Latest Updates
-
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್!
ಭ್ರಷ್ಟರು ಗುಡ್ಡ ಅಗೆದು ಬೆಟ್ಟದಷ್ಟು ದುಡ್ಡು ಮಾಡಿದರು, ಹೆಗ್ಡೆ ನೀವು ...

ಇನ್ನೂ ಆಶ್ಚರ್ಯಕರ ಸಂಗತಿ ಹೇಳ್ಲಾ. ಈ ಹಣ ನೀಡಿರುವುದು ಸೌತ್ ವೆಸ್ಟ್ ಮೈನಿಂಗ್ ಕಂಪನಿ. ನೀವೂ ಒಂದು ವಿಷ್ಯ ತಿಳಿಕೊಳ್ಳಿ. ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆಂದರೆ ಬಳ್ಳಾರಿ ರೆಡ್ಡಿ ಸೋದರರು ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬಾ ಹತ್ತಿರವಾಗಿದ್ದುಕೊಂಡು ಗಣಿಗಳಿಂದ ಸಾವಿರಾರು ಕೋಟಿ ಬಾಚಿದರು ಎಂಬುದು.
ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇನದು ನಿಮ್ಮ ವರದಿ. ಅದರಲ್ಲೆಲ್ಲೂ ರೆಡ್ಡಿ ಸೋದರರ ಗಣಿ ಋಣ ಸಂದಾಯದ (ಯಡಿಯೂರಪ್ಪಗೆ) ಬಗ್ಗೆ ಪ್ರಸ್ತಾಪವೇ ಇಲ್ಲ. ಯಸ್ ಯಡ್ಡಿಗೆ ರೆಡ್ಡಿಗಳಿಂದ ಎಷ್ಟು ಕೋಟಿ ಸಂದಾಯವಾಗಿದೆ ಎಂದು ಯಾಕೆ ರುಜುವಾತುಪಡಿಸಿಲ್ಲ. ಇದನ್ನು ರಾಜ್ಯದ ಜನತೆ ಮುಂದಿಡಲು ಯಾಕೆ ವಿಫಲರಾದಿರಿ?
ಅದೂ ಚೆಕ್ ಮೂಲಕ ಸಂದಾಯವಾಗಿರುವುದನ್ನು ನೀವು ದೊಡ್ಡದಾಗಿ ಎತ್ತಿಹಿಡಿದಿದ್ದೀರಿ. ಇದನ್ನು ಯಾವುದೇ ಒಬ್ಬ ಸಾಧಾರಣ ಪೊಲೀಸ್ ಅಧಿಕಾರಿಯೂ ಪತ್ತೆ ಹಚ್ಚಬಹುದಿತ್ತು, ನೀವೇ ಬೇಕು ಅಂತೇನಿಲ್ಲ. ಗುರುಗಳೇ, ನಿಮ್ಮ ವರದಿಯ ಬಗ್ಗೆ ನಾವೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಠುಸ್ ಎಂದಿವೆ. ಹಾಡಿದ್ದೇ ಹಾಡೋ...ಎಂಬಂತೆ ಬುಧವಾರದ ಪತ್ರಿಕಾಗೋಷ್ಠಿಯಲ್ಲೂ ಅದೇ ಸೋರಿಕೆ ಮಾಹಿತಿಯನ್ನು ನೀಡಿ, ಕೃತಾರ್ಥರಾಗಿದ್ದೀರಿ.



Click it and Unblock the Notifications