Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಭಾವನೆಗಳು ಸತ್ತರೆ ವಿಚ್ಛೇದನ ಒಳ್ಳೆಯದು!

ಪರಸ್ಪರ ಕೂಡಿ ಜೀವನ ಮಾಡಲು ಸಾಧ್ಯವಾಗದದಿದ್ದಾಗ ವಿಚ್ಛೇದನ ತೆಗೆದುಕೊಳ್ಳುವುದೇ ಒಳ್ಳೆಯದು! ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಎಲ್ಲರಿಂದ ಸಾಧ್ಯವಾಗುವುದು ಇಲ್ಲ. ಸಮಾಜದ ಕಟ್ಟುಪಾಡುಗಳಿಗೆ ಎದುರಿ ಅನೇಕರು ವಿಚ್ಛೇದನ ತೆಗೆದುಕೊಳ್ಳದೆ ನರಕದ ಜೀವನವನ್ನು ಅನುಭವಿಸುತ್ತಾರೆ. ಕೊನೆಗೆ ಆತ್ಮಹತ್ಯೆಯಂತಹ ಮುಠ್ಠಾಳ ತೀರ್ಮಾನ ಕೈಗೊಳ್ಳುತ್ತಾರೆ. ನರಕದ ಜೀವನ ಸಾಗಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ವಿಚ್ಛೇದನ ತೆಗೆದುಕೊಳ್ಳುವುದು ಒಳ್ಳೆಯದು! ಭಾವನೆಗಳು ಸತ್ತ ಮೇಲೆ ಜೊತೆಗೆ ಬಾಳಿ ಪ್ರಯೋಜವೇನು?
ಬಾಳಸಂಗಾತಿಗೆ ನಮ್ಮೊಂದಿಗೆ ಬಾಳಲು ಇಷ್ಟವಿಲ್ಲದಿದ್ದರೆ ಅದನ್ನು ಅವರ ನಡುವಳಿಕೆಗಳಿಂದ ತಿಳಿದುಕೊಳ್ಳಬಹುದು. ದೈಹಿಕ ಹಿಂಸೆ ನೀಡುವುದು, ಸಣ್ಣ ಪುಟ್ಟ ವಿಷಯಕ್ಕೂ ವಾದ ಮಾಡುವುದು, ನಿಮ್ಮ ಭಾವನೆಗಳಿಗೆ ಬೆಲೆಯೆ ಕೊಡದಿರುವುದು, ಸಣ್ಣ-ಪುಟ್ಟ ವಿಷಯವನ್ನು ದೊಡ್ಡದು ಮಾಡಿ ಜಗಳವಾಡುವುದು ಅಂತಹವರ ಜೊತೆ ಬಾಳಿಯೂ ಪ್ರಯೋಜನವಿಲ್ಲ, ಯಾವಾಗ ಭಾವನೆಗಳು ಸಾಯುತ್ತವೆಯೊ ಆಗ ಸಂಬಂಧಗಳನ್ನು ಕೊನೆಗೊಳಿಸುವುದು ಒಳ್ಳೆಯದು.
ಏಕೆಂದರೆ ಜೊತೆಗೆ ಇದ್ದು ಪ್ರತಿಕ್ಷಣ ನರಕ ಅನುಭವಿಸುವ ಬದಲು ದೂರವಾದರೆ ಸ್ವಲ್ಪವಾದರೂ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಈಗ ಸಾಕಷ್ಟು ಸಂಬಂಧಗಳು ಕೊನೆಗೊಳ್ಳುತ್ತಿರುವುದು ಅನೈತಿಕ ಸಂಬಂಧಗಳಿಂದ. ನಿಮ್ಮ ಜೀವನ ಸಂಗಾತಿ ಅನೈತಿಕ ಸಂಬಂಧ ಹೊಂದಿದ್ದರೆ ಯೋಚಿಸಲು ಹೋಗಲೇ ಬಾರದು. ಆ ಕ್ಷಣದಲ್ಲಿಯೆ ಅವರಿಂದ ದೂರವಾಗಿ ಬಿಡಬೇಕು. ಆದರೆ ಅನೇಕ ಹೆಣ್ಣು ಮಕ್ಕಳು ಗಂಡನಿಗೆ ಮತ್ತೊಂದು ಸಂಬಂಧಿವಿದ್ದರೂ ಕೂಡ ಸಹಿಸಿಕೊಂಡು ಇರುತ್ತಾರೆ. ಆದರೆ ಒಂದು ವಿಷಯ ಯೋಚಿಸಿ ನಿಮ್ಮ ಬಗ್ಗೆ ಕಿಂಚಿತ್ತು ಪ್ರೀತಿ ಅಥವಾ ನಿಮ್ಮ ಭಾವನೆಗಳಿಗೆ ಬೆಲೆಯಿದ್ದಿದ್ದರೆ ಅವನು ಬೇರೆ ಸಂಬಂಧ ನೋಡುತ್ತಿರಲಿಲ್ಲ. ನಿಮ್ಮ ವ್ಯಕ್ತಿತ್ವಕ್ಕೆ ಬೆಲೆಯಿಲ್ಲದ ಜಾಗದಲ್ಲಿ ನೀವು ಇರಬೇಕೆ?
ಸಣ್ಣ-ಪುಟ್ಟ ಕಾರಣಗಳಿಗೆ ಡಿವೋರ್ಸ್ ತೆಗೆದುಕೊಂಡರೆ ಬದುಕನ್ನು ನಮ್ಮ ಕೈಯಿಂದ ಒಡೆದುಕೊಂಡಂತೆ. ಜೀವನದಲ್ಲಿ ಹೊಂದಾಣಿಕೆ ಇರಬೇಕು. ಯಾವಾಗ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ತಲುಪಿದಾಗ ಹಿಂಸೆ ಅನುಭವಿಸುವುದರಲ್ಲಿ ಯಾವುದೇ ಅರ್ಥವಿಲ್ಲ.



Click it and Unblock the Notifications