Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶೀಗೆ ಹುಣ್ಣಿಮೆಯಂದು ನದಿ ಸ್ನಾನ ಮಾಡ್ದೆ ಹೋದ್ರೆ...

ಇಂಥವರು ಅ.11 ಮಂಗಳವಾರದಂದು ಸೂರ್ಯ ಬೆಳಗಾಗುವ ಮುಂಚೆಯೆ ಬಾವಿ, ನದಿ ಅಥವಾ ಸಮುದ್ರದಲ್ಲಿ ಮುಳುಗೇಳದಿದ್ದರೆ ಅವರಿಗೆ ಅಂಟಿಕೊಂಡಿರುವ ರಾಹು ಕಾಟ ಅವರ ಮಕ್ಕಳಿಗೂ ಅಂಟಿಕೊಳ್ಳುತ್ತದೆ. ಸರಿಯಾಗಿ ಕೇಳಿಸಿಕೊಳ್ಳಿ, ಮತ್ತೆ ಮತ್ತೆ ಹೇಳುತ್ತೇನೆ. ಅಂಥವರು, ಅಂದ್ರೆ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಕೈಕೊಟ್ಟು ಪಾಪು ಅಲ್ಲರೀ ಪಾಪ ಕಟ್ಟಿಕೊಂಡವರು ನಾಳೆ ಮಾತ್ರವಲ್ಲ, ವರ್ಷದಲ್ಲಿ ಸಮುದ್ರದಲ್ಲಿ ಮೂರು ಬಾರಿ ಅಥವಾ ನದಿಯಲ್ಲಿ ಐದು ಬಾರಿ ಅಥವಾ ಬಾವಿಯಲ್ಲಿ ಏಳು ಬಾರಿ ಸ್ನಾನ ಮಾಡಲೇಬೇಕು. ಕೇಳಿಸಿಕೊಳ್ತಾ ಇದ್ದೀರಿ ತಾನೆ?
ಇಲ್ಲದಿದ್ದರೆ, ಬಡ್ಡಿಮಕ್ಕಳಿಗೆ ಅಂಟಿಕೊಂಡಿರುವ ರಾಹು ಮತ್ತು ಶುಕ್ರ ಕಾಟ ಅವರ ಮಕ್ಕಳಿಗೆ ರೋಗವಾಗಿ ಕಾಣಿಸಿಕೊಳ್ಳುತ್ತದೆ. ಕಪ್ಪು ಕಟ್ಟಿಗೆಯ ಮೇಲೆ ಗೆದ್ದಲು ಹತ್ತಿಕೊಂಡು ಪುದುಪುದು ಪುಡಿ ಉದುರಿಸಿದ ಹಾಗೆ ಮಕ್ಕಳ ಮೈಮೈಲೆ ಕಲೆಗಳು ಕಾಣಿಸಿಕೊಳ್ಳುತ್ತವೆ. ಅಪ್ಪ ಅಮ್ಮಂದಿರು ಮಾಡಿರುವ ತಪ್ಪಿಗೆ ಮಕ್ಕಳು ಅನುಭವಿಸಬೇಕಾಗುತ್ತದೆ. ಇದಕ್ಕೆ ಪರಿಹಾರವೆಂದರೆ, ಶೀಗೆ ಹುಣ್ಣಿಮೆಯ ದಿನ ಮೇಲೆ ತಿಳಿಸಿದಂತೆ ಬಾವಿ, ನದಿ ಅಥವಾ ಸಮುದ್ರ ಸ್ನಾನ ಮಾಡಬೇಕು.
ಇನ್ನು ವಿದೇಶಕ್ಕೆ ಹೋದವರೇನು ಸಾಚಾಗಳಾ? ಅಲ್ಲೇ ಇದ್ದು ಯಾವಳೊಂದಿಗೋ ಮಸ್ತ್ ಮಜಾ ಮಾಡಿ ಸಖತ್ ಊಟ ಮಾಡಿದ್ದರೂ, ಇಲ್ಲಿ ಬಂದು ಅಮ್ಮಾ ಹೊಟ್ಟೆ ಹಸಿವಾಗಿದೆ ಊಟಕ್ಕೆ ಹಾಕು ಎಂದು ಹೇಳ್ತಾರೆ ಕಚಡಾ ನನ್ಮಕ್ಳು. ಇಂಥವರಿಗೂ ಕಾಟ ತಪ್ಪಿದ್ದಲ್ಲ. ಈ ಪಾಪ ಪರಿಹಾರಕ್ಕೆ ಏನು ಮಾಡಬೇಕು? ಮೇಲೆ ಹೇಳಿದ ಹಾಗೆ ಮಾಡಿ. ನಾಳೆ ಬರುವ ಶೀಗೆ ಹುಣ್ಣಿಮೆ ಅಂತಿಂಥ ಹುಣ್ಣಿಮೆಯಲ್ಲ. ಹುಣ್ಣಿಮೆಯ ಹುಣ್ಣಿಮೆಯದು.
ಹೀಗೆಂದು ಬ್ರಹ್ಮಾಂಡದಲ್ಲಿ ಪಸರಿಸಿರುವ ಎಲ್ಲ ವೀಕ್ಷಕರಿಗೆ ಅಪ್ಪಣೆ ಕೊಡಿಸಿದವರು ನಿರರ್ಗಳ ಮಾತುಗಾರಿಕೆಯಿಂದ ಖ್ಯಾತರಾಗಿರುವ, ಕೈಯಲ್ಲಿ ಷಣ್ಮುಖನ ದಂಡವನ್ನು ಹಿಡಿದೇ ಇರುವ ಬೃಹತ್ ಬ್ರಹ್ಮಾಂಡ ಖ್ಯಾತಿಯ 'ಪರಿಪೂರ್ಣ' ಜ್ಯೋತಿಷಿ ನರೇಂದ್ರ ಬಾಬು ಶರ್ಮಾ. ಬೆಂಗಳೂರಿನಂಥ ಸಿಟಿಯಲ್ಲಿರುವವರು ಬಾವಿ, ನದಿ, ಸಮುದ್ರವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು? ಇದನ್ನು ಪಾಲಿಸುವುದು ಅಥವಾ ಮೂಢನಂಬಿಕೆಯೆಂದು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಪ್ರಜ್ಞಾವಂತ ಓದುಗರಿಗೆ ಬಿಟ್ಟ ವಿಚಾರ.



Click it and Unblock the Notifications