Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಭಾವನೆಗಳು ಸತ್ತರೆ ವಿಚ್ಛೇದನ ಒಳ್ಳೆಯದು!

ಪರಸ್ಪರ ಕೂಡಿ ಜೀವನ ಮಾಡಲು ಸಾಧ್ಯವಾಗದದಿದ್ದಾಗ ವಿಚ್ಛೇದನ ತೆಗೆದುಕೊಳ್ಳುವುದೇ ಒಳ್ಳೆಯದು! ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಎಲ್ಲರಿಂದ ಸಾಧ್ಯವಾಗುವುದು ಇಲ್ಲ. ಸಮಾಜದ ಕಟ್ಟುಪಾಡುಗಳಿಗೆ ಎದುರಿ ಅನೇಕರು ವಿಚ್ಛೇದನ ತೆಗೆದುಕೊಳ್ಳದೆ ನರಕದ ಜೀವನವನ್ನು ಅನುಭವಿಸುತ್ತಾರೆ. ಕೊನೆಗೆ ಆತ್ಮಹತ್ಯೆಯಂತಹ ಮುಠ್ಠಾಳ ತೀರ್ಮಾನ ಕೈಗೊಳ್ಳುತ್ತಾರೆ. ನರಕದ ಜೀವನ ಸಾಗಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ವಿಚ್ಛೇದನ ತೆಗೆದುಕೊಳ್ಳುವುದು ಒಳ್ಳೆಯದು! ಭಾವನೆಗಳು ಸತ್ತ ಮೇಲೆ ಜೊತೆಗೆ ಬಾಳಿ ಪ್ರಯೋಜವೇನು?
ಬಾಳಸಂಗಾತಿಗೆ ನಮ್ಮೊಂದಿಗೆ ಬಾಳಲು ಇಷ್ಟವಿಲ್ಲದಿದ್ದರೆ ಅದನ್ನು ಅವರ ನಡುವಳಿಕೆಗಳಿಂದ ತಿಳಿದುಕೊಳ್ಳಬಹುದು. ದೈಹಿಕ ಹಿಂಸೆ ನೀಡುವುದು, ಸಣ್ಣ ಪುಟ್ಟ ವಿಷಯಕ್ಕೂ ವಾದ ಮಾಡುವುದು, ನಿಮ್ಮ ಭಾವನೆಗಳಿಗೆ ಬೆಲೆಯೆ ಕೊಡದಿರುವುದು, ಸಣ್ಣ-ಪುಟ್ಟ ವಿಷಯವನ್ನು ದೊಡ್ಡದು ಮಾಡಿ ಜಗಳವಾಡುವುದು ಅಂತಹವರ ಜೊತೆ ಬಾಳಿಯೂ ಪ್ರಯೋಜನವಿಲ್ಲ, ಯಾವಾಗ ಭಾವನೆಗಳು ಸಾಯುತ್ತವೆಯೊ ಆಗ ಸಂಬಂಧಗಳನ್ನು ಕೊನೆಗೊಳಿಸುವುದು ಒಳ್ಳೆಯದು.
ಏಕೆಂದರೆ ಜೊತೆಗೆ ಇದ್ದು ಪ್ರತಿಕ್ಷಣ ನರಕ ಅನುಭವಿಸುವ ಬದಲು ದೂರವಾದರೆ ಸ್ವಲ್ಪವಾದರೂ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಈಗ ಸಾಕಷ್ಟು ಸಂಬಂಧಗಳು ಕೊನೆಗೊಳ್ಳುತ್ತಿರುವುದು ಅನೈತಿಕ ಸಂಬಂಧಗಳಿಂದ. ನಿಮ್ಮ ಜೀವನ ಸಂಗಾತಿ ಅನೈತಿಕ ಸಂಬಂಧ ಹೊಂದಿದ್ದರೆ ಯೋಚಿಸಲು ಹೋಗಲೇ ಬಾರದು. ಆ ಕ್ಷಣದಲ್ಲಿಯೆ ಅವರಿಂದ ದೂರವಾಗಿ ಬಿಡಬೇಕು. ಆದರೆ ಅನೇಕ ಹೆಣ್ಣು ಮಕ್ಕಳು ಗಂಡನಿಗೆ ಮತ್ತೊಂದು ಸಂಬಂಧಿವಿದ್ದರೂ ಕೂಡ ಸಹಿಸಿಕೊಂಡು ಇರುತ್ತಾರೆ. ಆದರೆ ಒಂದು ವಿಷಯ ಯೋಚಿಸಿ ನಿಮ್ಮ ಬಗ್ಗೆ ಕಿಂಚಿತ್ತು ಪ್ರೀತಿ ಅಥವಾ ನಿಮ್ಮ ಭಾವನೆಗಳಿಗೆ ಬೆಲೆಯಿದ್ದಿದ್ದರೆ ಅವನು ಬೇರೆ ಸಂಬಂಧ ನೋಡುತ್ತಿರಲಿಲ್ಲ. ನಿಮ್ಮ ವ್ಯಕ್ತಿತ್ವಕ್ಕೆ ಬೆಲೆಯಿಲ್ಲದ ಜಾಗದಲ್ಲಿ ನೀವು ಇರಬೇಕೆ?
ಸಣ್ಣ-ಪುಟ್ಟ ಕಾರಣಗಳಿಗೆ ಡಿವೋರ್ಸ್ ತೆಗೆದುಕೊಂಡರೆ ಬದುಕನ್ನು ನಮ್ಮ ಕೈಯಿಂದ ಒಡೆದುಕೊಂಡಂತೆ. ಜೀವನದಲ್ಲಿ ಹೊಂದಾಣಿಕೆ ಇರಬೇಕು. ಯಾವಾಗ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ತಲುಪಿದಾಗ ಹಿಂಸೆ ಅನುಭವಿಸುವುದರಲ್ಲಿ ಯಾವುದೇ ಅರ್ಥವಿಲ್ಲ.



Click it and Unblock the Notifications