Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಪ್ರಥಮನ ಏಕಾದಶಿ: ಸೋಮವಾರ ಎಲ್ಲೆಡೆ ತಪ್ತ ಮುದ್ರಾಧಾರಣೆ

ಬೆಂಗಳೂರಿನಲ್ಲಿ ಶ್ರೀ ಪೇಜಾವರ ಹಿರಿಯ, ಶ್ರೀ ಕಾಣಿಯೂರು, ಶ್ರೀ ಉತ್ತರಾದಿ, ಶ್ರೀ ಪುತ್ತಿಗೆ, ಶ್ರೀ ಸೋದೆ ಮಠಾಧೀಶರು, ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರು, ತುಮಕೂರಿನಲ್ಲಿ ಶ್ರೀ ಭೀಮನಕಟ್ಟೆ ಶ್ರೀಗಳು, ಬಳ್ಳಾರಿಯಲ್ಲಿ ಶ್ರೀ ಅದಮಾರು ಶ್ರೀಗಳು, ಮೈಸೂರಿನಲ್ಲಿ ಶ್ರೀ ಪಲಿಮಾರು ಮಠಾಧೀಶರು, ಹುಬ್ಬಳ್ಳಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರು, ಶ್ರೀ ಪೇಜಾವರ ಕಿರಿಯ ಶ್ರೀಗಳು ಚೆನ್ನೈಯಲ್ಲಿ ಮುದ್ರಾಧಾರಣೆ ನಡೆಸಲಿದ್ದಾರೆ.
ಏನಿದು ಮುದ್ರಾಧಾರಣೆ ಸಂಭ್ರಮ ?: ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ. ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ ಮುದ್ರೆಗಳನ್ನು ಹಾಕುವುದು. ಈ ಚಿಹ್ನೆಗಳು ವಿಷ್ಣುವಿನ ಆಭರಣ ಸಾಧನಗಳು. ಇದು ವೈಷ್ಣವ ಲಾಂಛನವಾಗಿದ್ದು ಮಠಾಧೀಶರು ಮಾತ್ರ ಹಾಕುತ್ತಾರೆ.
ವಿವಿಧ ಸಂಸ್ಕಾರಗಳಲ್ಲಿ ಮುದ್ರಾಧಾರಣೆಯೂ ಒಂದಾಗಿದ್ದು ಇದನ್ನು ಮಹಿಳೆಯರು, ಪುರುಷರು, ಆಬಾಲವೃದ್ಧರು, ಯಾವುದೇ ಜಾತಿಮತದವರು ಹಾಕಿಕೊಳ್ಳಬಹುದಾಗಿದೆ. ಪ್ರಥಮನ ಏಕಾದಶಿ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಮುದ್ರಾಧಾರಣೆ ನಡೆಯುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಉಪ್ಪಿನಂಗಡಿ ಸಮೀಪದ ಎರ್ಕಿಮಠದಲ್ಲಿ ಮಾತ್ರ ಗೃಹಸ್ಥಾಶ್ರಮಿಗಳು ಮುದ್ರಾಧಾರಣೆ ನಡೆಸಲು ಮಧ್ವಾಚಾರ್ಯರು ಅನುಮತಿ ಕೊಟ್ಟಿದ್ದರು. ಇದು ಇಂದಿಗೂ ನಡೆದು ಬರುತ್ತಿದೆ.



Click it and Unblock the Notifications
