Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಪ್ರಥಮನ ಏಕಾದಶಿ: ಸೋಮವಾರ ಎಲ್ಲೆಡೆ ತಪ್ತ ಮುದ್ರಾಧಾರಣೆ

ಬೆಂಗಳೂರಿನಲ್ಲಿ ಶ್ರೀ ಪೇಜಾವರ ಹಿರಿಯ, ಶ್ರೀ ಕಾಣಿಯೂರು, ಶ್ರೀ ಉತ್ತರಾದಿ, ಶ್ರೀ ಪುತ್ತಿಗೆ, ಶ್ರೀ ಸೋದೆ ಮಠಾಧೀಶರು, ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶರು, ತುಮಕೂರಿನಲ್ಲಿ ಶ್ರೀ ಭೀಮನಕಟ್ಟೆ ಶ್ರೀಗಳು, ಬಳ್ಳಾರಿಯಲ್ಲಿ ಶ್ರೀ ಅದಮಾರು ಶ್ರೀಗಳು, ಮೈಸೂರಿನಲ್ಲಿ ಶ್ರೀ ಪಲಿಮಾರು ಮಠಾಧೀಶರು, ಹುಬ್ಬಳ್ಳಿಯಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರು, ಶ್ರೀ ಪೇಜಾವರ ಕಿರಿಯ ಶ್ರೀಗಳು ಚೆನ್ನೈಯಲ್ಲಿ ಮುದ್ರಾಧಾರಣೆ ನಡೆಸಲಿದ್ದಾರೆ.
ಏನಿದು ಮುದ್ರಾಧಾರಣೆ ಸಂಭ್ರಮ ?: ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ. ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ ಮುದ್ರೆಗಳನ್ನು ಹಾಕುವುದು. ಈ ಚಿಹ್ನೆಗಳು ವಿಷ್ಣುವಿನ ಆಭರಣ ಸಾಧನಗಳು. ಇದು ವೈಷ್ಣವ ಲಾಂಛನವಾಗಿದ್ದು ಮಠಾಧೀಶರು ಮಾತ್ರ ಹಾಕುತ್ತಾರೆ.
ವಿವಿಧ ಸಂಸ್ಕಾರಗಳಲ್ಲಿ ಮುದ್ರಾಧಾರಣೆಯೂ ಒಂದಾಗಿದ್ದು ಇದನ್ನು ಮಹಿಳೆಯರು, ಪುರುಷರು, ಆಬಾಲವೃದ್ಧರು, ಯಾವುದೇ ಜಾತಿಮತದವರು ಹಾಕಿಕೊಳ್ಳಬಹುದಾಗಿದೆ. ಪ್ರಥಮನ ಏಕಾದಶಿ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಮುದ್ರಾಧಾರಣೆ ನಡೆಯುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಉಪ್ಪಿನಂಗಡಿ ಸಮೀಪದ ಎರ್ಕಿಮಠದಲ್ಲಿ ಮಾತ್ರ ಗೃಹಸ್ಥಾಶ್ರಮಿಗಳು ಮುದ್ರಾಧಾರಣೆ ನಡೆಸಲು ಮಧ್ವಾಚಾರ್ಯರು ಅನುಮತಿ ಕೊಟ್ಟಿದ್ದರು. ಇದು ಇಂದಿಗೂ ನಡೆದು ಬರುತ್ತಿದೆ.



Click it and Unblock the Notifications