Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಚುಚ್ಚು ಮಾತನಾಡಿದರೆ ನುಚ್ಚುನೂರಾಗುತ್ತೆ ಜೀವನ
ಮನುಷ್ಯ ಅಂದ ಮೇಲೆ ಕೋಪ ಬಂದೇ ಬರುತ್ತದೆ. ಆದರೆ ಕೋಪ ಬಂದಾಗ ಬುದ್ಧಿ ತನ್ನ ಸ್ಥಿಮಿತ ಕಳೆದುಕೊಳ್ಳುತ್ತದೆ. ಕೋಪ ಬಂದಾಗ ನಮಗೆ ಬೇಕಾದವರನ್ನು ಎಷ್ಟು ನೋವು ಪಡಿಸುತ್ತಿದ್ದೇವೆ ಅನ್ನುವುದು ಕೂಡ ಗೊತ್ತಾಗುವುದಿಲ್ಲ. ಆದರೆ ಕೋಪ ತಣಿದ ಮೇಲೆ ಪಶ್ಚಾತಾಪ ಪಡುತ್ತೇವೆ. ಅದೇ ಗಂಡ-ಹೆಂಡತಿ ನಡುವೆ ಜಗಳ ವಿಪರೀತವಾದರೆ ವಿಚ್ಛೇದನವರೆಗೆ ಬಂದು ನಿಲ್ಲಬಹುದು. ಆದ್ದರಿಂದ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗಲು ಅವಕಾಶ ಕೊಡದಿರುವುದು ಒಳ್ಳೆಯದು.

1. ಗಂಡ-ಹೆಂಡತಿ ನಡುವೆ ಅಥವಾ ಅಪ್ಪ ಮಕ್ಕಳ ನಡುವೆ ಸಣ್ಣ ವಿಷಯಕ್ಕೆ ಮಾತು ಬೆಳೆದು ಅದು ಸಂಬಂಧವನ್ನೆ ಹಾಳು ಮಾಡುವಷ್ಟು ಕೆಟ್ಟದಾಗಿ ಬೆಳೆದು ಬಿಡುತ್ತದೆ. ಆಗ ನಮ್ಮ ಅನಿಸಿಕೆಗಳೆ ಸರಿ ಅನಿಸುತ್ತಿರುತ್ತಿದೆ. ಆಗ ನಾವು ಯಾರ ಜೊತೆ ಜಗಳ ಆಡುತ್ತಿದ್ದೇವೆ ಎಂದು ಒಂದು ಕ್ಷಣ ಯೋಚಿಸಿದರೆ ಸಂಬಂಧ ಹಾಳಾಗುವುದಿಲ್ಲ.
2. ನಮಗೆ ಬೇಕಾದವರು ತಪ್ಪು ಮಾಡಿದಾಗ ಅದನ್ನು ತಿದ್ದಲು ಪ್ರಯತ್ನಿಸಬೇಕೆ ಹೊರತು ತಪ್ಪುಗಳನ್ನು ಎತ್ತಿ ತೋರಿಸಿ ಚುಚ್ಚು ಮಾತು ಆಡಬಾರದು. ಅಲ್ಲದೆ ಹಿಂದೆ ಮಾಡಿದ್ದ ತಪ್ಪುಗಳನ್ನು ನೆನಪಿಸುತ್ತಾ ಇರಬಾರದು. ಅನೇಕ ಗಂಡ -ಹೆಂಡತಿ ನಡುವೆ ಜಗಳ ಚುಚ್ಚು ಮಾತುಗಳಿಂದ ಬರುತ್ತದೆ.
3. ಬಾಳಾ ಸಂಗಾತಿ ಜೊತೆ ಜಗಳ ಆಡುವಾಗ ಅಲ್ಲಿ ಗೆಲುವು ಸೋಲಿಗಿಂತ ತಾನು ಹೇಳಿದ್ದೇ ಸರಿ ಎಂಬ ಮನೋಭಾವವಿದ್ದರೆ ಬದುಕು ಕಷ್ಟವಾಗುತ್ತದೆ. ಪರಸ್ಪರ ಹೊಂದಾಣಿಕೆಯೆಂಬುದು ಕಡಿಮೆಯಾಗುತ್ತದೆ.
4. ನಿಮ್ಮ ಜಗಳವನ್ನು ನೀವೆ ಪರಿಹರಿಸಲು ಪ್ರಯತ್ನಿಸಬೇಕು. 3ನೇ ವ್ಯಕ್ತಿಯ ಸಲಹೆ ಕೇಳಿದರೆ ಆ ವ್ಯಕ್ತಿ ಅವರಿಗೆ ಇಷ್ಟ ಬಂದ ವ್ಯಕ್ತಿ ಪರವಹಿಸಿ ಮಾತನಾಡಬಹುದು. ಆಗ ಜಗಳ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ತಪ್ಪು-ಸರಿಗಳ ಕುರಿತು ನೀವೆ ಚರ್ಚಿಸುವುದು ಒಳ್ಳೆಯದು.
ಪ್ರೀತಿಯಿಂದ ಮಾಡುವ ಜಗಳ ಅಂದರೆ ಅಡುಗೆ ಚೆನ್ನಾಗಿಲ್ಲವೆಂದು ಸುಮ್ಮನೆ ರೇಗಿಸಿ ನಂತರ ಹೊಗಳುವುದು, ಹೀಗೆ ತಮಾಷೆಗೆ ಚುಡಾಯಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಆದರೆ ಆ ಚುಡಾಯಿಸುವ ನೆಪದಲ್ಲಿ ಚುಚ್ಚು ಮಾತನಾಡಬಾರದು.



Click it and Unblock the Notifications