Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಸುದ್ದಿ ಮತ್ತು ಪ್ರಚಾರದ ಗ್ಲೋಬಲ್ ಸ್ಯಾಂಡ್ವಿಚ್!

ಈ ರಾಜವೈಭೋಗದ ಮದುವೆಗಾಗಿ ಖರ್ಚಾದದ್ದೆಷ್ಟು? ರಾಜಕುಮಾರಿ ಕೇಟ್ ಮಿಡಲ್ ಟನ್ ಶುಭಲಗ್ನದ ಸಮಯದಲ್ಲಿ ತೊಟ್ಟ ಹಂಸಬಣ್ಣದ ಬಟ್ಟೆಯ ಬೆಲೆಯೆಷ್ಟು? ಯಾರ್ಯಾರು ಬಂದಿದ್ದರು, ಎಂತೆಂಥ ಚಿತ್ರವಿಚಿತ್ರ ದಿರಿಸುಗಳನ್ನು ತೊಟ್ಟಿದ್ದರು? ಕೇಟ್ ತನ್ನ ಉಂಗುರದ ಬೆರಳಿಗೆ ತೊಡಿಸಿಕೊಂಡ ಉಂಗುರ ಯಾರದು? ಇತ್ಯಾದಿ ಇತ್ಯಾದಿ... ರಾಜಮನೆತನದ ಮದುವೆಯೆಂದ ಮೇಲೆ ಖರ್ಚು ಮಾಡಲೇಬೇಕಲ್ಲ! ರಾಜರು ಸಿಂಪಲ್ ಆಗಿ ದೇವಸ್ಥಾನಕ್ಕೆ ಹೋಗಿ ಹಾರ ಬದಲಾಯಿಸಿಕೊಂಡರೆ ಸಾಕೆ?
ಸುದ್ದಿ ಅಂದ ಮೇಲೆ ಸುದ್ದಿಯೆ. ಪ್ರಕಟಿಸಲೇಬೇಕು. ರೈತರ ಮೇಲಿನ ಗುಂಡಿನ ದಾಳಿಯೇ ಆಗಲಿ, ಜಪಾನಿಗೆ ಅಪ್ಪಳಿಸಿದ ಸುನಾಮಿಯೇ ಆಗಲಿ, ಬರಾಕ್ ಒಬಾಮಾ ಬಿಡುಗಡೆ ಮಾಡಿದ ಬರ್ತ್ ಸರ್ಟಿಫಿಕೇಟ್ ಆಗಲಿ, ಎನ್ಆರ್ಎನ್ ನಿವೃತ್ತಿಯ ಸುದ್ದಿಯೇ ಆಗಲಿ, ಮಡಿಕೇರಿಯಲ್ಲಾದ ಭೀಕರ ಮರ್ಡರ್ ಆಗಲಿ, ಭದ್ರಾವತಿಯಲ್ಲಿ ಕೋಳಿ ಸಾಗಾಣಿಕೆ ತರಬೇತಿ ಕೇಂದ್ರದ ಉದ್ಘಾಟನೆಯೇ ಆಗಲಿ, ಮೇಯರ್ ಶಾರದಮ್ಮ ಎಸ್ಎಸ್ಎಲ್ ಸಿ ಸುದ್ದಿಯೇ ಆಗಲಿ ... ಎಲ್ಲವೂ ಸುದ್ದಿಯೇ. ಎಲ್ಲಕ್ಕೂ ತನ್ನದಾದ ಸ್ಥಾನ ಇದ್ದೇ ಇದೆ.
ಆದರೆ, ಯಾರು ಯಾವ ರೀತಿ ಮಾಧ್ಯಮಗಳನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ನೆರೆ ರಾಜ್ಯದ ನಟನೊಬ್ಬ ರಾಜಕೀಯ ಪಕ್ಷ ಕಟ್ಟಿದಾಗ ಇಡೀ ದಿನ ಅವನೊಬ್ಬನ ಸುದ್ದಿಯೇ ಆವರಿಸಿಕೊಂಡಿರುತ್ತದೆ. ನಮ್ಮ ರಾಜ್ಯದಲ್ಲಿ ಏನೇ ಘಟಿಸಿದರೂ ಪ್ರಮುಖವಾಗಿ ಸುದ್ದಿಯಾಗುವುದೇ ಇಲ್ಲ. ವಿಲಿಯಂ ಮತ್ತು ಕೇಟ್ ಮದುವೆಯೇ ಆಗಲಿ. ಶತಮಾನದ ಮದುವೆ ಎಂದು ಬಣ್ಣಿಸಿಕೊಂಡಿರುವ ಈ ಮದುವೆ ಕ್ರಿಶ್ಚಿಯನ್ ಸಮುದಾಯದ ಮದುವೆಯಷ್ಟೆ. ಆದರೆ, ಇದಕ್ಕೆ ಕೊಡುತ್ತಿರುವ ಪ್ರಚಾರ ಮಾತ್ರ ನೋಡಿ ಸ್ವಲ್ಪ ಅಸಹನೆ ಉಂಟಾಗುತ್ತಿದೆ.
ಅಲ್ಲರೀ, ನಮ್ಮ ಹಿಂದೂ ಅಥವಾ ಭಾರತದ ಯಾವುದೇ ಧರ್ಮದವರ ಮದುವೆ ನಡೆದರೆ ಈ ಪರಿಯ ಪ್ರಚಾರ ನೀಡುತ್ತಾರಾ? ಆಫ್ ಕೋರ್ಸ್ ದುಡ್ಡು ಕೊಟ್ಟರೆ ಇದಕ್ಕಿಂತಲೂ ಹೆಚ್ಚು ಪ್ರಚಾರ ಮಾಡಿದರೂ ಮಾಡಬಹುದು. ಮದುವೆಯ ಪ್ರಚಾರ ಮಾಡುವವರೂ ಇವರೆ, ಮದುವೆ ನಂತರ ಡೈವೋರ್ಸ್ ಯಾವಾಗ ಅಂತ ವಿಶ್ಲೇಷಣೆ ಮಾಡುವವರೂ ಇವರೆ! ಸುದ್ದಿಯ ಮೌಲ್ಯವೆಲ್ಲಿ ಹೋಯಿತು? ಒಂದಂತೂ ನಿಜ ಈ ಮದುವೆಯಿಂದಾಗಿ ಹಿಂದೂ ಸಂಸ್ಕೃತಿಯ ಭಾರತದಲ್ಲಿ ಕ್ರೈಸ್ತ ಧರ್ಮ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಂತಾಯಿತು. ಇತ್ತೀಚೆಗೆ ತಾನೆ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿ ಕ್ರಿಕೆಟಿಗರು ಮೈದಾನದಲ್ಲೇ ನಮಾಜ್ ಮಾಡಿದ್ದರು, ಮಾಡಲು ಅವಕಾಶ ನೀಡಲಾಗಿತ್ತು.
ನಮ್ಮದು ಎಂಥ ಸಮಾಜವೆಂದರೆ, ಯಾವುದೋ ಸಾರ್ವಜನಿಕ ಸ್ಥಳದಲ್ಲಿ ಹೋಮಹವನ ಮಾಡಿದರೆ, ನಮ್ಮವರೇ ತಿರುಗಿಬಿದ್ದಿರುತ್ತಾರೆ. ಎಲ್ಲೋ ತಲೆಮರೆಸಿಕೊಂಡಿದ್ದ ಬುದ್ಧಿಜೀವಿಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಡುತ್ತಾರೆ. ನಾಲ್ಕಾರು ಗಡ್ಡಧಾರಿಗಳು ಜುಬ್ಬಾ ಪೇಜಾಮಾ ಧರಿಸಿ ರೋಡಿಗೆ ಇಳಿದೇ ಬಿಡುತ್ತಾರೆ. ನಮ್ಮದು ಜಾತ್ಯತೀತ ರಾಷ್ಟ್ರ, ಒಂದು ಧರ್ಮಕ್ಕೆ ಇಷ್ಟ್ಯಾಕೆ ಪ್ರಚಾರ ಕೊಡಬೇಕು ಎಂದು ಬತ್ತಳಿಕೆಯಿಂದ ಮಾತಿನ ಬಾಣ ಎಸೆಯಲು ಶುರುಮಾಡುತ್ತಾರೆ. ಇದ್ಯಾಕೆ ಹೀಗೆ?



Click it and Unblock the Notifications