Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಾರಿ ಅಥವಾ ಗ್ರೇವಿಗೆ ಉಪ್ಪು ಹೆಚ್ಚಾದರೆ ಉಪ್ಪಿನಂಶ ಕಡಿಮೆ ಮಾಡಲು 7 ಟಿಪ್ಸ್
ಉಪ್ಪಿಲ್ಲದ ಆಹಾರ ರುಚಿಸುವುದಿಲ್ಲ, ಆದರೆ ಉಪ್ಪು ಹೆಚ್ಚಾದ ಆಹಾರ ಕೂಡ ಬಾಯಿಗೆ ಇಡಲು ಸಾಧ್ಯವಿಲ್ಲ. ಅಡುಗೆ ಕಲಿಯುತ್ತಿರುವವರೆಗೆ ಮಾತ್ರವಲ್ಲ, ಕೆಲವೊಮ್ಮೆ ಚೆನ್ನಾಗಿ ಅಡುಗೆ ಬರುವವರೆಗೂ ಕೈ ತಪ್ಪಿ ಉಪ್ಪು ಅಧಿಕವಾಗುವುದುಂಟು. ಉಪ್ಪು ಹೆಚ್ಚಾಯ್ತು ಎಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವೇ ಬದಲಿಗೆ ಈ ಟ್ರಿಕ್ಸ್ ಬಳಸಿ ಉಪ್ಪು ಕಡಿಮೆಯಾಗುವುದು:

ಸಾರು, ಗ್ರೇವಿಗೆ ಹಸಿ ಆಲೂಗಡ್ಡೆ ಹಾಕಿರಿ
ನೀವು ಒಂದು ಆಲೂಗಡ್ಡೆ ಸಿಪ್ಪೆ ಸುಲಿದು ತೊಳೆದು ಕತ್ತರಿಸಿ ಗ್ರೇವಿ ಅಥವಾ ಸಾರಿಗೆ ಹಾಕಿ, ಆಲೂಗಡ್ಡೆ ಅಧಿಕ ಉಪ್ಪಿನಂಶ ಹೀರಿಕೊಳ್ಳುತ್ತದೆ. ಇದರಿಂದ ಸ್ವಲ್ಪ ಹೊತ್ತಿನ ಬಳಿಕ ನೀವು ಸಾರಿನ ಟೇಸ್ಟ್ ನೋಡಿದರೆ ಉಪ್ಪು ಸರಿಯಾಗಿರುತ್ತದೆ.
ಅನ್ನದ ಉಂಡೆ
ನೀವು ಅನ್ನದ ಚಿಕ್ಕ ಚಿಕ್ಕ ಉಂಡೆ ಮಾಡಿ ಸಾರಿಗೆ ಹಾಕಿ, ಬೇಗನೆ ಉಪ್ಪಿನಂಶ ಹೀರಿಕೊಳ್ಳುತ್ತದೆ. ಆದರೆ ಅನ್ನದ ಉಂಡೆ ಗಟ್ಟಿಯಾಗಿ ಮಾಡಿ ಇಲ್ಲದಿದ್ದರೆ ಅನ್ನ ಬಿಡಿ ಬಿಡಿಯಾಗಿ ಸಾರು ಹೋಗಿ ಕಿಚಡಿಯಾಗುವುದು, ನಂತರ ಉಪ್ಪಿನಂಶ ಕಡಿಮೆಯಾದಾಗ ಅನ್ನದ ಉಂಡೆಯನ್ನು ಹೊರ ತೆಗೆದು ಗ್ರೇವಿ ಸರ್ವ್ ಮಾಡಿ.
ಮೊಸರು
ನೀವು ಸ್ವಲ್ಪ ಮೊಸರನ್ನು ಸಾರಿಗೆ ಸೇರಿಸಿದರೆ ಉಪ್ಪಿನಂಶ ಕಡಿಮೆಯಾಗುವುದು, ಅಲ್ಲದೆ ಗ್ರೇವಿ ಟೇಸ್ಟ್ ಕೂಡ ಸೂಪರ್ ಆಗಿರುತ್ತದೆ.
ಫ್ರೆಷ್ ಕ್ರೀಮ್
ನೀವು ಗ್ರೇವಿ, ಸಾರಿಗೆ ಉಪ್ಪಿನಂಶ ಅಧಿಕವಾದಾಗ ಸ್ವಲ್ಪ ಫ್ರೆಷ್ ಕ್ರೀಮ್ ಸೇರಿಸಿದರೆ ಸಾಕು ಉಪ್ಪಿನಂಶ ಕಡಿಮೆಯಾಗುವುದು.
ಹಾಲು
ನಾನ್ವೆಜ್ ಸಾರಾದರೆ ಅಥವಾ ವೆಜ್ ಕುರ್ಮಾವಾದರೆ ಸ್ವಲ್ಪ ಹಾಲು ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು, ಸಾರಿನ ರುಚಿ ಕೂಡ ಹೆಚ್ಚಾಗುವುದು.
ಈರುಳ್ಳಿ
ನೀವು ಸಾರಿಗೆ ಸ್ವಲ್ಪ ಈರುಳ್ಳಿ ಕತ್ತರಿಸಿ ಹಾಕಿ ಅಥವಾ ಹಸಿ ತಿನ್ನಲು ಇಷ್ಟವಿಲ್ಲ ಎಂದರೆ ಈರುಳ್ಳಿಯನ್ನು ಫ್ರೈ ಮಾಡಿ ಸೇರಿಸಿ ಉಪ್ಪಿನಂಶ ಕಡಿಮೆಯಾಗುವುದು.
ವಿನೆಗರ್ ಮತ್ತು ಸಕ್ಕರೆ
ನೀವು ಸಾರು ಅಥವಾ ಗ್ರೇವಿಗೆ 1 ಚಮಚ ವಿನೆಗರ್ ಮತ್ತು ಸಕ್ಕರೆ ಸೇರಿಸಿ. ಇವೆರಡರ ಕಾಂಬಿನೇಷನ್ ಉಪ್ಪಿನಂಶ ಕಡಿಮೆ ಮಾಡುತ್ತದೆ, ಸಾರು ಹುಳಿಯಾಗಿಸುವುದಿಲ್ಲ.
ಈಗಷ್ಟೇ ಅಡುಗೆ ಕಲಿಯುತ್ತಿರುವವರೆಗೆ ಸಲಹೆ
- ನೀವು ಈಗಷ್ಟೇ ಅಡುಗೆ ಕಲಿಯುತ್ತಿದ್ದೀರಿ ಎಂದಾದರೆ ನೀವು ಮೊದಲಿಗೆ ತುಂಬಾ ಉಪ್ಪು ಹಾಕಬೇಡಿ. ಒಂದು ಸ್ವಲ್ಪ ಉಪ್ಪು ಹಾಕಿ , ಒಂದು 1/4 ಚಮಚ ಹಾಕಿ ನಂತರ ರುಚಿ ನೀಡಿ ಮತ್ತೆ ಸ್ವಲ್ಪ ಸೇರಿಸಿ. ಈ ರೀತಿ ರುಚಿ ನೋಡಿ ಸೇರಿಸಿದಾಗ ಉಪ್ಪು ಹೆಚ್ಚಾಗುವುದಿಲ್ಲ.
- ಇನ್ನು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಸುವುದಾದರೂ ಅದರ ಹದ ಭಿನ್ನವಾಗಿರುತ್ತದೆ
- ನೀವು ಒಂದು ಚಮಚ ಕಲ್ಲುಪ್ಪು ಬಳಸಿದರೆ ಪುಡಿ ಬಳಸುವಾಗ ಕಡಿಮೆ ಬಳಸಬೇಕು, ಈ ರೀತಿಯ ಅಂಶಗಳ ಕಡಿಮೆ ನೀಡಿದರೆ ಅಡುಗೆ ಮಾಡುವುದು ದೊಡಡ್ ವಿಷಯವಲ್ಲ.
- ಇನ್ನು ತರಕಾರಿ ಬೇಯಸಿಉವಾಗ ಉಪ್ಪು ಸೇರಿಸಿ, ಕೊನೆಗೆ ಉಪ್ಪು ಸೇರಿಸಿದರೆ ಗ್ರೇವಿಗೆ ಉಪ್ಪು ಇರುತ್ತದೆ, ಆದರೆ ತರಕಾರಿ ಸಪ್ಪೆ ಸಪ್ಪೆ ಅನಿಸುವುದು.
- ಇನ್ನು ನೀವು ಉಪ್ಪನ್ನು ಹಾಕಲು ಒಂದೇ ಸ್ಪೂನ್ ಬಳಸಿ, ಇಲ್ಲದಿದ್ದರೆ ನಿಮಗೆ ಹದ ಮಿಸ್ ಆಗಬಹುದು.
- ಇನ್ನು ಸಾರಿನ ಪ್ರಮಾಣ ಹೆಚ್ಚಾದಾಗ ಬಳಸಿರುವುದಕ್ಕಿಂತ ಸ್ವಲ್ಪ ಉಪ್ಪು ಹೆಚ್ಚು ಬಳಸಿ, ಒಂದೇ ಬಾರಿ ಹೆಚ್ಚು ಉಪ್ಪು ಹಾಕಲು ಹೋಗಬೇಡಿ.



Click it and Unblock the Notifications
