Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಭ್ರಷ್ಟರು ಗುಡ್ಡ ಅಗೆದು ಬೆಟ್ಟದಷ್ಟು ದುಡ್ಡು ಮಾಡಿದರು, ಹೆಗ್ಡೆ ನೀವು ...

ಇನ್ನೂ ಆಶ್ಚರ್ಯಕರ ಸಂಗತಿ ಹೇಳ್ಲಾ. ಈ ಹಣ ನೀಡಿರುವುದು ಸೌತ್ ವೆಸ್ಟ್ ಮೈನಿಂಗ್ ಕಂಪನಿ. ನೀವೂ ಒಂದು ವಿಷ್ಯ ತಿಳಿಕೊಳ್ಳಿ. ಇಡೀ ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆಂದರೆ ಬಳ್ಳಾರಿ ರೆಡ್ಡಿ ಸೋದರರು ಮುಖ್ಯಮಂತ್ರಿ ಯಡಿಯೂರಪ್ಪಗೆ ತುಂಬಾ ಹತ್ತಿರವಾಗಿದ್ದುಕೊಂಡು ಗಣಿಗಳಿಂದ ಸಾವಿರಾರು ಕೋಟಿ ಬಾಚಿದರು ಎಂಬುದು.
ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪಗೆ ಕೋಟ್ಯಂತರ ರುಪಾಯಿ ಸಂದಾಯವಾಗಿದೆ ಎಂಬುದರಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇನದು ನಿಮ್ಮ ವರದಿ. ಅದರಲ್ಲೆಲ್ಲೂ ರೆಡ್ಡಿ ಸೋದರರ ಗಣಿ ಋಣ ಸಂದಾಯದ (ಯಡಿಯೂರಪ್ಪಗೆ) ಬಗ್ಗೆ ಪ್ರಸ್ತಾಪವೇ ಇಲ್ಲ. ಯಸ್ ಯಡ್ಡಿಗೆ ರೆಡ್ಡಿಗಳಿಂದ ಎಷ್ಟು ಕೋಟಿ ಸಂದಾಯವಾಗಿದೆ ಎಂದು ಯಾಕೆ ರುಜುವಾತುಪಡಿಸಿಲ್ಲ. ಇದನ್ನು ರಾಜ್ಯದ ಜನತೆ ಮುಂದಿಡಲು ಯಾಕೆ ವಿಫಲರಾದಿರಿ?
ಅದೂ ಚೆಕ್ ಮೂಲಕ ಸಂದಾಯವಾಗಿರುವುದನ್ನು ನೀವು ದೊಡ್ಡದಾಗಿ ಎತ್ತಿಹಿಡಿದಿದ್ದೀರಿ. ಇದನ್ನು ಯಾವುದೇ ಒಬ್ಬ ಸಾಧಾರಣ ಪೊಲೀಸ್ ಅಧಿಕಾರಿಯೂ ಪತ್ತೆ ಹಚ್ಚಬಹುದಿತ್ತು, ನೀವೇ ಬೇಕು ಅಂತೇನಿಲ್ಲ. ಗುರುಗಳೇ, ನಿಮ್ಮ ವರದಿಯ ಬಗ್ಗೆ ನಾವೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಠುಸ್ ಎಂದಿವೆ. ಹಾಡಿದ್ದೇ ಹಾಡೋ...ಎಂಬಂತೆ ಬುಧವಾರದ ಪತ್ರಿಕಾಗೋಷ್ಠಿಯಲ್ಲೂ ಅದೇ ಸೋರಿಕೆ ಮಾಹಿತಿಯನ್ನು ನೀಡಿ, ಕೃತಾರ್ಥರಾಗಿದ್ದೀರಿ.



Click it and Unblock the Notifications