Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಓಟು ಹಾಕಿದ್ದೇನೆ, ನೀವೂ ಗೆದ್ದಿದ್ದೀರಿ ನನಗೆ ಮದುವೆ ಮಾಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದ 40ರ ಪ್ರಾಯದ ವ್ಯಕ್ತಿ
ಪೆಟ್ರೋಲ್ ಹಾಕಲು ಹೋದಾಗ ಶಾಸಕರನ್ನು ನೋಡಿ ಅಲ್ಲಿದ್ದ ನೌಕರನೊಬ್ಬ'ನಾನು ನಿಮಗೆ ಓಟು ಹಾಕಿದ್ದೇನೆ, ನಿಮ್ಮ ಪಕ್ಷ ಗೆದ್ದಿದೆ ನನಗೆ ಮದುವೆ ಮಾಡಿಸಿ ಎಂದು ಹೇಳಿರುವುದನ್ನು ಕೇಳಿ ಶಾಸಕರಿಗೆ ಅಚ್ಚರಿ ಉಂಟಾಗಿದೆ, ಸ್ವತಃ ಶಾಸಕರೇ ಆ ವೀಡಿಯೋವನ್ನು X ಖಾತೆಯಲ್ಲಿ ಹಂಚಿಕೊಂಡಿದ್ದು ಆ ಪೋಸ್ಟ್ ತುಂಬಾ ಗಮನ ಸೆಳೆದಿದೆ.
ಶಾಸಕರು ಹಂಚಿಕೊಂಡಿರುವ ಪೋಸ್ಟ್ ಹೀಗೆ
ಶಾಸಕರಾದ ಬ್ರಿಜ್ ಭೂಷಣ್ ತಮ್ಮ ಕಾಡಿಗೆ ಪಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ಗೆ ಹೋದಾಗ ಅಲ್ಲಿಯ ನೌಕರರನ್ನು ಮಾತನಾಡಿಸಿದ್ದಾರೆ, ನಾನು ನಿಮಗೆ ಓಟು ಹಾಕಿರುವುದು, ಎಂಎಲ್ಎ ಚುನಾವಣೆಯಲ್ಲಿ ಗೆದ್ದಿದ್ದೇವೆ, ನನಗೆ ಮದುವೆ ಮಾಡಿಸಿ ಎಂದು ಹೇಳಿರುವುದನ್ನು ಕೇಳಿ ನನಗೆ ಶಾಕ್ ಆಯ್ತು ಎಂದು ಹೇಳಿದ್ದಾರೆ.

ಆ ವ್ಯಕ್ತಿಯನ್ನು ನೋಡಿದಾಗ 45 ವರ್ಷ ಮೇಲ್ಪಟ್ಟವರಂತೆ ಕಾಣುತ್ತಾರೆ. ಆದರೂ ಮದುವೆಯಾಗಿಲ್ಲ, ಇದು ಅವರನ್ನು ತುಂಬಾ ಕಾಡ್ತಾ ಇರಬಹುದು. ಎಲ್ಲಿ ಹುಡುಗಿ ನೋಡಿದರು ಸರಿ ಬರ್ತಾ ಇಲ್ಲ, ವಯಸ್ಸು ಮಿತಿ ಮೀರುತ್ತಿದೆ, ಮದುವೆಯಾಗಿಲ್ಲ ಎಂಬ ಚಿಂತೆ ಹೀಗಾಗಿ ಶಾಸಕರಿಗೆ ನನಗೆ ಮದುವೆ ಮಾಡಿಸಿ ಎಂದು ಕೇಳಿದ್ದಾನೆ.
ಇದು ತಮಾಷೆಯ ವಿಷಯ ಅಲ್ವೇ ಅಲ್ಲ?
ಈತ ಹೇಳಿರುವುದನ್ನು ಕೇಳಿದಾಗ ತಮಾಷೆ ಅನಿಸಬಹುದು, ಆದರೆ ಇದು ಎಷ್ಟೋ ಹುಡುಗರ ಸಮಸ್ಯೆಯಾಗಿದೆ. ಹುಡುಗರಿಗೆ ವಯಸ್ಸು ಮೀರುತ್ತಿದೆ,ಆದರೆ ಹುಡುಗಿ ಸಿಗ್ತಾ ಇಲ್ಲ. ಒಂದು ಕಾಲವಿತ್ತು ಹುಡುಗನ ಮನೆಯವರ ಡಿಮ್ಯಾಂಡ್ ಹನುಮಂತನ ಬಾಲದಂತೆ ಬೆಳೆಯುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ ಹುಡುಗರಿಗೆ ಹುಡುಗಿ ಸಿಗ್ತಾ ಇಲ್ಲ.
विधायक जी हमने चुनाव जितया है...अब आप हमारी शादी कराओ। वीडियो महोबा जिले का है। चरखरी विधायक बृजभूषण राजपूत जीप में डीजल डलवाने पहुंचे तो पेट्रोल पंप कर्मचारी की यह फरियाद सुन दंग रह गए। pic.twitter.com/O3ZNn2K6qc
— sonelal.kushwaha (@KushwahaK45286) October 16, 2024
ಕೃಷಿಕರು, ಚಿಕ್ಕ ಪುಟ್ಟ ಕೆಲಸದಲ್ಲಿ ಇರುವವರಿಗೆ ಹುಡುಗಿ ಸಿಗುವುದು ತುಂಬಾನೇ ಕಷ್ಟವಾಗುತ್ತಿದೆ
ಚಿಕ್ಕ ಸಂಬಳ, ಸ್ವಂತ ಮನೆಯಿಲ್ಲ, ಆಸ್ತಿಯಿಲ್ಲ ಎಂದಾದರೆ ಹುಡುಗಿ ಸಿಗುವುದು ಸುಲಭವಲ್ಲ, ಅರೇಂಜ್ ಮ್ಯಾರೇಜ್ನಲ್ಲಿ ಹುಡುಗಿಯನ್ನು ಮದುವೆ ಮಾಡಿಕೊಡುವಾಗ ಎಷ್ಟು ಅನುಕೂಲಸ್ಥರಿದ್ದಾರೆ ಎಂದೆಲ್ಲಾ ನೋಡಿಯೇ ಮದುವೆ ಮಾಡಿ ಕೊಡಲಾಗುತ್ತಿದೆ, ಹುಡುಗ ಊರಿನಲ್ಲಿಯೇ ಇದ್ದರೆ ಮದುವೆಗೆ ಒಪ್ಪುತ್ತಿಲ್ಲ, ಅಂಗಡಿ, ಬೇಕರಿ ಅಂತ ಕೆಲಸದಲ್ಲಿ ಇದ್ದರೆ ಹುಡುಗಿ ಸಿಗ್ತಾ ಇಲ್ಲ, ನಮ್ಮ ಹುಡುಗನಿಗೆ ಎಲ್ಲಿಯಾದರು ಹುಡುಗಿಯಿದ್ದರೆ ಹೇಳಿ, ನಮ್ಮ ಕಡೆಯಿಂದ ಯಾವುದೇ ಡಿಮ್ಯಾಂಡ್ ಇಲ್ಲ ಎಂದು ಪೋಷಕರು ಕಂಡು-ಕಂಡವರನ್ನಲ್ಲ ಕೇಳ್ತಾ ಇರ್ತಾರೆ.
ಪೋಷಕರು ಜೊತೆಗೆ ಇರುವುದಾದರೆ ಒಲ್ಲೆ ಅಂತಿದ್ದಾರೆ ಹೆಣ್ಮಕ್ಕಳು
ಎಷ್ಟೋ ಹೆಣ್ಮಕ್ಕಳು ಮದುವೆಯಾದ ಮೇಲೆ ನಾನು ಮತ್ತು ನನ್ನ ಗಂಡ ಮಾತ್ರ ಇರಬೇಕು, ಇಲ್ಲದಿದ್ದರೆ ಮದುವೆಗೆ ಒಲ್ಲೆ ಎಂದು ಹೇಳ್ತಾ ಇದ್ದಾರೆ. ಇತ್ತ ವಯಸ್ಸಾದ ಪೋಷಕರನ್ನು ಬಿಡಲು ಸಾಧ್ಯವೇ? ಅತ್ತ ಮದುವೆಯನೂ ಆಗ್ತಾ ಇಲ್ಲ ಇದು ಇನ್ನಷ್ಟು ಹುಡುಗರ ಕಷ್ಟವಾಗಿದೆ.
ಒಳ್ಳೆಯ ಕೆಲಸ, ಆರ್ಥಿಕ ಭದ್ರತೆ, ಮನೆ, ಕಾರು ಅಂತೆಲ್ಲಾ ಇದ್ದರೆ ಹುಡುಗಿಯರು ಒಪ್ಪುತ್ತಿದ್ದಾರೆ
ಹುಡುಗಿ ಮನೆಯವರು ಬಾಡಿಗೆ ಮನೆಯಲ್ಲಿಯೇ ಇರಲಿ ಆದರೆ ನಾವು ನಮ್ಮ ಹುಡುಗಿಯನ್ನು ಮದುವೆ ಮಾಡಿ ಕೊಡುವ ಮನೆ ಸ್ವಂತದ್ದಾಗಿರಬೇಕು, ಆರ್ಥಿಕ ಭದ್ರತೆ ಇರಬೇಕು ಎಂದೆಲ್ಲಾ ಬಯಸುತ್ತಿದ್ದಾರೆ. ಇದು ತಪ್ಪು ಅಂತಲ್ಲ...ಯಾರೇ ಆಗಲಿ ನಮ್ಮ ಹೆಣ್ಮಕ್ಕಳು ಸುರಕ್ಷಿತವಾಗಿರಬೇಕು, ತಮ್ಮ ತಂಗಿ ಒಳ್ಳೆಯ ಮನೆ ಸೇರಬೇಕು ಎಂದೇ ಬಯಸುವುದು, ಆದರೆ ಪುರುಷರಿಗೆ ಇದು ಮದುವೆ ವಿಷಯದಲ್ಲಿ ದೊಡ್ಡ ಸವಲಾಗುತ್ತಿರುವುದು ಕಟು ವಾಸ್ತವ.
ಒಳ್ಳೆ ಕೆಲಸ ಸಿಗದಿದ್ದರೆ ಹುಡುಗಿ ಸಿಗಲ್ಲ ಎಂಬ ಭಯದಲ್ಲಿ ಹುಡುಗರು ಚೆನ್ನಾಗಿ ಓದುತ್ತಿದ್ದರೆ, ಮದುವೆಗೆ ಹೆಣ್ಣು ಸಿಗದಿದ್ದರೆ ಆ ವ್ಯಕ್ತಿ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು, ಇದಕ್ಕೆ ಪರಿಹಾರವೇನು?



Click it and Unblock the Notifications