Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರಾಜಮನೆತನದ ವಿವಾಹ ಆಹ್ವಾನ ಪತ್ರಿಕಾ

ವಿಲಿಯಂ ಮತ್ತು ಕೇಟ್ ಇಬ್ಬರ ವಯಸ್ಸೂ 29. ಮದುವೆ ಆಗುತ್ತಿರುವ ದಿನಾಂಕವೂ 29. ಅದೊಂದು ವಿಶೇಷ. ವಧೂ ವರರ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಚರ್ಚೆಗಳನ್ನು ಚರ್ಚುಗಳಿಗೆ ಬಿಟ್ಟು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಮದುವೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಹುಡುಗ ಹುಡುಗಿಯ ನಡುವಿನ ವರ್ಗ ಭೇದಕ್ಕೂ ಈ ಮಂಗಳಕಾರ್ಯ ಮಂಗಳವನ್ನೇ ಹಾಡಿದೆ. ವಿಲಿಯಂ ರಾಜಕುಮಾರ ಆಗರ್ಭ ಶ್ರೀಮಂತ. ವಧು ಮಧ್ಯ ಇಂಗ್ಲೆಂಡಿನಿಂದ ಬಂದ ಮಧ್ಯಮ ವರ್ಗದ ಹುಡುಗಿ.
ಈ ವೈವಾಹಿಕ ಸಂಬಂಧಗಳ ವಿಶಿಷ್ಟತೆ ಇಂದೇನೂ ಹೊಸತಲ್ಲ. ವಿಲಿಯಂನ ಅಪ್ಪ ಕೂಡ ಇದೇ ದಾರಿ ಹಿಡಿದಿದ್ದ. ಬಡವರ ಮನೆ ಹುಡುಗಿ ಡಯಾನಾಳನ್ನು ವರಿಸಿ ಮದುವೆ ಆಗಿದ್ದ. ಪ್ರೀತಿ ಪ್ರೇಮ ಪ್ರಣಯದಲ್ಲಿ ಬಡತನ ಸಿರಿತನ ಜಗಳಕ್ಕೆ ಜಾಗ ಇಲ್ಲ ಎಂದು ಆತ ತೋರಿಸಿದ್ದ. ಮುದ್ದಾದ ಎರಡು ಮಕ್ಕಳೂ ಜನಿಸಿದವು. ಚಾರ್ಲ್ಸ್ ಈಗ ವಿಧುರ.
ದೇವಾನುದೇವತೆಗಳ ಮನೆಯಂಗಳದಲ್ಲಿ ಮಂಗಳ ಕಾರ್ಯ ನಡೆಯುತ್ತಿದ್ದರೆ ದಾನವರು ಬೆಂಕಿ ಉಂಡೆಗಳನ್ನು ಎರಚುವುದರ ಮೂಲಕ ವಿಘ್ನ ಉಂಟುಮಾಡುವುದನ್ನು ನಾವು ಭಾರತೀಯ ಪೌರಾಣಿಕ ಚಲನಚಿತ್ರಗಳಲ್ಲಿ ಅಥವಾ ಕಾರ್ಟೂನುಗಳಲ್ಲಿ ನೋಡಿರುತ್ತೀವಿ. ಈ ಮದುವೆಗೂ ಕೂಡ ಅಡ್ಡಿ ಆತಂಕ ಉಂಟುಮಾಡಲು ಬ್ರಿಟನ್ನಿನ ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಮದುವೆ ವೇಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಪೊಲೀಸ್ ಕಮಿಷನರ್ಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ಪೊಲೀಸರು ಅವಕಾಶ ಕೊಡುವುದಿಲ್ಲ. ಆಕಸ್ಮಾತ್ ಅವಕಾಶ ಕೊಟ್ಟರೆ ತಾವೂ ಕೂಡ ಪ್ರತಿಭಟನಾ ಪ್ರದರ್ಶನದಲ್ಲಿ ತೊಡಗುವುದಾಗಿ ಬ್ರಿಟನ್ನಿನ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ಇದೇ ವೇಳೆ ವಿವಾಹ ಕಾರ್ಯಕ್ರಮದ ವೇಳೆ ಬಂದೋಬಸ್ತಿಗಾಗಿ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ದಿಬ್ಬಣ ಸಾಗಿಬರುವ ದಾರಿಯುದ್ದಕ್ಕೂ ಅವಘಡ ಸಂಭವಿಸುವ ಯಾವುದೇ ಕುತಂತ್ರವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡುತ್ತಿದ್ದಾರೆ. ಅಂದ ಹಾಗೆ, ಈ ರಾಯಲ್ ವೆಡ್ಡಿಂಗಿಗೆ ಎಷ್ಟು ಖರ್ಚಾಗುತ್ತದೆಂದು ಯಾರಾದರೂ ಲೆಕ್ಕ ಹಾಕಿ ವಿವರ ನಮಗೆ ನೀಡುತ್ತೀರಾ?



Click it and Unblock the Notifications
