Just In
Don't Miss
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ ರೆಸಿಪಿ
ಮಳೆಗಾಲದಲ್ಲಿ ಶೀತ, ಗಂಟಲು ಕೆರೆತ, ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಇಂಥ ಸಮಸ್ಯೆ ಕಂಡು ಬಂದರೆ ಅದಕ್ಕೆ ಕಷಾಯ ಮಾಡಿ ಕುಡಿದರೆ ಆರಾಮ ಅನಿಸುವುದು. ಅಲ್ಲದೆ ಈ ರೀತಿಯ ಕಷಾಯ ಎರಡು ವರ್ಷದ ಮೇಲಿನ ಮಕ್ಕಳಿಗೂ ಮಾಡಿ ಕೊಡಬಹುದು. ಇನ್ನು ಕೆಮ್ಮು, ಶೀತ ಏನೂ ಇಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿ ಈ ರೀತಿ ಕಷಾಯ ಮಾಡಿ ಕುಡಿದರೆ ದೇಹ ಬೆಚ್ಚಗೆ ಇರುತ್ತದೆ.
ಕಷಾಯವನ್ನು ಹಲವು ಬಗೆಯಲ್ಲಿ ಮಾಡಬಹುದು, ಇಲ್ಲಿ ತುಳಸಿ ಹಾಕಿ ಮಾಡುವ ಕಷಾಯ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Drinks
Serves: 2
-
ಬೇಕಾಗುವ ಸಾಮಗ್ರಿ
2 ಕಪ್ ನೀರು
1 ತುಳಸಿ
1/2 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಕಲ್ಲು ಸಕ್ಕರೆ (1 ತುಂಡು)
-
ಮಾಡುವುದು ಹೇಗೆ?
* ಈ ಕಷಾಯ ಮಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿ ರೆಡಿಯಾಗಿ ಇಟ್ಟುಕೊಳ್ಳಿ.
*ಈಗ ಪಾತ್ರೆಗೆ ತುಳಸಿ ಎಲೆ ಹಾಕಿ ಕುದಿಸಿ.
* ತುಳಸಿ ಹಾಕಿದಾಗ ನೀರಿನ ಬಣ್ಣ ಬದಲಾದಾಗ ಅದಕ್ಕೆ ಶುಂಠಿ ಪುಡಿ (ಜಜ್ಜಿದ ಶುಂಠಿ), ಕಾಳು ಮೆಣಸಿನ ಪುಡಿ, ಕಲ್ಲು ಸಕಕ್ರೆ ಹಾಕಿ ಚೆನ್ನಾಗಿ ಕುದಿಸಿ.
* ನಂತರ ಸೋಸಿ ಬಿಸಿ ಬಿಸಿ ಕಷಾಯ ಕುಡಿಯಿರಿ.
ದಿನದಲ್ಲಿ ಮೂರು ಬಾರಿ ಈ ಕಷಾಯ ಕುಡಿದರೆ ಗಂಟಲು ಕೆರೆತ, ಕೆಮ್ಮು, ಶೀತ ಇವು ಕಡಿಮೆಯಾಗಿ ಆರಾಮ ಅನಿಸುವುದು.
- ನೀವು ಬೇಕಿದ್ದರೆ ಈ ಕಷಾಯಕ್ಕೆ ಕಲ್ಲು ಸಕ್ಕರೆ ಬದಲಿಗೆ ಸ್ವಲ್ಪ ಜೇನು ಸೇರಿಸಿಯೂ ಕುಡಿಯಬಹುದು.