Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತರ್ಕಕ್ಕೆ ಸಿಕ್ಕದ ಟಿವಿ9 ಕಾರ್ಯಕ್ರಮ ಹೀಗೂ ಉಂಠೇ

ಜನಪ್ರಿಯತೆ ಮಂಚೂಣಿಯಲ್ಲಿರುವ ಟಿವಿ9 ಒಳಗೆ ಪ್ರಸಾರವಾಗುವ ರೋಮಾಂಚಕ ಕಾರ್ಯಕ್ರಮಗಳಲ್ಲಿ "ಹೀಗೂ ಉಂಟೆ"ಗೆ ಮೊದಲ ಸ್ಥಾನ. ನಮ್ಮನೆಗಳ ಹೆಂಗಸರು ನಂಬಿಕೆ ಅಪನಂಬಿಕೆಗಳನ್ನು ಸ್ಟೌವ್ ಮೇಲಿಟ್ಟು ಇದನ್ನು ನೋಡುತ್ತಾ ಕುಳಿತರೆ ಮುಗಿಯಿತು ಕೆಲಸ. ಅಡುಗೆ ಮನೆಯಲ್ಲಿ ಹಾಲು ಉಕ್ಕುವುದು ಖಂಡಿತ.
ಉಕ್ಕಿ ಹರಿದ ಹಾಲು ನಮ್ಮ ವೆಬ್ ಸೈಟಿನ ವೆರಾಂಡದವರೆವಿಗೂ ಹರಿದು ಬರುವುದು ವಾಡಿಕೆ. "ಟಿವಿ9ನೊಳಗೆ ಹೇಳಿದರಂತೆ, ಅದರ ಬಗ್ಗೆ ಹೆಚ್ಚಿನ ವಿವರ ಕೊಡಿ, ಅಡ್ರೆಸ್ ಮತ್ತು ಫೋನ್ ನಂಬರುಗಳನ್ನೂ ಕೊಡಿ" ಎಂದು ಕೇಳಿ ಬರುವ ಸಪೋರ್ಟ್ ರಿಕ್ವೆಸ್ಟುಗಳನ್ನು ನಿಭಾಯಿಸುವುದು ನಮಗೆ ಕಷ್ಟವೇ ಆಗುತ್ತದೆ.
ನಿನ್ನೆ ಸೋಮವಾರ ಒಬ್ಬ ಮಹರಾಯ್ ಗಿತ್ತಿ ನಮ್ಮ ಫೋನ್ ನಂಬರ್ ಪತ್ತೆ ಮಾಡಿ ಸೀದಾ ಕೇಳಿಬಿಟ್ಟರು. ಆಕೆಯ ಹೆಸರು ಗಿರಿಜಾ, ತಿಪಟೂರಿನವರಂತೆ. "ನಿಮಗೆ ಗೊತ್ತಿರತ್ತೆ ಕೊಡಿ ಸಾರ್" ಎನ್ನುವುದು ಆಕೆಯ ಆಗ್ರಹ. ಅವರು ಹೇಳುವುದು ಇಷ್ಟು:
"ಈಚೆಗೆ ಟಿವಿ9 ನಲ್ಲಿ ಒಂದು ಪ್ರೊಗ್ರಾಂ ಬಂತಂತೆ. ಶಿಂಷಾಗೆ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆಯಂತೆ. ಅಲ್ಲಿರುವ ಶ್ರೀಚಕ್ರ ಅಥವಾ ಸೋಮೇಶ್ವರ ಎಂಬ ದೇವಸ್ಥಾನದಲ್ಲಿ ಬಾವಿಯೋ, ಕೆರೆಯೋ ಒಟ್ಟಾರೆ ಒಂದು ನೀರಿನ ಸೆಲೆ ಇದೆಯಂತೆ. ಆ ನೀರಿನಲ್ಲಿ ಚಕ್ರತೀರ್ಥ ಇದೆಯಂತೆ. ಅಲ್ಲಿಗೆ ಹೋಗಿ ಬಂದರೆ ಕಾರ್ಯಸಿದ್ಧಿ ಆಗುತ್ತದಂತೆ."
ಕಳೆದುಹೋದದ್ದು ಏನೇ ಆಗಿರಲಿ. ಓಲೆ, ಉಂಗುರ, ಬೈಕು, ಮಗು, ಎಮ್ಮೆ, ಹಸ ಕರ, ಪಾಸ್ ಪೋರ್ಟು, ಸಾಕುನಾಯಿ, ಗೆಳೆಯ, ಗೆಳತಿ, ನೆಮ್ಮದಿ ವಾಪಸ್ಸು ಸಿಗತ್ತಂತೆ ಅದಕ್ಕಾಗಿ ತಾವುಗಳು ಮಾಡಬೇಕಾದುದು ಇಷ್ಟೆ ಎಂದು ನಾರಾಯಣ ಸ್ವಾಮಿ ಹೇಳಿದಾರಂತೆ:
ಆ ಹಳ್ಳಿಗೆ ಹೋಗಿ ಎರಡು ವೀಳ್ಯದೆಲೆ, ಚೂರು ಅಡಿಕೆಯನ್ನು ನೀರಿನಲ್ಲಿ ತೇಲಿಬಿಟ್ಟರೆ ಸಾಕಂತೆ. ನೀವು ಕಳೆದುಕೊಂಡಿರುವ ಯಾವುದೇ ಅಮೂಲ್ಯ ವಸ್ತು ವಾಪಾಸು ನಿಮ್ಮ ಕೈಸೇರುತ್ತದಂತೆ ಎನ್ನುವುದು ಸಮಾಚಾರ. ಯಾರಿಗಾದರೂ ಶಿಂಷಾ ಬಳಿ ಇರುವ ಪವಾಡ ಸದೃಶ ಚಕ್ರತೀರ್ಥದ ಬಗ್ಗೆ ವಿವರಗಳು ತಿಳಿದಿದ್ದರೆ ನಮಗೂ ತಿಳಿಸಬೇಕಾಗಿ ವಿನಂತಿ.
ನಮ್ಮ ವೆಬ್ ಸೈಟಿನಲ್ಲಿ ಈ ಮಾಹಿತಿಗಳು ಸಿಗುವುದಿಲ್ಲ. ಮಾನ್ಯ ಓದುಗರು ನೇರವಾಗಿ ಟಿವಿ9 ಕಚೇರಿಯನ್ನು ಸಂಪರ್ಕಿಸಬೇಕೆಂದು ([email protected]) ಕೋರಿಕೆ. ಶಿಂಷಾ ಪವಾಡದ ಬಗ್ಗೆ ಗೊತ್ತಿದ್ದರೆ ವಿವರಗಳನ್ನು ಇಮೇಲ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಪ್ರಕಟಿಸಲಾಗುವುದು.



Click it and Unblock the Notifications