Latest Updates
-
ಸೋಶಿಯಲ್ ಮೀಡಿಯಾ ಕಿರಿಕಿರಿ: ನಿಮ್ಮ ಸಂಬಂಧವನ್ನು ವದಂತಿಗಳಿಂದ ರಕ್ಷಿಸಿ ನೆಮ್ಮದಿಯಾಗಿರಲು ದಂಪತಿಗಳು ಪಾಲಿಸಬೇಕಾದ ಸೀಕ್ರೆಟ್ ಟಿಪ್ಸ್ -
ದಿಢೀರ್ ಬಿರುಗಾಳಿ ಮತ್ತು ಬಿಸಿಲಿನಿಂದ ನಿಮ್ಮ ಬಾಲ್ಕನಿ ಹಾಳಾಗುತ್ತಿದೆಯೇ? ಮನೆಯನ್ನು ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ ಸ್ಟ್ರೋಕ್ ತಡೆಯಲು ಈ ತಂಪು ಆಹಾರಗಳೇ ನಿಮಗೆ ಮದ್ದು! -
ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೀರಾ? ನಿಮ್ಮ ಜೇಬಿಗೆ ಹೊರೆಯಾಗದಂತೆ ಇಂಧನ ಉಳಿಸಲು ಇಲ್ಲಿವೆ ನೋಡಿ ಬೆಸ್ಟ್ ಟಿಪ್ಸ್! -
ಡೇಟಿಂಗ್ ಆಪ್ ಬಳಸುವ ಮುನ್ನ ಎಚ್ಚರ: ನಿಮ್ಮನ್ನು ಬಲಿಪಶು ಮಾಡುವ ಹನಿಟ್ರ್ಯಾಪ್ ಜಾಲದ ಅಸಲಿ ಮುಖ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ಮತ್ತು ಗಿಡಗಳನ್ನು ರಕ್ಷಿಸುವುದು ಹೇಗೆ? ತಾಪಮಾನ ಏರಿಕೆಯ ನಡುವೆ ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಉಪ್ಪಿನಕಾಯಿ, ಹಪ್ಪಳ ಇಷ್ಟನಾ? ಎಚ್ಚರ! ಹೃದಯದ ಆರೋಗ್ಯಕ್ಕಾಗಿ ಅಡುಗೆಯಲ್ಲಿ ಈ ಬದಲಾವಣೆ ಮಾಡಲೇಬೇಕು -
ಅಮೆಜಾನ್ ಸೇಲ್ ಮುಗಿಯಲು ಕೆಲವೇ ಗಂಟೆ ಬಾಕಿ: ಈ ಬ್ಯೂಟಿ ಮತ್ತು ಫ್ಯಾಷನ್ ಡೀಲ್ಸ್ ಮಿಸ್ ಮಾಡ್ಬೇಡಿ! -
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ!
ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!

ಮೇ 21, ವಿಶ್ವ ಅಂತ್ಯವಾಗುವ ದಿನ. ಜಗತ್ ಪ್ರಳಯ ಸಂಭವಿಸಿ ವರ್ಷಾನುವರ್ಷಗಳಿಂದ ಕೂಡಿಟ್ಟ ಆಸ್ತಿಪಾಸ್ತಿ, ಬಂಧುಬಳಗವನ್ನು ಕಳೆದುಕೊಳ್ಳುತ್ತೇವೆಂಬ ಭಯ ಅನೇಕರಲ್ಲಿ ಆವರಿಸಿದೆ. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿದೆ. ಊರತುಂಬೆಲ್ಲ ಇದೆ ಮಾತು. ಹಾಗಾಗತ್ತಂತೆ, ಹೀಗಾಗತ್ತಂತೆ! ಉಳಿದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ನಡೆಯುತ್ತಿದೆ.
ಇಗರ್ಜಿಗಳು ಸಾಮೂಹಿಕ ಪ್ರಾರ್ಥನೆಗಳನ್ನು ಏರ್ಪಡಿಸಿವೆ. ಟಿವಿ, ರೇಡಿಯೋಗಳ ಮುಖಾಂತರ ಇಂದಿನ ದಿನದ ಎಚ್ಚರದಿಂದಿರಬೇಕೆಂದು ಸಾರಿಸಾರಿ ಹೇಳಲಾಗುತ್ತಿದೆ. ಬಸ್ ನಿಲ್ದಾಣ, ಮಾಲ್, ಸೇತುವೆ, ಕಟ್ಟಡಗಳು, ಹೋರ್ಡಿಂಗ್, ಪೋಸ್ಟ್ ಕಾರ್ಡ್, ಇಂಟರ್ನೆಟ್, ಮೊಬೈಲ್ ಮುಖಾಂತರ ಕ್ರೈಸ್ತ ಬರುತ್ತಿರುವ ಸಂದೇಶವನ್ನು ರವಾನಿಸಲಾಗುತ್ತಿದೆ. ನಮ್ಮ ಜ್ಯೋತಿಷಿಗಳಂತೆ ಅಲ್ಲಿನ ಬ್ರಹ್ಮಾಂಡ ಜ್ಯೋತಿಷಿಗಳು ತಮಗೆ ತಿಳಿದದ್ದು ಹೇಳುತ್ತಿದ್ದಾರೆ.
ಮೇಲಿಂದ ಮೇಲೆ ಸರ್ವನಾಶ ಮಾಡುವಂಥ ಭೂಕಂಪನಗಳಾಗುತ್ತಿವೆ, ಭೂತಾಪಮಾನ ಜಾಸ್ತಿಯಾಗುತ್ತಿದೆ, ಅಣ್ವಸ್ತ್ರ ಬಳಕೆಯ ಬಗ್ಗೆ ಹೆದರಿಕೆ ತಲೆಯ ಮೇಲೆ ತೂಗುತ್ತಿದೆ, ಭ್ರಷ್ಟಾಚಾರ ವಿಶ್ವವ್ಯಾಪಿಸಿದೆ, ಅಪರಾಧ ಜಾಸ್ತಿಯಾಗುತ್ತಿದೆ, ಆರ್ಥಿಕ ಮುಗ್ಗಟ್ಟು ತನ್ನ ಮುಷ್ಠಿ ಬಿಗಿ ಮಾಡುತ್ತಿದೆ... ಈ ಎಲ್ಲ ಕಾರಣಗಳು ಭೂಮಿಯ ಸರ್ವನಾಶಕ್ಕೆ ನಾಂದಿ ಹಾಡಲಿವೆ ಎಂದು ಅನೇಕರು ನಂಬಿದ್ದಾರೆ.
ಜಗತ್ ಪ್ರಳಯ ಇಂದೇ ಆಗುತ್ತದೆಂದು ನಂಬಿರುವ ಜನತೆಯಲ್ಲಿ ವಿಚಿತ್ರ ಭಯ ವ್ಯಾಪಿಸಿದೆ. ಜಗದ್ ರಕ್ಷಕನಾದ ಭಗವಂತನೆ, ಅವತರಿಸಿ ನಮ್ಮನ್ನು ಕಾಪಾಡು ತಂದೆಯೇ ಎಂದು ಜನರು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದಾರೆ. (ಓದಿ : ಪ್ರಾರ್ಥನೆಗೂ ಒಂದು ದಿನ) ಇದೇ ದಿನ ರೈಟ್ ಬ್ರದರ್ಸ್ ತಾವು ನಿರ್ಮಿಸಿದ್ದ ವಿಮಾನ ಎಷ್ಟೇ ಪ್ರಯತ್ನ ಪಟ್ಟರೂ ಹಾರಾಡಿದ್ದಿದಿಲ್ಲವಂತೆ. ಕೆಲಸ ಬೊಗಸಿ ಎಲ್ಲ ಬಿಟ್ಟ ಜನ ಕ್ರೈಸ್ತ ಪರಮಾತ್ಮ ಬರುತ್ತಾನೆಂದು ಕಾದಿದ್ದಾರೆ. ಬರುತ್ತಾನೆಯೆ? ಬಂದರೂ ಪ್ರಳಯವಾಗುವ ಮೊದಲು ಬರುತ್ತಾನೋ, ಆದ ನಂತರ ಬರುತ್ತಾನೋ ಗೊತ್ತಿಲ್ಲ!



Click it and Unblock the Notifications