Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದಾಂಪತ್ಯದಲ್ಲಿ ನಂಬಿಕೆಗೆ ಏಟಾದರೆ ಸರಿಪಡಿಸಲಾದೀತೇ?
ನಂಬಿಕೆ ಇರುವ ಕಡೆ ಅನುಮಾನ ಇರುವುದಿಲ್ಲ, ಅನುಮಾನ ಇರುವ ಕಡೆ ನಂಬಿಕೆ ಇರುವುದಿಲ್ಲ- ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ. ಸಂಬಂಧದಲ್ಲಿ ಒಂದೊಮ್ಮೆ ಮೋಸ ಸಂಭವಿಸಿದಲ್ಲಿ, ಅದನ್ನು ನಿವಾರಿಸಿ ಹೇಗೆ ನಂಬಿಕೆಯನ್ನು ಮತ್ತೆ ತರಬೇಕು ಎಂಬುದು ಅತ್ಯಂತ ಕಷ್ಟದ ಕೆಲಸ. ಆದರೂ ಇದನ್ನು ಮತ್ತೆ ನಿರ್ಮಾಣ ಮಾಡಬಹುದು. ಆದರೆ ಅದು ಒಂದೇ ಕ್ಷಣದಲ್ಲಿ ನಡೆಯುವಂತದ್ದಲ್ಲ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಅದನ್ನು ಅತ್ಯಂತ ನಾಜೂಕಿನಿಂದ ಮಾಡಬೇಕಾಗುತ್ತದೆ. ಏಕೆಂದರೆ ಸಂಬಂಧವು ಒಂದು ರಹಸ್ಯವಾದ ಅನೈತಿಕ ಸಂಬಂಧದಿಂದ, ನಿಂದನೆಯಿಂದ ಅಥವಾ ಯಾವುದಾದರೂ ಒಂದು ಅಚಾತುರ್ಯವಾದ ಘಟನೆಯಿಂದ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಸಂಬಂಧವು ಈ ನೋವಿನ ಘಟನೆಯ ನಂತರ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಇದಕ್ಕಾಗಿ ಸಿಕ್ಕಾಪಟ್ಟೆ ಕಷ್ಟ ಮತ್ತು ಕ್ಷಮೆಯನ್ನು ನಿಮ್ಮ ಸಂಗಾತಿ ತೋರಬೇಕಾಗುತ್ತದೆ. ಪ್ರಿಯತಮನ ಮಾತಿನ ಮೇಲೆ ನಂಬಿಕೆ ಬರುತ್ತಿಲ್ಲವೇ?

ಒಂದು ವೇಳೆ ನೀವು ತಪ್ಪು ಮಾಡಿದ್ದಲ್ಲಿ, ಅದನ್ನು ಮೊದಲು ನೀವು ಒಪ್ಪಿಕೊಳ್ಳಿ. ಪರಿಸ್ಥಿತಿ ತಿಳಿಗೊಳ್ಳಲು ಬಿಡಿ, ಅನುಕಂಪವನ್ನು ಅಪೇಕ್ಷಿಸುವ ನೀವು, ಮುಕ್ತವಾಗಿ, ತೆರೆದ ಮನಸ್ಸಿನಿಂದ ನಿಮ್ಮ ಜೀವನದಲ್ಲಿ ನಡೆದ ಈ ಘಟನೆಗೆ ಕಾರಣವನ್ನು ತಿಳಿಸಿ. ಅದು ನಂಬುವಂತ ಕಾರಣಗಳಾಗಿರಲಿ, ನಾಟಕೀಯ ನಡೆಗಳನ್ನು ಮಾಡಬೇಡಿ. ಪ್ರಾಮಾಣಿಕವಾಗಿ ಇದ್ದು ಕ್ಷಮಿಸು ಎಂದು ಹೇಳುವುದು ಒಳ್ಳೆಯದು. ಆದರೆ ಇದರಿಂದ ನಿಮ್ಮ ಮೇಲಿನ ನಂಬಿಕೆ ಮತ್ತೆ ಬರಲು ತುಂಬಾ ಕಾಲ ತೆಗೆದುಕೊಳ್ಳುತ್ತದೆ. ನಿಮ್ಮ ನಡುವೆ ಮಾತು ಕತೆ ನಡೆಯುತ್ತಿದ್ದಲ್ಲಿ, ಮುಕ್ತವಾಗಿ ಮಾತನಾಡಿ ಕಾರಣಗಳನ್ನು ಹೇಳಿ.
ಪರಿಸ್ಥಿತಿ ಹೇಗಾದರೂ ಮಾಡಿ ಮತ್ತೆ ಯಥಾಸ್ಥಿತಿಗೆ ಬರುವಂತೆ ಮಾಡಿ. ಕೆಲವೊಮ್ಮೆ ನಿಮ್ಮ ಸಂಗಾತಿಯು ನಿಮ್ಮ ಮಾತುಗಳನ್ನು ಕೇಳದೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ನೆರವಿಗೆ ಬರಲು ಯಾವುದೇ ಸೂತ್ರವು ಇಲ್ಲ ಎಂಬುದು ದುಃಖಕರವಾದ ವಿಚಾರ. ಆದರೂ ಈ ಕೆಳಗಿನ ಅಂಶಗಳನ್ನು ಪಾಲಿಸಿ. ಅವು ಏನು ಎಂದು ತಿಳಿಯಲು ಮುಂದೆ ಓದಿ...
ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ
ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲಿಲ್ಲವಾದಲ್ಲಿ, ನಿಮ್ಮ ಸಂಗಾತಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ? ಆದ್ದರಿಂದ ನಿಮ್ಮ ವರ್ತನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಈ ತಪ್ಪಿನಿಂದ ನೀವು ಕಲಿತ ಪಾಠಕ್ಕೆ ಧನ್ಯವಾದ ಹೇಳಿ. ಇದನ್ನು ಬಗೆಹರಿಸುವ ಮತ್ತು ಮುಂದೆ ಈ ತಪ್ಪು ಮರುಕಳಿಸದಂತೆ ತಡೆಯುವ ಕುರಿತು ಆಲೋಚನೆ ಮಾಡಿ.
ಆಪ್ತ ಸಲಹೆಯ ಬೆಂಬಲವನ್ನು ಪಡೆಯಿರಿ
ನಿಮ್ಮ ಮಟ್ಟಿಗೆ ನೀವೇ ಈ ಪರಿಸ್ಥಿತಿಯನ್ನು ನಿಭಾಯಿಸಲು ಹೋಗುವ ಮುನ್ನ, ಹಿರಿಯರಿಂದ ಅಥವಾ ಸ್ನೇಹಿತರಿಂದ ಅಥವಾ ಆಪ್ತ ಸಲಹಾಗಾರರಿಂದ ನೆರವನ್ನು ಪಡೆಯಿರಿ. ಇಲ್ಲಿ ನಮ್ಮ ಬುದ್ಧಿಗಿಂತ ಇತರರ ಕಿವಿಮಾತು ಹೆಚ್ಚು ಕೆಲಸ ಮಾಡುತ್ತದೆ. ಜೊತೆಗೆ ಇಬ್ಬರ ನಡುವಿನ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕುತ್ತದೆ. ಏಕೆ ಹೀಗೆ ಆಯಿತು ಎನ್ನುವುದಕ್ಕಿಂತ, ಮುಂದೆ ಹೇಗಿರಬೇಕು ಎಂಬುದಕ್ಕೆ ಆದ್ಯತೆ ನೀಡಿ.
ಜೀವನದಲ್ಲಿ ಏರು ಪೇರುಗಳು ಇರುವುದು ಸಹಜ ಎಂದು ಪರಿಗಣಿಸಿ
ಎಲ್ಲರ ಜೀವನವು ಸುಗಮವಾಗಿರುವುದಿಲ್ಲ. ಆಗುವ ಅಚಾತುರ್ಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ತಪ್ಪನ್ನು ಕ್ಷಮಿಸಿ, ಮುಂದೆ ಚೆನ್ನಾಗಿ ಬಾಳಲು ಅವಕಾಶ ಇರುತ್ತದೆ ಎಂದು ಮನಗಾಣಿರಿ. ಸಂಬಂಧದಲ್ಲಿ ಮತ್ತೆ ಮೋಸ ಮಾಡದೆ ಜವಾಬ್ದಾರಿಯಿಂದ ನಡೆದುಕೊಳ್ಳಿ.
ಬದಲಾವಣೆಗೆ ಸಿದ್ಧರಾಗಿ
ನಿಮ್ಮ ಸಂಗಾತಿ ನಿಮ್ಮಿಂದ ಏನು ಬಯಸುತ್ತಾರೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಅದನ್ನು ನೀಡಿ, ಅವರಿಗೆ ಮತ್ತಷ್ಟು ಸುರಕ್ಷಿತವಾದ ಭಾವನೆಯನ್ನು ನೀಡಿ. ಅವರಿಗೆ ನಿಮ್ಮ ಮೇಲೆ ನಂಬಿಕೆ ಮತ್ತೆ ಬರುವಂತೆ ಮಾಡಿ. ಒಳ್ಳೆಯದಾಗಲಿ...



Click it and Unblock the Notifications
