Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ನಿಮ್ಮ ಸಂಗಾತಿಗೆ ಟೈಂ ಕೊಡಿ ಅಂತ ಹೇಳೋದು ಇದೇ ಕಾರಣಕ್ಕೆ!
ಈ ಆಧುನಿಕ ಜಗತ್ತು ಹೇಗಾಗಿದೆ ಅಂದ್ರೆ ಒಂದೇ ಮನೆಯಲ್ಲಿದ್ರು ಕೂಡ ಪರಸ್ಪರ ಒಬ್ಬರನ್ನೊಬ್ಬರ ಮುಖ ನೋಡಿಕೊಳ್ಳೋದು ಅಪರೂಪ ಎಂಬಂತಾಗಿದೆ. ಪತಿ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಹೆಂಡತಿಯ ಜೊತೆಗೆ ಎರಡು ಪ್ರೀತಿಯ ಮಾತನಾಡೋದಕ್ಕೂ ಆತನ ಬಳಿ ಸಮಯವಿಲ್ಲ. ಸಂಬಂಧ ಇದೇ ರೀತಿ ಮುಂದುವರೆದರೆ ಮಹಾ ಅಪಾಯವೇ ಎದುರಾಗಲಿದೆ. ಅಷ್ಡಕ್ಕು ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡದಿದ್ದರೆ ಏನಾಗುತ್ತೆ ಅನ್ನೋದನ್ನು ತಿಳಿಯೋಣ.

ಒಬ್ಬರಿಗೊಬ್ಬರು ಸಮಯನೇ ಕೊಡದಿದ್ದ ಮೇಲೆ ಅವರ ಮನಸ್ಸು ಅರ್ಥ ಮಾಡಿಕೊಳ್ಳಲು ಹೇಗೆ ತಾನೇ? ನಾವು ಎಲ್ಲಾ ಮಾಡುತ್ತಿರುವುದು ಅವರಿಗಾಗಿ ಅಂತೀವಿ, ಆದರೆ ಅವರಿಗೆ ಅವೆಲ್ಲಕ್ಕಿಂತ ನಮ್ಮಿಂದ ಬೇಕಾಗಿರುವುದು ನಮ್ಮ ಸ್ವಲ್ಪ ಸಮಯವಾಗಿರುತ್ತದೆ ಅದನ್ನು ನಾವು ಅರಿಯುವುದೇ ಇಲ್ಲ.
ದಾಂಪತ್ಯದಲ್ಲಿ ಸಮಯ ತುಂಬಾನೇ ಮುಖ್ಯ, ನಾವು ಸಮಯ ಕೊಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ:
ಬಾಂಧವ್ಯ ಗಟ್ಟಿಯಾಗಿರಲ್ಲ: ನಾವು ಪರಸ್ಪರ ಸಮಯ ಕೊಟ್ಟರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಇಲ್ಲದಿದ್ದರೆ ಅವರ ಮನಸ್ಸಿನಲ್ಲಿರುವುದು ನಿಮಗೆ ಅರ್ಥವಾಗಲ್ಲ, ನಿಮ್ಮ ಮನಸ್ಸಿನಲ್ಲಿರುವುದು ಅವರಿಗೆ ಅರ್ಥ ಆಗಲ್ಲ, ಇದರಿಂದ ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಲ್ಲ. ಇದರಿಂದಾಗಿ ಅನೇಕ ತಪ್ಪು ಕಲ್ಪನೆಗಳು ಉಂಟಾಗಬಹುದು.
ಸಂಶಯ ಮೂಡುವುದು: ಸಂಗಾತಿಗೆ ಸಮಯ ಕೊಡದಿದ್ದಾಗ ಖಂಡಿತವಾಗ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿಯೇ ಮೂಡುವುದು. ನೀವು ಯಾವುದೇ ತಪ್ಪು ಮಾಡದಿದ್ದರೂ ಕೆಲಸದ ಕಾರಣಕ್ಕೆ ಬ್ಯುಸಿಯಾಗಿದ್ದು ಅವರಿಗೆ ಸಮಯ ಕೊಡುತ್ತಿಲ್ಲ ಎಂದಾದರೂ ಅವರಿಗೆ ನಿಮ್ಮ ಬಗ್ಗೆ ಸಂಶಯ ಮೂಡುವುದು. ಅದಕ್ಕೆ ಅವರ ತಪ್ಪು ಎಂದು ಹೇಳಲು ಸಾದ್ಯವಿಲ್ಲ, ಏಕೆಂದರೆ ನೀವು ನೀಡುತ್ತಿರುವ ಕೊರತೆಯಿಂದಾಗಿ ಅವರ ಮನಸ್ಸಿನಲ್ಲಿ ಪ್ರೀತಿ ಬಗ್ಗೆ ಒಂದು ಅಭದ್ರತೆ ಮೂಡುವುದು. ಅವರಿಗೆ ನನ್ನ ಈಗ ಇಷ್ಟವಿಲ್ಲವೇ ಅಥವಾ ಬೇರೆಯವರ ಜೊತೆ ಸಂಬಂಧವಿರಬಹುದು? ಈ ಕಾರಣಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರಬಹುದೇ ಎಂಬ ಸಂಶಯ ಮೂಡಲಾರಂಭಿಸುವುದು. ಈ ರೀತಿ ಭಾವನೆ ಬಾರದಂತೆ ನೋಡಿಕೊಳ್ಳಬೇಕೆಂದರೆ ನಿಮ್ಮ ಸಂಗಾತಿಗೆ ಸಮಯ ಕೊಡಿ.
ಖಿನ್ನತೆ ಕಾಡುವುದು: ನೀವು ಸದಾ ಕೆಲಸ ಅಂತ ಬ್ಯುಸಿಯಾಗಿ ಕುಟುಂಬಕ್ಕೆ ಸಮಯ ಕೊಡದೆ ಹೋದರೆ ಸಂಗಾತಿಗೆ ಒಂಟಿತನ ಕಾಡುವುದು. ಈ ಒಂಟಿತನದಿಂದಲೇ ಅವರಿಗೆ ಖಿನ್ನತೆ ಕಾಡಿ ಆರೋಗ್ಯ ಸಮಸ್ಯೆ ಕಾಡಬಹುದು. ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಅನೈತಿಕ ಸಂಬಂಧ ಉಂಟಾಗಬಹುದು
ಯಾವಾಗ ಪ್ರೀತಿಯ ಕೊರತೆ ಉಂಟಾಗುವುದೋ ಆಗ ಕೆಲವರು ತಮಗೆ ಪ್ರಾಮುಖ್ಯತೆ ನೀಡುತ್ತಿರುವ ವ್ಯಕ್ತಿ ಕಡೆಗೆ ಆಕರ್ಷಿತರಾಗುತ್ತಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರು ಪ್ರತಿಕಾರ ಭಾವನೆಯಿಂದ ಕೆಲವರು ಅನೈತಿಕ ಸಂಬಂಧಕ್ಕೆ ಬೀಳುತ್ತಾರೆ.
ನಿಮ್ಮ ಕುಟುಂಬಕ್ಕಾಗಿ ನೀವು ದುಡಿಯುತ್ತಿದ್ದರೆ ಮೊದಲು ಅವರಿಗೆ ಸಮಯ ಕೊಡಿ
ನೀವು ಕಷ್ಟಪಟ್ಟು ದುಡಿಯುತ್ತಿದ್ದೀರಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಹೇಳಲೇಬೇಡಿ. ಏಕೆಂದರೆ ನೀವು ದುಡಿಯುತ್ತಿರುವುದೇ ಅವರಿಗೋಸ್ಕರ, ನಿಮ್ಮ ಖುಷಿಗೋಸ್ಕರ ಎಂದ ಮೇಲೆ ನೀವು ಕುಟುಂಬಕ್ಕೆ ಸಮಯ ನೀಡದೇ ಹೋದರೆ ನೀವು ಕಷ್ಟಪಟ್ಟು ದುಡಿದರೂ ನಿಮ್ಮ ಮನಸ್ಸಿಗೆ ಖುಷಿ ಸಿಗುವುದಿಲ್ಲ. ಈ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?
ನಿಮ್ಮ ಅಭಿಪ್ರಾಯವ ಏನು ಕಮೆಂಟ್ ಮಾಡಿ...



Click it and Unblock the Notifications
