Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಿಮ್ಮ ಸಂಗಾತಿಗೆ ಟೈಂ ಕೊಡಿ ಅಂತ ಹೇಳೋದು ಇದೇ ಕಾರಣಕ್ಕೆ!
ಈ ಆಧುನಿಕ ಜಗತ್ತು ಹೇಗಾಗಿದೆ ಅಂದ್ರೆ ಒಂದೇ ಮನೆಯಲ್ಲಿದ್ರು ಕೂಡ ಪರಸ್ಪರ ಒಬ್ಬರನ್ನೊಬ್ಬರ ಮುಖ ನೋಡಿಕೊಳ್ಳೋದು ಅಪರೂಪ ಎಂಬಂತಾಗಿದೆ. ಪತಿ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಹೆಂಡತಿಯ ಜೊತೆಗೆ ಎರಡು ಪ್ರೀತಿಯ ಮಾತನಾಡೋದಕ್ಕೂ ಆತನ ಬಳಿ ಸಮಯವಿಲ್ಲ. ಸಂಬಂಧ ಇದೇ ರೀತಿ ಮುಂದುವರೆದರೆ ಮಹಾ ಅಪಾಯವೇ ಎದುರಾಗಲಿದೆ. ಅಷ್ಡಕ್ಕು ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ಕೊಡದಿದ್ದರೆ ಏನಾಗುತ್ತೆ ಅನ್ನೋದನ್ನು ತಿಳಿಯೋಣ.

ಒಬ್ಬರಿಗೊಬ್ಬರು ಸಮಯನೇ ಕೊಡದಿದ್ದ ಮೇಲೆ ಅವರ ಮನಸ್ಸು ಅರ್ಥ ಮಾಡಿಕೊಳ್ಳಲು ಹೇಗೆ ತಾನೇ? ನಾವು ಎಲ್ಲಾ ಮಾಡುತ್ತಿರುವುದು ಅವರಿಗಾಗಿ ಅಂತೀವಿ, ಆದರೆ ಅವರಿಗೆ ಅವೆಲ್ಲಕ್ಕಿಂತ ನಮ್ಮಿಂದ ಬೇಕಾಗಿರುವುದು ನಮ್ಮ ಸ್ವಲ್ಪ ಸಮಯವಾಗಿರುತ್ತದೆ ಅದನ್ನು ನಾವು ಅರಿಯುವುದೇ ಇಲ್ಲ.
ದಾಂಪತ್ಯದಲ್ಲಿ ಸಮಯ ತುಂಬಾನೇ ಮುಖ್ಯ, ನಾವು ಸಮಯ ಕೊಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ:
ಬಾಂಧವ್ಯ ಗಟ್ಟಿಯಾಗಿರಲ್ಲ: ನಾವು ಪರಸ್ಪರ ಸಮಯ ಕೊಟ್ಟರೆ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ, ಇಲ್ಲದಿದ್ದರೆ ಅವರ ಮನಸ್ಸಿನಲ್ಲಿರುವುದು ನಿಮಗೆ ಅರ್ಥವಾಗಲ್ಲ, ನಿಮ್ಮ ಮನಸ್ಸಿನಲ್ಲಿರುವುದು ಅವರಿಗೆ ಅರ್ಥ ಆಗಲ್ಲ, ಇದರಿಂದ ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಲ್ಲ. ಇದರಿಂದಾಗಿ ಅನೇಕ ತಪ್ಪು ಕಲ್ಪನೆಗಳು ಉಂಟಾಗಬಹುದು.
ಸಂಶಯ ಮೂಡುವುದು: ಸಂಗಾತಿಗೆ ಸಮಯ ಕೊಡದಿದ್ದಾಗ ಖಂಡಿತವಾಗ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಸಂಶಯ ಮೂಡಿಯೇ ಮೂಡುವುದು. ನೀವು ಯಾವುದೇ ತಪ್ಪು ಮಾಡದಿದ್ದರೂ ಕೆಲಸದ ಕಾರಣಕ್ಕೆ ಬ್ಯುಸಿಯಾಗಿದ್ದು ಅವರಿಗೆ ಸಮಯ ಕೊಡುತ್ತಿಲ್ಲ ಎಂದಾದರೂ ಅವರಿಗೆ ನಿಮ್ಮ ಬಗ್ಗೆ ಸಂಶಯ ಮೂಡುವುದು. ಅದಕ್ಕೆ ಅವರ ತಪ್ಪು ಎಂದು ಹೇಳಲು ಸಾದ್ಯವಿಲ್ಲ, ಏಕೆಂದರೆ ನೀವು ನೀಡುತ್ತಿರುವ ಕೊರತೆಯಿಂದಾಗಿ ಅವರ ಮನಸ್ಸಿನಲ್ಲಿ ಪ್ರೀತಿ ಬಗ್ಗೆ ಒಂದು ಅಭದ್ರತೆ ಮೂಡುವುದು. ಅವರಿಗೆ ನನ್ನ ಈಗ ಇಷ್ಟವಿಲ್ಲವೇ ಅಥವಾ ಬೇರೆಯವರ ಜೊತೆ ಸಂಬಂಧವಿರಬಹುದು? ಈ ಕಾರಣಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿರಬಹುದೇ ಎಂಬ ಸಂಶಯ ಮೂಡಲಾರಂಭಿಸುವುದು. ಈ ರೀತಿ ಭಾವನೆ ಬಾರದಂತೆ ನೋಡಿಕೊಳ್ಳಬೇಕೆಂದರೆ ನಿಮ್ಮ ಸಂಗಾತಿಗೆ ಸಮಯ ಕೊಡಿ.
ಖಿನ್ನತೆ ಕಾಡುವುದು: ನೀವು ಸದಾ ಕೆಲಸ ಅಂತ ಬ್ಯುಸಿಯಾಗಿ ಕುಟುಂಬಕ್ಕೆ ಸಮಯ ಕೊಡದೆ ಹೋದರೆ ಸಂಗಾತಿಗೆ ಒಂಟಿತನ ಕಾಡುವುದು. ಈ ಒಂಟಿತನದಿಂದಲೇ ಅವರಿಗೆ ಖಿನ್ನತೆ ಕಾಡಿ ಆರೋಗ್ಯ ಸಮಸ್ಯೆ ಕಾಡಬಹುದು. ತಮ್ಮ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಅನೈತಿಕ ಸಂಬಂಧ ಉಂಟಾಗಬಹುದು
ಯಾವಾಗ ಪ್ರೀತಿಯ ಕೊರತೆ ಉಂಟಾಗುವುದೋ ಆಗ ಕೆಲವರು ತಮಗೆ ಪ್ರಾಮುಖ್ಯತೆ ನೀಡುತ್ತಿರುವ ವ್ಯಕ್ತಿ ಕಡೆಗೆ ಆಕರ್ಷಿತರಾಗುತ್ತಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರು ಪ್ರತಿಕಾರ ಭಾವನೆಯಿಂದ ಕೆಲವರು ಅನೈತಿಕ ಸಂಬಂಧಕ್ಕೆ ಬೀಳುತ್ತಾರೆ.
ನಿಮ್ಮ ಕುಟುಂಬಕ್ಕಾಗಿ ನೀವು ದುಡಿಯುತ್ತಿದ್ದರೆ ಮೊದಲು ಅವರಿಗೆ ಸಮಯ ಕೊಡಿ
ನೀವು ಕಷ್ಟಪಟ್ಟು ದುಡಿಯುತ್ತಿದ್ದೀರಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಹೇಳಲೇಬೇಡಿ. ಏಕೆಂದರೆ ನೀವು ದುಡಿಯುತ್ತಿರುವುದೇ ಅವರಿಗೋಸ್ಕರ, ನಿಮ್ಮ ಖುಷಿಗೋಸ್ಕರ ಎಂದ ಮೇಲೆ ನೀವು ಕುಟುಂಬಕ್ಕೆ ಸಮಯ ನೀಡದೇ ಹೋದರೆ ನೀವು ಕಷ್ಟಪಟ್ಟು ದುಡಿದರೂ ನಿಮ್ಮ ಮನಸ್ಸಿಗೆ ಖುಷಿ ಸಿಗುವುದಿಲ್ಲ. ಈ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?
ನಿಮ್ಮ ಅಭಿಪ್ರಾಯವ ಏನು ಕಮೆಂಟ್ ಮಾಡಿ...



Click it and Unblock the Notifications
