Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಸರಿಹೊಂದದ ಸಂಬಂಧದಿಂದ ಹೊರಬರುವುದೇ ಲೇಸು!
ಹದಿಹರೆಯದ ಪ್ರೇಮಕ್ಕೂ ಪ್ರಬುದ್ಧ ಪ್ರೇಮಕ್ಕೂ ಬಹಳ ವ್ಯತ್ಯಾಸವಿದೆ. ಹದಿಹರೆಯದಲ್ಲಿ ದೈಹಿಕ ಆಕರ್ಷಣೆಗೇ ಹೆಚ್ಚಿನ ಮಹತ್ವವಿರುತ್ತದೆ. ಕಾಲಕಳೆದಂತೆ ಒಂದು ಸಂಬಂಧಕ್ಕೆ ಅಗತ್ಯವಿರುವ ನಿಜವಾದ ಗುಣಗಳು ಒರೆಹಚ್ಚಿದಂತೆ ಇದರಲ್ಲಿರುವ ಹುಳುಕುಗಳೂ ಕಾಣತೊಡಗುತ್ತವೆ. ಪರಿಣಾಮವಾಗಿ 'ಆಕರ್ಷಣೆ' ಕಳೆದುಕೊಳ್ಳುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಏಕಸಂಗಾತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದ್ದರಿಂದ ಜೀವನಸಂಗಾತಿಯನ್ನು ಆರಿಸಿಕೊಳ್ಳುವಾಗ ಬಹಳಷ್ಟನ್ನು ಪರಿಗಣಿಸಬೇಕಾಗುತ್ತದೆ. ಪಾಶ್ಚಾತ್ಯರಲ್ಲಿದ್ದಂತೆ ವಿವಾಹಕ್ಕೂ ಮುನ್ನ ಹತ್ತು ಹಲವು ಸಂಬಂಧಗಳನ್ನು ಒರೆಹಚ್ಚಿ ಬಳಿಕ ವಿವಾಹವಾಗುವುದು ಸರಿಯಲ್ಲ. ನಿಮ್ಮ ಪತ್ನಿಗೂ ಆಸೆ ಆಕಾಂಕ್ಷೆಗಳಿರುತ್ತದೆ, ಅರ್ಥಮಾಡಿಕೊಳ್ಳಿ...
ಅಂತೆಯೇ ಯಾವುದೋ ಆಣೆ ಭಾಷೆಗಳಿಗೆ ಬಲಿಯಾಗಿ ಇಷ್ಟವಿಲ್ಲದವರನ್ನು ಮದುವೆಯಾಗಿ ಜೀವನವಿಡೀ ಕೊರಗುವುದೂ ತರವಲ್ಲ. ಸಂಬಂಧ ಸುಧಾರಿಸದು ಎಂದು ಗೊತ್ತಾಗುತ್ತಿದ್ದರೆ ಇದರಲ್ಲಿ ಮುಂದುವರೆಯುವುದರಲ್ಲಿ ಅರ್ಥವೂ ಇಲ್ಲ.
ಯಾವುದೇ ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಪ್ರೀತಿ, ಬದ್ಧತೆ, ವಿಶ್ವಾಸ ಮತ್ತು ತಮ್ಮ ಸಂಗಾತಿಯನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸುವ ಮನೋಭಾವ. ಯಾವಾಗ ಇಬ್ಬರ ನಡುವೆ ಇದರಲ್ಲಿ ಯಾವುದಾದರೊಂದು ಗುಣದಲ್ಲಿ ಕಡಿಮೆಯಾಗತೊಡಗುತ್ತದೆಯೋ ಆಗ ಸಂಬಂಧ ಹಳಸಲು ಪ್ರಾರಂಭವಾಗುತ್ತದೆ. ಮಧುರ ಸಂಬಂಧಕ್ಕಾಗಿ ಇಡಬೇಕಾದ ಪುಟ್ಟ ಹೆಜ್ಜೆಗಳು
ಇದನ್ನು ಸರಿಪಡಿಸಲು ಇಬ್ಬರಿಗೂ ಕೊಂಚ ಬಗ್ಗುವುದು ಅನಿವಾರ್ಯವಾಗಿದೆ. ಆದರೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ಇಬ್ಬರೂ ಬಗ್ಗಲು ತಯಾರಿರದೇ ಅಹಮ್ಮಿಕೆ ತೋರುವ ಮೂಲಕ ಈ ಸಂಬಂಧ ಇನ್ನಷ್ಟು ಹಳಸತೊಡಗುತ್ತದೆ. ಹೀಗಿರುವಾಗ ಈ ಸಂಬಂಧದಿಂದ ಕಳಚಿಕೊಂಡು ಒಂಟಿಯಾಗುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸಂಬಂಧದಲ್ಲಿ ಬೈಗಳು ನೀಡುವುದೂ ಪಡೆಯುವುದೂ ಅತ್ಯಂತ ಅನಾರೋಗ್ಯಕರ ನಡವಳಿಕೆಯಾಗಿದ್ದು ಇದರಿಂದ ಇಬ್ಬರ ಮನಃಸ್ಥಿತಿಯೂ ಬದಲಾಗುತ್ತಾ ಹೋಗುತ್ತದೆ ಹಾಗೂ ಇದು ಮಾನಸಿಕ ತೊಂದರೆಗಳಿಗೆ ನಾಂದಿಯಾಗುತ್ತದೆ. ಈ ಮಾನಸಿಕ ತೊಂದರೆಗಳು ಉದ್ವಿಗ್ನತೆ, ಖಿನ್ನತೆ, ಮದ್ಯವ್ಯಸನ ಮೊದಲಾದವುಗಳಿಗೆ ಕಾರಣವಾಗುತ್ತವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ತೊಂದರೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಆದ್ದರಿಂದ ಒಂದು ವೇಳೆ ಸರಿಪಡಿಸಲಾಗದಷ್ಟು ಸಂಬಂಧ ಹಳಸಿದ್ದರೆ ಇದನ್ನು ಮುಂದುವರೆಸಿಕೊಂಡು ಹೋಗುವ ಬದಲು ಇದರಿಂದ ಹೊರಬರುವುದೇ ಉತ್ತಮ ಎಂದು ಮನಃಶಾಸ್ತ್ರಜ್ಞರು ಮತ್ತು ಮಾನವಸಂಬಂಧ ಪರಿಣಿತರು ಅಭಿಪ್ರಾಯಪಡುತ್ತಾರೆ.



Click it and Unblock the Notifications


