Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಜಮನೆತನದ ವಿವಾಹ ಆಹ್ವಾನ ಪತ್ರಿಕಾ

ವಿಲಿಯಂ ಮತ್ತು ಕೇಟ್ ಇಬ್ಬರ ವಯಸ್ಸೂ 29. ಮದುವೆ ಆಗುತ್ತಿರುವ ದಿನಾಂಕವೂ 29. ಅದೊಂದು ವಿಶೇಷ. ವಧೂ ವರರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಚರ್ಚೆಗಳನ್ನು ಚರ್ಚುಗಳಿಗೆ ಬಿಟ್ಟು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಮದುವೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಹುಡುಗ ಹುಡುಗಿಯ ನಡುವಿನ ವರ್ಗ ಭೇದಕ್ಕೂ ಈ ಮಂಗಳಕಾರ್ಯ ಮಂಗಳವನ್ನೇ ಹಾಡಿದೆ. ವಿಲಿಯಂ ರಾಜಕುಮಾರ ಆಗರ್ಭ ಶ್ರೀಮಂತ. ವಧು ಮಧ್ಯ ಇಂಗ್ಲೆಂಡಿನಿಂದ ಬಂದ ಮಧ್ಯಮ ವರ್ಗದ ಹುಡುಗಿ.
ಈ ವೈವಾಹಿಕ ಸಂಬಂಧಗಳ ವಿಶಿಷ್ಟತೆ ಇಂದೇನೂ ಹೊಸತಲ್ಲ. ವಿಲಿಯಂನ ಅಪ್ಪ ಕೂಡ ಇದೇ ದಾರಿ ಹಿಡಿದಿದ್ದ. ಬಡವರ ಮನೆ ಹುಡುಗಿ ಡಯಾನಾಳನ್ನು ವರಿಸಿ ಮದುವೆ ಆಗಿದ್ದ. ಪ್ರೀತಿ ಪ್ರೇಮ ಪ್ರಣಯದಲ್ಲಿ ಬಡತನ ಸಿರಿತನ ಜಗಳಕ್ಕೆ ಜಾಗ ಇಲ್ಲ ಎಂದು ಆತ ತೋರಿಸಿದ್ದ. ಮುದ್ದಾದ ಎರಡು ಮಕ್ಕಳೂ ಜನಿಸಿದವು. ಚಾರ್ಲ್ಸ್ ಈಗ ವಿಧುರ.
ದೇವಾನುದೇವತೆಗಳ ಮನೆಯಂಗಳದಲ್ಲಿ ಮಂಗಳ ಕಾರ್ಯ ನಡೆಯುತ್ತಿದ್ದರೆ ದಾನವರು ಬೆಂಕಿ ಉಂಡೆಗಳನ್ನು ಎರಚುವುದರ ಮೂಲಕ ವಿಘ್ನ ಉಂಟುಮಾಡುವುದನ್ನು ನಾವು ಭಾರತೀಯ ಪೌರಾಣಿಕ ಚಲನಚಿತ್ರಗಳಲ್ಲಿ ಅಥವಾ ಕಾರ್ಟೂನುಗಳಲ್ಲಿ ನೋಡಿರುತ್ತೀವಿ. ಈ ಮದುವೆಗೂ ಕೂಡ ಅಡ್ಡಿ ಆತಂಕ ಉಂಟುಮಾಡಲು ಬ್ರಿಟನ್ನಿನ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಮದುವೆ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಪೊಲೀಸ್ ಕಮಿಷನರ್ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ಪೊಲೀಸರು ಅವಕಾಶ ಕೊಡುವುದಿಲ್ಲ. ಆಕಸ್ಮಾತ್ ಅವಕಾಶ ಕೊಟ್ಟರೆ ತಾವೂ ಕೂಡ ಪ್ರತಿಭಟನಾ ಪ್ರದರ್ಶನದಲ್ಲಿ ತೊಡಗುವುದಾಗಿ ಬ್ರಿಟನ್ನಿನ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಇದೇ ವೇಳೆ ವಿವಾಹ ಕಾರ್ಯಕ್ರಮದ ವೇಳೆ ಬಂದೋಬಸ್ತಿಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ದಿಬ್ಬಣ ಸಾಗಿಬರುವ ದಾರಿಯುದ್ದಕ್ಕೂ ಅವಘಡ ಸಂಭವಿಸುವ ಯಾವುದೇ ಕುತಂತ್ರವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುತ್ತಿದ್ದಾರೆ. ಅಂದ ಹಾಗೆ, ಈ ರಾಯಲ್ ವೆಡ್ಡಿಂಗಿಗೆ ಎಷ್ಟು ಖರ್ಚಾಗುತ್ತದೆಂದು ಯಾರಾದರೂ ಲೆಕ್ಕ ಹಾಕಿ ವಿವರ ನಮಗೆ ನೀಡುತ್ತೀರಾ?



Click it and Unblock the Notifications