Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಹೃದಯದಲ್ಲಿ ಬಂದು ಅವಲಕ್ಕಿ ಕುಟ್ಟಿ ಹೋಗುವವಳೆ

ಇವತ್ತಿಗೂ ಗೊತ್ತಿಲ್ಲ, ನಿನ್ನನ್ನು ಮೊದಲ ಸಲ ನೋಡಿದಾಗಿನಿಂದ ಇವತ್ತಿನವರೆಗೂ ನನಗೆ ನಿನ್ನ ಮೇಲೆ ಉಂಟಾಗಿದ್ದು ಗೆಳತನವೋ, ಪ್ರೀತಿ-ಪ್ರೇಮವೋ, ಆಕರ್ಷಣೆಯೋ, ಮತ್ತೆನೋ ಒಟ್ಟಿನಲ್ಲಿ ಇವತ್ತಿಗೂ ನೀನು ನೆನಪಾದರೆ ನನ್ನಲ್ಲಾಗುವ ಭಾವನೆಗಳನ್ನು ವರ್ಣಿಸಲು ಶಬ್ಧಗಳೇ ಸಿಗುವುದಿಲ್ಲ. ನಿನ್ನ ನಂತರದಲ್ಲಿ ಎಷ್ಟೋ ಹುಡುಗಿಯರನ್ನು ನೋಡಿದ್ದೇನೆ. ನೀನೇ ಯಾಕೆ ನನಗೆ ಇಷ್ಷವಾದೆ ಎನ್ನುವುದು ಸಹ ನನಗೆ ಇಲ್ಲಿಯವರೆಗೆ ಗೊತ್ತಾಗಿಲ್ಲ. ನಾಲ್ಕು ಜನರ ಮಧ್ಯೆ ಎದ್ದು ಕಾಣುವಂತಹ ವ್ಯಕ್ತಿತ್ವವೇನಲ್ಲ ನಿನ್ನದು. ಹಲವರ ಬಾಯಲ್ಲಿ "ಸುಂದರಿ" ಎಂದು ಹೊಗಳಿಕೆಗೊಳಗಾಗುವಷ್ಟು ಸೌಂದರ್ಯವತಿಯೂ ನೀನಲ್ಲ. ನಾನು ನಿನ್ನ ಜೊತೆ ಮಾತೆ ಆಡಿಲ್ಲ. ನಿನ್ನ ಹತ್ತಿರ ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತಿಲ್ಲ. ಆದರೂ ನೀನು ನನ್ನ ಮನಸ್ಸಿನಲ್ಲಿ ಇನ್ನುವರೆಗೂ ಇದ್ದಿಯಾ. ಬರಬೇಡ ಎಂದರೂ ಪದೇ ಪದೇ ಮನಸ್ಸಿನಲ್ಲಿ ಬಂದು ಹೃದಯದಲ್ಲಿ ಅವಲಕ್ಕಿ ಕುಟ್ಟಿ ಹೋಗುತ್ತಿಯಾ? ನಿನ್ನ ವ್ಯಾಪ್ತಿ ಪ್ರದೇಶದಿಂದ ನನ್ನ ಮನಸ್ಸು ಹೊರಬರುತ್ತಿಲ್ಲ ಗೆಳತಿ.
ಇಷ್ಟಕ್ಕೂ ನೀನು ನನಗೆ ಪ್ರಥಮ ಸಲ ಕಾಣಿಸಿದ್ದು ನನ್ನ ದಟ್ಟ ದರಿದ್ರ ನೀರುದ್ಯೋಗ ದಿನಗಳಲ್ಲಿ. ಎಂದಿನಂತೆ ಒಂದು ದಿನ ವಾಚನಾಲಯದ ಉದ್ಯೋಗದ ಜಾಹೀರಾತುಗಳನೆಲ್ಲಾ ಓದಿ ಕೆಟ್ಟ ಬಿಸಿಲಿನಲ್ಲಿ, ಮನೆಗೆ ಹೋಗಲು ಟೆಂಪೋಗೆ ಕಾಯುತ್ತಿದ್ದಾಗ ನಿನ್ನ ದರ್ಶನ ನನಗೆ ತಂಗಾಳಿಯಂತೆ ಬಂದು ತಾಕಿತ್ತು. ನಾಲ್ಕಾರು ಗೆಳತಿಯರ ಮಧ್ಯೆ ಗಂಭೀರವಾಗಿ ಕಾಲೇಜಿಗೆ ಹೋಗುತ್ತಿದ್ದ ನೀನೇ ನನಗೆ ಹೇಗೆ ಇಷ್ಟವಾದೆ? ಅಂದಿನಿಂದ ಕೆಲ ತಿಂಗಳಗಳ ಕಾಲ ನಿನ್ನ ಒಂದು ದರ್ಶನಕ್ಕಾಗಿ ನಾನು ಕಾಯುತ್ತಿದ್ದುದು ನಿನಗೆ ಕೊನೆಗೂ ಗೊತ್ತಾಗಲಿಲ್ಲವೆ? ಅಥವಾ ಗೊತ್ತಿದ್ದು ಗೊತ್ತಿಲ್ಲದ ಹಾಗೇ ಸುಮ್ಮನಿದ್ದು ಬಿಟ್ಟಿಯಾ?
ಜಾತ್ರೆಯೊಂದರಲ್ಲಿ ನೀನು ಗೆಳತಿಯರ ಜೊತೆ ತಿರುಗುವ ಚಕ್ರದಲ್ಲಿ ಕುಳಿತು ಎಂಜಾಯ್ ಮಾಡುತ್ತಿದ್ದುದು, ಆವತ್ತು ನೀನು ಧರಿಸಿದ ಡ್ರೆಸ್ ನಿಂದ ಇನ್ನಷ್ಟು ಚೆನ್ನಾಗಿ ನನಗೆ ಕಂಡಿದ್ದು ಮನಸ್ಸಿಗೆ ಆಹ್ಲಾದವನ್ನುಂಟು ಮಾಡಿದ್ದು ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೋ ಸಲ ನನ್ನ ಮನಸ್ಸಿನ ಭಾವನೆಗಳನ್ನು ನಿನ್ನಲ್ಲಿ ಹೇಳೋಣ ಎಂದುಕೊಂಡರೂ ಸಾಧ್ಯವಾಗಲೇ ಇಲ್ಲ. ಯಥಾ ಪ್ರಕಾರ ಕಾಲೇಜಿಗೆ ರಜಾ ದಿನಗಳು, ಮದುವೆಯ ಸೀಜನ್ ಪ್ರಾರಂಭವಾಯಿತು. ಕಾಲೇಜು ಮುಗಿಸಿದ ಹುಡುಗಿಯರು ಹಸೆಮಣೆಯೇರಿದರೆ, ಹುಡುಗರು ಉದ್ಯೋಗದ ಬೇಟೆಗೆ ಸಿದ್ಧರಾದರು. ನೀನಿಲ್ಲದ ಆ ರಸ್ತೆ, ಟೆಂಪೋಗೆ ಕಾಯುವಿಕೆ, ಎಲ್ಲವೂ ಅಸಹನೀಯವಾಗತೊಡಗಿತ್ತು. ಕಾಲಾಂತರದಲ್ಲಿ ಬದುಕು ವಿರಾಮವಿಲ್ಲದ ಯಂತ್ರದಂತಾಗಿದೆ. ವಿರಾಮ ಸಿಕ್ಕಾಗ ನಿನ್ನದೇ ಸವಿ ನೆನಪುಗಳ ಜಾತ್ರೆ.
ಅಂದ ಹಾಗೇ ಗೇಳತಿ, ನೀನು ಈಗ ಹೇಗಿದ್ದಿಯಾ? ಹೆಣ್ಣು ಮದುವೆಗೆ ಮೊದಲು ಭಾವನಾ ಜೀವಿ, ನಂತರ ವಾಸ್ತವವಾದಿ. ಗಂಡನಿಗೆ ಒಳ್ಳೆಯ ಹೆಂಡತಿಯಾಗಿ, ಮಗುವಿಗೆ ಒಳ್ಳೆಯ ತಾಯಿಯಾಗಿ ಸಂಸಾರ ಚೆನ್ನಾಗಿ ನಿಭಾಯಿಸುತ್ತಿದ್ದಿ ತಾನೇ? ನಾವೇ ದಡ್ಡ ಬಡ್ಡಿ ಮಕ್ಕಳು. ಹಳೆಯ ನೆನಪುಗಳ ಜಾತ್ರೆಯಲ್ಲಿ ಕಾಲಕಳೆಯುತ್ತಿರುವರು. ಆದರೂ ಒಂದು ಮಾತು. ಈ ಪತ್ರ ಓದಿದ ನಂತರವೂ ಏನೂ ಅನಿಸದಿದ್ದರೆ ಹುಚ್ಚನೊಬ್ಬನ ದಡ್ಡಪುರಾಣ ಎಂದು ಮರೆತು ಬಿಡು. ಮನಸ್ಸಿನಲ್ಲಿ ಏನಾದರೂ ಭಾವನೆಗಳು ಉಂಟಾದರೆ ಒಬ್ಬಂಟಿಯಾಗಿ ಅತ್ತು ಮನಸ್ಸು ಹಗುರಮಾಡಿಕೊಂಡು ಬಿಡು. ಏನೇ ಆಗ್ಲಿ ಹ್ಯಾಪಿ ವ್ಯಾಲಂಟೈನ್ಸ್ ಡೇ.



Click it and Unblock the Notifications











