Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ತರ್ಕಕ್ಕೆ ಸಿಕ್ಕದ ಟಿವಿ9 ಕಾರ್ಯಕ್ರಮ ಹೀಗೂ ಉಂಠೇ

ಜನಪ್ರಿಯತೆ ಮಂಚೂಣಿಯಲ್ಲಿರುವ ಟಿವಿ9 ಒಳಗೆ ಪ್ರಸಾರವಾಗುವ ರೋಮಾಂಚಕ ಕಾರ್ಯಕ್ರಮಗಳಲ್ಲಿ "ಹೀಗೂ ಉಂಟೆ"ಗೆ ಮೊದಲ ಸ್ಥಾನ. ನಮ್ಮನೆಗಳ ಹೆಂಗಸರು ನಂಬಿಕೆ ಅಪನಂಬಿಕೆಗಳನ್ನು ಸ್ಟೌವ್ ಮೇಲಿಟ್ಟು ಇದನ್ನು ನೋಡುತ್ತಾ ಕುಳಿತರೆ ಮುಗಿಯಿತು ಕೆಲಸ. ಅಡುಗೆ ಮನೆಯಲ್ಲಿ ಹಾಲು ಉಕ್ಕುವುದು ಖಂಡಿತ.
ಉಕ್ಕಿ ಹರಿದ ಹಾಲು ನಮ್ಮ ವೆಬ್ ಸೈಟಿನ ವೆರಾಂಡದವರೆವಿಗೂ ಹರಿದು ಬರುವುದು ವಾಡಿಕೆ. "ಟಿವಿ9ನೊಳಗೆ ಹೇಳಿದರಂತೆ, ಅದರ ಬಗ್ಗೆ ಹೆಚ್ಚಿನ ವಿವರ ಕೊಡಿ, ಅಡ್ರೆಸ್ ಮತ್ತು ಫೋನ್ ನಂಬರುಗಳನ್ನೂ ಕೊಡಿ" ಎಂದು ಕೇಳಿ ಬರುವ ಸಪೋರ್ಟ್ ರಿಕ್ವೆಸ್ಟುಗಳನ್ನು ನಿಭಾಯಿಸುವುದು ನಮಗೆ ಕಷ್ಟವೇ ಆಗುತ್ತದೆ.
ನಿನ್ನೆ ಸೋಮವಾರ ಒಬ್ಬ ಮಹರಾಯ್ ಗಿತ್ತಿ ನಮ್ಮ ಫೋನ್ ನಂಬರ್ ಪತ್ತೆ ಮಾಡಿ ಸೀದಾ ಕೇಳಿಬಿಟ್ಟರು. ಆಕೆಯ ಹೆಸರು ಗಿರಿಜಾ, ತಿಪಟೂರಿನವರಂತೆ. "ನಿಮಗೆ ಗೊತ್ತಿರತ್ತೆ ಕೊಡಿ ಸಾರ್" ಎನ್ನುವುದು ಆಕೆಯ ಆಗ್ರಹ. ಅವರು ಹೇಳುವುದು ಇಷ್ಟು:
"ಈಚೆಗೆ ಟಿವಿ9 ನಲ್ಲಿ ಒಂದು ಪ್ರೊಗ್ರಾಂ ಬಂತಂತೆ. ಶಿಂಷಾಗೆ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆಯಂತೆ. ಅಲ್ಲಿರುವ ಶ್ರೀಚಕ್ರ ಅಥವಾ ಸೋಮೇಶ್ವರ ಎಂಬ ದೇವಸ್ಥಾನದಲ್ಲಿ ಬಾವಿಯೋ, ಕೆರೆಯೋ ಒಟ್ಟಾರೆ ಒಂದು ನೀರಿನ ಸೆಲೆ ಇದೆಯಂತೆ. ಆ ನೀರಿನಲ್ಲಿ ಚಕ್ರತೀರ್ಥ ಇದೆಯಂತೆ. ಅಲ್ಲಿಗೆ ಹೋಗಿ ಬಂದರೆ ಕಾರ್ಯಸಿದ್ಧಿ ಆಗುತ್ತದಂತೆ."
ಕಳೆದುಹೋದದ್ದು ಏನೇ ಆಗಿರಲಿ. ಓಲೆ, ಉಂಗುರ, ಬೈಕು, ಮಗು, ಎಮ್ಮೆ, ಹಸ ಕರ, ಪಾಸ್ ಪೋರ್ಟು, ಸಾಕುನಾಯಿ, ಗೆಳೆಯ, ಗೆಳತಿ, ನೆಮ್ಮದಿ ವಾಪಸ್ಸು ಸಿಗತ್ತಂತೆ ಅದಕ್ಕಾಗಿ ತಾವುಗಳು ಮಾಡಬೇಕಾದುದು ಇಷ್ಟೆ ಎಂದು ನಾರಾಯಣ ಸ್ವಾಮಿ ಹೇಳಿದಾರಂತೆ:
ಆ ಹಳ್ಳಿಗೆ ಹೋಗಿ ಎರಡು ವೀಳ್ಯದೆಲೆ, ಚೂರು ಅಡಿಕೆಯನ್ನು ನೀರಿನಲ್ಲಿ ತೇಲಿಬಿಟ್ಟರೆ ಸಾಕಂತೆ. ನೀವು ಕಳೆದುಕೊಂಡಿರುವ ಯಾವುದೇ ಅಮೂಲ್ಯ ವಸ್ತು ವಾಪಾಸು ನಿಮ್ಮ ಕೈಸೇರುತ್ತದಂತೆ ಎನ್ನುವುದು ಸಮಾಚಾರ. ಯಾರಿಗಾದರೂ ಶಿಂಷಾ ಬಳಿ ಇರುವ ಪವಾಡ ಸದೃಶ ಚಕ್ರತೀರ್ಥದ ಬಗ್ಗೆ ವಿವರಗಳು ತಿಳಿದಿದ್ದರೆ ನಮಗೂ ತಿಳಿಸಬೇಕಾಗಿ ವಿನಂತಿ.
ನಮ್ಮ ವೆಬ್ ಸೈಟಿನಲ್ಲಿ ಈ ಮಾಹಿತಿಗಳು ಸಿಗುವುದಿಲ್ಲ. ಮಾನ್ಯ ಓದುಗರು ನೇರವಾಗಿ ಟಿವಿ9 ಕಚೇರಿಯನ್ನು ಸಂಪರ್ಕಿಸಬೇಕೆಂದು ([email protected]) ಕೋರಿಕೆ. ಶಿಂಷಾ ಪವಾಡದ ಬಗ್ಗೆ ಗೊತ್ತಿದ್ದರೆ ವಿವರಗಳನ್ನು ಇಮೇಲ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಪ್ರಕಟಿಸಲಾಗುವುದು.



Click it and Unblock the Notifications