Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಭ್ರಷ್ಟರು ಗುಡ್ಡ ಅಗೆದು ಬೆಟ್ಟದಷ್ಟು ದುಡ್ಡು ಮಾಡಿದರು, ಹೆಗ್ಡೆ ನೀವು ...

ಇನ್ನೂ ಆಶ್ಚರ್ಯಕರ ಸಂಗತಿ ಹೇಳ್ಲಾ. ಈ ಹಣ ನೀಡಿರುವುದು ಸೌತ್ ವೆಸ್ಟ್ ಮೈನಿಂಗ್ ಕಂಪನಿ. ನೀವೂ ಒಂದು ವಿಷ್ಯ ತಿಳಿಕೊಳ್ಳಿ. ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆಂದರೆ ಬಳ್ಳಾರಿ ರೆಡ್ಡಿ ಸೋದರರು ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬಾ ಹತ್ತಿರವಾಗಿದ್ದುಕೊಂಡು ಗಣಿಗಳಿಂದ ಸಾವಿರಾರು ಕೋಟಿ ಬಾಚಿದರು ಎಂಬುದು.
ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇನದು ನಿಮ್ಮ ವರದಿ. ಅದರಲ್ಲೆಲ್ಲೂ ರೆಡ್ಡಿ ಸೋದರರ ಗಣಿ ಋಣ ಸಂದಾಯದ (ಯಡಿಯೂರಪ್ಪಗೆ) ಬಗ್ಗೆ ಪ್ರಸ್ತಾಪವೇ ಇಲ್ಲ. ಯಸ್ ಯಡ್ಡಿಗೆ ರೆಡ್ಡಿಗಳಿಂದ ಎಷ್ಟು ಕೋಟಿ ಸಂದಾಯವಾಗಿದೆ ಎಂದು ಯಾಕೆ ರುಜುವಾತುಪಡಿಸಿಲ್ಲ. ಇದನ್ನು ರಾಜ್ಯದ ಜನತೆ ಮುಂದಿಡಲು ಯಾಕೆ ವಿಫಲರಾದಿರಿ?
ಅದೂ ಚೆಕ್ ಮೂಲಕ ಸಂದಾಯವಾಗಿರುವುದನ್ನು ನೀವು ದೊಡ್ಡದಾಗಿ ಎತ್ತಿಹಿಡಿದಿದ್ದೀರಿ. ಇದನ್ನು ಯಾವುದೇ ಒಬ್ಬ ಸಾಧಾರಣ ಪೊಲೀಸ್ ಅಧಿಕಾರಿಯೂ ಪತ್ತೆ ಹಚ್ಚಬಹುದಿತ್ತು, ನೀವೇ ಬೇಕು ಅಂತೇನಿಲ್ಲ. ಗುರುಗಳೇ, ನಿಮ್ಮ ವರದಿಯ ಬಗ್ಗೆ ನಾವೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಠುಸ್ ಎಂದಿವೆ. ಹಾಡಿದ್ದೇ ಹಾಡೋ...ಎಂಬಂತೆ ಬುಧವಾರದ ಪತ್ರಿಕಾಗೋಷ್ಠಿಯಲ್ಲೂ ಅದೇ ಸೋರಿಕೆ ಮಾಹಿತಿಯನ್ನು ನೀಡಿ, ಕೃತಾರ್ಥರಾಗಿದ್ದೀರಿ.



Click it and Unblock the Notifications











