Latest Updates
-
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು!
ತರ್ಕಕ್ಕೆ ಸಿಕ್ಕದ ಟಿವಿ9 ಕಾರ್ಯಕ್ರಮ ಹೀಗೂ ಉಂಠೇ

ಜನಪ್ರಿಯತೆ ಮಂಚೂಣಿಯಲ್ಲಿರುವ ಟಿವಿ9 ಒಳಗೆ ಪ್ರಸಾರವಾಗುವ ರೋಮಾಂಚಕ ಕಾರ್ಯಕ್ರಮಗಳಲ್ಲಿ "ಹೀಗೂ ಉಂಟೆ"ಗೆ ಮೊದಲ ಸ್ಥಾನ. ನಮ್ಮನೆಗಳ ಹೆಂಗಸರು ನಂಬಿಕೆ ಅಪನಂಬಿಕೆಗಳನ್ನು ಸ್ಟೌವ್ ಮೇಲಿಟ್ಟು ಇದನ್ನು ನೋಡುತ್ತಾ ಕುಳಿತರೆ ಮುಗಿಯಿತು ಕೆಲಸ. ಅಡುಗೆ ಮನೆಯಲ್ಲಿ ಹಾಲು ಉಕ್ಕುವುದು ಖಂಡಿತ.
ಉಕ್ಕಿ ಹರಿದ ಹಾಲು ನಮ್ಮ ವೆಬ್ ಸೈಟಿನ ವೆರಾಂಡದವರೆವಿಗೂ ಹರಿದು ಬರುವುದು ವಾಡಿಕೆ. "ಟಿವಿ9ನೊಳಗೆ ಹೇಳಿದರಂತೆ, ಅದರ ಬಗ್ಗೆ ಹೆಚ್ಚಿನ ವಿವರ ಕೊಡಿ, ಅಡ್ರೆಸ್ ಮತ್ತು ಫೋನ್ ನಂಬರುಗಳನ್ನೂ ಕೊಡಿ" ಎಂದು ಕೇಳಿ ಬರುವ ಸಪೋರ್ಟ್ ರಿಕ್ವೆಸ್ಟುಗಳನ್ನು ನಿಭಾಯಿಸುವುದು ನಮಗೆ ಕಷ್ಟವೇ ಆಗುತ್ತದೆ.
ನಿನ್ನೆ ಸೋಮವಾರ ಒಬ್ಬ ಮಹರಾಯ್ ಗಿತ್ತಿ ನಮ್ಮ ಫೋನ್ ನಂಬರ್ ಪತ್ತೆ ಮಾಡಿ ಸೀದಾ ಕೇಳಿಬಿಟ್ಟರು. ಆಕೆಯ ಹೆಸರು ಗಿರಿಜಾ, ತಿಪಟೂರಿನವರಂತೆ. "ನಿಮಗೆ ಗೊತ್ತಿರತ್ತೆ ಕೊಡಿ ಸಾರ್" ಎನ್ನುವುದು ಆಕೆಯ ಆಗ್ರಹ. ಅವರು ಹೇಳುವುದು ಇಷ್ಟು:
"ಈಚೆಗೆ ಟಿವಿ9 ನಲ್ಲಿ ಒಂದು ಪ್ರೊಗ್ರಾಂ ಬಂತಂತೆ. ಶಿಂಷಾಗೆ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆಯಂತೆ. ಅಲ್ಲಿರುವ ಶ್ರೀಚಕ್ರ ಅಥವಾ ಸೋಮೇಶ್ವರ ಎಂಬ ದೇವಸ್ಥಾನದಲ್ಲಿ ಬಾವಿಯೋ, ಕೆರೆಯೋ ಒಟ್ಟಾರೆ ಒಂದು ನೀರಿನ ಸೆಲೆ ಇದೆಯಂತೆ. ಆ ನೀರಿನಲ್ಲಿ ಚಕ್ರತೀರ್ಥ ಇದೆಯಂತೆ. ಅಲ್ಲಿಗೆ ಹೋಗಿ ಬಂದರೆ ಕಾರ್ಯಸಿದ್ಧಿ ಆಗುತ್ತದಂತೆ."
ಕಳೆದುಹೋದದ್ದು ಏನೇ ಆಗಿರಲಿ. ಓಲೆ, ಉಂಗುರ, ಬೈಕು, ಮಗು, ಎಮ್ಮೆ, ಹಸ ಕರ, ಪಾಸ್ ಪೋರ್ಟು, ಸಾಕುನಾಯಿ, ಗೆಳೆಯ, ಗೆಳತಿ, ನೆಮ್ಮದಿ ವಾಪಸ್ಸು ಸಿಗತ್ತಂತೆ ಅದಕ್ಕಾಗಿ ತಾವುಗಳು ಮಾಡಬೇಕಾದುದು ಇಷ್ಟೆ ಎಂದು ನಾರಾಯಣ ಸ್ವಾಮಿ ಹೇಳಿದಾರಂತೆ:
ಆ ಹಳ್ಳಿಗೆ ಹೋಗಿ ಎರಡು ವೀಳ್ಯದೆಲೆ, ಚೂರು ಅಡಿಕೆಯನ್ನು ನೀರಿನಲ್ಲಿ ತೇಲಿಬಿಟ್ಟರೆ ಸಾಕಂತೆ. ನೀವು ಕಳೆದುಕೊಂಡಿರುವ ಯಾವುದೇ ಅಮೂಲ್ಯ ವಸ್ತು ವಾಪಾಸು ನಿಮ್ಮ ಕೈಸೇರುತ್ತದಂತೆ ಎನ್ನುವುದು ಸಮಾಚಾರ. ಯಾರಿಗಾದರೂ ಶಿಂಷಾ ಬಳಿ ಇರುವ ಪವಾಡ ಸದೃಶ ಚಕ್ರತೀರ್ಥದ ಬಗ್ಗೆ ವಿವರಗಳು ತಿಳಿದಿದ್ದರೆ ನಮಗೂ ತಿಳಿಸಬೇಕಾಗಿ ವಿನಂತಿ.
ನಮ್ಮ ವೆಬ್ ಸೈಟಿನಲ್ಲಿ ಈ ಮಾಹಿತಿಗಳು ಸಿಗುವುದಿಲ್ಲ. ಮಾನ್ಯ ಓದುಗರು ನೇರವಾಗಿ ಟಿವಿ9 ಕಚೇರಿಯನ್ನು ಸಂಪರ್ಕಿಸಬೇಕೆಂದು ([email protected]) ಕೋರಿಕೆ. ಶಿಂಷಾ ಪವಾಡದ ಬಗ್ಗೆ ಗೊತ್ತಿದ್ದರೆ ವಿವರಗಳನ್ನು ಇಮೇಲ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಪ್ರಕಟಿಸಲಾಗುವುದು.



Click it and Unblock the Notifications