Latest Updates
-
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ?
ತುಪ್ಪದ ರುಚಿ ಜೊತೆ ಈ ಮಸಾಲೆ ಹಾಕಿ ಮಾಡಿ ಕಡ್ಲೆ ಉಸ್ಲಿ, ರುಚಿ ಸೂಪರ್ ಆಗಿರುತ್ತೆ
ಮಕ್ಕಳು ಪಿಜ್ಜಾ, ಬರ್ಗರ್ ಅಂತ ಕೇಳುತ್ತವೆ, ಆದರೆ ವಾರಕ್ಕೊಮ್ಮೆಯಾದರೂ ಕಡ್ಲೆ ಉಸ್ಲಿ ಮಾಡಿ ಕೊಡಿ ಅವರ ಬೆಳವಣಿಗೆಗೆ ತುಂಬಾ ಒಳ್ಳೆಯದು, ಇನ್ನು ದೊಡ್ಡವರು ಇದನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ, ಅದರಲ್ಲಿಯೂ ಈ ತುಪ್ಪದ ಫ್ಲೇವರ್ ಉಸ್ಲಿ ರುಚಿ ಇನ್ನೂ ಸೂಪರ್ ಆಗಿರುತ್ತೆ ನೋಡಿ:

ಬೇಕಾಗುವ ಸಾಮಗ್ರಿ
ಗರಂ ಮಸಾಲ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕಲ್ಲುಪ್ಪು 1 ಚಮಚ
ಅರಿಶಿಣ ಪುಡಿ 1/2 ಚಮಚ
ತುಪ್ಪ 2 ಚಮಚ
ಕಪ್ಪುಕಡ್ಲೆ 2 ಕಪ್
ಖಾರದ ಪುಡಿ 1 ಚಮಚ (ಖಾರ ಕಡಿಮೆ ಬಯಸುವವರು 1/ 2 ಚಮಚ ಬಳಸಬಹುದು)
ಮಾಡುವ ವಿಧಾನ:
ನೀವು ಕಡ್ಲೆಯನ್ನು 5-6 ಗಂಟೆ ನೆನೆ ಹಾಕಬೇಕು
ನೀವು ಸ್ವಲ್ಪ ಉಪ್ಪು ಹಾಕಿ, 2 ಕಪ್ ನೀರು ಹಾಕಿ 2 ವಿಶಲ್ ಬರುವವರೆಗೆ ಬಯಸಿ
ಈಗ ದಪ್ಪತಳವಿರುವ ಪಾತ್ರೆ ತಗೆದು ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ
ಈಗ ತುಪ್ಪಕ್ಕೆ ಅರಿಶಿಣ, ಖಾರದ ಪುಡಿ 1/ 2 ನಿಮಿಷ ಫ್ರೈ ಮಾಡಿ ನೋಡಿ
ಜೀರಿಗೆ ಪುಡಿ ಹಾಕಿ, ಕಲ್ಲುಪ್ಪು ಸೇರಿಸಿ
ಈಗ ಬೇಯಿಸಿದ ಕಡ್ಲೆ ಹಾಕಿ ಮಿಕ್ಸ್ ಮಾಡಿ, ಗರಂ ಮಸಾಲ ಸೇರಿಸಿ ಮಿಕ್ಸ್ ಮಾಡಿದರೆ
ರುಚಿಯಾದ ಕಡ್ಲೆ ಉಸ್ಲಿ ರೆಡಿ
ಸಲಹೆ: ಕಡ್ಲೆ ಬೇಢಯಿಸುವಾಗ ಉಪ್ಪು ಹಾಕಿದ್ದರೆ ನಂತರ
ತುಪ್ಪಕ್ಕೆ ಮೊದಲೇ ಉಪ್ಪು ಹಾಬೇಡಿ, ಬೇಕಿದ್ದರೆ ಮತ್ತೆ ಸೇರಿಸಬಹುದು
ತುಪ್ಪಕ್ಕೆ ಕರಿಬೇವು ಸೇರಿಸಿ.
ನೀವು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಬಹುದು
ಬೇಕಿದ್ದರೆ ತೆಂಗಿನ ತುರಿ ಸೇರಿಸಬಹುದು
ಇವೆಲ್ಲಾ ಭಿನ್ನ ಫ್ಲೇವರ್ ನೀಡುತ್ತೆ
ಈ ಸ್ನ್ಯಾಕ್ಸ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳು ಕೂಡ
ಇಷ್ಟಪಟ್ಟು ಸವಿಯುತ್ತಾರೆ.
ಇದನ್ನು ತಿನ್ನುವುದರಿಂದ ಅವರ ಬೆವಣಿಗೆಗೆ ಸಹಕಾರಿ.
ದೊಡ್ಡವರು ಇದನ್ನು ಸ್ನ್ಯಾಕ್ಸ್ ಆಗಿ ಬಳಸಿದರೆ ಈ
ಪ್ರಯೋಜನಗಳಿವೆ
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುತ್ತದೆ
ಕಡ್ಲೆಯಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ನಾರಿನಂಶ ಇರುವುದರಿಂದ ದೇಹಕ್ಕೆ
ಸಕ್ಕರೆಯಂಶ ನಿಧಾನಕ್ಕೆ ಬಿಡುಗಡೆಯಾಗುತ್ತೆ, ಹಾಗಾಗಿ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಕಡ್ಲೆ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚುರುಕಾಗಿ ಇರುತ್ತದೆ
ತೂಕ ನಿಯಂತ್ರಣಕ್ಕೆ ಸಹಕಾರಿ
ಕಡ್ಲೆ ಉಸ್ಲಿ ತಿಂದಾಗ ಬೇಗನೆ ಹೊಟ್ಟೆ ತುಂಬುತ್ತದ, ಇದು ದೇಹಕ್ಕೆ ಪೋಷಕಾಂಶ
ನೀಡುತ್ತದೆ, ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ರಕ್ತ ಹೀನತೆ ತಡೆಗಟ್ಟುತ್ತದೆ
ಯಾರಿಗೆ ರಕ್ತಹೀನತೆ ಇದೆಯೋ ಅವರು ಈ ಕಡ್ಲೆಯನ್ನು ಸ್ನ್ಯಾಕ್ಸ್ ರೀತಿ
ಸೇವಿಸುತ್ತಾ ಬನ್ನಿ. ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು.
ಗರ್ಭಿಣಿಯರಿಗೆ ಮಕ್ಕಳಿಗೆ ತುಂಬಾ ಒಳ್ಳೆಯದು.



Click it and Unblock the Notifications