Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಅಕ್ಕಿ ಹಾಕದೆ ರಾಗಿ ಮಾತ್ರ ಬಳಸಿ ಮಾಡುವ ಇಡ್ಲಿ, ಮಧುಮೇಹಿಗಳಿಗೆ ರುಚಿಕರವಾದ ಬ್ರೇಕ್ಫಾಸ್ಟ್ ಆಯ್ಕೆ
ರಾಗಿ ತಿನ್ನುವುದರಿಂದ ರೋಗ ದೂರವಿಡಬಹುದು, ಮಧುಮೇಹಿಗಳ ಪಾಲಿನ ಅಮೃತ ರಾಗಿಯೆಂದರೆ ತಪ್ಪಾಗಲಾರದು. ಮುದ್ದೆ, ಇಡ್ಲಿ, ರೊಟ್ಟಿ, ರಾಗಿ ಮಣ್ಣಿ ಅಂತ ರುಚಿ ರುಚಿಯಾಗಿ ಇದನ್ನು ಮಾಡಿ ಸವಿಯಬಹುದು, ರಾಗಿ ತಿನ್ನುವುದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶ ದೊರೆಯುವುದು, ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ಇಲ್ಲಿ ನಾವು ಇಡಿ ರಾಗಿ ಬಳಸಿ ಮಾಡುವ ಬ್ರೇಕ್ಫಾಸ್ಟ್ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ರಾಗಿ (ಇಡಿ ರಾಗಿ)
ಉದ್ದಿನ ಬೇಳೆ 1 ಕಪ್
1 ಚಮಚ ಮೆಂತೆ ಬೀಜ
ಒಂದು ಮುಷ್ಟಿಯಷ್ಟು ಅವಲಕ್ಕಿ
ತುಪ್ಪ ಅಥವಾ ಎಣ್ಣೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ನೀವು ರಾಗಿ ಮತ್ತೆ ಉದ್ದುವನ್ನು ಪ್ರತ್ಯೇಕವಾಗಿ ನೆನೆ ಹಾಕಿ. ನೀವು
6-8 ಗಂಟೆಗಳ ಕಾಲ ನೆನೆ ಹಾಕಿ.
ಮೆಂತೆಯನ್ನು ಕೂಡ ನೆನೆ ಹಾಕಿ
ಅವಲಕ್ಕಿ ರುಬ್ಬುವ 10 ನಿಮಿಷ ಮೊದಲು ನೆನೆ ಹಾಕಿದರೆ
ಸಾಕು.
- ರಾಗಿಯನ್ನು ರುಬ್ಬಿ, ತುಂಬಾ ನುಣ್ಣನೆ ರುಬ್ಬಬೇಡಿ,ಸ್ವಲ್ಪ ತರಿತರಿಯಾಗಿ ರುಬ್ಬಿ
- ಉದ್ದಿನ ಬೇಳೆ ರುಬ್ಬುವಾಗ ಮೆಂತೆ ಕೂಡ ಸೇರಿಸಿ ರುಬ್ಬಿ. ಅವಲಕ್ಕಿ ಕೂಡ ಸೇರಿಸಿ.
- ಈಗ ಎಲ್ಲಾ ಹಿಟ್ಟು ಚೆನ್ನಾಗಿ ಕಲೆಸಿ ಹುದುಗು ಬರಲು 8 ಗಂಟೆ ಇಡಿ.
- ನಂತರ ಇಡ್ಲಿ ಪಾತ್ರೆಗೆ ತುಪ್ಪ ಸವರಿ ಹಿಟ್ಟು ಹಾಕಿ 20 ನಿಮಿಷ ಬೇಯಿಸಿದರೆ ರುಚಿಯಾದ ರಾಗಿ ಇಡ್ಲಿ ರೆಡಿ.
ರಾಗಿ ಇಡ್ಲಿ ಮಧುಮೇಹಗಳಿಗೆ ಅತ್ಯುತ್ತುಮವಾದ
ಬ್ರೇಕ್ಫಾಸ್ಟ್
ಭಾರತದಲ್ಲಿ ಮಧುಮೆಹಿಗಳ ಸಮಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಬದಲಾಗುತ್ತಿರುವ ಜೀವನಶೈಲಿ , ಆಹಾರ ಶೈಲಿ ಮಧುಮೇಹ ಹೆಚ್ಚಳಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಸೋಂಕು, ದೃಷ್ಟಿದೋಷ, ಕಿಡ್ನಿ ವೈಫಲ್ಯ, ಹೃದಯ ಸಂಬಮಧಿ ಸಮಸ್ಯೆ, ಪಾರ್ಶ್ವವಾಯು ಸೇರಿಸಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.
- ರಾಗಿ ಮಧುಮೇಹ ನಿಯಂತ್ರಿಸುವ ಅತ್ಯುತ್ತಮವಾದ ಆಹಾರವಾಗಿದೆ. ರಾಗಿಯಲ್ಲಿ ಪಾಲಿಫೀನೋಲ್, ಕ್ಯಾಲ್ಸಿಯಂ, ಅಮೈನೋ ಆಮ್ಲ ಅಂಶವಿದೆ. ಹಾಗಾಗಿ ಅಕ್ಕಿ ಬದಲಿಗೆ ರಾಗಿ ಸೇವನೆ ತುಂಬಾ ಒಳ್ಳೆಯದು.
- ರಾಗಿಯಲ್ಲಿ ಗ್ಲುಟೀನ್ ಫ್ರೀ ಆದ್ದರಿಂದ ರಾಗಿಗಳಿಗೆ ತುಂಬಾ ಒಳ್ಳೆಯದು.
- ರಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ರಾಗಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications