Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಸಂಗಾತಿಗೆ ಟೈಂ ಕೊಡಿ ಅಂತ ಹೇಳೋದು ಇದೇ ಕಾರಣಕ್ಕೆ!
ಈ ಆಧುನಿಕ ಜಗತ್ತು ಹೇಗಾಗಿದೆ ಅಂದ್ರೆ ಒಂದೇ ಮನೆಯಲ್ಲಿದ್ರು ಕೂಡ ಪರಸ್ಪರ ಒಬ್ಬರನ್ನೊಬ್ಬರ ಮುಖ ನೋಡಿಕೊಳ್ಳೋದು ಅಪರೂಪ ಎಂಬಂತಾಗಿದೆ. ಪತಿ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಹೆಂಡತಿಯ ಜೊತೆಗೆ ಎರಡು ಪ್ರೀತಿಯ ಮಾತನಾಡೋದಕ್ಕೂ ಆತನ ಬಳಿ ಸಮಯವಿಲ್ಲ. ಸಂಬಂಧ ಇದೇ ರೀತಿ ಮುಂದುವರೆದರೆ ಮಹಾ ಅಪಾಯವೇ ಎದುರಾಗಲಿದೆ. ಅಷ್ಡಕ್ಕು ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡದಿದ್ದರೆ ಏನಾಗುತ್ತೆ ಅನ್ನೋದನ್ನು ತಿಳಿಯೋಣ.

ಒಬ್ಬರಿಗೊಬ್ಬರು ಸಮಯನೇ ಕೊಡದಿದ್ದ ಮೇಲೆ ಅವರ ಮನಸ್ಸು ಅರ್ಥ ಮಾಡಿಕೊಳ್ಳಲು ಹೇಗೆ ತಾನೇ? ನಾವು ಎಲ್ಲಾ ಮಾಡುತ್ತಿರುವುದು ಅವರಿಗಾಗಿ ಅಂತೀವಿ, ಆದರೆ ಅವರಿಗೆ ಅವೆಲ್ಲಕ್ಕಿಂತ ನಮ್ಮಿಂದ ಬೇಕಾಗಿರುವುದು ನಮ್ಮ ಸ್ವಲ್ಪ ಸಮಯವಾಗಿರುತ್ತದೆ ಅದನ್ನು ನಾವು ಅರಿಯುವುದೇ ಇಲ್ಲ.
ದಾಂಪತ್ಯದಲ್ಲಿ ಸಮಯ ತುಂಬಾನೇ ಮುಖ್ಯ, ನಾವು ಸಮಯ ಕೊಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ:
ಬಾಂಧವ್ಯ ಗಟ್ಟಿಯಾಗಿರಲ್ಲ: ನಾವು ಪರಸ್ಪರ ಸಮಯ ಕೊಟ್ಟರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಇಲ್ಲದಿದ್ದರೆ ಅವರ ಮನಸ್ಸಿನಲ್ಲಿರುವುದು ನಿಮಗೆ ಅರ್ಥವಾಗಲ್ಲ, ನಿಮ್ಮ ಮನಸ್ಸಿನಲ್ಲಿರುವುದು ಅವರಿಗೆ ಅರ್ಥ ಆಗಲ್ಲ, ಇದರಿಂದ ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಲ್ಲ. ಇದರಿಂದಾಗಿ ಅನೇಕ ತಪ್ಪು ಕಲ್ಪನೆಗಳು ಉಂಟಾಗಬಹುದು.
ಸಂಶಯ ಮೂಡುವುದು: ಸಂಗಾತಿಗೆ ಸಮಯ ಕೊಡದಿದ್ದಾಗ ಖಂಡಿತವಾಗ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿಯೇ ಮೂಡುವುದು. ನೀವು ಯಾವುದೇ ತಪ್ಪು ಮಾಡದಿದ್ದರೂ ಕೆಲಸದ ಕಾರಣಕ್ಕೆ ಬ್ಯುಸಿಯಾಗಿದ್ದು ಅವರಿಗೆ ಸಮಯ ಕೊಡುತ್ತಿಲ್ಲ ಎಂದಾದರೂ ಅವರಿಗೆ ನಿಮ್ಮ ಬಗ್ಗೆ ಸಂಶಯ ಮೂಡುವುದು. ಅದಕ್ಕೆ ಅವರ ತಪ್ಪು ಎಂದು ಹೇಳಲು ಸಾದ್ಯವಿಲ್ಲ, ಏಕೆಂದರೆ ನೀವು ನೀಡುತ್ತಿರುವ ಕೊರತೆಯಿಂದಾಗಿ ಅವರ ಮನಸ್ಸಿನಲ್ಲಿ ಪ್ರೀತಿ ಬಗ್ಗೆ ಒಂದು ಅಭದ್ರತೆ ಮೂಡುವುದು. ಅವರಿಗೆ ನನ್ನ ಈಗ ಇಷ್ಟವಿಲ್ಲವೇ ಅಥವಾ ಬೇರೆಯವರ ಜೊತೆ ಸಂಬಂಧವಿರಬಹುದು? ಈ ಕಾರಣಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರಬಹುದೇ ಎಂಬ ಸಂಶಯ ಮೂಡಲಾರಂಭಿಸುವುದು. ಈ ರೀತಿ ಭಾವನೆ ಬಾರದಂತೆ ನೋಡಿಕೊಳ್ಳಬೇಕೆಂದರೆ ನಿಮ್ಮ ಸಂಗಾತಿಗೆ ಸಮಯ ಕೊಡಿ.
ಖಿನ್ನತೆ ಕಾಡುವುದು: ನೀವು ಸದಾ ಕೆಲಸ ಅಂತ ಬ್ಯುಸಿಯಾಗಿ ಕುಟುಂಬಕ್ಕೆ ಸಮಯ ಕೊಡದೆ ಹೋದರೆ ಸಂಗಾತಿಗೆ ಒಂಟಿತನ ಕಾಡುವುದು. ಈ ಒಂಟಿತನದಿಂದಲೇ ಅವರಿಗೆ ಖಿನ್ನತೆ ಕಾಡಿ ಆರೋಗ್ಯ ಸಮಸ್ಯೆ ಕಾಡಬಹುದು. ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಅನೈತಿಕ ಸಂಬಂಧ ಉಂಟಾಗಬಹುದು
ಯಾವಾಗ ಪ್ರೀತಿಯ ಕೊರತೆ ಉಂಟಾಗುವುದೋ ಆಗ ಕೆಲವರು ತಮಗೆ ಪ್ರಾಮುಖ್ಯತೆ ನೀಡುತ್ತಿರುವ ವ್ಯಕ್ತಿ ಕಡೆಗೆ ಆಕರ್ಷಿತರಾಗುತ್ತಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರು ಪ್ರತಿಕಾರ ಭಾವನೆಯಿಂದ ಕೆಲವರು ಅನೈತಿಕ ಸಂಬಂಧಕ್ಕೆ ಬೀಳುತ್ತಾರೆ.
ನಿಮ್ಮ ಕುಟುಂಬಕ್ಕಾಗಿ ನೀವು ದುಡಿಯುತ್ತಿದ್ದರೆ ಮೊದಲು ಅವರಿಗೆ ಸಮಯ ಕೊಡಿ
ನೀವು ಕಷ್ಟಪಟ್ಟು ದುಡಿಯುತ್ತಿದ್ದೀರಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಹೇಳಲೇಬೇಡಿ. ಏಕೆಂದರೆ ನೀವು ದುಡಿಯುತ್ತಿರುವುದೇ ಅವರಿಗೋಸ್ಕರ, ನಿಮ್ಮ ಖುಷಿಗೋಸ್ಕರ ಎಂದ ಮೇಲೆ ನೀವು ಕುಟುಂಬಕ್ಕೆ ಸಮಯ ನೀಡದೇ ಹೋದರೆ ನೀವು ಕಷ್ಟಪಟ್ಟು ದುಡಿದರೂ ನಿಮ್ಮ ಮನಸ್ಸಿಗೆ ಖುಷಿ ಸಿಗುವುದಿಲ್ಲ. ಈ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?
ನಿಮ್ಮ ಅಭಿಪ್ರಾಯವ ಏನು ಕಮೆಂಟ್ ಮಾಡಿ...



Click it and Unblock the Notifications












