Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮೂವರು ಗಂಡು ಮಕ್ಕಳಿದ್ದರೂ ಕೊನೆಗಾಲದಲ್ಲಿ ಮಕ್ಕಳಿಗೆ ಭಾರವಾಗದಿರಲು ಆತ್ಮಹತ್ಯೆ ಮಾಡಿದ ವೃದ್ಧ ದಂಪತಿ!
ತೆಲಂಗಾಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಒಂದೆರಡು ಮಕ್ಕಳಲ್ಲ ನಾಲ್ಕು ಮಕ್ಕಳಿಗೆ ಹೆತ್ತು ಬೆಳೆಸಿ ಅವರಿಗೆ ಶಿಕ್ಷಣ ಕೊಡಿಸಿ ನಾಲ್ಕು ಮಕ್ಕಳಿಗೆ ಆಸ್ತಿ ಭಾಗ ಮಾಡಿಕೊಟ್ಟು, ಮೊಮ್ಮಕ್ಕಳು ಆಡಿಸಿಕೊಂಡು ಖುಷಿಯಿಂದ ಇರುತ್ತಾರೆ ಎಂದುಕೊಳ್ಳುವಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೆ ಶಾಕ್ ನೀಡಿದ್ದಾರೆ, ಈ ಸುದ್ದಿ ನಿರ್ಲಕ್ಷ್ಯ ಮಾಡುವಂಥದ್ದೇ ಅಲ್ಲ, ಏಕೆಂದರೆ ಇಂದಿನ ವಾಸ್ತವ ಈ ಹಿರಿ ಜೀವಗಳ ಸಾವು, ಹಾಗಾಗಿ ಈ ಸುದ್ದಿ ತುಂಬಾನೇ ಗಮನ ಸೆಳೆದಿದೆ.

ಈ ಘಟನೆ ನಡೆದಿರುವುದು ತೆಲಂಗಾಣದ ಮಾನುಗುರ್ ಮಂಡಲ್ ಜಿಲ್ಲೆಯ, ಪಗಿದಾರು ಗ್ರಾಮದಲ್ಲಿ ನಡೆದಿದೆ. ಈ ದಂಪತಿಗೆ ಮೂವರು ಗಂಡು ಮಕ್ಕಳು, ಒಬ್ಬಳು ಮಗಳು, ಎಲ್ಲಾ ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕಿದ್ದರು, ಅಂಥವರಿಗೆ ಜೀವನದ ಕೊನೆಯ ಘಟ್ಟದಲ್ಲಿ ಇಂಥದ್ದೊಂದು ನಿರ್ಧಾರ ಬರಲು ಮಕ್ಕಳ ನಿರ್ಲಕ್ಷ್ಯವೇ ಕಾರಣವಾಯ್ತೇ ಎಂಬ ಪ್ರಶ್ನೆ ಮೂಡಿದೆ.
ಸಾಯುವ ಮುನ್ನ ಮೂವರು ಗಂಡು ಮಕ್ಕಳ ಮನೆಯಲ್ಲಿ ಸ್ವಲ್ಪ-ಸ್ವಲ್ಪ ದಿನವಿದ್ದರು
ಆ ವೃದ್ಧೆಗೆ ಮಧುಮೆಹದ ಕಾಯಿಲೆ ಇತ್ತು, ಇದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಇತ್ತು, ತಮ್ಮ ಕೆಲಸ ತಾವು ಮಾಡಿಕೊಳ್ಳುವುದು ಕಷ್ಟವಾಗಿತ್ತು, ಹಾಗಾಗಿ ಕೆಲವು ದಿನ ಒಂದು ಮಗನ ಮನೆಯಲ್ಲಿ, ಇನ್ನು ಸ್ವಲ್ಪ ದಿನ ಮತ್ತೊಬ್ಬ ಮಗನ ಮನೆಯಲ್ಲಿ ಅಂತ ಮೂವರು ಗಂಡು ಮಕ್ಕಳ ಮನೆಯಲ್ಲಿ ನಿಂತಿದ್ದಾರೆ. ನಂತರ ಮನೆಗೆ ಬಂದವರು ಯಾರಿಗೂ ನಾವು ಭಾರವಾಗಿರಬಾರದು ಎಂದು ಪತಿಗೆ ಹೇಳುತ್ತಾರೆ, ಪತಿಗೂ ಅದು ಸರಿ ಅನಿಸುತ್ತಿದೆ, ನಮ್ಮಿಬ್ಬರಿಗೆ ನಾವಿಬ್ಬರೇ ಇರುವುದು ಎಂಬ ಸತ್ಯ ಅವರಿಗೆ ಗೊತ್ತಾಗಿರಬೇಕು, ಹಾಗಾಗಿ ಅಂಥದ್ದೊಂದು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳ ಮನೆಗೆ ಹೋದಾಗ ಮಕ್ಕಳು ನಡೆಸಿಕೊಂಡ ರೀತಿಯಿಂದ ಪೋಷಕರಿಗೆ ಬೇಸರವಾಯ್ತೇ?
ಬರಿ ಆ ಮಕ್ಕಳ ಕತೆಯಲ್ಲ, ಬಹುತೇಕ ಮಕ್ಕಳಿಗೆ ವಯಸ್ಸಾದ ಅಪ್ಪ-ಅಮ್ಮ ಭಾರವಾಗುತ್ತಾರೆ, ಅವರನ್ನು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದು ಭಾವಿಸುತ್ತಾರೆ. ಮಕ್ಕಳ ವರ್ತನೆಯಿಂದ ಅಪ್ಪ-ಅಮ್ಮನಿಗು ತುಂಬಾನೇ ನೋವಾಗುತ್ತಿದೆ, ಇವರು ಹುಷಾರಿಲ್ಲದಿದ್ದಾಗ ಮೂರು ಮಕ್ಕಳ ಮನೆಗೆ ಹೋದಾಗ ಅವರು ಹೆಗೆ ನಡೆದುಕೊಂಡಿದ್ದಾರೋ ಗೊತ್ತಿಲ್ಲ, ಅದರೆ ವೃದ್ಧ ದಂಪತಿಗೆ ನಾವು ಮಕ್ಕಳಿಗೆ ಭಾರವಾಗಿರಬಹುದು ಎಂದು ಅನಿಸುವಂಥಾಗಿದೆ ಎಂಬುವುದಂತೂ ನಿಜ, ಹಾಗಾಗಿ ಇಂತ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳಾದ ಮೇಲೆ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ ಪೋಷಕರು, ಆದರೆ ವಯಸ್ಸಾದ ಮೇಲೆ ಮಕ್ಕಳಿಗೆ ಭಾರವಾದರೆ
ತಂದೆ-ತಾಯಿಯನ್ನು ಭಾರವೆಂದು ಭಾವಿಸುವ ಮಕ್ಕಳಿಗೆ ಮದುವೆಯಾಗಿ ಮಕ್ಕಳಾಗಿರುತ್ತದೆ, ಆ ಮಕ್ಕಳಿಗಾಗಿ ತುಂಬಾನೇ ಕಷ್ಟಪಡುತ್ತಿರುತ್ತಾರೆ, ಒಳ್ಳೆಯ ಮನೆಕಟ್ಟಬೇಕು ಎಂಬೆಲ್ಲಾ ಆಸೆ ಇರುತ್ತದೆ, ಮಕ್ಕಳಿಗೆ ಒಂದು ಚಿಕ್ಕ ಜ್ವರ ಬಂದರೂ ಚಡಪಡಿಸುತ್ತೇವೆ, ನಮ್ಮ ಪೋಷಕರೂ ಇದೇ ರೀತಿ ಕಷ್ಟಪಟ್ಟಿರುತ್ತಾರೆ ಅಲ್ವಾ? ಇಂದು ನಾವು ಮಕ್ಕಳು ಮಕ್ಕಳು ಅಂತ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಲು ಬೆಳೆದು ದೊಡ್ಡವರಾದ ಮೇಲೆ ಅಪ್ಪ-ಅಮ್ಮನನ್ನು ಭಾರವೆಂದು ಭಾವಿಸಿದರೆ ಒಂದು ಕ್ಷಣ ಯೋಚಿಸಿ.... ಯಾವ ತಂದೆ-ತಾಯಿಯೂ ತಮ್ಮ ವೃದ್ಧ್ಯಾಪದಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ಬರಲ್ಲ.
ಪೋಷಕರು ವಯಸ್ಸಾದಾಗ ಅವರ ವರ್ತನೆಗಳು ನಿಮಗೆ ಇಷ್ಟವಾಗದೆ ಹೋಗಬಹುದು, ನಿಮ್ಮ ಮಕ್ಕಳ ವರ್ತನೆ ಇಷ್ಟವಾಗದಿದ್ದರೂ ಆ ಕ್ಷಣ ಬೈಯ್ದು ನಂತರ ಪ್ರೀತಿಯಿಂದ ಮುದ್ದು ಮಾಡುತ್ತೀರಿ ತಾನೆ, ವಯಸ್ಸಾಗುತ್ತಿದ್ದಂತೆ ಪೋಷಕರು ಕೂಡ ಮಕ್ಕಳಂತೆ ಅವರು ಮಾಡುವುದು ಎಲ್ಲವೂ ನಿಮಗೆ ಇಷ್ಟವಾಗ ಬೇಕಾಗಿಲ್ಲ, ಆದರೆ ಅವರಿಗೆ ನಿಮ್ಮ ಮೇಲಿರುವ ಪ್ರೀತಿ, ಭರವಸೆ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications











