Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸುಂದರ ದಾಂಪತ್ಯ ಜೀವನದ 7 ರಹಸ್ಯಗಳು - ಜಾತ್ಯತೀತ
ದಿನದಿಂದ ದಿನಕ್ಕೆ ವಿಚ್ಛೇದನಗಳು ಜಾಸ್ತಿಯಾಗುತ್ತಿವೆ. ಈ ರೀತಿ ಹೆಚ್ಚಾಗುತ್ತಿರುವ ವಿಚ್ಛೇದನ ಹಾಗೂ ಮದುವೆಯ ನಂತರ ಅಕ್ರಮ ಸಂಬಂಧ ಇವೆಲ್ಲವನ್ನು ನೋಡುತ್ತಿರುವ ಯುವ ಜನಾಂಗವೂ ಮದುವೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದರೆ ಮತ್ತೆ ಕೆಲವು ಬಿಸಿ ರಕ್ತದವರು ಲೀವ್ ಇನ್ ರಿಲೇಷನ್ ಶಿಪ್ ಬೆಸ್ಟ್ ಅನ್ನುತ್ತಿದ್ದಾರೆ.
ಕೊನೆಯವರೆಗೂ ಜೊತೆಯಲ್ಲಿ ಬಾಳುತ್ತೇವೆ ಎಂದು ಮದುವೆಯಾಗಿ ಸ್ವಲ್ಪ ಕಾಲದಲ್ಲಿ ಸಂಸಾರದಲ್ಲಿ ಅಪಸ್ವರಗಳು ಎದ್ದರೆ ಸಂಸಾರ ಅನ್ನುವುದು ಬೀದಿಗೆ ಬೀಳುತ್ತದೆ.ಸಂಸಾರದಲ್ಲಿ ಮೇಲೆ ಸಣ್ಣ-ಪುಟ್ಟ ಜಗಳಗಳು ಕಂಡು ಬರುವುದು ಸಾಮಾನ್ಯ. ಆದರೆ ಆ ಸಮಸ್ಯೆಗಳನ್ನು ಅಲ್ಲಿಗೆ ಪರಿಹರಿಸಿದರೆ ಜೀವನ ಸುಂದರವಾಗಿ ನಡೆಯುವುದು. ದಾಂಪತ್ಯ ಜೀವನ ಸುಂದರವಾಗಿರಬೇಕೆಂದರೆ ಈ ಕೆಳಗಿನ ಗುಣಗಳು ಗಂಡ-ಹೆಂಡತಿ ಇಬ್ಬರಲ್ಲೂ ಇರಬೇಕಾಗುತ್ತದೆ.

ಭಾವನೆಗಳನ್ನು ಹಂಚಿಕೊಳ್ಳುವುದು: ಗಂಡ-ಹೆಂಡತಿ ಪರಸ್ಪರ ಮನಬಿಚ್ಚಿ ಮಾತನಾಡಬೇಕು. ಎಷ್ಟೋ ಸಂಸಾರಗಳಲ್ಲಿ ಗಂಡ-ಹೆಂಡತಿಯ ನಡುವೆ ಮಾತುಕತೆನೇ ಇರುವುದಿಲ್ಲ. ಇಬ್ಬರೂ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದು ಬಿಡುತ್ತಾರೆ. ಈ ರೀತಿಯ ನಡುವಳಿಕೆ ಸಂಸಾರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಎಷ್ಟೇ ಬ್ಯೂಸಿಯಾಗಿದ್ದರೂ ದಿನದಲ್ಲಿ ಒಂದು 10 ನಿಮಿಷವಾದರೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೀಸಲಿಡಿ.
ಗೌರವ: ಗಂಡನಿಗೆ ಹೆಂಡತಿ ಮೇಲೆ, ಹೆಂಡತಿಗೆ ಗಂಡನ ಮೇಲೆ ಗೌರವ ಇರಬೇಕು. ಯಾವುದೇ ಕಾರಣಕ್ಕೂ ದಬ್ಬಾಳಿಕೆ ಮಾಡಬಾರದು, ಹಿಂಸೆ ಮಾಡಬಾರದು. ಮನೆಯವರ ಮುಂದೆ ಅಥವಾ ಸ್ನೇಹಿತರ ಮುಂದೆ ನಿಮ್ಮ ಬಾಳ ಸಂಗಾತಿಯನ್ನು ಅವಮಾನ ಮಾಡಬಾರದು.
ಹೊಂದಾಣಿಕೆ: ನನ್ನದೇ ಸರಿ ಎಂಬ ಹಠ ಸಾಧಿಸುವ ಗುಣವನ್ನು ಸಂಸಾರದಲ್ಲಿ ತೋರಿಸಬಾರದು. ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೇ ಪರಸ್ಪರ ಬಿಟ್ಟುಕೊಟ್ಟು ಬಾಳುವುದನ್ನು ಕಲಿತರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ.
ಮುಚ್ಚುಮರೆ ಇರಬಾರದು: ಯಾವುದೇ ವಿಷಯಕ್ಕೆ ಮುಚ್ಚುಮರೆ ಇರಬಾರದು, ಮುಚ್ಚು ಮರೆಯಿಂದಾಗಿ ಸಂಶಯ ರೋಗ ಶುರುವಾಗುತ್ತದೆ.
ಅತ್ತೆ-ಮಾವನ ಜೊತೆ ಒಳ್ಳೆಯ ಸಂಬಂಧ: ಅತ್ತೆ-ಸೊಸೆ ಪ್ರೀತಿಯಿಂದ ಬಾಳಬೇಕು ಎಂದು ಹೇಳುವುದು ಸುಲಭ. ಆದರೆ ಸಾಕಷ್ಟು ಜನರ ಜೀವನದಲ್ಲಿ ವಾಸ್ತವನೇ ಬೇರೆಯಾಗಿರುತ್ತದೆ. ಆದರೂ ಸಂಬಂಧಗಳನ್ನು ಚೆನ್ನಾಗಿ ಇಟ್ಟಿರಲು ಪ್ರಯತ್ನಿಸಬೇಕು.
ರೊಮ್ಯಾನ್ಸ್: ದಾಂಪತ್ಯ ಜೀವನದಲ್ಲಿ ರೊಮ್ಯಾನ್ಸ್ ಮುಖ್ಯವಾಗಿರುವುದರಿಂದ ಅದನ್ನು ಕಡೆಗಣಿಸಬೇಡಿ.



Click it and Unblock the Notifications