Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2024: 2024ರಲ್ಲಿ ವಿಚ್ಛೇದನ ಕಾರಣಕ್ಕೆ ಕಟು ವಿಮರ್ಶೆಗೆ ಒಳಗಾದ 6 ಸೆಲೆಬ್ರಿಟಿ ಜೋಡಿಗಳು
ಸೆಲೆಬ್ರಿಟಿಗಳೆಂದರೆ ಸಾಮಾನ್ಯ ಜನರಂತೆ ಅಲ್ಲ, ಅವರಿಗೆ ಒಂದಿಷ್ಟೂ ಅಭಿಮಾನಿಗಳಿರುತ್ತಾರೆ, ಅವರನ್ನೇ ಆದರ್ಶವಾಗಿ ತೆಗೆದುಕೊಂಡು ನಾವು ಅವರಂತೆಯೇ ಇರಬೇಕು ಎಂದು ಬಯಸುವವರೂ ಇರುತ್ತಾರೆ, ಹೀಗೆ ನಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬದುಕಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ದೂರಾದರು ಎಂಬ ಸುದ್ದಿ ಕೇಳಿದಾಗ ಕೆಲವರಿಗೆ ಅಚ್ಚರಿ ಉಂಟಾದರೆ ಇನ್ನು ಕೆಲವರು ಅವರ ಜೀವನ ಶೈಲಿ ವಿಮರ್ಶೆ ಮಾಡುತ್ತಾರೆ, ಹೀಗೆ 2024ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಅಷ್ಟೇ ವಿಮರ್ಶೆಗೆ ಒಳಗಾದ ವಿಚ್ಛೇದನಗಳೆಂದರೆ

ರಹಮಾನ್-ಸೈರಾ ಭಾನು ವಿಚ್ಚೇದನ
ಈ ವರ್ಷದ ಕೊನೆಯಲ್ಲಿ ಕೇಳಿ ಬಂದ ವಿಚ್ಚೇದನವಿದು. ಮಕ್ಕಳು ಮದುವೆ ಪ್ರಾಯಕ್ಕೆ ಬಂದಿದ್ದಾರೆ, ದೊಡ್ಡ ಮಗಳಿಗೆ ಮದುವೆಯಾಗಿದೆ, ಆವಾಗ 29 ವರ್ಷದ ಸುದೀರ್ಘ ದಾಂಪತ್ಯ ವಿಚ್ಚೇದನದ ಮೂಲಕ ಅಂತ್ಯವಾಯ್ತು ಎಂಬ ಸುದ್ದಿ ಬಂದಾಗ ದೊಡ್ಡ ಸದ್ದು ಮಾಡಿತು, ಯೌವನ ಪ್ರಾಯಕ್ಕಿಂತ ವಯಸ್ಸಾದಾಗ ಸಂಗಾತಿ ಬೇಕು ಅನಿಸಲಾರಂಭಿಸುತ್ತದೆ, ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಅವರ ಪಾಡಿಗೆ ಬ್ಯುಸಿಯಾಗಿರುತ್ತಾರೆ, ನಮ್ಮ ಜೊತೆ ಮಾತನಾಡಲು, ನಮ್ಮ ಕಷ್ಟ ಸುಖ ಹಂಚಿಕೊಳ್ಳಲು ನನ್ನ ಸಂಗಾತಿ ಬದುಕಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಸಂಗಾತಿ ತೀರಿ ಹೋದವರು ಬಯಸುತ್ತಿರುತ್ತಾರೆ, ಆದರೆ ರಹಮಾನ್ 57ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದಿರುವುದು ದೊಡ್ಡ ಸುದ್ದಿಯಾಯ್ತು ಅಲ್ಲದೆ ಇದುವರೆಗೆ ಅವರ ಬಗ್ಗೆ ಯಾವ ಗಾಸಿಪ್ ಕೇಳಿ ಬಂದಿರಲಿಲ್ಲ, ಆದರೆ ವಿಚ್ಛೇದನ ಬಳಿಕ ಅದುವೂ ಕೇಳಬೇಕಾಯ್ತು, ಇಷ್ಟು ವರ್ಷ ಜೊತೆಯಾಗಿ ಬಾಳಿದ ಜೋಡಿ ಬೇರೆಯಾಗಲು ಕಾರಣವೇನು ಎಂಬುವುದು ಬಹಿರಂಗ ಪಡಿಸಿಲ್ಲ.
ಹಾರ್ದಿಕ್ ಪಾಂಡ್ಯ ನತಾಶ ವಿಚ್ಛೇದ
ಈ ವಿಚ್ಛೇದನ ಬಳಿಕ ನತಾಶಾ ವಿರುದ್ಧ ಕಟು ವಿಮರ್ಶೆಗಳು ಕೇಳಿ ಬಂತು, ಈಗಲೂ ವಿಮಿರ್ಶೆ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ವಿಚ್ಛೇದನ ಸಮಯದಲ್ಲಿ ಜೀವನಾಂಶದ ಸುದ್ದಿ ಕೂಡ ಸಕತ್ ಇಂಟೆರೆಸ್ಟಿಂಗ್ ಆಗಿತ್ತು, ಹಾರ್ದಿಕ್ ಪಾಂಡ್ಯ ಮದುವೆಗೆ ಮೊದಲು ಒಂದು ಸಂದರ್ಶನದಲ್ಲಿ ನನ್ನ ಹೆಸರಿನಲ್ಲಿ ಆಸ್ತಿ ಇಲ್ಲ, ಎಲ್ಲಾ ಅಮ್ಮನ ಹೆಸರಿನಲ್ಲಿದೆ ಮುಂದೆ ವಿಚ್ಛೇದನ ಆದರೆ ಹೆಂಡತಿಗೆ ಅರ್ಧ ಕೊಡಬೇಕಾಗಿಲ್ಲ ಅಲ್ವಾ ಎಂದು ತಮಾಷೆಯಾಗಿ ಹೇಳಿದ್ದರು, ಆದರೆ ಅವರ ನಿಜ ಬದುಕಿನಲ್ಲಿಯೂ ವಿಚ್ಛೇದನ ನೋವು ಅನುಭವಿಸಬೇಕಾಯ್ತು, ಪತ್ನಿಗೆ ಎಷ್ಟು ಜೀವನಾಂಶ ಕೊಟ್ಟಿದ್ದಾರೆ ಎಂಬುವುದು ಎಲ್ಲಿಯೂ ಬಂದಿಲ್ಲ, ಹಾರ್ದಿಕ್ ಹೆಸರಿನಲ್ಲಿ ಆಸ್ತಿ ಇಲ್ಲದಿರುವುದು ಈ ಸಂದರ್ಭದಲ್ಲಿ ಪ್ಲಸ್ ಆಯ್ತು ಎಂಬ ಮಾತುಗಳೂ ಕೇಳಿ ಬಂದಿತ್ತು.
ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನ
ವಿಚ್ಛೇದನದ ಬಳಿಕ ಫ್ರೆಂಡ್ಸ್ ಆಗಿ ಸುತ್ತಾಡುವುದು, ಡಿನ್ನರ್ಗೆ ಹೋಗುವುದು ಇವೆಲ್ಲಾ ಕೆಲ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ನೋಡುತ್ತೇವೆ. ಅದೇ ರೀತಿ ವಿಚ್ಛೇದನದ ಬಳಿಕ ಕೈ ಕೈ ಹಿಡಿದು ಬಂದಿದ್ದರು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ಅದಾದ ಬಳಿಕ ಒಟ್ಟಿಗೆ ಮೂವಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಎಂದು ಕರೆಸಿಕೊಂಡಿದ್ದ ಜೋಡಿ ಈ ರೀತಿ ಬೇರೆಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಸಾನಿಯಾ ಮಿರ್ಜಾ ವಿಚ್ಛೇದನ
ಸಾನಿಯ ಮಿರ್ಜಾ ವಿಚ್ಛೇದನದ ವದಂತಿಗಳು ಕೆಲ ವರ್ಷಗಳಿಂದ ಹಬ್ಬಿತ್ತು, ಆದರೆ ಜನವರಿ 2024ರಲ್ಲಿ ಅಧಿಕೃತ ಮಾಹಿತಿ ಹೊರಬಿತ್ತು, ಅಷ್ಟು ಮಾತ್ರವಲ್ಲ ಸೋಯೆಬ್ ಮಲ್ಲಿಕ್ ಬೇರೆ ಮದುವೆ ಕೂಡ ಆಗಿದ್ದಾರೆ.
ರಜನಿಕಾಂತ್ ಮಗಳ ವಿಚ್ಛೇದನ
ರಜನಿಕಾಂತ್ ಮಗಳು ಐಶ್ವರ್ಯ ಹಾಗೂ ನಟ ಧನುಷ್ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು, ಈ ವರ್ಷ ಅವರಿಗೆ ವಿಚ್ಛೇದನ ಸಿಕ್ಕಿದೆ. ರಜನಿಕಾಂತ್ ಈ ವಿಚ್ಚೇದನ ತಡೆಯಲು ತುಂಬಾ ಪ್ರಯತ್ನಿಸಿದರು,ಆದರೂ ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.
ಯುವರಾಜ್ಕುಮಾರ್ ವಿಚ್ಛೇದನೆ ಸುದ್ದಿ
ದೊಡ್ಮನೆಯ ಯುವರಾಜ್ಕುಮಾರ್ ಅವರ ವೈವಾಹಿಕ ಬದುಕಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಿಷಯ ಹೊರಬಿದ್ದಿದ್ದು ಮಾತ್ರವಲ್ಲ, ಇತರ ಸೆಲೆಬ್ರಿಟಿಗಳಂತಲ್ಲ ಒಬ್ಬರ ಮೇಲೆ ಮತ್ತೊಬ್ಬರು ಅಪವಾದಗಳ ಕೆಸರು ಎರಚಾಟ ನಡೆಸಿದರು, ಇವರ ವಿಚ್ಛೇದನ ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿದೆ.
ಇದಲ್ಲದೆ ಇಶಾ ಡಿಯೋಲ್,ಊರ್ಮಿಳಾ ಮಾತೋಂಡ್ಕರ್, ಇಶಾ ಕೊಪ್ಪಿಕರ್, ಎ ಆರ್ ರಹಮಾನ್ ಸಹೋದರಿ ಪ್ರಕಾರ ಜಿವಿ ಪ್ರಕಾಶ್ ವಿಚ್ಛೇದನ ಪಡೆದಿದ್ದಾರೆ.



Click it and Unblock the Notifications