Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾರಿ ಅಥವಾ ಗ್ರೇವಿಗೆ ಉಪ್ಪು ಹೆಚ್ಚಾದರೆ ಉಪ್ಪಿನಂಶ ಕಡಿಮೆ ಮಾಡಲು 7 ಟಿಪ್ಸ್
ಉಪ್ಪಿಲ್ಲದ ಆಹಾರ ರುಚಿಸುವುದಿಲ್ಲ, ಆದರೆ ಉಪ್ಪು ಹೆಚ್ಚಾದ ಆಹಾರ ಕೂಡ ಬಾಯಿಗೆ ಇಡಲು ಸಾಧ್ಯವಿಲ್ಲ. ಅಡುಗೆ ಕಲಿಯುತ್ತಿರುವವರೆಗೆ ಮಾತ್ರವಲ್ಲ, ಕೆಲವೊಮ್ಮೆ ಚೆನ್ನಾಗಿ ಅಡುಗೆ ಬರುವವರೆಗೂ ಕೈ ತಪ್ಪಿ ಉಪ್ಪು ಅಧಿಕವಾಗುವುದುಂಟು. ಉಪ್ಪು ಹೆಚ್ಚಾಯ್ತು ಎಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವೇ ಬದಲಿಗೆ ಈ ಟ್ರಿಕ್ಸ್ ಬಳಸಿ ಉಪ್ಪು ಕಡಿಮೆಯಾಗುವುದು:

ಸಾರು, ಗ್ರೇವಿಗೆ ಹಸಿ ಆಲೂಗಡ್ಡೆ ಹಾಕಿರಿ
ನೀವು ಒಂದು ಆಲೂಗಡ್ಡೆ ಸಿಪ್ಪೆ ಸುಲಿದು ತೊಳೆದು ಕತ್ತರಿಸಿ ಗ್ರೇವಿ ಅಥವಾ ಸಾರಿಗೆ ಹಾಕಿ, ಆಲೂಗಡ್ಡೆ ಅಧಿಕ ಉಪ್ಪಿನಂಶ ಹೀರಿಕೊಳ್ಳುತ್ತದೆ. ಇದರಿಂದ ಸ್ವಲ್ಪ ಹೊತ್ತಿನ ಬಳಿಕ ನೀವು ಸಾರಿನ ಟೇಸ್ಟ್ ನೋಡಿದರೆ ಉಪ್ಪು ಸರಿಯಾಗಿರುತ್ತದೆ.
ಅನ್ನದ ಉಂಡೆ
ನೀವು ಅನ್ನದ ಚಿಕ್ಕ ಚಿಕ್ಕ ಉಂಡೆ ಮಾಡಿ ಸಾರಿಗೆ ಹಾಕಿ, ಬೇಗನೆ ಉಪ್ಪಿನಂಶ ಹೀರಿಕೊಳ್ಳುತ್ತದೆ. ಆದರೆ ಅನ್ನದ ಉಂಡೆ ಗಟ್ಟಿಯಾಗಿ ಮಾಡಿ ಇಲ್ಲದಿದ್ದರೆ ಅನ್ನ ಬಿಡಿ ಬಿಡಿಯಾಗಿ ಸಾರು ಹೋಗಿ ಕಿಚಡಿಯಾಗುವುದು, ನಂತರ ಉಪ್ಪಿನಂಶ ಕಡಿಮೆಯಾದಾಗ ಅನ್ನದ ಉಂಡೆಯನ್ನು ಹೊರ ತೆಗೆದು ಗ್ರೇವಿ ಸರ್ವ್ ಮಾಡಿ.
ಮೊಸರು
ನೀವು ಸ್ವಲ್ಪ ಮೊಸರನ್ನು ಸಾರಿಗೆ ಸೇರಿಸಿದರೆ ಉಪ್ಪಿನಂಶ ಕಡಿಮೆಯಾಗುವುದು, ಅಲ್ಲದೆ ಗ್ರೇವಿ ಟೇಸ್ಟ್ ಕೂಡ ಸೂಪರ್ ಆಗಿರುತ್ತದೆ.
ಫ್ರೆಷ್ ಕ್ರೀಮ್
ನೀವು ಗ್ರೇವಿ, ಸಾರಿಗೆ ಉಪ್ಪಿನಂಶ ಅಧಿಕವಾದಾಗ ಸ್ವಲ್ಪ ಫ್ರೆಷ್ ಕ್ರೀಮ್ ಸೇರಿಸಿದರೆ ಸಾಕು ಉಪ್ಪಿನಂಶ ಕಡಿಮೆಯಾಗುವುದು.
ಹಾಲು
ನಾನ್ವೆಜ್ ಸಾರಾದರೆ ಅಥವಾ ವೆಜ್ ಕುರ್ಮಾವಾದರೆ ಸ್ವಲ್ಪ ಹಾಲು ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು, ಸಾರಿನ ರುಚಿ ಕೂಡ ಹೆಚ್ಚಾಗುವುದು.
ಈರುಳ್ಳಿ
ನೀವು ಸಾರಿಗೆ ಸ್ವಲ್ಪ ಈರುಳ್ಳಿ ಕತ್ತರಿಸಿ ಹಾಕಿ ಅಥವಾ ಹಸಿ ತಿನ್ನಲು ಇಷ್ಟವಿಲ್ಲ ಎಂದರೆ ಈರುಳ್ಳಿಯನ್ನು ಫ್ರೈ ಮಾಡಿ ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು.
ವಿನೆಗರ್ ಮತ್ತು ಸಕ್ಕರೆ
ನೀವು ಸಾರು ಅಥವಾ ಗ್ರೇವಿಗೆ 1 ಚಮಚ ವಿನೆಗರ್ ಮತ್ತು ಸಕ್ಕರೆ ಸೇರಿಸಿ. ಇವೆರಡರ ಕಾಂಬಿನೇಷನ್ ಉಪ್ಪಿನಂಶ ಕಡಿಮೆ ಮಾಡುತ್ತದೆ, ಸಾರು ಹುಳಿಯಾಗಿಸುವುದಿಲ್ಲ.
ಈಗಷ್ಟೇ ಅಡುಗೆ ಕಲಿಯುತ್ತಿರುವವರೆಗೆ ಸಲಹೆ
- ನೀವು ಈಗಷ್ಟೇ ಅಡುಗೆ ಕಲಿಯುತ್ತಿದ್ದೀರಿ ಎಂದಾದರೆ ನೀವು ಮೊದಲಿಗೆ ತುಂಬಾ ಉಪ್ಪು ಹಾಕಬೇಡಿ. ಒಂದು ಸ್ವಲ್ಪ ಉಪ್ಪು ಹಾಕಿ , ಒಂದು 1/4 ಚಮಚ ಹಾಕಿ ನಂತರ ರುಚಿ ನೀಡಿ ಮತ್ತೆ ಸ್ವಲ್ಪ ಸೇರಿಸಿ. ಈ ರೀತಿ ರುಚಿ ನೋಡಿ ಸೇರಿಸಿದಾಗ ಉಪ್ಪು ಹೆಚ್ಚಾಗುವುದಿಲ್ಲ.
- ಇನ್ನು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಸುವುದಾದರೂ ಅದರ ಹದ ಭಿನ್ನವಾಗಿರುತ್ತದೆ
- ನೀವು ಒಂದು ಚಮಚ ಕಲ್ಲುಪ್ಪು ಬಳಸಿದರೆ ಪುಡಿ ಬಳಸುವಾಗ ಕಡಿಮೆ ಬಳಸಬೇಕು, ಈ ರೀತಿಯ ಅಂಶಗಳ ಕಡಿಮೆ ನೀಡಿದರೆ ಅಡುಗೆ ಮಾಡುವುದು ದೊಡಡ್ ವಿಷಯವಲ್ಲ.
- ಇನ್ನು ತರಕಾರಿ ಬೇಯಸಿಉವಾಗ ಉಪ್ಪು ಸೇರಿಸಿ, ಕೊನೆಗೆ ಉಪ್ಪು ಸೇರಿಸಿದರೆ ಗ್ರೇವಿಗೆ ಉಪ್ಪು ಇರುತ್ತದೆ, ಆದರೆ ತರಕಾರಿ ಸಪ್ಪೆ ಸಪ್ಪೆ ಅನಿಸುವುದು.
- ಇನ್ನು ನೀವು ಉಪ್ಪನ್ನು ಹಾಕಲು ಒಂದೇ ಸ್ಪೂನ್ ಬಳಸಿ, ಇಲ್ಲದಿದ್ದರೆ ನಿಮಗೆ ಹದ ಮಿಸ್ ಆಗಬಹುದು.
- ಇನ್ನು ಸಾರಿನ ಪ್ರಮಾಣ ಹೆಚ್ಚಾದಾಗ ಬಳಸಿರುವುದಕ್ಕಿಂತ ಸ್ವಲ್ಪ ಉಪ್ಪು ಹೆಚ್ಚು ಬಳಸಿ, ಒಂದೇ ಬಾರಿ ಹೆಚ್ಚು ಉಪ್ಪು ಹಾಕಲು ಹೋಗಬೇಡಿ.



Click it and Unblock the Notifications