Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೋಸ ಮಾಡಿದ ಹುಡುಗಿಗಾಗಿ ಹುಚ್ಚನಾದ, ದೇವತೆಯಂಥ ಹೆಣ್ಮಗಳಿಂದ ಬದಲಾಯ್ತು ಅವನ ಬದುಕು
ನೀವು ಸೋಷಿಯಲ್ ಮೀಡಿಯಾ ಗಮನಿಸುವವರು ಆಗಿದ್ದರೆ ಇತ್ತೀಚೆಗೆ ಒಂದು ಜೋಡಿಯ ಫೋಟೋ ಗಮನ ಸೆಳೆದಿರಬಹುದು, ಒಬ್ಬ ಭಿಕ್ಷುಕ ಹ್ಯಾಂಡ್ಸಮ್ ಅಗಿ ಬದಲಾದ ಫೋಟೋ, ಆ ಹುಡುಗಿ ಮಾತ್ರ ಎರಡು ಫೋಟೋದಲ್ಲಿ ಇದ್ದಾಳೆ, ಅವರಿಬ್ಬರು ಪ್ರೇಮಿಗಳು.
ಅವರ ಪ್ರೀತಿ ಅದರಲ್ಲಿಯೂ ಆಕೆಯ ಪ್ರೀತಿಯನ್ನು ಸೋಷಿಯಲ್ ಮೀಡಿಯಾ ಕೊಂಡಾಡುತ್ತಿದೆ. ಇಂಥ ಹೆಣ್ಣು ಬದುಕಿಗೆ ಬಂದರೆ ಆ ಗಂಡು ಬದುಕಿನಲ್ಲಿ ಗಂಡಿನ ಯಶಸ್ವಿಯಾಗುತ್ತಾನೆ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ಹಿಂದೆ ಪ್ರೀತಿಸಿದ ಹೆಣ್ಣಿನಿಂದಲೇ ಮೋಸ ಹೋದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬದುಕಿನಲ್ಲಿ ಹೇಗೆ ಸೋತರು, ಅಂಥ ಸಂದರ್ಭದಲ್ಲಿ ಬಂದ ಅವರ ಈಗೀನ ಪತ್ನಿ ಅವರ ಬದುಕನನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ್ದೆವು. ದಿನೇಶ್ ಕಾರ್ತಿಕ್ ಬದುಕು ಮಾತ್ರ ಪ್ರೀತಿಯಲ್ಲಿ ಮೋಸ ಮಾಡಿದವಳಿಗಾಗಿ ಕೊರಗಬೇಡಿ, ದೇವತೆಯಂಥವಳು ಬಂದೇ ಬರ್ತಾಳೆ ಎನ್ನುವುದಕ್ಕೆ ದಿನೇಶ್ ಕಾರ್ತಿಕ್ ಬದುಕು ಒಂದು ದೊಡ್ಡ ಉದಾಹರಣೆ.
ಈಗ ಅಂಥದ್ದೇ ದೇವತೆಯ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಬಿಟ್ಟು ಹೋಗುವವಳ ಬಗ್ಗೆ ಚಿಂತೆ ಬಿಡಿ, ಎಲ್ಲಾ ಹೆಣ್ಮಕ್ಕಳು ಒಂದೇ ರೀತಿ ಅಲ್ವೇ ಅಲ್ಲ, ಹಾಗಾಗಿ ನಿಮ್ಮ ಬದುಕಿನಲ್ಲಿ ಬಂದ ಒಬ್ಬಳನ್ನು ನೋಡಿ ಎಲ್ಲರನ್ನೂ ಜಡ್ಜ್ ಮಾಡಲೇಬೇಡಿ.
ಒಂದು ಫೋಟೋವನ್ನು 2019ರಲ್ಲಿ ಕ್ಲಿಕ್ಕಿಸಿದ್ದು, ಆತ ರೈಲ್ವೆ ಫ್ಲಾಟ್ಫಾರಂನಲ್ಲಿ ವಾಸವಿದ್ದ, ಆ ಹುಚ್ಚನಿಗೆ ಸದಾ ತನ್ನ ಬಿಟ್ಟು ಹೋದ ಪ್ರೇಮಿಯದ್ದೇ ಚಿಂತೆ ಎಲ್ಲರ ಬಳಿಯೂ ಆಕೆಯ ಬಗ್ಗೆ ವಿಚಾರಿಸುತ್ತಿದ್ದ, ಈ ಹುಚ್ಚನ ಮಾತು ಯಾರೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ, ಆದರೆ ಈತ ಯಾರಿಗೂ ಏನೂ ಉಪದ್ರವ ಮಾಡುತ್ತಿರಲಿಲ್ಲ.
ಒಂದು ದಿನ ಆ ಚಿತ್ರದಲ್ಲಿ ಕಾಣುವ ಯುವತಿ ರೈಲು ಹತ್ತಲು ಬಂದಾಗ ರೈಲ್ ಮಿಸ್ ಆಗುತ್ತೆ, ಅದು ಕೊನೆಯ ಟ್ರೈನ್ಯಾಗಿರುತ್ತೆ. ಹುಡುಗಿಯೊಬ್ಬಳು ಒಂಟಿಯಾಗಿ ನಿಂತಿದ್ದನ್ನು ನೋಡಿ ಪಡ್ಡೆ ಹುಡುಗರು ಆಕೆಯ ಬಳಿ ಬರ್ತಾರೆ, ಇದನ್ನು ಗಮನಿಸಿದ ಆ ಹುಚ್ಚ ಅವರನ್ನು ಓಡಿಸುತ್ತಾನೆ, ಆಕೆಗೆ ಹುಚ್ಚನಾದರು ಆತ ಮಾಡಿದ ಕಾರ್ಯ ಇಷ್ಟವಾಗುತ್ತೆ.
ನಂತರ ಆತನನ್ನು ತನ್ನ ಜೊತೆ ಕರೆದೊಯ್ದು ಆತನ ವೇಷ ಭೂಷಣ ಎಲ್ಲಾ ಬದಲಾಯಿಸುತ್ತಾಳೆ, ಆತನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಈಕೆಯ ಪ್ರೀತಿ ಆತನನ್ನೂ ಬದಲಾಯಿಸುತ್ತೆ. ಆತನ ಸಂಪೂರ್ಣ ಬದಲಾಗಿದ್ದಾನೆ. ಈಗ ಯಶಸ್ವಿಯಾಗಿ ಉದ್ಯಮಿಯಾಗಿ ಆಕೆಯ ಜೊತೆ ಖುಷಿಯಾಗಿದ್ದಾನೆ.
ಆತ ಒಳ್ಳೆಯ ಕುಟುಂಬದ್ಲಿ ಜನಿಸಿದ್ದ, ಆದರೆ ಹುಚ್ಚನಾದ ಮೇಲೆ ಮನೆಯಿಂದ ಹೊರಬಿದ್ದಿದ್ದ, ಈಗ ಆತನ ಮನೆಯವರೂ ಆತನ ಸಂಪರ್ಕಕ್ಕೆ ಬಂದರು, ಅವರದ್ದು ಸಿರಿವಂತ ಕುಟುಂಬವಾಗಿತ್ತು, ಈಗ ಆತನ ಬದುಕು ಮೊದಲಿನಂತಾಗಿದೆ, ನಿಜವಾಗಿಯೂ ಪ್ರೀತಿಸುವ ಹುಡುಗಿ ಸಿಕ್ಕಿದ್ದಾಳೆ, ಜೀವನದಲ್ಲಿ ಯಶಸ್ಸು ಸಿಕ್ಕಿದೆ, ತುಂಬಾ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಹೀಗಾಗಿಯೇ ಒಂದು ಒಳ್ಳೆಯ ಕಾರಣಕ್ಕೆ ಇವರ ರೀಲ್ ವೈರಲ್ ಆಗಿದೆ.
ಮೋಸ ಮಾಡುವವರನ್ನು ಮರೆತು ಮುಂದೆ ನಡೆಯಬೇಕು
ಹೆಣ್ಣಾಗಲಿ-ಗಂಡಾಗಲಿ ತಾನು ತುಂಬಾ ಪ್ರೀತಿಸಿದ್ದ, ಅಷ್ಟೊಂದು ನಂಬಿದ್ದ ವ್ಯಕ್ತಿ ಮೋಸ ಮಾಡಿದಾಗ ಕುಗ್ಗಿ ಹೋಗುವುದು ಸಹಜ, ಆದರೆ ಅವರಿಗೆ ನಿಮ್ಮ ಜೊತೆ ಇರುವ ಯೋಗ್ಯತೆಯಿಲ್ಲ, ಅಂಥವರಿಗಾಗಿ ನನ್ನ ಬದುಕು ಏಕೆ ವ್ಯರ್ಥ ಮಾಡಬೇಕು ಎಂದು ಒಂದು ಕ್ಷಣ ಯೋಚಿಸಿದರೆ ಸಾಕು ನಮ್ಮನ್ನು ಸೋಲಿಸಲು, ಕುಗ್ಗಿಸಲೂ ಯಾರಿಂದಲೂ ಸಾಧ್ಯವಿಲ್ಲ.
ಪ್ರೀತಿಯಲ್ಲಿ ಒಮ್ಮೆ ಕಹಿ ಅನುಭವವಾದಾಗ ಎಲ್ಲರು ಹೀಗೆ ಎಂದು ಭಾವಿಸಲೂ ಬೇಡಿ, ಎಲ್ಲರೂ ಒಂದೇ ರೀತಿ ಇರಲ್ಲ ಅದಕ್ಕೆ ಈ ವ್ಯಕ್ತಿ, ದಿನೇಶ್ ಕಾರ್ತಿಕ್ ಅಂಥವರೇ ಉದಾಹರಣೆ.



Click it and Unblock the Notifications











