Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ಒಡೆದು ಹೋದ ದಾಂಪತ್ಯವನ್ನು ಸರಿಪಡಿಸೋದು ಹೇಗೆ? ಇಲ್ಲಿದೆ ಟಿಪ್ಸ್
ಪ್ರತಿಯೊಬ್ಬರ ದಾಂಪತ್ಯವು ಹಾಲು-ಜೇನಿನಂತೆ ಇರೋದಿಲ್ಲ. ಸಾಮಾನ್ಯವಾಗಿ ಸಂಬಂಧ ಎಂದ ಮೇಲೆ ಅದ್ರಲ್ಲಿ ಮನಸ್ಥಾಪ ಜಗಳಗಳು ಇದ್ದಿದ್ದೇ. ಆದರೆ ಅದನ್ನೇ ಮುಂದುವರಿಸಿಕೊಂಡು ಹೋಗಬಾರದು. ಕೆಲವೊಂದು ಸಂಬಂಧಗಳಲ್ಲಿ ಹೇಗಾಗುತ್ತೆ ಅಂದರೆ ಗಂಡ/ಹೆಂಡತಿ ಇಬ್ಬರೂ ಅಹಂ ಅನ್ನು ತಲೆಗೇರಿಸಿಕೊಂಡಿರುತ್ತಾರೆ.
ಹೀಗಾಗಿ ಜಗಳ ಆದ ಸಂದರ್ಭದಲ್ಲಿ ಕಾಂಪ್ರೋಮೈಸ್ ಮಾಡೋದಕ್ಕೆ ಇಬ್ಬರೂ ಮುಂದೆ ಬರೋದಿಲ್ಲ. ಹೀಗಾದಾಗ ಇಂತಹ ದಾಂಪತ್ಯದಲ್ಲಿ ಸುಖ ಕಂಡುಕೊಳ್ಳೋದಕ್ಕೆ ಸಾಧ್ಯವೇ ಆಗೋದಿಲ್ಲ. ಅಷ್ಟಕ್ಕು ಒಡೆದು ಹೋದ ದಾಂಪತ್ಯದಲ್ಲಿ ಮತ್ತೆ ಖುಷಿ ಕಂಡುಕೊಳ್ಳೋದು ಹೇಗೆ ಇಲ್ಲಿದೆ ಟಿಪ್ಸ್.

1. ಹಳೆಯ ವಿಚಾರವನ್ನು ಕೆದಕಬೇಡಿ
ಸಂಬಂಧದಲ್ಲಿ ಖುಷಿಯೇ ತುಂಬಿರಬೇಕು ಎಂದು ಹೇಳೋದಕ್ಕೆ ನಾವೇನು ಮೆಷಿನ್ಗಳಾ? ನಮ್ಮ ಭಾವನೆಗಳು ಬದಲಾದಂತೆ ನಾವು ಪ್ರತಿಕ್ರಿಯೆ ನೀಡೋದು ಸಾಮಾನ್ಯ. ಹಾಗಂತ ಯಾವತ್ತೋ ಆದ ವಿಚಾರವನ್ನು ಹೊಸ ಜಗಳಗಳಾದಾಗ ಪ್ರಸ್ತಾಪ ಮಾಡೋದು ಸರಿಯಲ್ಲ. ನೀವು ಹಳೆಯ ವಿಚಾರವನ್ನು ಕೆದಕುವುದರ ಬದಲು ಆ ಸಂದರ್ಭಕ್ಕೆ ಎಷ್ಟು ಅಗತ್ಯ ಅಷ್ಟು ಮಾತ್ರ ಮಾತನಾಡಿದರೆ ಸಾಕು.
2. ಸಂವಹನ ಚೆನ್ನಾಗಿರಲಿ
ಒಂದು ಸಂಬಂಧವು ಚೆನ್ನಾಗಿರಬೇಕಾದರೆ ಅಲ್ಲಿ ಸಂವಹನದ ಅಗತ್ಯ ತುಂಬಾನೇ ಇದೆ. ಕೆಲವೊಂದು ಮನೆಗಳಲ್ಲಿ ಹೆಸರಿಗಷ್ಟೇ ಅವರು ಗಂಡ-ಹೆಂತಿಯಂತಿರುತ್ತಾರೆ. ಆದರೆ ಅವರ ಮಧ್ಯೆ ಹೆಚ್ಚಿನ ಮಾತುಕತೆ ಇರೋದಿಲ್ಲ. ಸಂಬಂಧ ಹಾಳಾಗೋದಕ್ಕೆ ಇದು ಕೂಡ ಒಂದು ಕಾರಣ. ನಿಮ್ಮ ಕಷ್ಟ-ಸುಖ ಏನೇ ಇದ್ದರೂ ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಿ. ಒಂದು ವೇಳೆ ಅವರು ದೂರವಿದ್ದರೆ ಫೋನ್, ವಿಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸಿ.
3. ನಂಬಿಕೆ ಇರಲಿ
ಕೆಲವೊಂದು ಸಂಬಂಧಗಳು ಹಾಳಾಗೋದಕ್ಕೆ ಮುಖ್ಯ ಕಾರಣ ದಂಪತಿಗಳಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ನಂಬಿಕೆ ಅನ್ನೋದೇ ಇರೋದಿಲ್ಲ. ಪತಿ ಹಾಗೂ ಪತ್ನಿ ಒಬ್ಬರ ಮೇಲೋಬ್ಬರು ಅನುಮಾನ ಪಡೋದು. ಸಂಗಾತಿ ಮೋಸ ಮಾಡುತ್ತಿದ್ದಾರೋ ಅನ್ನೋ ಸಂಶಯ ಯಾವಾಗಲೂ ಕಾಡುತ್ತಿರುತ್ತದೆ. ಮೊದಲು ನಿಮ್ಮವರ ಮೇಲೆ ನಂಬಿಕೆ ಇಡಿ. ನಂಬಿಕೆ ಅನ್ನೋ ಒಂದೇ ಅಸ್ತ್ರ ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.
4. ನಿಮ್ಮ ಸಂಗಾತಿಯನ್ನು ಅರ್ಥೈಸಲು ಪ್ರಯತ್ನಿಸಿ
ನಿಮ್ಮ ಸಂಗಾತಿಯ ಜೊತೆಗೆ ನಿಮಗೆ ಪ್ರತಿನಿತ್ಯ ಜಗಳ, ಮನಸ್ಥಾಪಗಳಾಗುತ್ತಿದ್ದರೆ ಒಂದು ಸಲ ಯೋಚಿಸಿ. ನಿಮ್ಮಿಬ್ಬರ ನಡುವೆ ಏನು ಸಮಸ್ಯೆಯಾಗುತ್ತಿದೆ ಅನ್ನೋ ಬಗ್ಗೆ ಅರಿತುಕೊಳ್ಳಿ. ನಿಮ್ಮ ಸಂಗಾತಿಗೆ ಏನು ಮಾಡಿದರೆ ಇಷ್ಟವಾಗುತ್ತೆ? ಏನು ಇಷ್ಟವಾಗೋದಿಲ್ಲ, ಅವರ ಹವ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ಯಾವಾಗ ನೀವು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುತ್ತಿರೋ ಆಗ ದಾಂಪತ್ಯದಲ್ಲಿ ಸಂತೋಷ ಕಂಡುಕೊಳ್ಳುತ್ತೀರಿ.
5. ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ
ಸಾಮಾನ್ಯವಾಗಿ ಪತ್ನಿ ಮನೆಯನ್ನು ನೋಡಿಕೊಳ್ಳುತ್ತಾರೆ. ಪತಿ ಹೊರಗಡೆ ಹೋಗಿ ಕೆಲಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಪತಿಯು ಪತ್ನಿಯ ಮೇಲೆ ಒಂದು ರೀತಿ ಅಸಡ್ಡೆ ಭಾವನೆಯನ್ನು ತೋರುತ್ತಾನೆ. ಆಕೆ ಇಡೀ ದಿನ ಮನೆಯಲ್ಲೇ ಇರುತ್ತಾಳೆ, ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಈ ಕೆಲಸ ಪತಿಗೆ ಅತೀ ಚಿಕ್ಕ ಕೆಲಸ ಎನಿಸುತ್ತದೆ. ಆದರೆ ಇದು ಸರಿಯಲ್ಲ. ಅವಳು ಮಾಡೋ ಕೆಲಸಕ್ಕೂ ನೀವು ಮೆಚ್ಚುಗೆ ವ್ಯಕ್ತಪಡಿಸಿ ಆಕೆ ತುಂಬಾನೇ ಖುಷಿ ಪಡುತ್ತಾಳೆ. ಹೀಗಾದಾಗ ಸಂಬಂಧ ಚೆನ್ನಾಗಿರುತ್ತದೆ.
6. ಸಂಗಾತಿಯ ಮೇಲೆ ಕಾಳಜಿ ವಹಿಸಿ
ಮದುವೆಯಾದ ಮೇಲೆ ನಾವು ಯಾರನ್ನು ಮದುವೆಯಾಗುತ್ತೇವೆಯೋ ಅವರೇ ನಮ್ಮ ಜೀವನವಾಗುತ್ತಾರೆ. ವಿಶೇಷವಾಗಿ ಮಹಿಳೆಯರು ಪತಿಯನ್ನು ನಂಬಿಕೊಂಡು ಬಂದಿರುತ್ತಾರೆ. ಅವರ ಸುಖ-ದುಃಖದಲ್ಲಿ ಪಾಲುದಾರನಾಗೋದು ಪತಿಯಾದವನ ಕರ್ತವ್ಯ. ಅದೇ ರೀತಿ ಪತ್ನಿಯು ಕೂಡ ಪತಿಯ ಕಾಳಜಿ ಮಾಡಬೇಕು. ಹೀಗಿದ್ದಾಗ ಮಾತ್ರ ಸಂಸಾರದಲ್ಲಿ ಖುಷಿ ಕಂಡುಕೊಳ್ಳಬಹುದು.
7. ಜಗಳಕ್ಕೂ ಮಿತಿ ಇರಲಿ
ಸಾಮಾನ್ಯವಾಗಿ ಎಲ್ಲಾ ದಂಪತಿಗಳು ಜಗಳ ಆಡುತ್ತಾರೆ. ಹಾಗಂತ ಆ ಜಗಳ ಮಿತಿ ಮೀರಿ ಹೋಗಬಾರದು. ನಮ್ಮ ನಿಯಂತ್ರಣ ನಮ್ಮ ಕೈಯಲ್ಲಿರಬೇಕು. ಅವಾಚ್ಯ ಪದಗಳಿಂದ ಸಂಗಾತಿಯನ್ನು ನಿಂದಿಸೋದನ್ನು ಮಾಡಬಾರದು. ನಿಮ್ಮ ನಡವಳಿಕೆ ಇದೇ ರೀತಿ ಮುಂದುವರೆದರೆ ಇಬ್ಬರೂ ಸುಖವಾಗಿರೋದಕ್ಕೆ ಸಾಧ್ಯವೇ ಇಲ್ಲ. ಜಗಳವಾಡಬೇಕಾದರೆ ಏನು ಮಾತಾಡಬೇಕು? ಎಷ್ಟು ಮಾತಾಡಬೇಕು? ಅಷ್ಟನ್ನು ಮಾತ್ರ ಮಾತನಾಡಿ.
ಮದುವೆಯಾಗೋದು ಮುಖ್ಯವಲ್ಲ. ಮುಂದೆ ಸಂಸಾರವನ್ನು ಯಾವ ರೀತಿ ಸಾಗಿಸುತ್ತೇವೆ ಅನ್ನೋದು ತುಂಬಾನೇ ಮುಖ್ಯ. ಪತಿ-ಪತ್ನಿ ಇಬ್ಬರಿಗೂ ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವ, ಪ್ರಾಮಾಣಿಕತೆ, ನಂಬಿಕೆ, ಪ್ರೀತಿ ಇದ್ದಾಗ ಮಾತ್ರ ಸಂಬಂಧದಲ್ಲಿ ಖುಚಿ ಕಂಡುಕೊಳ್ಳೋದಕ್ಕೆ ಸಾಧ್ಯ.



Click it and Unblock the Notifications

