Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಸರಿಹೊಂದದ ಸಂಬಂಧದಿಂದ ಹೊರಬರುವುದೇ ಲೇಸು!
ಹದಿಹರೆಯದ ಪ್ರೇಮಕ್ಕೂ ಪ್ರಬುದ್ಧ ಪ್ರೇಮಕ್ಕೂ ಬಹಳ ವ್ಯತ್ಯಾಸವಿದೆ. ಹದಿಹರೆಯದಲ್ಲಿ ದೈಹಿಕ ಆಕರ್ಷಣೆಗೇ ಹೆಚ್ಚಿನ ಮಹತ್ವವಿರುತ್ತದೆ. ಕಾಲಕಳೆದಂತೆ ಒಂದು ಸಂಬಂಧಕ್ಕೆ ಅಗತ್ಯವಿರುವ ನಿಜವಾದ ಗುಣಗಳು ಒರೆಹಚ್ಚಿದಂತೆ ಇದರಲ್ಲಿರುವ ಹುಳುಕುಗಳೂ ಕಾಣತೊಡಗುತ್ತವೆ. ಪರಿಣಾಮವಾಗಿ 'ಆಕರ್ಷಣೆ' ಕಳೆದುಕೊಳ್ಳುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಏಕಸಂಗಾತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದ್ದರಿಂದ ಜೀವನಸಂಗಾತಿಯನ್ನು ಆರಿಸಿಕೊಳ್ಳುವಾಗ ಬಹಳಷ್ಟನ್ನು ಪರಿಗಣಿಸಬೇಕಾಗುತ್ತದೆ. ಪಾಶ್ಚಾತ್ಯರಲ್ಲಿದ್ದಂತೆ ವಿವಾಹಕ್ಕೂ ಮುನ್ನ ಹತ್ತು ಹಲವು ಸಂಬಂಧಗಳನ್ನು ಒರೆಹಚ್ಚಿ ಬಳಿಕ ವಿವಾಹವಾಗುವುದು ಸರಿಯಲ್ಲ. ನಿಮ್ಮ ಪತ್ನಿಗೂ ಆಸೆ ಆಕಾಂಕ್ಷೆಗಳಿರುತ್ತದೆ, ಅರ್ಥಮಾಡಿಕೊಳ್ಳಿ...
ಅಂತೆಯೇ ಯಾವುದೋ ಆಣೆ ಭಾಷೆಗಳಿಗೆ ಬಲಿಯಾಗಿ ಇಷ್ಟವಿಲ್ಲದವರನ್ನು ಮದುವೆಯಾಗಿ ಜೀವನವಿಡೀ ಕೊರಗುವುದೂ ತರವಲ್ಲ. ಸಂಬಂಧ ಸುಧಾರಿಸದು ಎಂದು ಗೊತ್ತಾಗುತ್ತಿದ್ದರೆ ಇದರಲ್ಲಿ ಮುಂದುವರೆಯುವುದರಲ್ಲಿ ಅರ್ಥವೂ ಇಲ್ಲ.
ಯಾವುದೇ ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಪ್ರೀತಿ, ಬದ್ಧತೆ, ವಿಶ್ವಾಸ ಮತ್ತು ತಮ್ಮ ಸಂಗಾತಿಯನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸುವ ಮನೋಭಾವ. ಯಾವಾಗ ಇಬ್ಬರ ನಡುವೆ ಇದರಲ್ಲಿ ಯಾವುದಾದರೊಂದು ಗುಣದಲ್ಲಿ ಕಡಿಮೆಯಾಗತೊಡಗುತ್ತದೆಯೋ ಆಗ ಸಂಬಂಧ ಹಳಸಲು ಪ್ರಾರಂಭವಾಗುತ್ತದೆ. ಮಧುರ ಸಂಬಂಧಕ್ಕಾಗಿ ಇಡಬೇಕಾದ ಪುಟ್ಟ ಹೆಜ್ಜೆಗಳು
ಇದನ್ನು ಸರಿಪಡಿಸಲು ಇಬ್ಬರಿಗೂ ಕೊಂಚ ಬಗ್ಗುವುದು ಅನಿವಾರ್ಯವಾಗಿದೆ. ಆದರೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ಇಬ್ಬರೂ ಬಗ್ಗಲು ತಯಾರಿರದೇ ಅಹಮ್ಮಿಕೆ ತೋರುವ ಮೂಲಕ ಈ ಸಂಬಂಧ ಇನ್ನಷ್ಟು ಹಳಸತೊಡಗುತ್ತದೆ. ಹೀಗಿರುವಾಗ ಈ ಸಂಬಂಧದಿಂದ ಕಳಚಿಕೊಂಡು ಒಂಟಿಯಾಗುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸಂಬಂಧದಲ್ಲಿ ಬೈಗಳು ನೀಡುವುದೂ ಪಡೆಯುವುದೂ ಅತ್ಯಂತ ಅನಾರೋಗ್ಯಕರ ನಡವಳಿಕೆಯಾಗಿದ್ದು ಇದರಿಂದ ಇಬ್ಬರ ಮನಃಸ್ಥಿತಿಯೂ ಬದಲಾಗುತ್ತಾ ಹೋಗುತ್ತದೆ ಹಾಗೂ ಇದು ಮಾನಸಿಕ ತೊಂದರೆಗಳಿಗೆ ನಾಂದಿಯಾಗುತ್ತದೆ. ಈ ಮಾನಸಿಕ ತೊಂದರೆಗಳು ಉದ್ವಿಗ್ನತೆ, ಖಿನ್ನತೆ, ಮದ್ಯವ್ಯಸನ ಮೊದಲಾದವುಗಳಿಗೆ ಕಾರಣವಾಗುತ್ತವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ತೊಂದರೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಆದ್ದರಿಂದ ಒಂದು ವೇಳೆ ಸರಿಪಡಿಸಲಾಗದಷ್ಟು ಸಂಬಂಧ ಹಳಸಿದ್ದರೆ ಇದನ್ನು ಮುಂದುವರೆಸಿಕೊಂಡು ಹೋಗುವ ಬದಲು ಇದರಿಂದ ಹೊರಬರುವುದೇ ಉತ್ತಮ ಎಂದು ಮನಃಶಾಸ್ತ್ರಜ್ಞರು ಮತ್ತು ಮಾನವಸಂಬಂಧ ಪರಿಣಿತರು ಅಭಿಪ್ರಾಯಪಡುತ್ತಾರೆ.



Click it and Unblock the Notifications


