Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ತರ್ಕಕ್ಕೆ ಸಿಕ್ಕದ ಟಿವಿ9 ಕಾರ್ಯಕ್ರಮ ಹೀಗೂ ಉಂಠೇ

ಜನಪ್ರಿಯತೆ ಮಂಚೂಣಿಯಲ್ಲಿರುವ ಟಿವಿ9 ಒಳಗೆ ಪ್ರಸಾರವಾಗುವ ರೋಮಾಂಚಕ ಕಾರ್ಯಕ್ರಮಗಳಲ್ಲಿ "ಹೀಗೂ ಉಂಟೆ"ಗೆ ಮೊದಲ ಸ್ಥಾನ. ನಮ್ಮನೆಗಳ ಹೆಂಗಸರು ನಂಬಿಕೆ ಅಪನಂಬಿಕೆಗಳನ್ನು ಸ್ಟೌವ್ ಮೇಲಿಟ್ಟು ಇದನ್ನು ನೋಡುತ್ತಾ ಕುಳಿತರೆ ಮುಗಿಯಿತು ಕೆಲಸ. ಅಡುಗೆ ಮನೆಯಲ್ಲಿ ಹಾಲು ಉಕ್ಕುವುದು ಖಂಡಿತ.
ಉಕ್ಕಿ ಹರಿದ ಹಾಲು ನಮ್ಮ ವೆಬ್ ಸೈಟಿನ ವೆರಾಂಡದವರೆವಿಗೂ ಹರಿದು ಬರುವುದು ವಾಡಿಕೆ. "ಟಿವಿ9ನೊಳಗೆ ಹೇಳಿದರಂತೆ, ಅದರ ಬಗ್ಗೆ ಹೆಚ್ಚಿನ ವಿವರ ಕೊಡಿ, ಅಡ್ರೆಸ್ ಮತ್ತು ಫೋನ್ ನಂಬರುಗಳನ್ನೂ ಕೊಡಿ" ಎಂದು ಕೇಳಿ ಬರುವ ಸಪೋರ್ಟ್ ರಿಕ್ವೆಸ್ಟುಗಳನ್ನು ನಿಭಾಯಿಸುವುದು ನಮಗೆ ಕಷ್ಟವೇ ಆಗುತ್ತದೆ.
ನಿನ್ನೆ ಸೋಮವಾರ ಒಬ್ಬ ಮಹರಾಯ್ ಗಿತ್ತಿ ನಮ್ಮ ಫೋನ್ ನಂಬರ್ ಪತ್ತೆ ಮಾಡಿ ಸೀದಾ ಕೇಳಿಬಿಟ್ಟರು. ಆಕೆಯ ಹೆಸರು ಗಿರಿಜಾ, ತಿಪಟೂರಿನವರಂತೆ. "ನಿಮಗೆ ಗೊತ್ತಿರತ್ತೆ ಕೊಡಿ ಸಾರ್" ಎನ್ನುವುದು ಆಕೆಯ ಆಗ್ರಹ. ಅವರು ಹೇಳುವುದು ಇಷ್ಟು:
"ಈಚೆಗೆ ಟಿವಿ9 ನಲ್ಲಿ ಒಂದು ಪ್ರೊಗ್ರಾಂ ಬಂತಂತೆ. ಶಿಂಷಾಗೆ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆಯಂತೆ. ಅಲ್ಲಿರುವ ಶ್ರೀಚಕ್ರ ಅಥವಾ ಸೋಮೇಶ್ವರ ಎಂಬ ದೇವಸ್ಥಾನದಲ್ಲಿ ಬಾವಿಯೋ, ಕೆರೆಯೋ ಒಟ್ಟಾರೆ ಒಂದು ನೀರಿನ ಸೆಲೆ ಇದೆಯಂತೆ. ಆ ನೀರಿನಲ್ಲಿ ಚಕ್ರತೀರ್ಥ ಇದೆಯಂತೆ. ಅಲ್ಲಿಗೆ ಹೋಗಿ ಬಂದರೆ ಕಾರ್ಯಸಿದ್ಧಿ ಆಗುತ್ತದಂತೆ."
ಕಳೆದುಹೋದದ್ದು ಏನೇ ಆಗಿರಲಿ. ಓಲೆ, ಉಂಗುರ, ಬೈಕು, ಮಗು, ಎಮ್ಮೆ, ಹಸ ಕರ, ಪಾಸ್ ಪೋರ್ಟು, ಸಾಕುನಾಯಿ, ಗೆಳೆಯ, ಗೆಳತಿ, ನೆಮ್ಮದಿ ವಾಪಸ್ಸು ಸಿಗತ್ತಂತೆ ಅದಕ್ಕಾಗಿ ತಾವುಗಳು ಮಾಡಬೇಕಾದುದು ಇಷ್ಟೆ ಎಂದು ನಾರಾಯಣ ಸ್ವಾಮಿ ಹೇಳಿದಾರಂತೆ:
ಆ ಹಳ್ಳಿಗೆ ಹೋಗಿ ಎರಡು ವೀಳ್ಯದೆಲೆ, ಚೂರು ಅಡಿಕೆಯನ್ನು ನೀರಿನಲ್ಲಿ ತೇಲಿಬಿಟ್ಟರೆ ಸಾಕಂತೆ. ನೀವು ಕಳೆದುಕೊಂಡಿರುವ ಯಾವುದೇ ಅಮೂಲ್ಯ ವಸ್ತು ವಾಪಾಸು ನಿಮ್ಮ ಕೈಸೇರುತ್ತದಂತೆ ಎನ್ನುವುದು ಸಮಾಚಾರ. ಯಾರಿಗಾದರೂ ಶಿಂಷಾ ಬಳಿ ಇರುವ ಪವಾಡ ಸದೃಶ ಚಕ್ರತೀರ್ಥದ ಬಗ್ಗೆ ವಿವರಗಳು ತಿಳಿದಿದ್ದರೆ ನಮಗೂ ತಿಳಿಸಬೇಕಾಗಿ ವಿನಂತಿ.
ನಮ್ಮ ವೆಬ್ ಸೈಟಿನಲ್ಲಿ ಈ ಮಾಹಿತಿಗಳು ಸಿಗುವುದಿಲ್ಲ. ಮಾನ್ಯ ಓದುಗರು ನೇರವಾಗಿ ಟಿವಿ9 ಕಚೇರಿಯನ್ನು ಸಂಪರ್ಕಿಸಬೇಕೆಂದು ([email protected]) ಕೋರಿಕೆ. ಶಿಂಷಾ ಪವಾಡದ ಬಗ್ಗೆ ಗೊತ್ತಿದ್ದರೆ ವಿವರಗಳನ್ನು ಇಮೇಲ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಪ್ರಕಟಿಸಲಾಗುವುದು.



Click it and Unblock the Notifications