Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅಯ್ಯಪ್ಪಸ್ವಾಮಿ ಪೂಜೆಗೆ ಅರವಣ ಪಾಯಸ ಮಾಡುವುದು ಹೇಗೆ?
ಜನವರಿ 14ಕ್ಕೆ ಮಕರವಿಳಕ್ಕು, ಈ ದಿನ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ನಕ್ಷತ್ರ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುವುದು ನಂಬಿಕೆ, ಅದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು ಈ ಮಕರವಿಳಕ್ಕು ದರ್ಶನ ಪಡೆಯಲೆಂದೇ ಲಕ್ಷಾಂತರ ಭಕ್ತರು ಕಠಿಣ ವ್ರತ ನಿಯಮ ಪಾಲಿಸಿ ಕೇರಳದ ಶಬರಿಮಲೆಗೆ ಭೇಟಿ ನೀಡುತ್ತಾರೆ.
ಜನವರಿ ಮಾಸವೆಂದರೆ ಅಯ್ಯಪ್ಪಸ್ವಾಮಿ ಪೂಜೆಯ ಸಮಯ. ಭಜನೆ, ಕಟ್ಟು ತುಂಬಿಸಿ ಹೋಗುವುದು ಹೀಗೆ ಧಾರ್ಮಿಕ ಪೂಜೆಗಳು ನಡೆಯುತ್ತಿರುತ್ತದೆ. ಈ ಪೂಜೆಯಲ್ಲಿ ನೀವು ಅರವಣ ಪಾಯಸ ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು.

ಅರವಣ ಪಾಯಸವೆಂಬುವುದು ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದೊರೆಯುವ ವಿಶೇಷ ಪ್ರಸಾದವಾಗಿದೆ.ಇದೇ ರುಚಿಯಲ್ಲಿ ಮನೆಯಲ್ಲಿ ನಡೆಸುವ ಅಯ್ಯಪ್ಪಸ್ವಾಮಿ ಪೂಜೆಯಲ್ಲಿಯೂ ಪಾಯಸ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ:
1 ಕಪ್ ಮಟ್ಟಾರೈಸ್
1 ಕಪ್ ತುಪ್ಪ2 ಕಪ್ ನೀರು
ಸ್ವಲ್ಪ ತೆಂಗಿನಕಾಯಿ ತುಂಡು(ಒಂದು ತೆಂಗಿನಕಾಯಿಯ ತುಂಡು)
ಬೆಲ್ಲ 1 ಕಪ್
ಒಣ ಶುಂಠಿ (ಪುಡಿ ಮಾಡಿದ್ದು 1/4 ಚಮಚ)
4-5 ಏಲಕ್ಕಿ
ನೀರು 3 ಕಪ್
ಅರವಣ ಪಾಯಸ ಮಾಡುವುದು ಹೇಗೆ?
- ನೀವು ಈ ಪಾಯಸ ಮಾಡಲು ಉರುಳಿ ಬಳಸಿ (ದಪ್ಪ ತಳವಿರುವ ಪಾತ್ರೆ)
- ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ತುಪ್ಪದಲ್ಲಿ ತೆಂಗಿಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ತೆಗೆದು ತಟ್ಟೆಯಲ್ಲಿ ಹಾಕಿಡಿ.
- ಈಗ ಅದೇ ತುಪ್ಪಕ್ಕೆ ಮತ್ತಷ್ಟು ತುಪ್ಪ ಸೇರಿಸಿ ಅದರಲ್ಲಿ ಮಟ್ಟಾ ರೈಸ್ ಹಾಕಿ ಫ್ರೈ ಮಾಡಿ, ನಂತರ 3 ಕಪ್ ನೀರು ಸೇರಿಸಿ ಬೇಯಿಸಿ
- ಈಗ ಬೆಲ್ಲವನ್ನು ಸೇರಿಸಿ ( ಬೆಲ್ಲ ತುರಿದು ಅಥವಾ ಪುಡಿ ಮಾಡಿ ಸೇರಿಸಿ)
- ಏಲಕ್ಕಿ ಸೇರಿಸಿ
- ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಆಗ ಸೌಟ್ನಿಂದ ಆಡಿಸುತ್ತಾ ಇರಿ.
- ಪಾಯಸ ಸ್ವಲ್ಪ ಮಂದವಾಗುವಾಗ ಉರಿಯಿಂದ ಇಳಿಸಿ ದೇವರಿಗೆ ನೈವೇದ್ಯವಿಟ್ಟು ನಂತರ ಸರ್ವ್ ಮಾಡಿ.
- ತಾಮ್ರದ ಕಡಾಯಿಯಲ್ಲಿ ಮಾಡಿದರೆ ಇನ್ನೂ ರುಚಿ, ಪಾಯಸದ ಸ್ವಾದ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications
