Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಪತ್ನಿಗೆ ಭೂತ, ಪಿಶಾಚಿ ಎಂದು ಬೈಯ್ಯುವುದು ಕ್ರೌರ್ಯವಲ್ಲ: ಕೋರ್ಟ್ ಹೀಗಂದಿದ್ಯಾಕೆ..?
ನೀವು ಪತ್ನಿಗೆ ಮನೆಯಲ್ಲು ಏನೆಂದು ಕರೆಯುತ್ತೀರಿ ಅಂದ್ರೆ ಕೆಲವರು ಪ್ರೀತಿಯಿಂದ ಚಿನ್ನ, ರನ್ನ, ಬಂಗಾರ ಅಂತ ಕರೆಯುತ್ತೇವೆ ಎನ್ನಬಹುದು. ಇನ್ನೂ ಕೆಲವರು ಅವರ ಹೆಸರನ್ನೇ ಮುದ್ದಾಗಿ ಕರೆಯಬಹುದು. ಆದ್ರೆ ಇದು ಸಂತೋಷದ ಸಮಯದಲ್ಲಿ ನೀವು ಕರೆಯುವ ಹೆಸರಾಗಿದೆ. ಅದೇ ಸಿಟ್ಟು, ಕೋಪ, ಜಗಳದ ಸಮಯದಲ್ಲಿ ನೀವು ಏನೆಂದು ಕರೆಯುತ್ತೀರಿ.
ಜಗಳದ ವೇಳೆ ನೀವು ಹೆಂಡತಿಯನ್ನು ಭೂತ, ಪಿಶಾಚಿ ಎಂದು ಕರೆಯಬಹುದು, ಕಿವಿ ಹಿಂಡಬಹುದು, ಇಲ್ಲದೆ ಗಲಾಟೆ ಮಾಡಬಹುದು. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಹೆಂಡತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯಕ್ಕೆ ಸಮನಾಗುವುದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ವಿಚ್ಛೇದಿತ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿಯ ಅಭಿಪ್ರಾಯ ತಿಳಿಸಿದೆ. ಪರಸ್ಪರ ದಂಪತಿ ತಮ್ಮನ್ನು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯವಲ್ಲ ಎಂದಿದೆ. ಹಾಗಾದರೆ ಏನಿದು ಪ್ರಕರಣ, ಯಾವ ಕಾರಣಕ್ಕೆ ಈ ರೀತಿಯ ಅಭಿಪ್ರಾಯಪಟ್ಟಿದೆ ಎಂಬುದನ್ನು ತಿಳಿಯೋಣ.
ಜಾರ್ಖಂಡ್ನ ಪಕ್ಕದ ಬೊಕಾರೋ ನಿವಾಸಿಗಳಾದ ಸಹ್ದಿಯೋ ಗುಪ್ತಾ ಮತ್ತು ಅವರ ಪುತ್ರ ನರೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರ ಏಕಸದಸ್ಯ ಪೀಠವು ಈ ರೀತಿಯ ತೀರ್ಪು ನೀಡಿತು. ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ನವಾಡದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ತಂದೆ-ಮಗ ಇಬ್ಬರೂ ಬಿಹಾರದ ನಳಂದ ಜಿಲ್ಲೆಯ ನ್ಯಾಯಾಲಯಗಳು ನೀಡಿದ ಆದೇಶವನ್ನು ಪ್ರಶ್ನಿಸಿದ್ದರು.
ದೂರುದಾರರು ವರದಕ್ಷಿಣೆಗಾಗಿ ಕಾರಿಗೆ ಒತ್ತಾಯಿಸಲು ದೈಹಿಕ ಮತ್ತು ದೈಹಿಕ ಹಿಂಸೆ ನೀಡಿದ ಆರೋಪದಲ್ಲಿ 1994ರಲ್ಲಿ ಪತಿ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ 2008ರಲ್ಲಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ನಿಂದ ತಂದೆ-ಮಗ ಇಬ್ಬರ ಪ್ರಾರ್ಥನೆಯ ಮೇರೆಗೆ ಈ ಪ್ರಕರಣವನ್ನು ನವಾಡದಿಂದ ನಳಂದಾಗೆ ವರ್ಗಾಯಿಸಲಾಯಿತು. ಈ ಪ್ರಕರಣದಲ್ಲಿ ದಂಪತಿಗೆ ಜಾರ್ಖಂಡ್ ಹೈಕೋರ್ಟ್ ವಿಚ್ಛೇದನ ನೀಡಿತ್ತು.
ಪಾಟ್ನಾ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ, ವಿಚ್ಛೇದಿತ ಮಹಿಳೆಯ ವಕೀಲರು "21 ನೇ ಶತಮಾನದಲ್ಲಿ ಮಹಿಳೆಯನ್ನು" "ಭೂತ" ಮತ್ತು "ಪಿಶಾಚಿ" ಎಂದು ಆಕೆಯ ಅಳಿಯಂದಿರು ಕರೆಯುತ್ತಾರೆ, ಇದು "ಅಪಾರ ಕ್ರೌರ್ಯದ ಒಂದು ರೂಪ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಕೋರ್ಟ್ ಈ ಅರ್ಜಿಯನ್ನು ವಿಚಾರಣೆ ನಡೆಸಿತ್ತು.
"ವೈವಾಹಿಕ ಸಂಬಂಧಗಳಲ್ಲಿ, ವಿಶೇಷವಾಗಿ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ", "ಗಂಡ ಮತ್ತು ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಕೆಟ್ಟ ಪದ ಬಳಸಿ ನಿಂದಿಸಿರುವ ಉದಾಹರಣೆಗಳಿವೆ. ಆದರೆ ಈ ರೀತಿಯ ಭಾಷೆಗಳು ಕೆಟ್ಟ ಪದದ ಬಳಕೆಯ ಒಳಗೆ ಬರುವುದಿಲ್ಲ ಎಂದು ಕೋರ್ಟ್ ಹೇಳಿತು.
ಜೊತೆಗೆ ದಂಪತಿ ಒಬ್ಬರನೊಬ್ಬರು ಭೂತ, ಪಿಶಾಚಿ ಎಂದು ಕರೆಯುವುದು ಕ್ರೌರ್ಯದ ಒಳಗೆ ಬರುವುದಿಲ್ಲ. ಅವರು ಈ ಪದ ಬಳಕೆಯಿಂದ ಕ್ರೌರ್ಯಕ್ಕೆ ಸಮ ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದಕ್ಕೂ ಮೊದಲು ಪತ್ನಿ ಮನೆಗೆಲಸ ಮಾಡಬೇಕೆಂದು ನಿರೀಕ್ಷಿಸುವುದು ಕ್ರೌರ್ಯ ಎಂದು ಕರೆಯಲಾಗದು ಎಂದು ವಿಚ್ಛೇದನ ನೀಡುವ ಸಂದರ್ಭದಲ್ಲಿ ಗಂಡನಿಗೆ ದೆಹಲಿ ಹೈಕೋರ್ಟ್ ಹೇಳಿತ್ತು. ತನ್ನ ಹೆಂಡತಿಯ ಕ್ರೌರ್ಯದ ಆಧಾರದ ಮೇಲೆ ತನ್ನ ಮದುವೆಯನ್ನು ಅಸಿಂಧುಗೊಳಿಸಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ಈ ರೀತಿ ಹೇಳಲಾಗಿತ್ತು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ವಿಭಾಗೀಯ ಪೀಠವು ವಿವಾಹಿತ ಮಹಿಳೆಯನ್ನು ಮನೆಗೆಲಸ ಮಾಡಲು ಕೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಅವಳ ಕುಟುಂಬದ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ ಎಂದು ಪರಿಗಣಿಸಲ್ಪಡುತ್ತದೆ ಎಂದು ಕೋರ್ಟ್ ಹೇಳಿತ್ತು.
ಭವಿಷ್ಯದ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮದುವೆಯ ಉದ್ದೇಶವಾಗಿದೆ ಮತ್ತು ಪತಿ ತನ್ನ ಹೆಂಡತಿ ಮನೆಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸಿದರೆ ಯಾವುದೇ ಕ್ರೌರ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.



Click it and Unblock the Notifications
