Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಚ್ಛೇದನದ ಹಿಂದಿರುವ 7 ಪ್ರಮುಖ ಕಾರಣಗಳಿವು
ಇತ್ತೀಚಿನ ವರ್ಷಗಳಲ್ಲಿ ಡಿವೋರ್ಸ್ ಎಂಬುವುದು ತುಂಬಾನೇ ಕಾಮನ್ ಆಗುತ್ತಿದೆ, ನಮ್ಮ ಆಪ್ತರು ಅಥವಾ ನಮಗೆ ಗೊತ್ತಿರುವ ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಕೇಳಿದಾಗ ಅವರು ಚೆನ್ನಾಗಿಯೇ ಇದ್ದಾರಲ್ಲ ವಿಚ್ಛೇದನ ಒಡೆಯುವಂಥದ್ದು ಏನಾಯ್ತು ಎಂದು ಮಾತನಾಡಿಕೊಳ್ಳುತ್ತೇವೆ. ಯಾವುದೇ ದಾಂಪತ್ಯ ಜೀವನ ಮುರಿದು ಬೀಳಲು ಇವೇ ಪ್ರಮುಖ ಕಾರಣಗಳಾಗಿರುತ್ತದೆ....
* ಪ್ರೀತಿ, ದೈಹಿಕ ತೃಪ್ತಿ ಇಲ್ಲದಿರುವುದು
* ಸಂವಹನ ಕೊರತೆ
* ಹೊಂದಾಣಿಕೆ, ನಂಬಿಕೆ, ಅನುಕಂಪ ಇಲ್ಲದಿರುವುದು
* ಇಬ್ಬರ ನಡುವೆ ಆಸಕ್ತಿಗಳು ಭಿನ್ನವಾಗಿದ್ದು ಈ ವಿಷಯಕ್ಕೆ ಇಬ್ಬರಲ್ಲಿ ಜಗಳ

ಯಾರ ದಾಂಪತ್ಯ ಜೀವನ ಹೀಗಿರುತ್ತದೋ ಅವರ ದಾಂಪತ್ಯ ಮುರಿದು ಬೀಳುವುದು...
1. ಕಮಿಟ್ಮೆಂಟ್ ಇಲ್ಲದಿರುವುದು: ಮದುವೆಯಾದ ಮೇಲೆ ಬದ್ಧತೆ ಎಂಬುವುದು ಇರಬೇಕು. ಅದು ಇಲ್ಲದಿದ್ದರೆ ದಾಂಪತ್ಯ ಜೀವನ ತುಂಬಾ ಸಮಯ ನೆಲೆ ನಿಲ್ಲಲ್ಲ. ಕಮಿಟ್ಮೆಂಟ್ ಇಲ್ಲದಿರುವುದು ಸಂಸಾರದ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ, ಈ ಕಾರಣಕ್ಕೆ ಸಂಸಾರದಲ್ಲಿ ಸಮಸ್ಯೆಗಳು ಉಂಟಾಗುವುದು.
2. ಯಾವಾಗಲೂ ಜಗಳ: ಜಗಳವಾಡದ ದಂಪತಿ ಇರಲ್ಲ, ಆದರೆ ಯಾವಾಗಲೂ ಜಗಳ, ತರ್ಕವಿದ್ದರೆ ಅಂಥ ಸಂಸಾರದಲ್ಲಿ ನೆಮ್ಮದಿ ಇರಲ್ಲ. ಇಬ್ಬರಿಗೆ ದಾಂಪತ್ಯ ಜೀವನ ಸಾಕಾಗುವುದು, ಈ ಕಾರಣಕ್ಕೆ ದಾಂಪತ್ಯ ಜೀವನ ಮುರಿದು ಬೀಳುವುದು.
3. ವಂಚನೆ: ಗಂಡ ಹೆಂಡತಿಗೆ ಅಥವಾ ಹೆಂಡತಿ ಗಂಡನಿಗೆ ಮೋಸ ಮಾಡಿದರೆ ಅಂಥ ಸಂಗಾತಿ ಜೊತೆ ಬಾಳ್ವೆ ಮಾಡಲು ಸಾಧ್ಯವಾಗುವುದಿಲ್ಲ, ಈ ಕಾರಣಕ್ಕೆ ದಾಂಪತ್ಯ ಜೀವನ ಮುರಿದು ಬೀಳುತ್ತದೆ.
4. ಅತಿಯಾದ ನಿರೀಕ್ಷೆ: ಕೆಲವರಿಗೆ ಅತಿಯಾದ ನಿರೀಕ್ಷೆ, ಒಂಥರಾ ಭ್ರಮೆಯಲ್ಲಿ ಬದುಕುತ್ತಿರುತ್ತಾರೆ, ಅತಿಯಾದ ನಿರೀಕ್ಷೆಯಿಂದಾಗಿ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗುವುದು.
5. ಸಂಗಾತಿ ನಡುವೆ ಅಸಮಾನತೆ: ಇಬ್ಬರ ನಡುವೆ ಹಲವಾರು ವಿಷಯಗಳಲ್ಲಿ ಅಸಮಾನತೆ ಇದ್ದರೆ ಆ ಸಂಸಾರದಲ್ಲಿ ತುಂಬಾನೇ ಸಮಸ್ಯೆ ಉಂಟಾಗುವುದು.
6. ಕೌಟುಂಬಿಕ ದೌರ್ಜನ್ಯ: ಈ ಕಾರಣಕ್ಕೆ ಹಲವು ದಾಂಪತ್ಯ ಮುರಿದು ಬೀಳುತ್ತದೆ, ದೈಹಿಕ, ಮಾನಸಿಕ ಹಿಂಸೆ ನೀಡುವ ವ್ಯಕ್ತಿ ಜೊತೆ ಬಾಳುವುದಕ್ಕಿಂತ ಅಂಥ ವ್ಯಕ್ತಿಯಿಂದ ದೂರಾಗುವುದೇ ಬೆಸ್ಟ್.
7. ಆರ್ಥಿಕ ಸಮಸ್ಯೆ: ಆರ್ಥಿಕ ಸಮಸ್ಯೆ ಎಲ್ಲಾ ದಾಂಪತ್ಯದಲ್ಲಿ ದೊಡ್ಡ ಸಮಸ್ಯೆ ತರಲ್ಲ, ಪತಿ-ಪತ್ನಿ ಕಷ್ಟದ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸುವವರು ಇದ್ದಾರೆ, ಆದರೆ ಇನ್ನು ಕೆಲವರು ಆರ್ಥಿಕ ಸಮಸ್ಯೆ ಬಂದಾಗ ಸಂಗಾತಿಯನ್ನು ದೂರುವುದು ಮಾಡುತ್ತಾರೆ. ಈ ಕಾರಣಕ್ಕೆ ಸಂಬಂಧ ಮುರಿದು ಬೀಳುವುದು.



Click it and Unblock the Notifications