Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಬ್ರತಾ ರಾಯ್: 259,900 ಕೋಟಿ ಸಂಪಾದಿಸಿಕೊಟ್ಟ ತಂದೆಯ ಅಂತಿಮ ದರ್ಶನಕ್ಕೆ ಪುತ್ರರಿಬ್ಬರು ಬರಲೇ ಇಲ್ಲ!
ಸುಬ್ರತಾ ರಾಯ್... ಈ ಹೆಸರು ಬಹುತೇಕರು ಕೇಳಿರುತ್ತೀರಿ, ಇವರ ಹೆಸರು ಕೇಳಿಲ್ಲ ಎಂದರೆ ಸಹರಾ ಗ್ರೂಪ್ ಹೆಸರನ್ನು ಖಂಡಿತ ಹೇಳಿರುತ್ತೀರಿ, ಏಕೆಂದರೆ ಕ್ರಿಕೆಟ್ ಆಟಗಾರರ ಜರ್ಸಿ ಮೇಲೆ ಸಹರಾ ಎಂದು ಬರೆದಿರುವುದನ್ನು ಓದಿರುತ್ತೀರಿ. ಸುಮಾರು 259,900 ಕೋಟಿಯ ಆಸ್ಥಿ, 30,970 ಎಕರೆ ಭೂಮಿ ಅದಲ್ಲದೆ ಇನ್ನೂ ಹಲವಾರು ಕೋಟಿಗಳನ್ನು ಹೊಂದಿರುವ ಒಡೆಯ. ಇಂಥ ದೊಡ್ಡ ಉದ್ಯಮಿ ಸಾವನ್ನಪ್ಪಿದ ಸುದ್ದಿ ಕೇಳಿ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದರು, ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದರು, ಆದರೆ ಅವರಿಬ್ಬರ ಗಂಡು ಮಕ್ಕಳು ಮಾತ್ರ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರಲೇ ಇಲ್ಲ....

ನಮ್ಮಲ್ಲಿ ಒಂದು ಮಾತು ಹೇಳುತ್ತಾರೆ ಎಷ್ಟು ಕೋಟಿ ಇದ್ದರೇನು ಹೋಗುವಾಗ ಯಾರೂ ತಗೊಂಡು ಹೋಗುವುದಿಲ್ಲ, ನಾವು ಹೋಗುವಾಗ ಎಷ್ಟು ಜನ ಮರಗುತ್ತಾರೆ, ಅದುವೇ ನಾವು ಮಾಡಿದ ನಿಜವಾದ ಸಂಪಾದನೆ ಎಂದು. ಆದರೆ ಇವರ ವಿಷಯದಲ್ಲಿ ಹೆತ್ತ ಮಕ್ಕಳೇ ಅಪ್ಪನ ಅಂತ್ಯ ಸಂಸ್ಕಾರಕ್ಕೆ ಬರಲಿಲ್ಲ. ಸುಬ್ರತಾ ರಾಯ್ ಪತ್ನಿ ಸ್ವಪ್ನರಾಯ್ ಮಕ್ಕಳಿಗೆ ಅನಿವಾರ್ಯ ಕಾರಣದಿಂದಾಗಿ ಬರಲ ಸಾಧ್ಯವಾಗಿಲ್ಲ ಎಂದು ಹೇಳಿದ್ದರು.
ಹುಟ್ಟಿಸಿದ ಅಪ್ಪ, ನಮಗೆಲ್ಲಾ ಎಲ್ಲಾ ನೀಡಿದ ಅಪ್ಪ ಇನ್ನಿಲ್ಲ ಎಂದು ತಿಳಿದಾಗ ಆ ಅಪ್ಪನಿಗಿಂತ ಅನಿವಾರ್ಯ ಕಾರಣ ಮಕ್ಕಳಿಗೆ ಏನಿರಲಿದೆ, ಅವರಂತೂ ನಮ್ಮಂತೆ ಸಾಮಾನ್ಯ ವ್ಯಕ್ತಿಗಳಲ್ಲ, ಬೇರೆಯವರ ಕೈಕೆಳಗೆ ಕೆಲಸ ಮಾಡುವವರೂ ಅಲ್ಲ, ಆದರೂ ಅವರಿಗೆ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರಲು ಸಾಧ್ಯವಾಗಿಲ್ಲ , ಈ ಬದುಕು ಎಷ್ಟೊಂದು ವಿಚಿತ್ರ ಅಲ್ವಾ? ತಂದೆ-ಮಕ್ಕಳ ನಡುವೆ ಏನು ಸಮಸ್ಯೆಯಿದೆಯೋ ಗೊತ್ತಿಲ್ಲ, ಆದರೆ ತಂದೆಯ ಅಂತ್ಯ ಸಂಸ್ಕಾರಕ್ಕೂ ಬಾರದಿದ್ದ ಮೇಲೆ ಸುಬ್ರತಾರಾಯ್ ಅಷ್ಟೆಲ್ಲಾ ಸಂಪಾದನೆ ಮಾಡಿ, ಮಕ್ಕಳಿಗೆ ಅಷ್ಟೆಲ್ಲಾ ಮಾಡಿ ಏನು ಪ್ರಯೋಜನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮೊಮ್ಮಗನಿಂದ ಅಂತ್ಯಸಂಸ್ಕಾರ
ಸುಬ್ರತಾ ರಾಯ್ ಅಂತ್ಯಸಂಸ್ಕಾರವನ್ನು ಮೊಮ್ಮಗ 16 ವರ್ಷದ ಹಿಮಾನಕ್ ರಾಯ್ (ಕಿರಿಯ ಮಗನ ಮೊದಲ ಮಗ) ನೆರವೇರಿಸಿದ. ಸಹರಾ ಗ್ರೂಪ್ನ ಸಂಸ್ಥಾಪಕನ ಶವವನ್ನು ಮಕ್ಕಳ ಬರುವಿಗಾಗಿ ಕಾಯ್ದು 2 ದಿನ ಇಡಲಾಗಿತ್ತು. ನಂತರ ಲಂಡನ್ನಿಂದ ಬಂದ ಮೊಮ್ಮಗನಿಂದ ಅಂತ್ಯಾಸಂಸ್ಕಾರದ ಕಾರ್ಯವಿಧಾನಗಳನ್ನ ನೆರವೇರಿಸಲಾಯಿತು.
ಇವರ ಸಾವಿನ ನಂತರ ಅವರ ಮಕ್ಕಳ ನಡವಳಿಕೆ ಬಗ್ಗೆ ಸಾಮಾಜಿಕ ತಾಣದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ, ಮಕ್ಕಳು ಇಂದು ಲಕ್ಷುರಿ ಬದುಕು ಬಾಳುತ್ತಿರುವುದು ತಂದೆಯಿಂದಾಗಿ, ಇಬ್ಬರು ಮಕ್ಕಳಜು ವಿದೇಶದಲ್ಲಿ ಹೋಗಿ ನೆಲೆಸಿದ್ದಾರೆ, ಸಹರಾ ಗ್ರೂಪ್ನೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಸಹಾರ ಗ್ರೂಪ್ ಎಂಬ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿಕೊಟ್ಟ ತಂದೆಗೆ ಕೊನೆಯ ಗುಡ್ಬೈ ಹೇಳಲು ಮಕ್ಕಳಿಗೆ ಸಮಯವಿರಲಿಲ್ಲ, ಇದುವೇ ಬದುಕಿನ ಕಠೋರ ಸತ್ಯ ಅಲ್ಲವೇ ಸ್ನೇಹಿತರೇ?
ಮಕ್ಕಳಿಗಾಗಿ ಆಸ್ತಿ ಮಾಡುವ ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ
ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಡುವಲ್ಲಿ ಬ್ಯುಸಿಯಾಗುತ್ತಾರೆ. ಚಿಕ್ಕ ಪ್ರಾಯದಲ್ಲಿ ಸಿಗಬೇಕಾಗಿರುವ ಪ್ರೀತಿ, ಸ್ನೇಹ, ಪೋಷಕರು ಅವರ ಜೊತೆಗೆ ಕಲೆಯುವ ಸಮಯ ಯಾವುದೂ ಸಿಕ್ಕಿರುವುದಿಲ್ಲ, ಇದರಿಂದ ಅಂಥ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿಯನ್ನು ಹಣದ ಮೂಲಕವೇ ನೋಡುತ್ತಾರೆ ವಿನಃ ಅಲ್ಲಿ ಬಾಂಧವ್ಯ ಗಟ್ಟಿ ಇರುವುದಿಲ್ಲ, ಹಾಗಾಗಿ ಮಕ್ಕಳಿಗೆ ಪೋಷಕರ ಮಹತ್ವ ಅರಿಯದೆ ಹೋಗುವುದು, ಅದ್ದರಿಂದ ಮಕ್ಕಳಿಗೆ ಹಣ ಮಾಡುವುದೇನೋ ಸರಿ ಜೊತೆಗೆ ಅವರಿಗೆ ಪ್ರೀತಿಯನ್ನು ನೀಡಬೇಕು. ಆವಾಗ ಅವರಿಗೆ ಬಾಂಧವ್ಯದ ಮೌಲ್ಯ ಗೊತ್ತಾಗುತ್ತೆ. ಇಂದು ಅನಾಥ ಆಶ್ರಮದಲ್ಲಿ ಇರುವವರಲ್ಲಿ ಬಹುತೇಕ ಮಕ್ಕಳು ವಿದೇಶದಲ್ಲಿ ದೊಡ್ಡ-ದೊಡ್ಡ ಹುದ್ದೆಯಲ್ಲಿರುತ್ತಾರೆ, ಆದರೆ ಪೋಷಕರನ್ನು ನೋಡಲು ಸಾಧ್ಯವಿರಲ್ಲ, ಹಾಗಾಗಿ ಅನಾಥ ಆಶ್ರಮದಲ್ಲಿ ಸೇರಿಸಿರುತ್ತಾರೆ.



Click it and Unblock the Notifications