Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್ಅಪ್ಗಳಿಗೆ ಮೊದಲ ಬಾರಿಗೆ ಕಾರಣ ನೀಡಿದ ನಯನತಾರಾ..! ಆಕೆ ಬಾಳಲ್ಲಿ ಆಗಿದ್ದೇನು?
ಕಳೆದೊಂದು ವಾರದಿಂದ ನಟಿ ನಯನತಾರಾ ಸುದ್ದಿಯಲ್ಲಿದ್ದಾರೆ. ತನ್ನ ನಟನೆ ಹಾಗೂ ಸಿನಿಮಾದಿಂದ ಮಾತ್ರವಲ್ಲ ತಮ್ಮ ವೈಯಕ್ತಿಕ ವಿಚಾರದಿಂದಲೂ ಸುದ್ದಿಯಲ್ಲಿದ್ದಾರೆ. ಅವರ ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ನಯನತಾರಾ ಬಿಯಾಂಡ್ ದಿ ಫೇರಿಟೇಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆ ಇದರಿಂದ ನಟ ಧನುಷ್ ಜೊತೆಗಿನ ವಿವಾದ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಆದರೆ ಅವರು ತಮ್ಮ ಸಂಬಂಧಗಳಲ್ಲಿ ಒಂದಿಷ್ಟು ನೋವುಗಳು, ವಿಚ್ಚೇದನ ಕುರಿತಂತೆ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ನಯನತಾರಾ ತನ್ನ ಹಿಂದಿನ ಸಂಬಂಧಗಳು, ಅವರು ಅನುಭವಿಸಿದ ವೈಯಕ್ತಿಕ ಹೋರಾಟಗಳು ಮತ್ತು ಅವರು ತಮ್ಮ ವೃತ್ತಿಪರ ಪ್ರಯಾಣವನ್ನು ಹೇಗೆ ರೂಪಿಸಿದರು ಎಂಬ ಕುರಿತಂತೆ ವಿವರಣೆ ನೀಡಿದ್ದು, ಯಾಕಾಗಿ ನನ್ನ ಸಂಬಂಧಗಳು ಬಹುಬೇಗ ಹಾಳಾದವು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ನನ್ನ ಮೊದಲ ಸಂಬಂಧವು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ, ಇನ್ನೊಬ್ಬ ವ್ಯಕ್ತಿಯು ನಿನ್ನನ್ನು ಪ್ರೀತಿಸುತ್ತಿದ್ದಾನೆ ಎಂಬ ನಂಬಿಕೆ" ಎಂದು ಅವರು ಬಹಿರಂಗಪಡಿಸುತ್ತಾರೆ. ಅವರು ಮೊದಲು ನಿರ್ಮಾಪಕ ನಟ ಸಿಲಂಬರಸನ್ ಜೊತೆಗಿನ ಸಂಬಂಧದ ಕುರಿತು ವಿವರಿಸಿದ್ದಾರೆ. ಇಬ್ಬರ ನಡುವಿನ ಒಂದು ಫೋಟೋ ಬೇರಾಗಲು ಕಾರಣವಾಗಿತ್ತು.
ಇಬ್ಬರು ಕಿಸ್ ಮಾಡುತ್ತಿದ್ದ ಫೋಟೋ ಒಂದು ಹರಿದಾಡಿದ ಬೆನ್ನಲ್ಲೇ ಇಬ್ಬರ ಸಂಬಂಧ ಅಲ್ಲಿಂದ ಹಾಳಾಗಿತ್ತು. ಆದ್ರೆ ಅವರಿಬ್ಬರು ಮದುವೆಯ ವರೆಗೆ ಮುಂದುವರೆದಿರಲಿಲ್ಲ. ಇದಾದ ಬಳಿಕ ನಯನತಾರಾ ನಟ ಪ್ರಭುದೇವ ಜೊತೆಗೆ ಕಾಣಿಸಿಕೊಂಡರು. ಹಾಗೆ ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿಯೂ ಹರಿಡದಾಡಿತ್ತು. ಆದ್ರೆ ಇಬ್ಬರ ನಡುವೆ ಒಂದಿಷ್ಟು ವೈಮನಸ್ಸು ಇತ್ತಂತೆ. ಸಿನಿಮಾ ಬಿಡುವಂತೆ ಪ್ರಭುದೇವ ಹೇಳಿದ್ದಕ್ಕೆ ಸಂಬಂಧ ಮುರಿದುಕೊಂಡಿದ್ದೆ ಎಂದು ನಯನತಾರಾ ಹೇಳಿದ್ದಾರೆ. ಸಿನಿಮಾ ತೊರೆಯಲು ಮೊದಲು ಹೇಳಿದ್ದ ವ್ಯಕ್ತಿ ಅವರೇ ಎಂದು ಪ್ರಭುದೇವ ಕುರಿತು ನಟಿ ಹೇಳಿಕೊಂಡಿದ್ದಾರೆ. ಹಾಗೆ ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರಿಂದ ಪ್ರಭುದೇವ ಹಾಗೂ ಅವರ ಪತ್ನಿ ನಡುವ ವಿಚ್ಛೇದನಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಸಹ ಹರಿದಾಡಿದ್ದವು.
ಇದಾದ ಬಳಿಕ ನಯನತಾರಾ ಸುಮಾರು 2 ವರ್ಷಗಳಿಗೂ ಹೆಚ್ಚು ಕಾಲ ಒಂಟಿಯಾಗಿದ್ದರು. ನನ್ನ ಜೀವನ ಇಲ್ಲಿದೆ ಮುಗಿದು ಹೋಗಿತ್ತು ಎಂದು ಭಾವಿಸಿದೆ. ನಾನೆಂದು ಮತ್ತೆ ಮತ್ತೊಬ್ಬರ ಸುಲಭವಾಗಿ ನಂಬುವುದಿಲ್ಲ ಎಂದುಕೊಂಡಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಅವರು ವಿಘ್ನೇಶ್ ಶಿವನ್ ಎಂಬುವವರನ್ನು ವಿವಾಹವಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಎನ್ನಬಹುದು, ಶಿವನ್ ನಟ, ನಿರ್ದೇಶಕ, ನಿರ್ಮಾಪಕ, ಗಾಯಕರಾಗಿ ಮತ್ತು ಗೀತರಚನೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಪ್ರೀತಿಯಾಗಿ ಬಳಿಕ ಮದುವೆಯಾದರಂತೆ.
ಈಗ ನಯನತಾರಾ ತಮ್ಮ ಸಂಬಂಧದಲ್ಲಿ ಈ ರೀತಿ ಒಡಕು ಮೂಡಲು ಏನೆಲ್ಲಾ ಕಾರಣವಾಯಿತು ಎಂದು ಬಹಿರಂಗಪಡಿಸಿದ್ದಾರೆ. ನಾನು ಪ್ರತಿಯೊಂದು ಸಂಬಂಧದಿಂದ ಹೊರಬಂದಾಗಲು ಪ್ರಶ್ನೆಗಳ ಎದುರಿಸಿದ್ದೆ. ನನ್ನದೇ ತಪ್ಪು ಎನ್ನುವಂತೆ ಬಿಂಬಿಸಿದ್ದರು. ನಾನು ನನ್ನ ಹಿಂದಿನದನ್ನು ಬಹಿರಂಗವಾಗಿ ತಿಳಿಸದ ಕಾರಣ, ಜನರು ತಮ್ಮದೇ ಆದ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ಕೆಟ್ಟದ್ದನ್ನು ಊಹಿಸಲು ಪ್ರಾರಂಭಿಸಿದರು. ಆದ್ರೆ ಪುರುಷರಿಗೆ ಯಾವ ಪ್ರಶ್ನೆಯೂ ಕೇಳಲಿಲ್ಲ. ಅವರದ್ದು ಏನು ತಪ್ಪಿಲ್ಲ ಎನ್ನುವಂತೆ ಬಿಂಬಿಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.
ಸದ್ಯ ಈಗ ನಯನತಾರಾ ಹಾಗೂ ನಟ ಧನುಷ್ ನಡುವೆ ಸಿನಿಮಾ ದೃಶ್ಯ ಒಂದರ ಬಳಕೆಗೆ ಸಂಬಂಧಿಸಿದ್ದಂತೆ ಒಡಕು ಮೂಡಿದೆ. ನಟಿ ವಿರುದ್ಧ ಧನುಷ್ ಬರೋಬ್ಬರಿ 10 ಕೋಟಿ ರೂಪಾಯಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.



Click it and Unblock the Notifications