Latest Updates
-
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ?
ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...

ಇಂಥವರು ಅ.11 ಮಂಗಳವಾರದಂದು ಸೂರ್ಯ ಬೆಳಗಾಗುವ ಮುಂಚೆಯೆ ಬಾವಿ, ನದಿ ಅಥವಾ ಸಮುದ್ರದಲ್ಲಿ ಮುಳುಗೇಳದಿದ್ದರೆ ಅವರಿಗೆ ಅಂಟಿಕೊಂಡಿರುವ ರಾಹು ಕಾಟ ಅವರ ಮಕ್ಕಳಿಗೂ ಅಂಟಿಕೊಳ್ಳುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ, ಮತ್ತೆ ಮತ್ತೆ ಹೇಳುತ್ತೇನೆ. ಅಂಥವರು, ಅಂದ್ರೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈಕೊಟ್ಟು ಪಾಪು ಅಲ್ಲರೀ ಪಾಪ ಕಟ್ಟಿಕೊಂಡವರು ನಾಳೆ ಮಾತ್ರವಲ್ಲ, ವರ್ಷದಲ್ಲಿ ಸಮುದ್ರದಲ್ಲಿ ಮೂರು ಬಾರಿ ಅಥವಾ ನದಿಯಲ್ಲಿ ಐದು ಬಾರಿ ಅಥವಾ ಬಾವಿಯಲ್ಲಿ ಏಳು ಬಾರಿ ಸ್ನಾನ ಮಾಡಲೇಬೇಕು. ಕೇಳಿಸಿಕೊಳ್ತಾ ಇದ್ದೀರಿ ತಾನೆ?
ಇಲ್ಲದಿದ್ದರೆ, ಬಡ್ಡಿಮಕ್ಕಳಿಗೆ ಅಂಟಿಕೊಂಡಿರುವ ರಾಹು ಮತ್ತು ಶುಕ್ರ ಕಾಟ ಅವರ ಮಕ್ಕಳಿಗೆ ರೋಗವಾಗಿ ಕಾಣಿಸಿಕೊಳ್ಳುತ್ತದೆ. ಕಪ್ಪು ಕಟ್ಟಿಗೆಯ ಮೇಲೆ ಗೆದ್ದಲು ಹತ್ತಿಕೊಂಡು ಪುದುಪುದು ಪುಡಿ ಉದುರಿಸಿದ ಹಾಗೆ ಮಕ್ಕಳ ಮೈಮೈಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮಂದಿರು ಮಾಡಿರುವ ತಪ್ಪಿಗೆ ಮಕ್ಕಳು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಶೀಗೆ ಹುಣ್ಣಿಮೆಯ ದಿನ ಮೇಲೆ ತಿಳಿಸಿದಂತೆ ಬಾವಿ, ನದಿ ಅಥವಾ ಸಮುದ್ರ ಸ್ನಾನ ಮಾಡಬೇಕು.
ಇನ್ನು ವಿದೇಶಕ್ಕೆ ಹೋದವರೇನು ಸಾಚಾಗಳಾ? ಅಲ್ಲೇ ಇದ್ದು ಯಾವಳೊಂದಿಗೋ ಮಸ್ತ್ ಮಜಾ ಮಾಡಿ ಸಖತ್ ಊಟ ಮಾಡಿದ್ದರೂ, ಇಲ್ಲಿ ಬಂದು ಅಮ್ಮಾ ಹೊಟ್ಟೆ ಹಸಿವಾಗಿದೆ ಊಟಕ್ಕೆ ಹಾಕು ಎಂದು ಹೇಳ್ತಾರೆ ಕಚಡಾ ನನ್ಮಕ್ಳು. ಇಂಥವರಿಗೂ ಕಾಟ ತಪ್ಪಿದ್ದಲ್ಲ. ಈ ಪಾಪ ಪರಿಹಾರಕ್ಕೆ ಏನು ಮಾಡಬೇಕು? ಮೇಲೆ ಹೇಳಿದ ಹಾಗೆ ಮಾಡಿ. ನಾಳೆ ಬರುವ ಶೀಗೆ ಹುಣ್ಣಿಮೆ ಅಂತಿಂಥ ಹುಣ್ಣಿಮೆಯಲ್ಲ. ಹುಣ್ಣಿಮೆಯ ಹುಣ್ಣಿಮೆಯದು.
ಹೀಗೆಂದು ಬ್ರಹ್ಮಾಂಡದಲ್ಲಿ ಪಸರಿಸಿರುವ ಎಲ್ಲ ವೀಕ್ಷಕರಿಗೆ ಅಪ್ಪಣೆ ಕೊಡಿಸಿದವರು ನಿರರ್ಗಳ ಮಾತುಗಾರಿಕೆಯಿಂದ ಖ್ಯಾತರಾಗಿರುವ, ಕೈಯಲ್ಲಿ ಷಣ್ಮುಖನ ದಂಡವನ್ನು ಹಿಡಿದೇ ಇರುವ ಬೃಹತ್ ಬ್ರಹ್ಮಾಂಡ ಖ್ಯಾತಿಯ 'ಪರಿಪೂರ್ಣ' ಜ್ಯೋತಿಷಿ ನರೇಂದ್ರ ಬಾಬು ಶರ್ಮಾ. ಬೆಂಗಳೂರಿನಂಥ ಸಿಟಿಯಲ್ಲಿರುವವರು ಬಾವಿ, ನದಿ, ಸಮುದ್ರವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಇದನ್ನು ಪಾಲಿಸುವುದು ಅಥವಾ ಮೂಢನಂಬಿಕೆಯೆಂದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಪ್ರಜ್ಞಾವಂತ ಓದುಗರಿಗೆ ಬಿಟ್ಟ ವಿಚಾರ.



Click it and Unblock the Notifications