Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂಬಂಧದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದರಿಂದ ಹೊರನಡೆಯುವುದೇ ಒಳ್ಳೆಯದು
ಸಂಬಂಧಗಳು ಕೊನೆಯವರೆಗೂ ಇರಬೇಕು. ನಾವು ಪ್ರೀತಿಸಿದವರ ಜೊತೆಗೆ ನೂರೂ ಕಾಲ ಸುಖವಾಗಿ ಬಾಳಬೇಕು ಎಂಬ ಆಸೆ ಖಂಡಿತ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ ಅಲ್ವಾ? ಆದರೆ ಎಲ್ಲವೂ ನಾವಂದುಕೊಂಡ ಹಾಗೆ ಆಗುವ ಹಾಗಿದ್ರೆ ಆ ದೇವರು ಯಾಕೆ ಬೇಕಿತ್ತು ಹೇಳಿ. ಸಂಬಂಧ ಎಂದ ಮೇಲೆ ಅದ್ರಲ್ಲಿ ದುಃಖ, ಮನಸ್ಥಾಪಗಳಾಗೋದು ಕಾಮನ್.
ಆದರೆ ಆ ಸಂಬಂಧವೇ ನಮಗೆ ಬೇಡ ಅನ್ನುವಷ್ಟರ ಮಟ್ಟಿಗೆ ನಾವು ನೊಂದು ಹೋದ್ರೆ ಅಂತಹ ಸಂಬಂಧಗಳ ಜೊತೆಗೆ ಇದ್ದೂ ಕೂಡ ಪ್ರಯೋಜನವಿಲ್ಲದಂತಾಗುತ್ತದೆ. ನಿಮ್ಮ ಸಂಬಂಧದಲ್ಲಿ ನಿಮಗೆ ಇಂತಹ ಲಕ್ಷಣಗಳು ಕಂಡು ಬಂದರೆ ಖಂಡಿತ ಅಂತಹ ಸಂಬಂಧದಿಂದ ಹೊರ ಬನ್ನಿ. ಹಾಗಾದ್ರೆ ಸಂಬಂಧದಿಂದ ಹೊರ ಬರಲೇಬೇಕೆಂದು ತೋರಿಸುವ ಲಕ್ಷಣಗಳು ಯಾವುದು ಅನ್ನೋದನ್ನು ತಿಳಿಯೋಣ.

1. ನಿಮಗೆ ಗೌರವ ನೀಡದೇ ಇರುವುದು
ಸಂಬಂಧದಲ್ಲಿ ಗೌರವವೇ ಒಂದು ಗಟ್ಟಿಯಾದ ಅಡಿಪಾಯ. ಸಂಬಂಧದಲ್ಲಿ ಇಬ್ಬರ ಅಭಿಪ್ರಾಯಗಳಿಗೆ, ನಿರ್ಧಾರಗಳಿಗೆ ಮತ್ತು ಗುರಿಗಳಿಗೆ ಗೌರವ ನೀಡಲೇಬೇಕು. ಆಗ ಮಾತ್ರ ಸಂಬಂಧ ಗಟ್ಟಿಯಾಗಿರೋದಕ್ಕೆ ಸಾಧ್ಯ. ಯಾವಾಗ ಸಂಗಾತಿಯ ಅಭಿಪ್ರಾಯ, ನಿರ್ಧಾರ, ಹಾಗೂ ಗುರಿಗಳಿಗೆ ಬೆಲೆ ಇರುವುದಿಲ್ಲವೋ ಆ ಸಂಬಂಧದಲ್ಲಿ ಒಂದು ಕ್ಷಣ ನೀವಿದ್ದರೂ ನಿಮಗೆ ಅಪಾಯ. ಕೂಡಲೇ ಅಂತಹ ಸಂಬಂಧದಿಂದ ಹೊರ ಬಂದರೆ ಚಂದ.
2. ಸಂಗಾತಿಯಿಂದ ನಿಂದನೆಗೆ ಒಳಗಾಗುತ್ತಿದ್ದರೆ
ಕೆಲವೊಂದು ಸಲ ಸಂಬಂಧದಲ್ಲಿ ಏನಾಗುತ್ತೆ ಎಂದರೆ ಒಬ್ಬರು ತಮ್ಮ ಪ್ರಾಬಲ್ಯವನ್ನು ಮೆರೆಯೋದಕ್ಕೆ ಶುರು ಮಾಡುತ್ತಾರೆ. ಅವರು ತಮ್ಮ ಸಂಗಾತಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಾರೆ. ಅವರು ಆಡುವ ನಿಂದನೆಯ ಮಾತುಗಳಿಂದ ಸಂಗಾತಿಯನ್ನು ಖಿನ್ನತೆಗೆ ತಳ್ಳಿ ಬಿಡುತ್ತಾರೆ. ಅವರಲ್ಲಿರುವ ಆತ್ಮ ವಿಶ್ವಾಸವನ್ನು ಕುಗ್ಗಿಸಿ ಬಿಡುತ್ತದೆ. ನಿಮ್ಮ ಸಂಬಂಧದಲ್ಲೂ ಈ ರೀತಿ ಆಗುತ್ತಿದ್ದರೆ ಕೂಡಲೇ ಅಂತ ಸಂಬಂಧವನ್ನು ಮುರಿದುಕೊಳ್ಳುವುದು ಒಳ್ಳೆಯದು.
3. ಸಂಗಾತಿಯಿಂದ ಮೋಸ ಆದಾಗ
ಕೆಲವೊಂದು ಸಲ ಸಂಬಂಧದಲ್ಲಿ ಇದ್ದವರು ಅಥವಾ ಮದುವೆಯಾಗಿದ್ದರೂ ಕೂಡ ಪರರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಒಂದು ವೇಳೆ ಆ ವಿಚಾರ ಸಂಗಾತಿಗೆ ತಿಳಿದರೂ ಕೂಡಾ ಅವರು ಅದನ್ನು ಲೆಕ್ಕಿಸೋದೇ ಇಲ್ಲ. ಪಾಪ ಪ್ರಜ್ಞೆಯೂ ಅವರನ್ನೂ ಕಾಡೋದಿಲ್ಲ. ತಮ್ಮ ಅನೈತಿಕ ಸಂಬಂಧವನ್ನು ಹಾಗೆಯೇ ಮುಂದುವರಿಸುತ್ತಾರೆ. ಆಗ ಅಲ್ಲಿಂದ ನೀವು ಹೊರ ನಡೆದರೆ ಉತ್ತಮ.
4. ಸಂಗಾತಿಯು ಜವಾಬ್ದಾರಿಗಳನ್ನು ತೆಗೆದುಕೊಳ್ಳದಿರುವಾಗ
ಸಂಬಂಧ ಎಂದರೆ ಇಬ್ಬರೂ ಕೂಡ ಸಮನಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಮನೆ ಕೆಲಸ ಆಗಿರಬಹುದು, ಆರ್ಥಿಕ ಜವಾಬ್ದಾರಿಗಳು ಹೀಗೆ ಏನೇ ಇದ್ದರೂ ಇಬ್ಬರಿಗೂ ಸಮ ಪಾಲಿರಬೇಕು. ಆದರೆ ನಿಮ್ಮ ಸಂಗಾತಿ ಈ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೇ, ಎಲ್ಲವನ್ನೂ ನಿಮ್ಮ ಮೇಲೆ ಹೊರಿಸುತ್ತಿದ್ದರೆ ಅವರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆ. ಹಾಗೂ ಅವರಿಗೆ ನಿಮ್ಮಲ್ಲಿ ಆಸಕ್ತಿ ಇಲ್ಲ ಎಂದರ್ಥ. ಅಂತಹ ಸಂಬಂಧದಿಂದ ಹೊರ ಬನ್ನಿ.
5. ನಿಮಗೆ ಅವರೊಂದಿಗೆ ಭವಿಷ್ಯವಿಲ್ಲವೆಂದು ಸ್ಪಷ್ಟವಾದಾಗ
ಸಂಗಾತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರಾದರೆ ಅವರು ನಿಮ್ಮ ಜೊತೆಗೆ ಭವಿಷ್ಯದ ಕನಸು ಕಾಣುತ್ತಾರೆ. ನಿಮ್ಮ ಕನಸುಗಳಿಗೆ ಸೇತುವೆಯಾಗೋದಕ್ಕೆ ಬಯಸುತ್ತಾರೆ. ಅವರ ಗುರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನಿಮ್ಮ ಗುರಿಯನ್ನು ಅವರ ಗುರಿಯೆಂದುಕೊಳ್ಳುತ್ತಾರೆ. ಆದರೆ ಯಾವಾಗ ನಿಮ್ಮ ಸಂಗಾಂತಿ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುತ್ತಾರೋ, ನಿಮ್ಮ ಇಷ್ಟ- ಕಷ್ಟಗಳ ಬಗ್ಗೆ ಕಾಳಜಿ ಮಾಡುವುದಿಲ್ಲವೋ ಅಂತಹ ಸಂಬಂಧ ಉಳಿಸಿಕೊಳ್ಳಬೇಕಾ ಅನ್ನೋದನ್ನು ನೀವು ಯೋಚಿಸಬೇಕು.
6. ನೀವೊಬ್ಬರೇ ರಾಜಿ ಹಾಗೂ ತ್ಯಾಗ ಮಾಡುತ್ತಿದ್ದರೆ
ಸಂಬಂಧ ಉಳಿಯಬೇಕಾದರೆ ಅಲ್ಲಿ ಇಬ್ಬರೂ ತ್ಯಾಗ ಮಾಡಲೇಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೆ ತ್ಯಾಗ ಮಾಡೋದು, ಸರಿದೂಗಿಸಿಕೊಂಡು ಹೋಗುವುದು ಸಂಬಂಧದಲ್ಲಿ ಕಾಮನ್. ಆದರೆ ಪ್ರತಿ ಸಾರಿ ನೀವೆ ತ್ಯಾಗ ಮಾಡಬೇಕು, ಎಲ್ಲದಕ್ಕೂ ನೀವೇ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಆ ಸಂಬಂಧದಲ್ಲಿ ನೀವು ಮುಂದುವರಿಯೋದಕ್ಕೆ ಯಾವುದೇ ಅರ್ಥವಿಲ್ಲ.
7. ಸಂಗಾತಿಗೆ ಭಾವನಾತ್ಮಕ ಪ್ರಬುದ್ಧತೆ ಇಲ್ಲದಿರುವಾಗ
ಸಂಬಂಧ ಎಂಬ ಮೇಲೆ ಇಬ್ಬರೂ ಕೂಡ ಪ್ರಬುದ್ಧತೆಯಿಂದಲೇ ಆಲೋಚನೆ ಮಾಡಬೇಕು. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ, ಅವರಲ್ಲಿ ಪ್ರಬುದ್ಧ ಆಲೋಚನೆಗಳು ಇಲ್ಲದಿದ್ದರೆ, ಇಬ್ಬರ ನಡುವಿನ ಜಗಳಗಳು ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ. ಇಂತಹ ವ್ಯಕ್ತಿಗಳಿಗೆ ನೀವು ಎಷ್ಟು ಹೇಳಿದರೂ ಅದನ್ನು ಅವರು ಅರ್ಥ ಮಾಡಿಕೊಳ್ಳೋದಿಲ್ಲ. ಇಂತಹ ಸಂಬಂಧಗಳು ನಿಮಗೆ ಬೇಡ.
ಒಟ್ಟಿನಲ್ಲಿ ನಾವು ಒಂದು ಸಂಬಂಧದಲ್ಲಿ ಉಳಿಯಬೇಕಾದರೆ ಆ ಸಂಬಂಧದ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ತುಂಬಾನೇ ಮುಖ್ಯ. ನಾವೇನಾದರೂ ಕೊಂಚ ಎಡವಿದ್ರೂ ಕೂಡ ನಮ್ಮ ಭವಿಷ್ಯವೇ ಬಲಿಯಾಗಬಹುದು.



Click it and Unblock the Notifications

