Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!

ಮೇ 21, ವಿಶ್ವ ಅಂತ್ಯವಾಗುವ ದಿನ. ಜಗತ್ ಪ್ರಳಯ ಸಂಭವಿಸಿ ವರ್ಷಾನುವರ್ಷಗಳಿಂದ ಕೂಡಿಟ್ಟ ಆಸ್ತಿಪಾಸ್ತಿ, ಬಂಧುಬಳಗವನ್ನು ಕಳೆದುಕೊಳ್ಳುತ್ತೇವೆಂಬ ಭಯ ಅನೇಕರಲ್ಲಿ ಆವರಿಸಿದೆ. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿದೆ. ಊರತುಂಬೆಲ್ಲ ಇದೆ ಮಾತು. ಹಾಗಾಗತ್ತಂತೆ, ಹೀಗಾಗತ್ತಂತೆ! ಉಳಿದಂತೆ ವ್ಯಾಪಾರ ತನ್ನಷ್ಟಕ್ಕೆ ತಾನು ನಡೆಯುತ್ತಿದೆ.
ಇಗರ್ಜಿಗಳು ಸಾಮೂಹಿಕ ಪ್ರಾರ್ಥನೆಗಳನ್ನು ಏರ್ಪಡಿಸಿವೆ. ಟಿವಿ, ರೇಡಿಯೋಗಳ ಮುಖಾಂತರ ಇಂದಿನ ದಿನದ ಎಚ್ಚರದಿಂದಿರಬೇಕೆಂದು ಸಾರಿಸಾರಿ ಹೇಳಲಾಗುತ್ತಿದೆ. ಬಸ್ ನಿಲ್ದಾಣ, ಮಾಲ್, ಸೇತುವೆ, ಕಟ್ಟಡಗಳು, ಹೋರ್ಡಿಂಗ್, ಪೋಸ್ಟ್ ಕಾರ್ಡ್, ಇಂಟರ್ನೆಟ್, ಮೊಬೈಲ್ ಮುಖಾಂತರ ಕ್ರೈಸ್ತ ಬರುತ್ತಿರುವ ಸಂದೇಶವನ್ನು ರವಾನಿಸಲಾಗುತ್ತಿದೆ. ನಮ್ಮ ಜ್ಯೋತಿಷಿಗಳಂತೆ ಅಲ್ಲಿನ ಬ್ರಹ್ಮಾಂಡ ಜ್ಯೋತಿಷಿಗಳು ತಮಗೆ ತಿಳಿದದ್ದು ಹೇಳುತ್ತಿದ್ದಾರೆ.
ಮೇಲಿಂದ ಮೇಲೆ ಸರ್ವನಾಶ ಮಾಡುವಂಥ ಭೂಕಂಪನಗಳಾಗುತ್ತಿವೆ, ಭೂತಾಪಮಾನ ಜಾಸ್ತಿಯಾಗುತ್ತಿದೆ, ಅಣ್ವಸ್ತ್ರ ಬಳಕೆಯ ಬಗ್ಗೆ ಹೆದರಿಕೆ ತಲೆಯ ಮೇಲೆ ತೂಗುತ್ತಿದೆ, ಭ್ರಷ್ಟಾಚಾರ ವಿಶ್ವವ್ಯಾಪಿಸಿದೆ, ಅಪರಾಧ ಜಾಸ್ತಿಯಾಗುತ್ತಿದೆ, ಆರ್ಥಿಕ ಮುಗ್ಗಟ್ಟು ತನ್ನ ಮುಷ್ಠಿ ಬಿಗಿ ಮಾಡುತ್ತಿದೆ... ಈ ಎಲ್ಲ ಕಾರಣಗಳು ಭೂಮಿಯ ಸರ್ವನಾಶಕ್ಕೆ ನಾಂದಿ ಹಾಡಲಿವೆ ಎಂದು ಅನೇಕರು ನಂಬಿದ್ದಾರೆ.
ಜಗತ್ ಪ್ರಳಯ ಇಂದೇ ಆಗುತ್ತದೆಂದು ನಂಬಿರುವ ಜನತೆಯಲ್ಲಿ ವಿಚಿತ್ರ ಭಯ ವ್ಯಾಪಿಸಿದೆ. ಜಗದ್ ರಕ್ಷಕನಾದ ಭಗವಂತನೆ, ಅವತರಿಸಿ ನಮ್ಮನ್ನು ಕಾಪಾಡು ತಂದೆಯೇ ಎಂದು ಜನರು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದಾರೆ. (ಓದಿ : ಪ್ರಾರ್ಥನೆಗೂ ಒಂದು ದಿನ) ಇದೇ ದಿನ ರೈಟ್ ಬ್ರದರ್ಸ್ ತಾವು ನಿರ್ಮಿಸಿದ್ದ ವಿಮಾನ ಎಷ್ಟೇ ಪ್ರಯತ್ನ ಪಟ್ಟರೂ ಹಾರಾಡಿದ್ದಿದಿಲ್ಲವಂತೆ. ಕೆಲಸ ಬೊಗಸಿ ಎಲ್ಲ ಬಿಟ್ಟ ಜನ ಕ್ರೈಸ್ತ ಪರಮಾತ್ಮ ಬರುತ್ತಾನೆಂದು ಕಾದಿದ್ದಾರೆ. ಬರುತ್ತಾನೆಯೆ? ಬಂದರೂ ಪ್ರಳಯವಾಗುವ ಮೊದಲು ಬರುತ್ತಾನೋ, ಆದ ನಂತರ ಬರುತ್ತಾನೋ ಗೊತ್ತಿಲ್ಲ!



Click it and Unblock the Notifications