Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮದುವೆ ಬಂಧದಲ್ಲಿ ಪ್ರೀತಿಯೇ ಇಲ್ಲದಿದ್ದರೆ ಬಂಧನವಲ್ಲವೇ?
ಆಕೆಯ ಕಣ್ಣುಗಳಲ್ಲಿ ಮದುವೆ ಕುರಿತು ನೂರಾರು ಕನಸ್ಸುಗಳಿದ್ದೆವು. ಮುಂದಿನ ಜೀವನ ಹೇಗಿರಬೇಕೆಂದು ಎಂದು ತನ್ನ ಗೆಳತಿಯರ ಜತೆ ಹಂಚಿಕೊಳ್ಳುತ್ತಿದ್ದಳು. ಮನೆಯವರು ನೋಡಿದ ಹುಡುಗ ತನಗೂ ಮೆಚ್ಚುಗೆಯಾದ ಕಾರಣ ಮದುವೆಗೆ ಒಕೆ ಹೇಳಿ ಸಡಗರದಿಂದಲೇ ಮದುವೆ ಸಿದ್ಧತೆಯಲ್ಲಿ ತೊಡಗಿದಳು. ಈ ನಡುವೆ ಅವ ಮನಸ್ಸಿನಲ್ಲಿ ಏನೋ ತಳಮಳ. ಕೆಲವೊಮ್ಮೆ ಅವನಿಗೆ ನನ್ನ ಮೇಲೆ ಪ್ರೀತಿ ಇದೆಯೇ ಎಂಬ ಅನುಮಾನ, ಹೇಳಿ ಕೇಳಿ ನನ್ನದು ಅರೇಂಜ್ ಮ್ಯಾರೇಜ್ ಅವನು ನಿಧಾನಕ್ಕೆ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿಯೇ ಆತನ ಕೈಹಿಡಿದಳು.
ತಾನು ವೈವಾಹಿಕ ಜೀವನದ ಬಗ್ಗೆ ಕಟ್ಟಿಕೊಂಡಿದ್ದ ಕನಸ್ಸು ನುಚ್ಚು ಚೂರಾಗಿದೆ ಎಂದು ತಿಳಿಯಲು ಹೆಚ್ಚು ದಿನ ಬೇಕಾಗಿಲ್ಲ. ಮದುವೆಯಾದ ದಿನದಿಂದಲೇ ತನ್ನ ಭಾವನೆಗಳಿಗೆ ಆತನ ತಣ್ಣನೆ ಪ್ರತಿಕ್ರಿಯೆಯೇ ಸಾಕಿತ್ತು ಮುಂದೆ ತನ್ನ ಬದುಕು ಹೇಗಿದೆ ಎಂದು ಊಹಿಸಲು. ತನ್ನ ಮುಂದಿನ ಬದುಕೇನು ಎಂದು ತಿಳಿಯದೆ ಕುಸಿದು ಹೋದಳು.

ಮನೆಗೆ ಹೋಗಿ ಹೇಳಿದರೆ ಸ್ವಲ್ಪ ದಿನವಾದ ಮೇಲೆ ಬದಲಾಗಬಹುದು, ಅನುಸರಿಸಿಕೊಂಡು ಹೋಗು ಎಂಬ ಕಿವಿ ಮಾತು. ಇನ್ನು ಕೆಲವರು ಮಗುವಾದ ಎಲ್ಲಾ ಸರಿಯಾಗುತ್ತೆ, ಮಗು ಮಾಡ್ಕೋ ಎಂಬ ಸಲಹೆ ನೀಡಿದರು. ಆದರೆ ಇಲ್ಲಾ... ಈತನ ಜೊತೆ ಬಾಳಲು ಸಾಧ್ಯವಿಲ್ಲ ಎಂದು ಕೂಗಿ ಹೇಳಬೇಕೆಂದು ಅನಿಸಿತ್ತು, ಆದರೆ ಮುಂದೇನು ಎಂಬ ಭಯ ಒಂದೆಡೆ. ಎಲ್ಲರೂ ಹೇಳಿದಂತೆ ತನ್ನ ತಲೆಬರಹ ಎಂದು ಬಾಳಬೇಕೆ? ಇಲ್ಲಾ ನನ್ನದೇ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆ? ಎಂಬ ಅವ್ಯಕ್ತ ಭಯ ಹಾಗೂ ಗೊಂದಲದಲ್ಲಿ ಒದ್ದಾಡುತ್ತಿದ್ದಾಳೆ.
ಹೆಣ್ಣು-ಗಂಡು ಇಬ್ಬರು ಖುಷಿ-ಖುಷಿಯಾಗಿ , ಹೊಂದಾಣಿಕೆಯಿಂದ ಜೀವನ ನಡೆಸಿದರೆ ಮಾತ್ರ ಮದುವೆ ಎನ್ನುವುದು ಸುಂದರ ಬಂಧವಾಗುವುದು, ಇಲ್ಲದಿದ್ದರೆ ಅದೊಂದು ಬಂಧನವಾಗುವುದು. ಬಂಧನ ಎಂದ ಮೇಲೆ ಉಸಿರುಕಟ್ಟಿದ ಅನುಭವ ಉಂಟಾಗುತ್ತಿರುತ್ತದೆ.
ಮದುವೆಯಾಗಿದೆ ಎಂಬ ಕಾರಣಕ್ಕೆ ಪ್ರೀತಿಯೇ ಇಲ್ಲದ ವ್ಯಕ್ತಿ ಜತೆ ಬದುಕಬೇಕೆ? ಸಂಗಾತಿಯಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅವರ ಜತಗೆ ಬಾಳುವುದಕ್ಕಿಂತ ಬೇರೆಯಾಗುವುದೇ ಒಳ್ಳೆಯದು.

ಪ್ರೀತಿಯ ಸೆಲೆ ಮಾಯವಾಗಿದ್ದರೆ
ಪ್ರೀತಿ ಎನ್ನುವುದು ಒಂದು ಕಡೆ ಇದ್ದರೆ ಸಾಲದು ಅದು ಆಕಡೆಯಿಂದಲೂ ಸಿಗಬೇಕು. ಮುಂದೆ ಅವರು ನನ್ನನ್ನು ಪ್ರೀತಿಸಬಹುದು ಎಂದು ನಿರೀಕ್ಷೆಯಲ್ಲಿ ವರ್ಷಗಟ್ಟಲೆ ಕಳೆಯುವುದು ಸಿನಿಮಾದಲ್ಲಿ ಮಾತ್ರ ಚೆನ್ನಾಗಿರುತ್ತದೆ, ಆದರೆ ನಿಜ ಜೀವನದಲ್ಲಿ ಆ ರೀತಿ ಆಗುವುದು ತುಂಬಾ ವಿರಳ. ನಿರೀಕ್ಷೆಯಲ್ಲೇ ನಿಮ್ಮ ಬದುಕು ಹಾಳಾಗುವುದಕ್ಕಿಂತ ಎಚ್ಚೆತ್ತುಕೊಂಡು ಮುಂದೆ ಸಾಗುವುದೇ ಜಾಣತನ.

ದೈಹಿಕ ಹಾಗೂ ಮಾನಸಿಕ ಹಿಂಸೆ
ಸಂಗಾತಿಯಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರೆ ಅವರ ವರ್ತನೆಯನ್ನು ಸಹಿಸಿಕೊಂಡು ನೋವು ಅನುಭವಿಸುವುದಕ್ಕಿಂತ ವಿರೋಧಿಸಿ. ಅವರ ಆ ರೀತಿ ವರ್ತಿಸಲು ಕಾರಣವೇನು ಎಂದು ತಿಳಿದುಕೊಳ್ಳಿ. ಅದಾದ ಬಳಿಕವೂ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸದಿದ್ದರೆ ಅವರು ನಿಮ್ಮ ಜೊತೆಯೇ ಹಾಗೆಯೇ ಇರುತ್ತಾರೆ, ಅವರು ಬದಲಾಗುವ ಪ್ರಯತ್ನ ಮಾಡಲ್ಲ ಎಂದು ಹೇಳಬಹುದು. ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿ ನೋವು ಅನುಭವಿಸುವುದಕ್ಕಿಂತ ದೂರ ಸರಿಯುವುದೇ ಒಳ್ಳೆಯದು.

ಲೈಂಗಿಕ ತೃಪ್ತಿ ಇಲ್ಲದಿದ್ದರೆ
ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಲೈಂಗಿಕ ತೃಪ್ತಿ ಬಯಸುವುದು ಸಹಜ. ನೀವು ಅವರ ಬಳಿ ರೊಮ್ಯಾಂಟಿಕ್ ಆಗಿ ಮಾತನಾಡುವಾಗ ಸಿಡುಕು ತೋರಿಸುವುದು, ಅವರ ಬಳಿ ಹೋಗುವಾಗ ದೂರ ಸರಿಯುವುದು ಮಾಡುತ್ತಿದ್ದರೆ ಒಂದೋ ಅವರಿಗೆ ಬೇರೆ ಏನೋ ಸಮಸ್ಯೆವಿದೆ, ಇಲ್ಲಾ ನಿಮ್ಮ ಜೊತೆ ಬಾಳುವುದು ಇಷ್ಟವಿಲ್ಲ ಎಂದು ಹೇಳುವ ಲಕ್ಷಣಗಳಾಗಿವೆ. ಅವರಿಂದ ದೂರವಾಗುವ ಪ್ರಯತ್ನ ಮಾಡುವ ಬದಲು ಈ ಕುರಿತು ಅವರಲ್ಲಿ ಮಾತನಾಡಿ, ಅದಾದ ಬಳಿಕವೂ ಅವರ ವರ್ತನೆಯಲ್ಲಿ ಏನೂ ಬದಲಾವಣೆ ಕಾಣದಿದ್ದರೆ ಆ ಸಂಬಂಧದಿಂದ ಹೊರಬಂದು ನಿಮ್ಮನ್ನು ಪ್ರೀತಿಸಯವ ವ್ಯಕ್ತಿಯನ್ನು ಹುಡುಕುವುದೇ ಜಾಣತನ.

ಆಗಾಗ ಜಗಳ
ಜಗಳವಾಡದ ಗಂಡ-ಹೆಂಡತಿ ಈ ಪ್ರಪಂಚದಲ್ಲಿಯೇ ಇರಲ್ಲ. ಸಂಸಾರ ಎಂದ ಮೇಲೆ ಸಣ್ಣಪುಟ್ಟ ಜಗಳ, ಮಾತುಗಳು ಬರುತ್ತವೆ, ಹೋಗುತ್ತವೆ. ಆದರೆ ಪ್ರತಿನಿತ್ಯ ಕಿತ್ತಾಟವೇ ಜೀವನವಾದರೆ ಆ ಸಂಸಾರದಲ್ಲಿ ಖುಷಿ, ನೆಮ್ಮದಿ ಎಲ್ಲಿರುತ್ತದೆ. ಜಗಳ ಮಾಡಿ ಮತ್ತೆ ಒಂದಾದರೆ ಸಂಬಂಧದಲ್ಲಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ ಜಗಳ ಅಂತ್ಯನೇ ಆಗದಿದ್ದರೆ, ಒಬ್ಬರಿಗೊಬ್ಬರು ಮುಖ ನೋಡದೆ ಕಿತ್ತಾಡಿಕೊಂಡೆ ಇರುವುದಕ್ಕಿಂತ ಬೇರೆ-ಬೇರೆಯಾದರೆ ಇಬ್ಬರಿಗೂ ನೆಮ್ಮದಿ ಸಿಗುವುದು.



Click it and Unblock the Notifications











