Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಜಮನೆತನದ ವಿವಾಹ ಆಹ್ವಾನ ಪತ್ರಿಕಾ

ವಿಲಿಯಂ ಮತ್ತು ಕೇಟ್ ಇಬ್ಬರ ವಯಸ್ಸೂ 29. ಮದುವೆ ಆಗುತ್ತಿರುವ ದಿನಾಂಕವೂ 29. ಅದೊಂದು ವಿಶೇಷ. ವಧೂ ವರರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಚರ್ಚೆಗಳನ್ನು ಚರ್ಚುಗಳಿಗೆ ಬಿಟ್ಟು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಮದುವೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಹುಡುಗ ಹುಡುಗಿಯ ನಡುವಿನ ವರ್ಗ ಭೇದಕ್ಕೂ ಈ ಮಂಗಳಕಾರ್ಯ ಮಂಗಳವನ್ನೇ ಹಾಡಿದೆ. ವಿಲಿಯಂ ರಾಜಕುಮಾರ ಆಗರ್ಭ ಶ್ರೀಮಂತ. ವಧು ಮಧ್ಯ ಇಂಗ್ಲೆಂಡಿನಿಂದ ಬಂದ ಮಧ್ಯಮ ವರ್ಗದ ಹುಡುಗಿ.
ಈ ವೈವಾಹಿಕ ಸಂಬಂಧಗಳ ವಿಶಿಷ್ಟತೆ ಇಂದೇನೂ ಹೊಸತಲ್ಲ. ವಿಲಿಯಂನ ಅಪ್ಪ ಕೂಡ ಇದೇ ದಾರಿ ಹಿಡಿದಿದ್ದ. ಬಡವರ ಮನೆ ಹುಡುಗಿ ಡಯಾನಾಳನ್ನು ವರಿಸಿ ಮದುವೆ ಆಗಿದ್ದ. ಪ್ರೀತಿ ಪ್ರೇಮ ಪ್ರಣಯದಲ್ಲಿ ಬಡತನ ಸಿರಿತನ ಜಗಳಕ್ಕೆ ಜಾಗ ಇಲ್ಲ ಎಂದು ಆತ ತೋರಿಸಿದ್ದ. ಮುದ್ದಾದ ಎರಡು ಮಕ್ಕಳೂ ಜನಿಸಿದವು. ಚಾರ್ಲ್ಸ್ ಈಗ ವಿಧುರ.
ದೇವಾನುದೇವತೆಗಳ ಮನೆಯಂಗಳದಲ್ಲಿ ಮಂಗಳ ಕಾರ್ಯ ನಡೆಯುತ್ತಿದ್ದರೆ ದಾನವರು ಬೆಂಕಿ ಉಂಡೆಗಳನ್ನು ಎರಚುವುದರ ಮೂಲಕ ವಿಘ್ನ ಉಂಟುಮಾಡುವುದನ್ನು ನಾವು ಭಾರತೀಯ ಪೌರಾಣಿಕ ಚಲನಚಿತ್ರಗಳಲ್ಲಿ ಅಥವಾ ಕಾರ್ಟೂನುಗಳಲ್ಲಿ ನೋಡಿರುತ್ತೀವಿ. ಈ ಮದುವೆಗೂ ಕೂಡ ಅಡ್ಡಿ ಆತಂಕ ಉಂಟುಮಾಡಲು ಬ್ರಿಟನ್ನಿನ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಮದುವೆ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಪೊಲೀಸ್ ಕಮಿಷನರ್ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ಪೊಲೀಸರು ಅವಕಾಶ ಕೊಡುವುದಿಲ್ಲ. ಆಕಸ್ಮಾತ್ ಅವಕಾಶ ಕೊಟ್ಟರೆ ತಾವೂ ಕೂಡ ಪ್ರತಿಭಟನಾ ಪ್ರದರ್ಶನದಲ್ಲಿ ತೊಡಗುವುದಾಗಿ ಬ್ರಿಟನ್ನಿನ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಇದೇ ವೇಳೆ ವಿವಾಹ ಕಾರ್ಯಕ್ರಮದ ವೇಳೆ ಬಂದೋಬಸ್ತಿಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ದಿಬ್ಬಣ ಸಾಗಿಬರುವ ದಾರಿಯುದ್ದಕ್ಕೂ ಅವಘಡ ಸಂಭವಿಸುವ ಯಾವುದೇ ಕುತಂತ್ರವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುತ್ತಿದ್ದಾರೆ. ಅಂದ ಹಾಗೆ, ಈ ರಾಯಲ್ ವೆಡ್ಡಿಂಗಿಗೆ ಎಷ್ಟು ಖರ್ಚಾಗುತ್ತದೆಂದು ಯಾರಾದರೂ ಲೆಕ್ಕ ಹಾಕಿ ವಿವರ ನಮಗೆ ನೀಡುತ್ತೀರಾ?



Click it and Unblock the Notifications