮನೆಯ ವಾತಾವರಣದಲ್ಲಿ ಖುಷಿ ಇರಲಿದೆ.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು, ಮತ್ತು ಅವರ ದೇವತೆ ವಿಷ್ಣು. ಈ ರಾಶಿಯಡಿಯಲ್ಲಿ ಜನಿಸಿದ ಜನರು ವಿಷ್ಣುವಿನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ನೀವು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತೀರಿ. ಮನೆಯಲ್ಲಿ ಶುಭ ಘಟನೆಗಳು ನಡೆಯುತ್ತವೆ. ಅತಿಥಿಗಳು ಆಗಮಿಸುತ್ತಾರೆ. ನೀವು ಪ್ರೀತಿಪಾತ್ರರನ್ನು ಭೇಟಿಯಾಗುತ್ತೀರಿ. ನಿಮ್ಮ ಹಣ ಎಲ್ಲಿಯಾದರು ಸಿಲುಕಿದ್ದರೆ ಈ ಸಮಯದಲ್ಲಿ ಬಗೆಹರಿಯಲಿದೆ. ಬಹಳ ಸಮಯದಿಂದ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಒತ್ತಡ ವಿಚಾರವೊಂದು ಬಗೆಹರಿಯಲಿದೆ.
(ಹಕ್ಕು ನಿರಾಕರಣೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ಪರಿಹಾರಗಳು, ಪ್ರಯೋಜನಗಳು, ಸಲಹೆಗಳು ಮತ್ತು ಹೇಳಿಕೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ.
ಕನ್ನಡ ಬೋಲ್ಡ್ ಸ್ಕೈ ಹಾಗೂ ಲೇಖಕರು ಈ ಮಾಹಿತಿಯನ್ನು ಖಾತ್ರಿ ಪಡಿಸುವುದಿಲ್ಲ. ಈ ಲೇಖನದಲ್ಲಿರುವ ಮಾಹಿತಿಯನ್ನು ವಿವಿಧ ಮೂಲಗಳು, ಜ್ಯೋತಿಷಿಗಳು, ಪಂಚಾಂಗಗಳು, ಧರ್ಮೋಪದೇಶಗಳು, ನಂಬಿಕೆಗಳು, ಧಾರ್ಮಿಕ ಗ್ರಂಥಗಳು ಮತ್ತು ದಂತಕಥೆಗಳಿಂದ ಸಂಗ್ರಹಿಸಲಾಗಿದೆ. ಹಾಗೆ ಇದನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗಿದೆ. ಹಾಗೆ ಈ ಲೇಖನದ ಮುಖ್ಯ ಉದ್ದೇಶ ಮಾಹಿತಿ ನೀಡುವುದಾಗಿದೆ)



Click it and Unblock the Notifications











