Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...

ಇಂಥವರು ಅ.11 ಮಂಗಳವಾರದಂದು ಸೂರ್ಯ ಬೆಳಗಾಗುವ ಮುಂಚೆಯೆ ಬಾವಿ, ನದಿ ಅಥವಾ ಸಮುದ್ರದಲ್ಲಿ ಮುಳುಗೇಳದಿದ್ದರೆ ಅವರಿಗೆ ಅಂಟಿಕೊಂಡಿರುವ ರಾಹು ಕಾಟ ಅವರ ಮಕ್ಕಳಿಗೂ ಅಂಟಿಕೊಳ್ಳುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ, ಮತ್ತೆ ಮತ್ತೆ ಹೇಳುತ್ತೇನೆ. ಅಂಥವರು, ಅಂದ್ರೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈಕೊಟ್ಟು ಪಾಪು ಅಲ್ಲರೀ ಪಾಪ ಕಟ್ಟಿಕೊಂಡವರು ನಾಳೆ ಮಾತ್ರವಲ್ಲ, ವರ್ಷದಲ್ಲಿ ಸಮುದ್ರದಲ್ಲಿ ಮೂರು ಬಾರಿ ಅಥವಾ ನದಿಯಲ್ಲಿ ಐದು ಬಾರಿ ಅಥವಾ ಬಾವಿಯಲ್ಲಿ ಏಳು ಬಾರಿ ಸ್ನಾನ ಮಾಡಲೇಬೇಕು. ಕೇಳಿಸಿಕೊಳ್ತಾ ಇದ್ದೀರಿ ತಾನೆ?
ಇಲ್ಲದಿದ್ದರೆ, ಬಡ್ಡಿಮಕ್ಕಳಿಗೆ ಅಂಟಿಕೊಂಡಿರುವ ರಾಹು ಮತ್ತು ಶುಕ್ರ ಕಾಟ ಅವರ ಮಕ್ಕಳಿಗೆ ರೋಗವಾಗಿ ಕಾಣಿಸಿಕೊಳ್ಳುತ್ತದೆ. ಕಪ್ಪು ಕಟ್ಟಿಗೆಯ ಮೇಲೆ ಗೆದ್ದಲು ಹತ್ತಿಕೊಂಡು ಪುದುಪುದು ಪುಡಿ ಉದುರಿಸಿದ ಹಾಗೆ ಮಕ್ಕಳ ಮೈಮೈಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮಂದಿರು ಮಾಡಿರುವ ತಪ್ಪಿಗೆ ಮಕ್ಕಳು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಶೀಗೆ ಹುಣ್ಣಿಮೆಯ ದಿನ ಮೇಲೆ ತಿಳಿಸಿದಂತೆ ಬಾವಿ, ನದಿ ಅಥವಾ ಸಮುದ್ರ ಸ್ನಾನ ಮಾಡಬೇಕು.
ಇನ್ನು ವಿದೇಶಕ್ಕೆ ಹೋದವರೇನು ಸಾಚಾಗಳಾ? ಅಲ್ಲೇ ಇದ್ದು ಯಾವಳೊಂದಿಗೋ ಮಸ್ತ್ ಮಜಾ ಮಾಡಿ ಸಖತ್ ಊಟ ಮಾಡಿದ್ದರೂ, ಇಲ್ಲಿ ಬಂದು ಅಮ್ಮಾ ಹೊಟ್ಟೆ ಹಸಿವಾಗಿದೆ ಊಟಕ್ಕೆ ಹಾಕು ಎಂದು ಹೇಳ್ತಾರೆ ಕಚಡಾ ನನ್ಮಕ್ಳು. ಇಂಥವರಿಗೂ ಕಾಟ ತಪ್ಪಿದ್ದಲ್ಲ. ಈ ಪಾಪ ಪರಿಹಾರಕ್ಕೆ ಏನು ಮಾಡಬೇಕು? ಮೇಲೆ ಹೇಳಿದ ಹಾಗೆ ಮಾಡಿ. ನಾಳೆ ಬರುವ ಶೀಗೆ ಹುಣ್ಣಿಮೆ ಅಂತಿಂಥ ಹುಣ್ಣಿಮೆಯಲ್ಲ. ಹುಣ್ಣಿಮೆಯ ಹುಣ್ಣಿಮೆಯದು.
ಹೀಗೆಂದು ಬ್ರಹ್ಮಾಂಡದಲ್ಲಿ ಪಸರಿಸಿರುವ ಎಲ್ಲ ವೀಕ್ಷಕರಿಗೆ ಅಪ್ಪಣೆ ಕೊಡಿಸಿದವರು ನಿರರ್ಗಳ ಮಾತುಗಾರಿಕೆಯಿಂದ ಖ್ಯಾತರಾಗಿರುವ, ಕೈಯಲ್ಲಿ ಷಣ್ಮುಖನ ದಂಡವನ್ನು ಹಿಡಿದೇ ಇರುವ ಬೃಹತ್ ಬ್ರಹ್ಮಾಂಡ ಖ್ಯಾತಿಯ 'ಪರಿಪೂರ್ಣ' ಜ್ಯೋತಿಷಿ ನರೇಂದ್ರ ಬಾಬು ಶರ್ಮಾ. ಬೆಂಗಳೂರಿನಂಥ ಸಿಟಿಯಲ್ಲಿರುವವರು ಬಾವಿ, ನದಿ, ಸಮುದ್ರವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಇದನ್ನು ಪಾಲಿಸುವುದು ಅಥವಾ ಮೂಢನಂಬಿಕೆಯೆಂದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಪ್ರಜ್ಞಾವಂತ ಓದುಗರಿಗೆ ಬಿಟ್ಟ ವಿಚಾರ.



Click it and Unblock the Notifications