Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಭ್ರಷ್ಟರು ಗುಡ್ಡ ಅಗೆದು ಬೆಟ್ಟದಷ್ಟು ದುಡ್ಡು ಮಾಡಿದರು, ಹೆಗ್ಡೆ ನೀವು ...

ಇನ್ನೂ ಆಶ್ಚರ್ಯಕರ ಸಂಗತಿ ಹೇಳ್ಲಾ. ಈ ಹಣ ನೀಡಿರುವುದು ಸೌತ್ ವೆಸ್ಟ್ ಮೈನಿಂಗ್ ಕಂಪನಿ. ನೀವೂ ಒಂದು ವಿಷ್ಯ ತಿಳಿಕೊಳ್ಳಿ. ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆಂದರೆ ಬಳ್ಳಾರಿ ರೆಡ್ಡಿ ಸೋದರರು ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬಾ ಹತ್ತಿರವಾಗಿದ್ದುಕೊಂಡು ಗಣಿಗಳಿಂದ ಸಾವಿರಾರು ಕೋಟಿ ಬಾಚಿದರು ಎಂಬುದು.
ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇನದು ನಿಮ್ಮ ವರದಿ. ಅದರಲ್ಲೆಲ್ಲೂ ರೆಡ್ಡಿ ಸೋದರರ ಗಣಿ ಋಣ ಸಂದಾಯದ (ಯಡಿಯೂರಪ್ಪಗೆ) ಬಗ್ಗೆ ಪ್ರಸ್ತಾಪವೇ ಇಲ್ಲ. ಯಸ್ ಯಡ್ಡಿಗೆ ರೆಡ್ಡಿಗಳಿಂದ ಎಷ್ಟು ಕೋಟಿ ಸಂದಾಯವಾಗಿದೆ ಎಂದು ಯಾಕೆ ರುಜುವಾತುಪಡಿಸಿಲ್ಲ. ಇದನ್ನು ರಾಜ್ಯದ ಜನತೆ ಮುಂದಿಡಲು ಯಾಕೆ ವಿಫಲರಾದಿರಿ?
ಅದೂ ಚೆಕ್ ಮೂಲಕ ಸಂದಾಯವಾಗಿರುವುದನ್ನು ನೀವು ದೊಡ್ಡದಾಗಿ ಎತ್ತಿಹಿಡಿದಿದ್ದೀರಿ. ಇದನ್ನು ಯಾವುದೇ ಒಬ್ಬ ಸಾಧಾರಣ ಪೊಲೀಸ್ ಅಧಿಕಾರಿಯೂ ಪತ್ತೆ ಹಚ್ಚಬಹುದಿತ್ತು, ನೀವೇ ಬೇಕು ಅಂತೇನಿಲ್ಲ. ಗುರುಗಳೇ, ನಿಮ್ಮ ವರದಿಯ ಬಗ್ಗೆ ನಾವೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಠುಸ್ ಎಂದಿವೆ. ಹಾಡಿದ್ದೇ ಹಾಡೋ...ಎಂಬಂತೆ ಬುಧವಾರದ ಪತ್ರಿಕಾಗೋಷ್ಠಿಯಲ್ಲೂ ಅದೇ ಸೋರಿಕೆ ಮಾಹಿತಿಯನ್ನು ನೀಡಿ, ಕೃತಾರ್ಥರಾಗಿದ್ದೀರಿ.



Click it and Unblock the Notifications