Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಮಿಳು ನಟ ಜಯಂ ರವಿ ವಿಚ್ಛೇದನ: ಗಂಡನಾಗಿ ನೂರಕ್ಕೆ ನೂರು ಮಾರ್ಕ್ಸ್ ಕೊಡ್ತೀನಿ ಎಂದಿದ್ದರು ಪತ್ನಿ
ತಮಿಳು ನಟ ಜಯಂ ರವಿ ವಿಚ್ಛೇದನ ಸುದ್ದಿ ಕಾಲಿವುಡ್ ಇಂಡಸ್ಟ್ರಿಯನ್ನು ಅಚ್ಚರಿಗೊಳಿಸಿದೆ. 15 ವರ್ಷೆದ ದಾಂಪತ್ಯ, ಇದುವರೆಗೆ ಹೊರ ಜಗತ್ತಿಗೆ ತುಂಬಾ ಸುಂದರವಾಗಿ ಕಾಣಿಸಿದ್ದ ಆ ಕುಟುಂಬ ಇಂದು ನಾನೊಂದು ತೀರ ನೀನೊಂದು ತೀರ ಎಂದು ಬಿರುಗಾಳಿಗೆ ಸಿಕ್ಕ ನೌಕೆಯಂತೆ ಛಿದ್ರವಾಗಿರುವುದನ್ನು ನೋಡಿ ಅಚ್ಚರಿಯಾಗುವುದು. ಇತ್ತೀಚಿನ ವರ್ಷಗಳಲ್ಲಿ ಇಂಥ ಡಿವೋರ್ಸ್ ಪ್ರಕರಣಗಳ ಬಗ್ಗೆ ಕೇಳುವಾಗಲೇ ಮದುವೆ ಜೀವನದ ಬಗ್ಗೆ ಕೆಲವರಿಗೆ ಭಯ ಉಂಟಾಗುವುದು ಎಂದು ಯುವ ಜನಾಂಗ ಹೇಳುತ್ತಿದೆ.

ಒಂದು ಜೋಡಿಯನ್ನು ನೋಡಿ, ಅವರ ಪೋಸ್ಟ್ಗಳನ್ನು ಅಹಾ ಎಂಥ ಸುಂದರ ಬಾಂಧವ್ಯ, ಇವರಂತೆ ಬದುಕಬೇಕು ಎಂದು ಯೋಚಿಸಿದ ಅಭಿಮಾನಿಗಳಿಗೆ ವಿಚ್ಚೇದನದ ಸುದ್ದಿ ಬರುತ್ತಿದ್ದಂತೆ ಅದನ್ನು ತೆಗೆದುಕೊಳ್ಳಲು ಕಷ್ಟವಾಗುವುದು, ಜಯಂ ರವಿ ವಿಷಯದಲ್ಲಿ ಈಗ ಅವರ ಅಭಿಮಾನಿಗಳಿಗೆ ಅದೇ ಆಗುತ್ತಿದೆ. ಇದುವರೆಗೆ ಈ ಜೋಡಿಯ ಪೋಸ್ಟ್ ನೋಡಿ ಎಂಥ ಕ್ಯೂಟ್ ಜೋಡಿ ಅಂದುಕೊಂಡಿದ್ದರು, ಆದರೆ ಅದೆಲ್ಲಾ ಕೇವಲ ಪೋಸ್ಟ್ಗಾಗಿ ಹಾಕುವ ಪದಗಳು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಜಯಂ ರವಿ- ಆರತಿ ವಿಚ್ಚೇದನ ಸುದ್ದಿ ಹೊರ ಬರುತ್ತಿದ್ದಂತೆ ತುಂಬಾನೇ ಬೇಸರ ವ್ಯಕ್ತ ಪಡಿಸುತ್ತಿರುವ ಅಭಿಮಾನಿಗಳು
ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇರಬೇಕು, ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಇದು ನಿಮ್ಮ ವೈಯಕ್ತಿಕ ಜೀವನ, ಇದರ ಬಗ್ಗೆ ಹೇಳುವ ಹಕ್ಕು ನನಗಿಲ್ಲ, ಆದರೂ ಇದು ತುಂಬಾ ಬೇಸರ ತಂದಿದೆ ಎಂದು ಕಮೆಂಟ್ ಮಾಡಿದರೆ ಇನ್ನೊಬ್ಬರು ಇವರೆಲ್ಲಾ ಸೋಷಿಯಲ್ ಮಿಡಿಯಾದಲ್ಲಿ ಹಾಕುವುದು ಬರಿ ಸುಳ್ಳು (ತುಂಬಾನೇ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಪೋಸ್ಟ್ಗಳು), ಅವೆಲ್ಲಾ ಪೋಸ್ಗಳಷ್ಟೇ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ದಂಪತಿಗಳ ಫೋಟೋ ನೋಡಿ ಲೈಕ್ ಬಟನ್ ಒತ್ತಲು ಭಯವಾಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.
ಗಂಡನಿಗೆ ನೂರಕ್ಕೆ ನೂರು ಮಾರ್ಕ್ ಕೊಡುತ್ತೇನೆ ಎಂದು ಹೇಳಿದ್ದರು
ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಂರವಿ ಹಾಗೂ ಆರತಿ ಬಳಿ ಅವರ ಜೀವನದ ಬಗ್ಗೆ ಆ ಕಾರ್ಯಕ್ರಮದ ನಿರೂಪಕರು ಕೇಳಿದ್ದರು, ಆವಾಗ ಆರತಿ ಗಂಡನಾಗಿ ಜಯಂರವಿಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೇನೆ ಎಂದು ಹೇಳಿದ್ದರು, ಅಲ್ಲದೆ ತಾನು ಗರ್ಭಿಣಿಯಾಗಿದ್ಧಾಗ ಜಯಂರವಿ ನೋಡಿಕೊಂಡ ರೀತಿ, ಸಿ ಸೆಕ್ಷನ್ಗೆ ನನ್ನನ್ನು ಕರೆದುಕೊಂಡು ಹೋದಾಗ ಜಯಂರವಿ ತಲೆಸುತ್ತಿ ಬಿದ್ದಿದ್ದರು ಎಂದು ಹೇಳುವಾಗ ಅವರಿಬ್ಬರ ಬಾಂಧವ್ಯ ಎಷ್ಟೊಂದು ಗಟ್ಟಿಯಾಗಿದೆ ಎಂದನಿಸಿತ್ತು, ಆದರೆ ಅಷ್ಟೊಂದು ಚೆನ್ನಾಗಿದ್ದ ದಂಪತಿ ನಡುವೆ ಏನಾಯ್ತು, ವಿಚ್ಛೇದನಂಥ ಕಠಿಣ ನಿರ್ಧಾರ ಏಕೆ ತೆಗೆದುಕೊಂಡರು ಎಂಬುವುದೇ ಅವರ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
15 ವರ್ಷದ ದಾಂಪತ್ಯ ಜೀವನ, ಇಬ್ಬರು ಮಕ್ಕಳು
ಇವರು ಮದುವೆಯಾಗಿ 15 ವರ್ಷ ಆಗಿದೆ, ಇಬ್ಬರು ಗಂಡು ಮಕ್ಕಳಿದ್ದಾರೆ. ಈಗ ಇಬ್ಬರು ದೂರ ದೂರಾಗಿದ್ದಾರೆ. ಆರತಿ ತನ್ನ ಇನ್ಸ್ಟಾ ಖಾತೆಯಲ್ಲಿ ಆರತಿ ರವಿ ಎಂದೇ ಇನ್ನೂ ಇಟ್ಟಿದ್ದಾರೆ, ಅದರೆ ಜಯಂರವಿಯವರ ಒಂದೂ ಫೋಟೋವು ಅವರ ಇನ್ಸ್ಟಾಖಾತೆಯಲ್ಲಿಲ್ಲ, ಜಯಂ ರವಿಯವರ ಖಾತೆಯಲ್ಲಿ ಈ ಜೋಡಿಯ ಅದ್ಭುತ ಕ್ಯಾಪ್ಷನ್ನಂಥ ಫೋಟೋಗಳನ್ನು ಕಾಣಬಹುದು.
ಮದುವೆ ಬಂಧ ಕಾಪಾಡಿಕೊಳ್ಳಲು ಇಬ್ಬರೂ ಪ್ರಯತ್ನ ಹಾಕಬೇಕು, ಆದರೆ ಮಾತ್ರ ವೈವಾಹಿಕ ಬದುಕು ಚೆನ್ನಾಗಿರುತ್ತದೆ. ಯಾರೋ ಫೋಟೋ ಹಾಕಿ ಒಂದೊಳ್ಳೆ ಕ್ಯಾಪ್ಷನ್ ನೀಡಿದರು ಎಂದು ಅಯ್ಯೋ ಅವರ ಬದುಕು ಎಷ್ಟು ಚೆನ್ನಾಗಿದೆ, ನಮ್ಮ ಬದುಕು ಹೀಗೆ ಇಲ್ಲ ಎಂದು ಕೊರಗುವ ಬದಲಿಗೆ ಇರುವ ಬದುಕನ್ನು ಸುಂದರವಾಗಿಸುವ ಪ್ರಯತ್ನ ಮಾಡಿದ್ದಾರೆ.



Click it and Unblock the Notifications