Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸರಿಹೊಂದದ ಸಂಬಂಧದಿಂದ ಹೊರಬರುವುದೇ ಲೇಸು!
ಹದಿಹರೆಯದ ಪ್ರೇಮಕ್ಕೂ ಪ್ರಬುದ್ಧ ಪ್ರೇಮಕ್ಕೂ ಬಹಳ ವ್ಯತ್ಯಾಸವಿದೆ. ಹದಿಹರೆಯದಲ್ಲಿ ದೈಹಿಕ ಆಕರ್ಷಣೆಗೇ ಹೆಚ್ಚಿನ ಮಹತ್ವವಿರುತ್ತದೆ. ಕಾಲಕಳೆದಂತೆ ಒಂದು ಸಂಬಂಧಕ್ಕೆ ಅಗತ್ಯವಿರುವ ನಿಜವಾದ ಗುಣಗಳು ಒರೆಹಚ್ಚಿದಂತೆ ಇದರಲ್ಲಿರುವ ಹುಳುಕುಗಳೂ ಕಾಣತೊಡಗುತ್ತವೆ. ಪರಿಣಾಮವಾಗಿ 'ಆಕರ್ಷಣೆ' ಕಳೆದುಕೊಳ್ಳುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಏಕಸಂಗಾತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದ್ದರಿಂದ ಜೀವನಸಂಗಾತಿಯನ್ನು ಆರಿಸಿಕೊಳ್ಳುವಾಗ ಬಹಳಷ್ಟನ್ನು ಪರಿಗಣಿಸಬೇಕಾಗುತ್ತದೆ. ಪಾಶ್ಚಾತ್ಯರಲ್ಲಿದ್ದಂತೆ ವಿವಾಹಕ್ಕೂ ಮುನ್ನ ಹತ್ತು ಹಲವು ಸಂಬಂಧಗಳನ್ನು ಒರೆಹಚ್ಚಿ ಬಳಿಕ ವಿವಾಹವಾಗುವುದು ಸರಿಯಲ್ಲ. ನಿಮ್ಮ ಪತ್ನಿಗೂ ಆಸೆ ಆಕಾಂಕ್ಷೆಗಳಿರುತ್ತದೆ, ಅರ್ಥಮಾಡಿಕೊಳ್ಳಿ...
ಅಂತೆಯೇ ಯಾವುದೋ ಆಣೆ ಭಾಷೆಗಳಿಗೆ ಬಲಿಯಾಗಿ ಇಷ್ಟವಿಲ್ಲದವರನ್ನು ಮದುವೆಯಾಗಿ ಜೀವನವಿಡೀ ಕೊರಗುವುದೂ ತರವಲ್ಲ. ಸಂಬಂಧ ಸುಧಾರಿಸದು ಎಂದು ಗೊತ್ತಾಗುತ್ತಿದ್ದರೆ ಇದರಲ್ಲಿ ಮುಂದುವರೆಯುವುದರಲ್ಲಿ ಅರ್ಥವೂ ಇಲ್ಲ.
ಯಾವುದೇ ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಪ್ರೀತಿ, ಬದ್ಧತೆ, ವಿಶ್ವಾಸ ಮತ್ತು ತಮ್ಮ ಸಂಗಾತಿಯನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸುವ ಮನೋಭಾವ. ಯಾವಾಗ ಇಬ್ಬರ ನಡುವೆ ಇದರಲ್ಲಿ ಯಾವುದಾದರೊಂದು ಗುಣದಲ್ಲಿ ಕಡಿಮೆಯಾಗತೊಡಗುತ್ತದೆಯೋ ಆಗ ಸಂಬಂಧ ಹಳಸಲು ಪ್ರಾರಂಭವಾಗುತ್ತದೆ. ಮಧುರ ಸಂಬಂಧಕ್ಕಾಗಿ ಇಡಬೇಕಾದ ಪುಟ್ಟ ಹೆಜ್ಜೆಗಳು
ಇದನ್ನು ಸರಿಪಡಿಸಲು ಇಬ್ಬರಿಗೂ ಕೊಂಚ ಬಗ್ಗುವುದು ಅನಿವಾರ್ಯವಾಗಿದೆ. ಆದರೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ಇಬ್ಬರೂ ಬಗ್ಗಲು ತಯಾರಿರದೇ ಅಹಮ್ಮಿಕೆ ತೋರುವ ಮೂಲಕ ಈ ಸಂಬಂಧ ಇನ್ನಷ್ಟು ಹಳಸತೊಡಗುತ್ತದೆ. ಹೀಗಿರುವಾಗ ಈ ಸಂಬಂಧದಿಂದ ಕಳಚಿಕೊಂಡು ಒಂಟಿಯಾಗುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸಂಬಂಧದಲ್ಲಿ ಬೈಗಳು ನೀಡುವುದೂ ಪಡೆಯುವುದೂ ಅತ್ಯಂತ ಅನಾರೋಗ್ಯಕರ ನಡವಳಿಕೆಯಾಗಿದ್ದು ಇದರಿಂದ ಇಬ್ಬರ ಮನಃಸ್ಥಿತಿಯೂ ಬದಲಾಗುತ್ತಾ ಹೋಗುತ್ತದೆ ಹಾಗೂ ಇದು ಮಾನಸಿಕ ತೊಂದರೆಗಳಿಗೆ ನಾಂದಿಯಾಗುತ್ತದೆ. ಈ ಮಾನಸಿಕ ತೊಂದರೆಗಳು ಉದ್ವಿಗ್ನತೆ, ಖಿನ್ನತೆ, ಮದ್ಯವ್ಯಸನ ಮೊದಲಾದವುಗಳಿಗೆ ಕಾರಣವಾಗುತ್ತವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ತೊಂದರೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಆದ್ದರಿಂದ ಒಂದು ವೇಳೆ ಸರಿಪಡಿಸಲಾಗದಷ್ಟು ಸಂಬಂಧ ಹಳಸಿದ್ದರೆ ಇದನ್ನು ಮುಂದುವರೆಸಿಕೊಂಡು ಹೋಗುವ ಬದಲು ಇದರಿಂದ ಹೊರಬರುವುದೇ ಉತ್ತಮ ಎಂದು ಮನಃಶಾಸ್ತ್ರಜ್ಞರು ಮತ್ತು ಮಾನವಸಂಬಂಧ ಪರಿಣಿತರು ಅಭಿಪ್ರಾಯಪಡುತ್ತಾರೆ.



Click it and Unblock the Notifications


