Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!

ಮೇ 21, ವಿಶ್ವ ಅಂತ್ಯವಾಗುವ ದಿನ. ಜಗತ್ ಪ್ರಳಯ ಸಂಭವಿಸಿ ವರ್ಷಾನುವರ್ಷಗಳಿಂದ ಕೂಡಿಟ್ಟ ಆಸ್ತಿಪಾಸ್ತಿ, ಬಂಧುಬಳಗವನ್ನು ಕಳೆದುಕೊಳ್ಳುತ್ತೇವೆಂಬ ಭಯ ಅನೇಕರಲ್ಲಿ ಆವರಿಸಿದೆ. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿದೆ. ಊರತುಂಬೆಲ್ಲ ಇದೆ ಮಾತು. ಹಾಗಾಗತ್ತಂತೆ, ಹೀಗಾಗತ್ತಂತೆ! ಉಳಿದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ನಡೆಯುತ್ತಿದೆ.
ಇಗರ್ಜಿಗಳು ಸಾಮೂಹಿಕ ಪ್ರಾರ್ಥನೆಗಳನ್ನು ಏರ್ಪಡಿಸಿವೆ. ಟಿವಿ, ರೇಡಿಯೋಗಳ ಮುಖಾಂತರ ಇಂದಿನ ದಿನದ ಎಚ್ಚರದಿಂದಿರಬೇಕೆಂದು ಸಾರಿಸಾರಿ ಹೇಳಲಾಗುತ್ತಿದೆ. ಬಸ್ ನಿಲ್ದಾಣ, ಮಾಲ್, ಸೇತುವೆ, ಕಟ್ಟಡಗಳು, ಹೋರ್ಡಿಂಗ್, ಪೋಸ್ಟ್ ಕಾರ್ಡ್, ಇಂಟರ್ನೆಟ್, ಮೊಬೈಲ್ ಮುಖಾಂತರ ಕ್ರೈಸ್ತ ಬರುತ್ತಿರುವ ಸಂದೇಶವನ್ನು ರವಾನಿಸಲಾಗುತ್ತಿದೆ. ನಮ್ಮ ಜ್ಯೋತಿಷಿಗಳಂತೆ ಅಲ್ಲಿನ ಬ್ರಹ್ಮಾಂಡ ಜ್ಯೋತಿಷಿಗಳು ತಮಗೆ ತಿಳಿದದ್ದು ಹೇಳುತ್ತಿದ್ದಾರೆ.
ಮೇಲಿಂದ ಮೇಲೆ ಸರ್ವನಾಶ ಮಾಡುವಂಥ ಭೂಕಂಪನಗಳಾಗುತ್ತಿವೆ, ಭೂತಾಪಮಾನ ಜಾಸ್ತಿಯಾಗುತ್ತಿದೆ, ಅಣ್ವಸ್ತ್ರ ಬಳಕೆಯ ಬಗ್ಗೆ ಹೆದರಿಕೆ ತಲೆಯ ಮೇಲೆ ತೂಗುತ್ತಿದೆ, ಭ್ರಷ್ಟಾಚಾರ ವಿಶ್ವವ್ಯಾಪಿಸಿದೆ, ಅಪರಾಧ ಜಾಸ್ತಿಯಾಗುತ್ತಿದೆ, ಆರ್ಥಿಕ ಮುಗ್ಗಟ್ಟು ತನ್ನ ಮುಷ್ಠಿ ಬಿಗಿ ಮಾಡುತ್ತಿದೆ... ಈ ಎಲ್ಲ ಕಾರಣಗಳು ಭೂಮಿಯ ಸರ್ವನಾಶಕ್ಕೆ ನಾಂದಿ ಹಾಡಲಿವೆ ಎಂದು ಅನೇಕರು ನಂಬಿದ್ದಾರೆ.
ಜಗತ್ ಪ್ರಳಯ ಇಂದೇ ಆಗುತ್ತದೆಂದು ನಂಬಿರುವ ಜನತೆಯಲ್ಲಿ ವಿಚಿತ್ರ ಭಯ ವ್ಯಾಪಿಸಿದೆ. ಜಗದ್ ರಕ್ಷಕನಾದ ಭಗವಂತನೆ, ಅವತರಿಸಿ ನಮ್ಮನ್ನು ಕಾಪಾಡು ತಂದೆಯೇ ಎಂದು ಜನರು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದಾರೆ. (ಓದಿ : ಪ್ರಾರ್ಥನೆಗೂ ಒಂದು ದಿನ) ಇದೇ ದಿನ ರೈಟ್ ಬ್ರದರ್ಸ್ ತಾವು ನಿರ್ಮಿಸಿದ್ದ ವಿಮಾನ ಎಷ್ಟೇ ಪ್ರಯತ್ನ ಪಟ್ಟರೂ ಹಾರಾಡಿದ್ದಿದಿಲ್ಲವಂತೆ. ಕೆಲಸ ಬೊಗಸಿ ಎಲ್ಲ ಬಿಟ್ಟ ಜನ ಕ್ರೈಸ್ತ ಪರಮಾತ್ಮ ಬರುತ್ತಾನೆಂದು ಕಾದಿದ್ದಾರೆ. ಬರುತ್ತಾನೆಯೆ? ಬಂದರೂ ಪ್ರಳಯವಾಗುವ ಮೊದಲು ಬರುತ್ತಾನೋ, ಆದ ನಂತರ ಬರುತ್ತಾನೋ ಗೊತ್ತಿಲ್ಲ!



Click it and Unblock the Notifications