Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ ರೆಸಿಪಿ
ಮಳೆಗಾಲದಲ್ಲಿ ಶೀತ, ಗಂಟಲು ಕೆರೆತ, ಕೆಮ್ಮು ಈ ರೀತಿಯ ಸಮಸ್ಯೆಗಳು ಕಂಡು ಬರುವುದು ಸಹಜ. ಇಂಥ ಸಮಸ್ಯೆ ಕಂಡು ಬಂದರೆ ಅದಕ್ಕೆ ಕಷಾಯ ಮಾಡಿ ಕುಡಿದರೆ ಆರಾಮ ಅನಿಸುವುದು. ಅಲ್ಲದೆ ಈ ರೀತಿಯ ಕಷಾಯ ಎರಡು ವರ್ಷದ ಮೇಲಿನ ಮಕ್ಕಳಿಗೂ ಮಾಡಿ ಕೊಡಬಹುದು. ಇನ್ನು ಕೆಮ್ಮು, ಶೀತ ಏನೂ ಇಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿ ಈ ರೀತಿ ಕಷಾಯ ಮಾಡಿ ಕುಡಿದರೆ ದೇಹ ಬೆಚ್ಚಗೆ ಇರುತ್ತದೆ.

ಕಷಾಯವನ್ನು ಹಲವು ಬಗೆಯಲ್ಲಿ ಮಾಡಬಹುದು, ಇಲ್ಲಿ ತುಳಸಿ ಹಾಕಿ ಮಾಡುವ ಕಷಾಯ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Drinks
Serves: 2
-
ಬೇಕಾಗುವ ಸಾಮಗ್ರಿ
2 ಕಪ್ ನೀರು
1 ತುಳಸಿ
1/2 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಕಲ್ಲು ಸಕ್ಕರೆ (1 ತುಂಡು)
-
ಮಾಡುವುದು ಹೇಗೆ?
* ಈ ಕಷಾಯ ಮಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿ ರೆಡಿಯಾಗಿ ಇಟ್ಟುಕೊಳ್ಳಿ.
*ಈಗ ಪಾತ್ರೆಗೆ ತುಳಸಿ ಎಲೆ ಹಾಕಿ ಕುದಿಸಿ.
* ತುಳಸಿ ಹಾಕಿದಾಗ ನೀರಿನ ಬಣ್ಣ ಬದಲಾದಾಗ ಅದಕ್ಕೆ ಶುಂಠಿ ಪುಡಿ (ಜಜ್ಜಿದ ಶುಂಠಿ), ಕಾಳು ಮೆಣಸಿನ ಪುಡಿ, ಕಲ್ಲು ಸಕಕ್ರೆ ಹಾಕಿ ಚೆನ್ನಾಗಿ ಕುದಿಸಿ.
* ನಂತರ ಸೋಸಿ ಬಿಸಿ ಬಿಸಿ ಕಷಾಯ ಕುಡಿಯಿರಿ.
ದಿನದಲ್ಲಿ ಮೂರು ಬಾರಿ ಈ ಕಷಾಯ ಕುಡಿದರೆ ಗಂಟಲು ಕೆರೆತ, ಕೆಮ್ಮು, ಶೀತ ಇವು ಕಡಿಮೆಯಾಗಿ ಆರಾಮ ಅನಿಸುವುದು.
- ನೀವು ಬೇಕಿದ್ದರೆ ಈ ಕಷಾಯಕ್ಕೆ ಕಲ್ಲು ಸಕ್ಕರೆ ಬದಲಿಗೆ ಸ್ವಲ್ಪ ಜೇನು ಸೇರಿಸಿಯೂ ಕುಡಿಯಬಹುದು.



Click it and Unblock the Notifications