Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಶ್ರಾವಣ ಉಪವಾಸ ಮಾಡುವವರೆಗೆ ಸಾಬುದಾನ ಪಡ್ಡು ರೆಸಿಪಿ
ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಉಪವಾಸ ಮಾಡುತ್ತಾರೆ. ಶ್ರಾವಣದಲ್ಲಿ ಉಪವಾಸವಿದ್ದಾಗ ವ್ರತ ನಿಯಮದ ಪ್ರಕಾರ ಆಹಾರ ದಸೇವಿಸಬೇಕು. ಈ ಮಾಸದಲ್ಲಿ ಈರುಳ್ಳಿ- ಬೆಳ್ಳುಳ್ಳಿ ಬಳಸುವಂತಿಲ್ಲ, ಅಲ್ಲದೆ ಶ್ರಾವಣ ಮಾಸದ ಉಪವಾಸದ ದಿನಗಳಲ್ಲಿ ಸವಿಯಲು ಸಾಬುದಾನ-ಆಲೂ ಪಡ್ಡು ರೆಸಿಪಿ ನೀಡಿದ್ದೇವೆ.
ಇದು ತುಂಬಾ ರುಚಿಯಾಗಿರುತ್ತದೆ, ಅಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದು ಉಪವಾಸದ ಸಮಯದಲ್ಲಿ ಸುಸ್ತಾಗುವುದನ್ನು ತಡೆಗಟ್ಟುತ್ತದೆ, ದೇಹಕ್ಕೆ ಶಕ್ತಿ ತುಂಬುವುದು. ಬನ್ನಿ ಈ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ನೆನೆ ಹಾಕಿದ ಸಾಬುದಾನ
4 ಬೇಯಿಸಿದ ಆಲೂಗಡ್ಡೆ
1/2 ಚಮಚ ರೋಸ್ಟ್ ಮಾಡಿದ ಪುಡಿ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು), ಹಸಿ ಮೆಣಸಿನ ಪೇಸ್ಟ್ 1 ಚಮಚ
2 ಚಮಚ ನೆಲಗಡಲೆ ಪುಡಿ
ಉಪ್ಪು (ಉಪವಾಸ ಸಮಯದಲ್ಲಿ ಬ್ಲ್ಯಾಕ್ ಸಾಲ್ಟ್ ಬಳಸಿ)
1 ಚಮಚ ಎಣ್ಣೆ
ಮಾಡುವ ವಿಧಾನ
ಸಾಬುದಾನವನ್ನು 2-3 ಗಂಟೆ ನೆನೆಹಾಕಿ.
ಆಲೂಗಡ್ಡೆಯನ್ನು ಮ್ಯಾಶ್ ಮಾಡಿ.
ನಂತರ ಮ್ಯಾಶ್ ಮಾಡಿದ ಆಲೂಗಡ್ಡೆಗೆ ಸಾಬುದಾನ, 1/2 ಚಮಚ ರೋಸ್ಟ್ ಮಾಡಿದ ಜೀರಿಗೆ
ಪುಡಿ, ಸುಂಟಿ, ಹಸಿ ಮೆಣಸಿನ ಪೇಸ್ಟ್, 2 ಚಮಚ ನೆಲಗಡಲೆ ಪುಡಿ ಮತ್ತು ಉಪ್ಪು ಹಾಕಿ
ಮಿಕ್ಸ್ ಮಾಡಿ, ವಡೆ ರೀತಿ ಮಾಡಿ.
ಪ್ಯಾನ್ ಬಿಸಿ ಮಾಡಿ ಅದರಲ್ಲಿ ತಟ್ಟಿದ ವಡೆ ಹಾಕಿ ಎರಡೂ ಬದಿ ಕಂದು ಬಣ್ಣಕ್ಕೆ
ಬರುವವರೆಗೆ ರೋಸ್ಟ್ ಮಾಡಿ.
ರುಚಿ ರುಚಿಯಾದ ಸಾಬುದಾನ ವಡೆ ಅಥವಾ ಪಡ್ಡು ರೆಡಿ(ನೀವು ಪಡ್ಡು ತವಾದದಲ್ಲಿ ಬೇಯಸಿದರೆ ಅದರೊಳಗಡೆ ಕೂಡ ಚೆನ್ನಾಗಿ ರೋಸ್ಟ್ ಆಗಿರುತ್ತದೆ.
ಶ್ರಾವಣ ಮಾಸದ ಉಪವಾಸದ ಪ್ರಯೋಜನಗಳು
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವುದರಿಂದ ಧಾರ್ಮಿಕವಾಗಿ ಮಾತ್ರವಲ್ಲ ಆರೋಗ್ಯದ
ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸವಿದ್ದು ದೇವರ ಆರೋಗ್ಯವನ್ನು ಮಾಡುವುದರಿಂದ
ನಮ್ಮ ಆರೋಗ್ಯ ಉತ್ತಮವಾಗುತ್ತದೆ ಅಲ್ಲದೆ ದೇವರ ಆರಾಧನೆ ಕಡೆಗೆ
ಗಮನಹರಿಸಬಹುದು.
ಶ್ರಾವಣ ಉಪವಾಸ ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ, ಈ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಅಲ್ಲದೆ ವಾರದಲ್ಲಿ ಕೆಲ ದಿನಗಳು ಉಪವಾಸ ಮಾಡುವುದರಿಂದ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿ.
ಶ್ರಾವಣ ಮಾಸದ ಆಹಾರಕ್ರಮ ಹೇಗಿರಬೇಕು?ಈ ಅವಧಿಯಲ್ಲಿ ಹಸಿ ತರಕಾರಿ, ಹಣ್ಣುಗಳು, ಲಘ ಆಹಾರವನ್ನು ಸೇವಿಸಬೇಕು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಈ ಅವಧಿಯಲ್ಲಿ ಸಾಬುದಾನ, ಗೋಧಿ ಈ ಬಗೆಯ ವಸ್ತುಗಳನ್ನು ಬಳಸಿ ಆಹಾರ ಮಾಡಿ ಸೇವಿಸಬಹುದು.



Click it and Unblock the Notifications