Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಶ್ರಾವಣ ಉಪವಾಸ ಮಾಡುವವರೆಗೆ ಸಾಬುದಾನ ಪಡ್ಡು ರೆಸಿಪಿ
ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಉಪವಾಸ ಮಾಡುತ್ತಾರೆ. ಶ್ರಾವಣದಲ್ಲಿ ಉಪವಾಸವಿದ್ದಾಗ ವ್ರತ ನಿಯಮದ ಪ್ರಕಾರ ಆಹಾರ ದಸೇವಿಸಬೇಕು. ಈ ಮಾಸದಲ್ಲಿ ಈರುಳ್ಳಿ- ಬೆಳ್ಳುಳ್ಳಿ ಬಳಸುವಂತಿಲ್ಲ, ಅಲ್ಲದೆ ಶ್ರಾವಣ ಮಾಸದ ಉಪವಾಸದ ದಿನಗಳಲ್ಲಿ ಸವಿಯಲು ಸಾಬುದಾನ-ಆಲೂ ಪಡ್ಡು ರೆಸಿಪಿ ನೀಡಿದ್ದೇವೆ.
ಇದು ತುಂಬಾ ರುಚಿಯಾಗಿರುತ್ತದೆ, ಅಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದು ಉಪವಾಸದ ಸಮಯದಲ್ಲಿ ಸುಸ್ತಾಗುವುದನ್ನು ತಡೆಗಟ್ಟುತ್ತದೆ, ದೇಹಕ್ಕೆ ಶಕ್ತಿ ತುಂಬುವುದು. ಬನ್ನಿ ಈ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ನೆನೆ ಹಾಕಿದ ಸಾಬುದಾನ
4 ಬೇಯಿಸಿದ ಆಲೂಗಡ್ಡೆ
1/2 ಚಮಚ ರೋಸ್ಟ್ ಮಾಡಿದ ಪುಡಿ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು), ಹಸಿ ಮೆಣಸಿನ ಪೇಸ್ಟ್ 1 ಚಮಚ
2 ಚಮಚ ನೆಲಗಡಲೆ ಪುಡಿ
ಉಪ್ಪು (ಉಪವಾಸ ಸಮಯದಲ್ಲಿ ಬ್ಲ್ಯಾಕ್ ಸಾಲ್ಟ್ ಬಳಸಿ)
1 ಚಮಚ ಎಣ್ಣೆ
ಮಾಡುವ ವಿಧಾನ
ಸಾಬುದಾನವನ್ನು 2-3 ಗಂಟೆ ನೆನೆಹಾಕಿ.
ಆಲೂಗಡ್ಡೆಯನ್ನು ಮ್ಯಾಶ್ ಮಾಡಿ.
ನಂತರ ಮ್ಯಾಶ್ ಮಾಡಿದ ಆಲೂಗಡ್ಡೆಗೆ ಸಾಬುದಾನ, 1/2 ಚಮಚ ರೋಸ್ಟ್ ಮಾಡಿದ ಜೀರಿಗೆ
ಪುಡಿ, ಸುಂಟಿ, ಹಸಿ ಮೆಣಸಿನ ಪೇಸ್ಟ್, 2 ಚಮಚ ನೆಲಗಡಲೆ ಪುಡಿ ಮತ್ತು ಉಪ್ಪು ಹಾಕಿ
ಮಿಕ್ಸ್ ಮಾಡಿ, ವಡೆ ರೀತಿ ಮಾಡಿ.
ಪ್ಯಾನ್ ಬಿಸಿ ಮಾಡಿ ಅದರಲ್ಲಿ ತಟ್ಟಿದ ವಡೆ ಹಾಕಿ ಎರಡೂ ಬದಿ ಕಂದು ಬಣ್ಣಕ್ಕೆ
ಬರುವವರೆಗೆ ರೋಸ್ಟ್ ಮಾಡಿ.
ರುಚಿ ರುಚಿಯಾದ ಸಾಬುದಾನ ವಡೆ ಅಥವಾ ಪಡ್ಡು ರೆಡಿ(ನೀವು ಪಡ್ಡು ತವಾದದಲ್ಲಿ ಬೇಯಸಿದರೆ ಅದರೊಳಗಡೆ ಕೂಡ ಚೆನ್ನಾಗಿ ರೋಸ್ಟ್ ಆಗಿರುತ್ತದೆ.
ಶ್ರಾವಣ ಮಾಸದ ಉಪವಾಸದ ಪ್ರಯೋಜನಗಳು
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವುದರಿಂದ ಧಾರ್ಮಿಕವಾಗಿ ಮಾತ್ರವಲ್ಲ ಆರೋಗ್ಯದ
ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸವಿದ್ದು ದೇವರ ಆರೋಗ್ಯವನ್ನು ಮಾಡುವುದರಿಂದ
ನಮ್ಮ ಆರೋಗ್ಯ ಉತ್ತಮವಾಗುತ್ತದೆ ಅಲ್ಲದೆ ದೇವರ ಆರಾಧನೆ ಕಡೆಗೆ
ಗಮನಹರಿಸಬಹುದು.
ಶ್ರಾವಣ ಉಪವಾಸ ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ, ಈ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಅಲ್ಲದೆ ವಾರದಲ್ಲಿ ಕೆಲ ದಿನಗಳು ಉಪವಾಸ ಮಾಡುವುದರಿಂದ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿ.
ಶ್ರಾವಣ ಮಾಸದ ಆಹಾರಕ್ರಮ ಹೇಗಿರಬೇಕು?ಈ ಅವಧಿಯಲ್ಲಿ ಹಸಿ ತರಕಾರಿ, ಹಣ್ಣುಗಳು, ಲಘ ಆಹಾರವನ್ನು ಸೇವಿಸಬೇಕು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಈ ಅವಧಿಯಲ್ಲಿ ಸಾಬುದಾನ, ಗೋಧಿ ಈ ಬಗೆಯ ವಸ್ತುಗಳನ್ನು ಬಳಸಿ ಆಹಾರ ಮಾಡಿ ಸೇವಿಸಬಹುದು.



Click it and Unblock the Notifications