Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಭಾವನೆಗಳು ಸತ್ತರೆ ವಿಚ್ಛೇದನ ಒಳ್ಳೆಯದು!

ಪರಸ್ಪರ ಕೂಡಿ ಜೀವನ ಮಾಡಲು ಸಾಧ್ಯವಾಗದದಿದ್ದಾಗ ವಿಚ್ಛೇದನ ತೆಗೆದುಕೊಳ್ಳುವುದೇ ಒಳ್ಳೆಯದು! ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಎಲ್ಲರಿಂದ ಸಾಧ್ಯವಾಗುವುದು ಇಲ್ಲ. ಸಮಾಜದ ಕಟ್ಟುಪಾಡುಗಳಿಗೆ ಎದುರಿ ಅನೇಕರು ವಿಚ್ಛೇದನ ತೆಗೆದುಕೊಳ್ಳದೆ ನರಕದ ಜೀವನವನ್ನು ಅನುಭವಿಸುತ್ತಾರೆ. ಕೊನೆಗೆ ಆತ್ಮಹತ್ಯೆಯಂತಹ ಮುಠ್ಠಾಳ ತೀರ್ಮಾನ ಕೈಗೊಳ್ಳುತ್ತಾರೆ. ನರಕದ ಜೀವನ ಸಾಗಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ವಿಚ್ಛೇದನ ತೆಗೆದುಕೊಳ್ಳುವುದು ಒಳ್ಳೆಯದು! ಭಾವನೆಗಳು ಸತ್ತ ಮೇಲೆ ಜೊತೆಗೆ ಬಾಳಿ ಪ್ರಯೋಜವೇನು?
ಬಾಳಸಂಗಾತಿಗೆ ನಮ್ಮೊಂದಿಗೆ ಬಾಳಲು ಇಷ್ಟವಿಲ್ಲದಿದ್ದರೆ ಅದನ್ನು ಅವರ ನಡುವಳಿಕೆಗಳಿಂದ ತಿಳಿದುಕೊಳ್ಳಬಹುದು. ದೈಹಿಕ ಹಿಂಸೆ ನೀಡುವುದು, ಸಣ್ಣ ಪುಟ್ಟ ವಿಷಯಕ್ಕೂ ವಾದ ಮಾಡುವುದು, ನಿಮ್ಮ ಭಾವನೆಗಳಿಗೆ ಬೆಲೆಯೆ ಕೊಡದಿರುವುದು, ಸಣ್ಣ-ಪುಟ್ಟ ವಿಷಯವನ್ನು ದೊಡ್ಡದು ಮಾಡಿ ಜಗಳವಾಡುವುದು ಅಂತಹವರ ಜೊತೆ ಬಾಳಿಯೂ ಪ್ರಯೋಜನವಿಲ್ಲ, ಯಾವಾಗ ಭಾವನೆಗಳು ಸಾಯುತ್ತವೆಯೊ ಆಗ ಸಂಬಂಧಗಳನ್ನು ಕೊನೆಗೊಳಿಸುವುದು ಒಳ್ಳೆಯದು.
ಏಕೆಂದರೆ ಜೊತೆಗೆ ಇದ್ದು ಪ್ರತಿಕ್ಷಣ ನರಕ ಅನುಭವಿಸುವ ಬದಲು ದೂರವಾದರೆ ಸ್ವಲ್ಪವಾದರೂ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಈಗ ಸಾಕಷ್ಟು ಸಂಬಂಧಗಳು ಕೊನೆಗೊಳ್ಳುತ್ತಿರುವುದು ಅನೈತಿಕ ಸಂಬಂಧಗಳಿಂದ. ನಿಮ್ಮ ಜೀವನ ಸಂಗಾತಿ ಅನೈತಿಕ ಸಂಬಂಧ ಹೊಂದಿದ್ದರೆ ಯೋಚಿಸಲು ಹೋಗಲೇ ಬಾರದು. ಆ ಕ್ಷಣದಲ್ಲಿಯೆ ಅವರಿಂದ ದೂರವಾಗಿ ಬಿಡಬೇಕು. ಆದರೆ ಅನೇಕ ಹೆಣ್ಣು ಮಕ್ಕಳು ಗಂಡನಿಗೆ ಮತ್ತೊಂದು ಸಂಬಂಧಿವಿದ್ದರೂ ಕೂಡ ಸಹಿಸಿಕೊಂಡು ಇರುತ್ತಾರೆ. ಆದರೆ ಒಂದು ವಿಷಯ ಯೋಚಿಸಿ ನಿಮ್ಮ ಬಗ್ಗೆ ಕಿಂಚಿತ್ತು ಪ್ರೀತಿ ಅಥವಾ ನಿಮ್ಮ ಭಾವನೆಗಳಿಗೆ ಬೆಲೆಯಿದ್ದಿದ್ದರೆ ಅವನು ಬೇರೆ ಸಂಬಂಧ ನೋಡುತ್ತಿರಲಿಲ್ಲ. ನಿಮ್ಮ ವ್ಯಕ್ತಿತ್ವಕ್ಕೆ ಬೆಲೆಯಿಲ್ಲದ ಜಾಗದಲ್ಲಿ ನೀವು ಇರಬೇಕೆ?
ಸಣ್ಣ-ಪುಟ್ಟ ಕಾರಣಗಳಿಗೆ ಡಿವೋರ್ಸ್ ತೆಗೆದುಕೊಂಡರೆ ಬದುಕನ್ನು ನಮ್ಮ ಕೈಯಿಂದ ಒಡೆದುಕೊಂಡಂತೆ. ಜೀವನದಲ್ಲಿ ಹೊಂದಾಣಿಕೆ ಇರಬೇಕು. ಯಾವಾಗ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ತಲುಪಿದಾಗ ಹಿಂಸೆ ಅನುಭವಿಸುವುದರಲ್ಲಿ ಯಾವುದೇ ಅರ್ಥವಿಲ್ಲ.



Click it and Unblock the Notifications