Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ದಂಪತಿಗಳು ಜಗಳ ಆಡಲು ಪ್ರಮುಖ 3 ಕಾರಣ ಇವು..! ಅದನ್ನು ನಿಭಾಯಿಸೋದು ಹೇಗೆ?
ದಾಂಪತ್ಯ ಅನ್ನೋದು ಎಲ್ಲಾ ಸಂಬಂಧಕ್ಕಿಂತ ವಿಶೇಷ ಎನ್ನಬಹುದು. ಪ್ರೀತಿ, ಸಾಮರಸ್ಯ, ನಂಬಿಕೆ, ಬಾಂಧವ್ಯದ ಪ್ರತೀಕವಾಗಿದೆ. ದಾಂಪತ್ಯ ಯಾವಾಗಲು ಹೂವಿನ ಹಾಸಿಗೆಯಾಗಿರುವುದಿಲ್ಲ ಬದಲಿಗೆ ಅಲ್ಲಿ ಜಗಳ, ಮನಸ್ತಾಪ ಇರುವುದು ಸಾಮಾನ್ಯ. ಹಾಗೆ ಎಲ್ಲಿ ಈ ಕೋಪ, ಜಗಳ ಇರುತ್ತೋ ಅಲ್ಲಿಯೇ ಪ್ರೀತಿ ಕೂಡ ಇರುತ್ತೆ ಅನ್ನೋದು ಹಿರಿಯರ ಮಾತು.
ಆದ್ರೆ ಇತ್ತಿಚಿಗೆ ಸಂಬಂಧಗಳು ಹುಟ್ಟಿಕೊಳ್ಳುವುದು ಎಷ್ಟು ಸುಲಭವೋ ಹಾಗೆ ಸಂಬಂಧದಲ್ಲಿ ತೊಡಕುಗಳು ಎದುರಾಗಿ ಅಷ್ಟೇ ಬೇಗ ಹಾಳಾಗುವುದು ಕೂಡ ನಾವು ನೋಡುತ್ತಿದ್ದೇವೆ. ಇದಕ್ಕೆ ಹಲವು ಕಾರಣಗಳಿದ್ದರೂ ಈ ಹೆಚ್ಚಿನ ದಾಂಪತ್ಯಗಳಿಂದು ಸಣ್ಣಪುಟ್ಟ ಸಮಸ್ಯೆಗಳ ನಡುವೆಯೇ ದಿನ ಕಳೆಯುವುದು ನೋಡಬಹುದು. ಹಾಗೆ ಕೆಲವೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಇಡೀ ಸಂಬಂಧವನ್ನು ಕ್ಯಾನ್ಸರ್ನಂತೆ ಕಾಡುವ ಸಾಧ್ಯತೆ ಇರುತ್ತದೆ.

ಸಂಪೂರ್ಣವಾಗಿ ಯಶಸ್ವಿ ಮತ್ತು ಯಾವುದೇ ಜಗಳ, ವಾದವಿಲ್ಲದ ದಾಂಪತ್ಯ ಹುಡುಕುವುದು ಬಹಳ ಕಷ್ಟ. ಯಾವುದಾದರು ಸಣ್ಣ ವಿಚಾರಗಳಿಗೂ ಕೂಡ ದೊಡ್ಡ ಮನಸ್ತಾಪ ಬರಬಹುದು. ಆದ್ರೆ ಪ್ರತಿದಿನ ಸಂಬಂಧದಲ್ಲಿ ನೋವುಗಳೆ ತುಂಬಿದರೆ ಆ ಸಂಬಂಧ ಮನಶಾಂತಿ ಹಾಳುಮಾಡುತ್ತದೆ. ಹಾಗೆ ನಿಮ್ಮ ಜೀವನವನ್ನು ನರಕವಾಗಿಸಬಹುದು. ಇನ್ನು ದಂಪತಿಗಳು ತಮ್ಮ ಸಂಬಂಧದಲ್ಲಿ ಪ್ರೀತಿಯ ಬದಲಾಗಿ ಹೆಚ್ಚಾಗಿ ಜಗಳಕ್ಕೆ ಮುಂದಾಗಲು ಪ್ರಮುಖ ಕಾರಣಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಯಾವ ಮೂರು ಕಾರಣ ದಂಪತಿಯ ನಡುವೆ ಜಗಳಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಹಣ
ಹಣವು ಸಂಬಂಧದಲ್ಲಿ ಬಿರುಕುಗಳನ್ನು ಉಂಟುಮಾಡುವುದು ಸಾಮಾನ್ಯ, ಇದು ದಂಪತಿಗಳಲ್ಲಿಯೂ ಹೊರತಾಗಿಲ್ಲ. ಹಣವು ಯಾವ ಸಂಬಂಧವನ್ನೂ ನೋಡುವುದಿಲ್ಲ, ಅದರಂತೆ ದಾಂಪತ್ಯದಲ್ಲಿ ಮನಸ್ತಾಪಗಳು, ಜಗಳಗಳಿಗೆ ಕಾರಣವಾಗುವ ಅಂಶಗಳಲ್ಲಿ ಹಣ ಕೂಡ ಒಂದಾಗಿದೆ. ಆರ್ಥಿಕ ಸಮಸ್ಯೆಗಳು ಮತ್ತು ಅಸ್ಥಿರತೆಗಳು ವೈವಾಹಿಕ ಆಶಾಂತಿಗೆ ಪ್ರಮುಖ ಕಾರಣ ಎಂಬುದು ತಿಳಿದುಬರುತ್ತದೆ. ಒಬ್ಬ ವ್ಯಕ್ತಿ ಅಥವಾ ಮಹಿಳೆ ಎಲ್ಲಾ ಹಣಕಾಸಿನ ಜವಾಬ್ದಾರಿಗಳನ್ನು ತಾನೇ ತೆಗೆದುಕೊಳ್ಳುತ್ತಿದ್ದಾನೆ ಎಂದು ಭಾವಿಸಿದಾಗ, ಅಥವಾ ಎಲ್ಲಾ ಆರ್ಥಿಕ ಅವಶ್ಯಕತೆಗಳನ್ನು ತಾನೆ ನಿಭಾಯಿಸುವ ಅನಿವಾರ್ಯತೆ ಎದುರಾದಾಗ ಈ ಸಮಸ್ಯೆಗಳು ಉದ್ಭವಿಸಬಹುದು. ಇದು ಹಣಕಾಸು ವಿಚಾರವಾಗಿ ಜಗಳ, ಮನಸ್ಥಾಪಕ್ಕೆ ಕಾರಣವಾಗಬಹುದು. ಹೀಗಾಗಿ ಸಂಬಂಧದಲ್ಲಿ ಸಮಾನತೆ ಇರುವಂತೆ, ಹಣಕಾಸು ವಿಚಾರವಾಗಿಯೂ ಪರಸ್ಪರ ಹೊಂದಾಣಿಕೆ ಅಗತ್ಯ.
ಮನೆ ಜವಾಬ್ದಾರಿ
ದಂಪತಿಗಳ ದಾಂಪತ್ಯ ಸಮಸ್ಯೆಗಳ ಪೈಕಿ ಈ ಮನೆ ಜವಾಬ್ದಾರಿ ಅನ್ನೋದು ಕೂಡ ಮುಖ್ಯ ಕಾರಣವಾಗಿದೆ. ಇದೊಂದು ಸೈಲೆಂಟ್ ರೀಸನ್ ಎನ್ನಬಹುದು, ಏಕೆಂದರೆ ಹಲವು ಬಾರಿ ಇದು ಪತಿಯ ಜವಾಬ್ದಾರಿ ಹಾಗೆ ಪತ್ನಿಯ ಜವಾಬ್ದಾರಿ ಎಂದು ಅವರೆ ಹಾಕಿಕೊಂಡು ಬೌಂಡರಿಯಲ್ಲಿ ಯಾವ ವಿಚಾರವನ್ನೂ ಮಾತುಕತೆಗೆ ತರಲಾಗದೆ ಹಾಗೆ ಉಳಿದುಬಿಟ್ಟಿರುತ್ತದೆ. ಇದು ಮನದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಉದಾಹರಣೆಗೆ ಮಕ್ಕಳ ನೋಡಿಕೊಳ್ಳುವುದು, ಉಡುಗೆ, ಮನೆಯನ್ನು ಸ್ವಚ್ಛವಾಗಿಡುವುದು ಕೇವಲ ಪತ್ನಿಯ ಕೆಲಸ ಎಂದು ಭಾವಿಸುವುದು ಬಹಳ ಅಪಾಯಕಾರಿಯಾಗಿ ಕಾಡಬಹುದು. ಹಾಗೆ ಮನೆಯ ಅವಶ್ಯಕತೆಗಳ ನಿಭಾಯಿಸುವುದು ದುಡಿಮೆ ಮಾಡುವುದು ಪತಿಯ ಜವಾಬ್ದಾರಿ ಅಷ್ಟೇ ಎಂದು ಭಾವಿಸುವುದು ದಂಪತಿಗಳ ನಡುವಿನ ಸಾಮರಸ್ಯ ಹಾಳಾಗಲು ಒಂದು ಕಾರಣವಾಗಿರಲಿದೆ.
ಗುರಿಗಳು ಮತ್ತು ಕರ್ತವ್ಯ
ದಾಂಪತ್ಯದಲ್ಲಿ ನಿಗಧಿತ ಕರ್ತವ್ಯಗಳು, ಗುರಿಗಳ ಕುರಿತಾಗಿ ಹೆಚ್ಚಾಗಿ ಮನಸ್ತಾಪ ಉಂಟಾಗುವುದು ನೋಡಬಹುದು. ಇಬ್ಬರ ಮುಂದಿನ ಗುರಿ ಒಂದೇ ಆಗಿದ್ದರೆ ಅಥವಾ ಒಂದೇ ದಾರಿಯಲ್ಲಿ ಸಾಗುತ್ತಿದ್ದರೆ ಸಂಬಂಧ ಕೂಟ ಅಷ್ಟೇ ಸ್ಪಷ್ಟ ಹಾಗೂ ಸುಂದರವಾಗಿರುತ್ತೆ. ಆದ್ರೆ ಇಬ್ಬರ ಗುರಿಯು ಬೇರೆ ಬೇರೆ ಆದರೆ ದಾಂಪತ್ಯದಲ್ಲಿ ಜಗಳ ಸಾಮಾನ್ಯ ಎನ್ನುವಂತಾಗುತ್ತದೆ.



Click it and Unblock the Notifications











