Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂವರು ಗಂಡು ಮಕ್ಕಳಿದ್ದರೂ ಕೊನೆಗಾಲದಲ್ಲಿ ಮಕ್ಕಳಿಗೆ ಭಾರವಾಗದಿರಲು ಆತ್ಮಹತ್ಯೆ ಮಾಡಿದ ವೃದ್ಧ ದಂಪತಿ!
ತೆಲಂಗಾಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಒಂದೆರಡು ಮಕ್ಕಳಲ್ಲ ನಾಲ್ಕು ಮಕ್ಕಳಿಗೆ ಹೆತ್ತು ಬೆಳೆಸಿ ಅವರಿಗೆ ಶಿಕ್ಷಣ ಕೊಡಿಸಿ ನಾಲ್ಕು ಮಕ್ಕಳಿಗೆ ಆಸ್ತಿ ಭಾಗ ಮಾಡಿಕೊಟ್ಟು, ಮೊಮ್ಮಕ್ಕಳು ಆಡಿಸಿಕೊಂಡು ಖುಷಿಯಿಂದ ಇರುತ್ತಾರೆ ಎಂದುಕೊಳ್ಳುವಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೆ ಶಾಕ್ ನೀಡಿದ್ದಾರೆ, ಈ ಸುದ್ದಿ ನಿರ್ಲಕ್ಷ್ಯ ಮಾಡುವಂಥದ್ದೇ ಅಲ್ಲ, ಏಕೆಂದರೆ ಇಂದಿನ ವಾಸ್ತವ ಈ ಹಿರಿ ಜೀವಗಳ ಸಾವು, ಹಾಗಾಗಿ ಈ ಸುದ್ದಿ ತುಂಬಾನೇ ಗಮನ ಸೆಳೆದಿದೆ.

ಈ ಘಟನೆ ನಡೆದಿರುವುದು ತೆಲಂಗಾಣದ ಮಾನುಗುರ್ ಮಂಡಲ್ ಜಿಲ್ಲೆಯ, ಪಗಿದಾರು ಗ್ರಾಮದಲ್ಲಿ ನಡೆದಿದೆ. ಈ ದಂಪತಿಗೆ ಮೂವರು ಗಂಡು ಮಕ್ಕಳು, ಒಬ್ಬಳು ಮಗಳು, ಎಲ್ಲಾ ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕಿದ್ದರು, ಅಂಥವರಿಗೆ ಜೀವನದ ಕೊನೆಯ ಘಟ್ಟದಲ್ಲಿ ಇಂಥದ್ದೊಂದು ನಿರ್ಧಾರ ಬರಲು ಮಕ್ಕಳ ನಿರ್ಲಕ್ಷ್ಯವೇ ಕಾರಣವಾಯ್ತೇ ಎಂಬ ಪ್ರಶ್ನೆ ಮೂಡಿದೆ.
ಸಾಯುವ ಮುನ್ನ ಮೂವರು ಗಂಡು ಮಕ್ಕಳ ಮನೆಯಲ್ಲಿ ಸ್ವಲ್ಪ-ಸ್ವಲ್ಪ ದಿನವಿದ್ದರು
ಆ ವೃದ್ಧೆಗೆ ಮಧುಮೆಹದ ಕಾಯಿಲೆ ಇತ್ತು, ಇದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಇತ್ತು, ತಮ್ಮ ಕೆಲಸ ತಾವು ಮಾಡಿಕೊಳ್ಳುವುದು ಕಷ್ಟವಾಗಿತ್ತು, ಹಾಗಾಗಿ ಕೆಲವು ದಿನ ಒಂದು ಮಗನ ಮನೆಯಲ್ಲಿ, ಇನ್ನು ಸ್ವಲ್ಪ ದಿನ ಮತ್ತೊಬ್ಬ ಮಗನ ಮನೆಯಲ್ಲಿ ಅಂತ ಮೂವರು ಗಂಡು ಮಕ್ಕಳ ಮನೆಯಲ್ಲಿ ನಿಂತಿದ್ದಾರೆ. ನಂತರ ಮನೆಗೆ ಬಂದವರು ಯಾರಿಗೂ ನಾವು ಭಾರವಾಗಿರಬಾರದು ಎಂದು ಪತಿಗೆ ಹೇಳುತ್ತಾರೆ, ಪತಿಗೂ ಅದು ಸರಿ ಅನಿಸುತ್ತಿದೆ, ನಮ್ಮಿಬ್ಬರಿಗೆ ನಾವಿಬ್ಬರೇ ಇರುವುದು ಎಂಬ ಸತ್ಯ ಅವರಿಗೆ ಗೊತ್ತಾಗಿರಬೇಕು, ಹಾಗಾಗಿ ಅಂಥದ್ದೊಂದು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳ ಮನೆಗೆ ಹೋದಾಗ ಮಕ್ಕಳು ನಡೆಸಿಕೊಂಡ ರೀತಿಯಿಂದ ಪೋಷಕರಿಗೆ ಬೇಸರವಾಯ್ತೇ?
ಬರಿ ಆ ಮಕ್ಕಳ ಕತೆಯಲ್ಲ, ಬಹುತೇಕ ಮಕ್ಕಳಿಗೆ ವಯಸ್ಸಾದ ಅಪ್ಪ-ಅಮ್ಮ ಭಾರವಾಗುತ್ತಾರೆ, ಅವರನ್ನು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದು ಭಾವಿಸುತ್ತಾರೆ. ಮಕ್ಕಳ ವರ್ತನೆಯಿಂದ ಅಪ್ಪ-ಅಮ್ಮನಿಗು ತುಂಬಾನೇ ನೋವಾಗುತ್ತಿದೆ, ಇವರು ಹುಷಾರಿಲ್ಲದಿದ್ದಾಗ ಮೂರು ಮಕ್ಕಳ ಮನೆಗೆ ಹೋದಾಗ ಅವರು ಹೆಗೆ ನಡೆದುಕೊಂಡಿದ್ದಾರೋ ಗೊತ್ತಿಲ್ಲ, ಅದರೆ ವೃದ್ಧ ದಂಪತಿಗೆ ನಾವು ಮಕ್ಕಳಿಗೆ ಭಾರವಾಗಿರಬಹುದು ಎಂದು ಅನಿಸುವಂಥಾಗಿದೆ ಎಂಬುವುದಂತೂ ನಿಜ, ಹಾಗಾಗಿ ಇಂತ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳಾದ ಮೇಲೆ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ ಪೋಷಕರು, ಆದರೆ ವಯಸ್ಸಾದ ಮೇಲೆ ಮಕ್ಕಳಿಗೆ ಭಾರವಾದರೆ
ತಂದೆ-ತಾಯಿಯನ್ನು ಭಾರವೆಂದು ಭಾವಿಸುವ ಮಕ್ಕಳಿಗೆ ಮದುವೆಯಾಗಿ ಮಕ್ಕಳಾಗಿರುತ್ತದೆ, ಆ ಮಕ್ಕಳಿಗಾಗಿ ತುಂಬಾನೇ ಕಷ್ಟಪಡುತ್ತಿರುತ್ತಾರೆ, ಒಳ್ಳೆಯ ಮನೆಕಟ್ಟಬೇಕು ಎಂಬೆಲ್ಲಾ ಆಸೆ ಇರುತ್ತದೆ, ಮಕ್ಕಳಿಗೆ ಒಂದು ಚಿಕ್ಕ ಜ್ವರ ಬಂದರೂ ಚಡಪಡಿಸುತ್ತೇವೆ, ನಮ್ಮ ಪೋಷಕರೂ ಇದೇ ರೀತಿ ಕಷ್ಟಪಟ್ಟಿರುತ್ತಾರೆ ಅಲ್ವಾ? ಇಂದು ನಾವು ಮಕ್ಕಳು ಮಕ್ಕಳು ಅಂತ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಲು ಬೆಳೆದು ದೊಡ್ಡವರಾದ ಮೇಲೆ ಅಪ್ಪ-ಅಮ್ಮನನ್ನು ಭಾರವೆಂದು ಭಾವಿಸಿದರೆ ಒಂದು ಕ್ಷಣ ಯೋಚಿಸಿ.... ಯಾವ ತಂದೆ-ತಾಯಿಯೂ ತಮ್ಮ ವೃದ್ಧ್ಯಾಪದಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ಬರಲ್ಲ.
ಪೋಷಕರು ವಯಸ್ಸಾದಾಗ ಅವರ ವರ್ತನೆಗಳು ನಿಮಗೆ ಇಷ್ಟವಾಗದೆ ಹೋಗಬಹುದು, ನಿಮ್ಮ ಮಕ್ಕಳ ವರ್ತನೆ ಇಷ್ಟವಾಗದಿದ್ದರೂ ಆ ಕ್ಷಣ ಬೈಯ್ದು ನಂತರ ಪ್ರೀತಿಯಿಂದ ಮುದ್ದು ಮಾಡುತ್ತೀರಿ ತಾನೆ, ವಯಸ್ಸಾಗುತ್ತಿದ್ದಂತೆ ಪೋಷಕರು ಕೂಡ ಮಕ್ಕಳಂತೆ ಅವರು ಮಾಡುವುದು ಎಲ್ಲವೂ ನಿಮಗೆ ಇಷ್ಟವಾಗ ಬೇಕಾಗಿಲ್ಲ, ಆದರೆ ಅವರಿಗೆ ನಿಮ್ಮ ಮೇಲಿರುವ ಪ್ರೀತಿ, ಭರವಸೆ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications











