Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ರಾಜಮನೆತನದ ವಿವಾಹ ಆಹ್ವಾನ ಪತ್ರಿಕಾ

ವಿಲಿಯಂ ಮತ್ತು ಕೇಟ್ ಇಬ್ಬರ ವಯಸ್ಸೂ 29. ಮದುವೆ ಆಗುತ್ತಿರುವ ದಿನಾಂಕವೂ 29. ಅದೊಂದು ವಿಶೇಷ. ವಧೂ ವರರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಚರ್ಚೆಗಳನ್ನು ಚರ್ಚುಗಳಿಗೆ ಬಿಟ್ಟು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಮದುವೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಹುಡುಗ ಹುಡುಗಿಯ ನಡುವಿನ ವರ್ಗ ಭೇದಕ್ಕೂ ಈ ಮಂಗಳಕಾರ್ಯ ಮಂಗಳವನ್ನೇ ಹಾಡಿದೆ. ವಿಲಿಯಂ ರಾಜಕುಮಾರ ಆಗರ್ಭ ಶ್ರೀಮಂತ. ವಧು ಮಧ್ಯ ಇಂಗ್ಲೆಂಡಿನಿಂದ ಬಂದ ಮಧ್ಯಮ ವರ್ಗದ ಹುಡುಗಿ.
ಈ ವೈವಾಹಿಕ ಸಂಬಂಧಗಳ ವಿಶಿಷ್ಟತೆ ಇಂದೇನೂ ಹೊಸತಲ್ಲ. ವಿಲಿಯಂನ ಅಪ್ಪ ಕೂಡ ಇದೇ ದಾರಿ ಹಿಡಿದಿದ್ದ. ಬಡವರ ಮನೆ ಹುಡುಗಿ ಡಯಾನಾಳನ್ನು ವರಿಸಿ ಮದುವೆ ಆಗಿದ್ದ. ಪ್ರೀತಿ ಪ್ರೇಮ ಪ್ರಣಯದಲ್ಲಿ ಬಡತನ ಸಿರಿತನ ಜಗಳಕ್ಕೆ ಜಾಗ ಇಲ್ಲ ಎಂದು ಆತ ತೋರಿಸಿದ್ದ. ಮುದ್ದಾದ ಎರಡು ಮಕ್ಕಳೂ ಜನಿಸಿದವು. ಚಾರ್ಲ್ಸ್ ಈಗ ವಿಧುರ.
ದೇವಾನುದೇವತೆಗಳ ಮನೆಯಂಗಳದಲ್ಲಿ ಮಂಗಳ ಕಾರ್ಯ ನಡೆಯುತ್ತಿದ್ದರೆ ದಾನವರು ಬೆಂಕಿ ಉಂಡೆಗಳನ್ನು ಎರಚುವುದರ ಮೂಲಕ ವಿಘ್ನ ಉಂಟುಮಾಡುವುದನ್ನು ನಾವು ಭಾರತೀಯ ಪೌರಾಣಿಕ ಚಲನಚಿತ್ರಗಳಲ್ಲಿ ಅಥವಾ ಕಾರ್ಟೂನುಗಳಲ್ಲಿ ನೋಡಿರುತ್ತೀವಿ. ಈ ಮದುವೆಗೂ ಕೂಡ ಅಡ್ಡಿ ಆತಂಕ ಉಂಟುಮಾಡಲು ಬ್ರಿಟನ್ನಿನ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಮದುವೆ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಪೊಲೀಸ್ ಕಮಿಷನರ್ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ಪೊಲೀಸರು ಅವಕಾಶ ಕೊಡುವುದಿಲ್ಲ. ಆಕಸ್ಮಾತ್ ಅವಕಾಶ ಕೊಟ್ಟರೆ ತಾವೂ ಕೂಡ ಪ್ರತಿಭಟನಾ ಪ್ರದರ್ಶನದಲ್ಲಿ ತೊಡಗುವುದಾಗಿ ಬ್ರಿಟನ್ನಿನ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಇದೇ ವೇಳೆ ವಿವಾಹ ಕಾರ್ಯಕ್ರಮದ ವೇಳೆ ಬಂದೋಬಸ್ತಿಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ದಿಬ್ಬಣ ಸಾಗಿಬರುವ ದಾರಿಯುದ್ದಕ್ಕೂ ಅವಘಡ ಸಂಭವಿಸುವ ಯಾವುದೇ ಕುತಂತ್ರವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುತ್ತಿದ್ದಾರೆ. ಅಂದ ಹಾಗೆ, ಈ ರಾಯಲ್ ವೆಡ್ಡಿಂಗಿಗೆ ಎಷ್ಟು ಖರ್ಚಾಗುತ್ತದೆಂದು ಯಾರಾದರೂ ಲೆಕ್ಕ ಹಾಕಿ ವಿವರ ನಮಗೆ ನೀಡುತ್ತೀರಾ?



Click it and Unblock the Notifications