Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಪತಿ ಹಾಲಿಗೆ ನೀರು ಬೆರೆಸುತ್ತಾನೆ ಎಂದು ವಿಚ್ಛೇದನಕ್ಕೆ ಮುಂದಾದ ಪತ್ನಿ..!
ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ, ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಈಗ ವಿಚ್ಛೇದನ ಪಡೆಯವುದು ನಡೆಯುತ್ತಲೇ ಇದೆ. ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ ಎಂದು ವಿಚ್ಚೇದನ ಪಡೆಯುವುದು, ಗಂಡ ತಡವಾಗಿ ಮನೆಗೆ ಬರುತ್ತಾನೆ ಎಂದು ವಿಚ್ಛೇದನ ಪಡೆಯುವುದು, ಪತ್ನಿ ಕೋಳಿ ಸಾರು ಮಾಡಲಿಲ್ಲ ಎಂದು ವಿಚ್ಛೇದನ ಪಡೆದ ಚಿತ್ರ ವಿಚಿತ್ರ ಪ್ರಸಂಗಗಳ ಕೇಳಿದ್ದೇವೆ.
ಆಧುನಿಕ ಯುಗದಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಹಿಂದೆಲ್ಲಾ ವಿಚ್ಛೇದನ ಪ್ರಸಂಗಗಳು ಬೆರಳೆಣಿಕೆಯಷ್ಟು ಮಾತ್ರ ನಡೆಯುತ್ತಿದ್ದವು. ಎಂತಹ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಇಂದು ಕೋರ್ಟ್ ಮೂಲಕವೇ ಚಿಕ್ಕ ಪುಟ್ಟ ವಿಚಾರಳು ವಿಚಾರಣೆ ನಡೆಯುತ್ತವೆ, ಅದರಲ್ಲಿ ಕೆಲವೇ ಕೆಲವು ರಾಜಿಯಾದರೆ ಬಹುಪಾಲು ಕೇಸ್ಗಳು ವಿಚ್ಛೇದನದಲ್ಲಿ ಅಂತ್ಯವಾಗುತ್ತವೆ.

ಇಲ್ಲೊಂದು ವಿಚಿತ್ರ ಹಾಗೂ ಕ್ಷುಲ್ಲಕ ಘಟನೆ ಸಹ ಹೀಗೆ ವಿಚ್ಛೇದನಕ್ಕೆ ಕಾರಣವಾಗಿದೆ. ಪತಿ ಹಾಲಿಗೆ ಹೆಚ್ಚು ನೀರು ಬೆರೆಸುತ್ತಾನೆ ಎಂದು ಪತ್ನಿ ವಿಚ್ಛೇದನ ಪಡೆಯಲು ಮುಂದಾಗಿರುವ ಘಟನೆ ವರದಿಯಾಗಿದೆ. ಈ ಸುದ್ದಿ ಅಚ್ಚರಿ ಎನಿಸಬಹುದು. ಆದರೆ ಆಕೆ ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ರಾಜಸ್ಥಾನದ ರಾಜ್ಖೇರಾದ ಯುವಕನಾದ ಪತಿ ಎರಡು ವರ್ಷಗಳ ಹಿಂದೆ ಆಗ್ರಾದ ರಾಜ್ಪುರ ಚುಂಗಿ ಮೂಲದ ಯುವತಿಯನ್ನು ವಿವಾಹವಾಗಿದ್ದ. ಹಾಲು ಮಾರುವ ಮೂಲಕ ಜೀವನ ಸಾಗಿಸುತ್ತಿದ್ದ ಪತಿ, ಅದರ ಪ್ರಮಾಣ ಮತ್ತು ಲಾಭವನ್ನು ಹೆಚ್ಚಿಸಲು ನಗರದಲ್ಲಿ ಮಾರಾಟ ಮಾಡುವ ಮೊದಲು ಹಾಲಿನ ಕ್ಯಾನ್ಗೆ ನೀರು ಮಿಶ್ರಣ ಮಾಡುತ್ತಿದ್ದ ಎಂಬುದು ಪತ್ನಿಯ ಆರೋಪವಾಗಿದೆ. ಈ ಅಭ್ಯಾಸವು ದಂಪತಿ ನಡುವೆ ನಿತ್ಯ ಗಲಾಟೆಗೆ ಕಾರಣವಾಗಿತ್ತು, ಇದರ ಪರಿಣಾಮವಾಗಿ ಹೆಂಡತಿ ತನ್ನ ಗಂಡನ ಮನೆಯನ್ನು ತೊರೆದು ತನ್ನ ತಾಯಿಯ ಮನೆ ಸೇರಿದ್ದಳು.
ಗಂಡ ಹಾಲಿಗೆ ನೀರು ಬೆರೆಸಿ ಅದನ್ನು ಮಾರಾಟ ಮಾಡುವುದು ಪತ್ನಿಗೆ ಇಷ್ಟವಿರಲಿಲ್ಲವಂತೆ. ನಿತ್ಯ ಇದೇ ವಿಚಾರಕ್ಕೆ ಆಕೆ ಗಲಾಟೆ ಮಾಡುತ್ತಿದ್ದಳು. ಕಲಬೆರೆಕೆ ಹಾಲಿನ ಮೂಲಕ ಗಳಿಸಿದ ಆದಾಯದಿಂದ ಜೀವನ ನಡೆಸಬೇಡಿ ಎಂದು ಗಂಡನಿಗೆ ಬುದ್ದಿ ಹೇಳುತ್ತಿದ್ದಳಂತೆ.
ಆದರೆ ಪತಿಯ ಕಾರ್ಯ ನಿತ್ಯ ಮುಂದುವರೆದಿತ್ತು. ಗಂಡನನ್ನು ತಡೆಯಲು ಮುಂದಾದಾಗ ನಿತ್ಯ ಜಗಳವಾಗುತ್ತಿತ್ತಂತೆ. ಇದರಿಂದ ಬೇಸತ್ತ ಆಕೆ ನೇರವಾಗಿ ಪೊಲೀಸ್ ಠಾಣೆಗೆ ತಲುಪಿದ್ದಳು, ಅಲ್ಲಿಯೂ ಬಗೆಹರಿಯದಾಗ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ ಎಂದು ತಿಳಿದುಬಂದಿದೆ.
ಆಪ್ತಸಮಾಲೋಚನೆ ವೇಳೆ ಪತಿ, ತನ್ನ ವ್ಯಾಪಾರದಲ್ಲಿ ನಷ್ಟವಾಗುವುದನ್ನು ತಪ್ಪಿಸಲು ಹಾಲಿನಲ್ಲಿ ನೀರು ಬೆರೆಸಿ ನೀಡುವುದಾಗಿ ವಿವರಿಸಿದ್ದಾನೆ. ಆದರೆ ಆಕೆ ಪತಿ ಬೇರೆ ಉದ್ಯೋಗ ಹುಡುಕಲಿ ಅಥವಾ ಹಾಲಿಗೆ ನೀರು ಬೆರೆಸಿ ಮಾರಾಟ ಮಾಡುವುದನ್ನು ನಿಲ್ಲಿಸುವವರೆಗೂ ಮನೆಗೆ ವಾಪಾಸು ಬರುವುದಿಲ್ಲ ಎಂದು ಹಠ ಹಿಡಿದಿದ್ದಾಳಂತೆ.
ಇತ್ತ ಹಾಲಿನ ಪ್ರಮಾಣ ಹಚ್ಚಿಸಲು ಬರೀ ನೀರು ಮಾತ್ರವಲ್ಲ, ಅದಕ್ಕೆ ಮಾರ್ಜಕ, ಯೂರಿಯಾ ಸಹ ಬೆರೆಸುತ್ತಾರೆ ಎಂಬುದು ಪತ್ನಿಯ ಗಮನದಲ್ಲಿತ್ತಂತೆ. ಆದರೆ ಪತಿ ಈ ರೀತಿ ಮಾಡಿಲ್ಲ ಬರೀ ನೀರನ್ನೇ ಬೆರೆಸುತ್ತಾರೆ. ಆದರೂ ಇದರಿಂದ ಬೇರೆಯವರಿಗೆ ನಷ್ಟವಾಗುತ್ತದೆ ಎಂಬುದು ಆಕೆಯ ಕಾಳಜಿಯಂತೆ. ಅಲ್ಲದೆ ಪತಿ ಹಾಲು ನೀಡಿ ಬಂದ ಬಳಿಕ ಮನೆಯವರು ಹಾಲಿಗೆ ನೀರು ಬೆರೆಸಿರುವುದು ತಿಳಿದರೆ ಬೈಯ್ಯುತ್ತಾರೆ, ಶಾಪ ಹಾಕುತ್ತಾರೆ ಎಂಬುದು ಆಕೆಯ ಕಳಕಳಿಯಾಗಿತ್ತಂತೆ.
ಆದ್ರೆ ಈ ಜಗಳ ಅವರೇ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು, ಆದರೆ ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋಗಿದ್ದು ಮಾತ್ರವಲ್ಲ ವಿಚ್ಛೇದನಕ್ಕೆ ಮುಂದಾಗಿದ್ದು ವಿಪರ್ಯಾಸ.



Click it and Unblock the Notifications











