Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತುಪ್ಪದ ರುಚಿ ಜೊತೆ ಈ ಮಸಾಲೆ ಹಾಕಿ ಮಾಡಿ ಕಡ್ಲೆ ಉಸ್ಲಿ, ರುಚಿ ಸೂಪರ್ ಆಗಿರುತ್ತೆ
ಮಕ್ಕಳು ಪಿಜ್ಜಾ, ಬರ್ಗರ್ ಅಂತ ಕೇಳುತ್ತವೆ, ಆದರೆ ವಾರಕ್ಕೊಮ್ಮೆಯಾದರೂ ಕಡ್ಲೆ ಉಸ್ಲಿ ಮಾಡಿ ಕೊಡಿ ಅವರ ಬೆಳವಣಿಗೆಗೆ ತುಂಬಾ ಒಳ್ಳೆಯದು, ಇನ್ನು ದೊಡ್ಡವರು ಇದನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ, ಅದರಲ್ಲಿಯೂ ಈ ತುಪ್ಪದ ಫ್ಲೇವರ್ ಉಸ್ಲಿ ರುಚಿ ಇನ್ನೂ ಸೂಪರ್ ಆಗಿರುತ್ತೆ ನೋಡಿ:

ಬೇಕಾಗುವ ಸಾಮಗ್ರಿ
ಗರಂ ಮಸಾಲ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕಲ್ಲುಪ್ಪು 1 ಚಮಚ
ಅರಿಶಿಣ ಪುಡಿ 1/2 ಚಮಚ
ತುಪ್ಪ 2 ಚಮಚ
ಕಪ್ಪುಕಡ್ಲೆ 2 ಕಪ್
ಖಾರದ ಪುಡಿ 1 ಚಮಚ (ಖಾರ ಕಡಿಮೆ ಬಯಸುವವರು 1/ 2 ಚಮಚ ಬಳಸಬಹುದು)
ಮಾಡುವ ವಿಧಾನ:
ನೀವು ಕಡ್ಲೆಯನ್ನು 5-6 ಗಂಟೆ ನೆನೆ ಹಾಕಬೇಕು
ನೀವು ಸ್ವಲ್ಪ ಉಪ್ಪು ಹಾಕಿ, 2 ಕಪ್ ನೀರು ಹಾಕಿ 2 ವಿಶಲ್ ಬರುವವರೆಗೆ ಬಯಸಿ
ಈಗ ದಪ್ಪತಳವಿರುವ ಪಾತ್ರೆ ತಗೆದು ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ
ಈಗ ತುಪ್ಪಕ್ಕೆ ಅರಿಶಿಣ, ಖಾರದ ಪುಡಿ 1/ 2 ನಿಮಿಷ ಫ್ರೈ ಮಾಡಿ ನೋಡಿ
ಜೀರಿಗೆ ಪುಡಿ ಹಾಕಿ, ಕಲ್ಲುಪ್ಪು ಸೇರಿಸಿ
ಈಗ ಬೇಯಿಸಿದ ಕಡ್ಲೆ ಹಾಕಿ ಮಿಕ್ಸ್ ಮಾಡಿ, ಗರಂ ಮಸಾಲ ಸೇರಿಸಿ ಮಿಕ್ಸ್ ಮಾಡಿದರೆ
ರುಚಿಯಾದ ಕಡ್ಲೆ ಉಸ್ಲಿ ರೆಡಿ
ಸಲಹೆ: ಕಡ್ಲೆ ಬೇಢಯಿಸುವಾಗ ಉಪ್ಪು ಹಾಕಿದ್ದರೆ ನಂತರ
ತುಪ್ಪಕ್ಕೆ ಮೊದಲೇ ಉಪ್ಪು ಹಾಬೇಡಿ, ಬೇಕಿದ್ದರೆ ಮತ್ತೆ ಸೇರಿಸಬಹುದು
ತುಪ್ಪಕ್ಕೆ ಕರಿಬೇವು ಸೇರಿಸಿ.
ನೀವು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಬಹುದು
ಬೇಕಿದ್ದರೆ ತೆಂಗಿನ ತುರಿ ಸೇರಿಸಬಹುದು
ಇವೆಲ್ಲಾ ಭಿನ್ನ ಫ್ಲೇವರ್ ನೀಡುತ್ತೆ
ಈ ಸ್ನ್ಯಾಕ್ಸ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳು ಕೂಡ
ಇಷ್ಟಪಟ್ಟು ಸವಿಯುತ್ತಾರೆ.
ಇದನ್ನು ತಿನ್ನುವುದರಿಂದ ಅವರ ಬೆವಣಿಗೆಗೆ ಸಹಕಾರಿ.
ದೊಡ್ಡವರು ಇದನ್ನು ಸ್ನ್ಯಾಕ್ಸ್ ಆಗಿ ಬಳಸಿದರೆ ಈ
ಪ್ರಯೋಜನಗಳಿವೆ
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುತ್ತದೆ
ಕಡ್ಲೆಯಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ನಾರಿನಂಶ ಇರುವುದರಿಂದ ದೇಹಕ್ಕೆ
ಸಕ್ಕರೆಯಂಶ ನಿಧಾನಕ್ಕೆ ಬಿಡುಗಡೆಯಾಗುತ್ತೆ, ಹಾಗಾಗಿ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಕಡ್ಲೆ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚುರುಕಾಗಿ ಇರುತ್ತದೆ
ತೂಕ ನಿಯಂತ್ರಣಕ್ಕೆ ಸಹಕಾರಿ
ಕಡ್ಲೆ ಉಸ್ಲಿ ತಿಂದಾಗ ಬೇಗನೆ ಹೊಟ್ಟೆ ತುಂಬುತ್ತದ, ಇದು ದೇಹಕ್ಕೆ ಪೋಷಕಾಂಶ
ನೀಡುತ್ತದೆ, ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ರಕ್ತ ಹೀನತೆ ತಡೆಗಟ್ಟುತ್ತದೆ
ಯಾರಿಗೆ ರಕ್ತಹೀನತೆ ಇದೆಯೋ ಅವರು ಈ ಕಡ್ಲೆಯನ್ನು ಸ್ನ್ಯಾಕ್ಸ್ ರೀತಿ
ಸೇವಿಸುತ್ತಾ ಬನ್ನಿ. ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು.
ಗರ್ಭಿಣಿಯರಿಗೆ ಮಕ್ಕಳಿಗೆ ತುಂಬಾ ಒಳ್ಳೆಯದು.



Click it and Unblock the Notifications