Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತುಪ್ಪದ ರುಚಿ ಜೊತೆ ಈ ಮಸಾಲೆ ಹಾಕಿ ಮಾಡಿ ಕಡ್ಲೆ ಉಸ್ಲಿ, ರುಚಿ ಸೂಪರ್ ಆಗಿರುತ್ತೆ
ಮಕ್ಕಳು ಪಿಜ್ಜಾ, ಬರ್ಗರ್ ಅಂತ ಕೇಳುತ್ತವೆ, ಆದರೆ ವಾರಕ್ಕೊಮ್ಮೆಯಾದರೂ ಕಡ್ಲೆ ಉಸ್ಲಿ ಮಾಡಿ ಕೊಡಿ ಅವರ ಬೆಳವಣಿಗೆಗೆ ತುಂಬಾ ಒಳ್ಳೆಯದು, ಇನ್ನು ದೊಡ್ಡವರು ಇದನ್ನು ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ, ಅದರಲ್ಲಿಯೂ ಈ ತುಪ್ಪದ ಫ್ಲೇವರ್ ಉಸ್ಲಿ ರುಚಿ ಇನ್ನೂ ಸೂಪರ್ ಆಗಿರುತ್ತೆ ನೋಡಿ:

ಬೇಕಾಗುವ ಸಾಮಗ್ರಿ
ಗರಂ ಮಸಾಲ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕಲ್ಲುಪ್ಪು 1 ಚಮಚ
ಅರಿಶಿಣ ಪುಡಿ 1/2 ಚಮಚ
ತುಪ್ಪ 2 ಚಮಚ
ಕಪ್ಪುಕಡ್ಲೆ 2 ಕಪ್
ಖಾರದ ಪುಡಿ 1 ಚಮಚ (ಖಾರ ಕಡಿಮೆ ಬಯಸುವವರು 1/ 2 ಚಮಚ ಬಳಸಬಹುದು)
ಮಾಡುವ ವಿಧಾನ:
ನೀವು ಕಡ್ಲೆಯನ್ನು 5-6 ಗಂಟೆ ನೆನೆ ಹಾಕಬೇಕು
ನೀವು ಸ್ವಲ್ಪ ಉಪ್ಪು ಹಾಕಿ, 2 ಕಪ್ ನೀರು ಹಾಕಿ 2 ವಿಶಲ್ ಬರುವವರೆಗೆ ಬಯಸಿ
ಈಗ ದಪ್ಪತಳವಿರುವ ಪಾತ್ರೆ ತಗೆದು ಬಿಸಿ ಮಾಡಿ 2 ಚಮಚ ತುಪ್ಪ ಹಾಕಿ
ಈಗ ತುಪ್ಪಕ್ಕೆ ಅರಿಶಿಣ, ಖಾರದ ಪುಡಿ 1/ 2 ನಿಮಿಷ ಫ್ರೈ ಮಾಡಿ ನೋಡಿ
ಜೀರಿಗೆ ಪುಡಿ ಹಾಕಿ, ಕಲ್ಲುಪ್ಪು ಸೇರಿಸಿ
ಈಗ ಬೇಯಿಸಿದ ಕಡ್ಲೆ ಹಾಕಿ ಮಿಕ್ಸ್ ಮಾಡಿ, ಗರಂ ಮಸಾಲ ಸೇರಿಸಿ ಮಿಕ್ಸ್ ಮಾಡಿದರೆ
ರುಚಿಯಾದ ಕಡ್ಲೆ ಉಸ್ಲಿ ರೆಡಿ
ಸಲಹೆ: ಕಡ್ಲೆ ಬೇಢಯಿಸುವಾಗ ಉಪ್ಪು ಹಾಕಿದ್ದರೆ ನಂತರ
ತುಪ್ಪಕ್ಕೆ ಮೊದಲೇ ಉಪ್ಪು ಹಾಬೇಡಿ, ಬೇಕಿದ್ದರೆ ಮತ್ತೆ ಸೇರಿಸಬಹುದು
ತುಪ್ಪಕ್ಕೆ ಕರಿಬೇವು ಸೇರಿಸಿ.
ನೀವು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಬಹುದು
ಬೇಕಿದ್ದರೆ ತೆಂಗಿನ ತುರಿ ಸೇರಿಸಬಹುದು
ಇವೆಲ್ಲಾ ಭಿನ್ನ ಫ್ಲೇವರ್ ನೀಡುತ್ತೆ
ಈ ಸ್ನ್ಯಾಕ್ಸ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳು ಕೂಡ
ಇಷ್ಟಪಟ್ಟು ಸವಿಯುತ್ತಾರೆ.
ಇದನ್ನು ತಿನ್ನುವುದರಿಂದ ಅವರ ಬೆವಣಿಗೆಗೆ ಸಹಕಾರಿ.
ದೊಡ್ಡವರು ಇದನ್ನು ಸ್ನ್ಯಾಕ್ಸ್ ಆಗಿ ಬಳಸಿದರೆ ಈ
ಪ್ರಯೋಜನಗಳಿವೆ
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುತ್ತದೆ
ಕಡ್ಲೆಯಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ನಾರಿನಂಶ ಇರುವುದರಿಂದ ದೇಹಕ್ಕೆ
ಸಕ್ಕರೆಯಂಶ ನಿಧಾನಕ್ಕೆ ಬಿಡುಗಡೆಯಾಗುತ್ತೆ, ಹಾಗಾಗಿ ಸಕ್ಕರೆಯಂಶ
ನಿಯಂತ್ರಣದಲ್ಲಿಡಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಕಡ್ಲೆ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ಮೆದುಳು ಚುರುಕಾಗಿ ಇರುತ್ತದೆ
ತೂಕ ನಿಯಂತ್ರಣಕ್ಕೆ ಸಹಕಾರಿ
ಕಡ್ಲೆ ಉಸ್ಲಿ ತಿಂದಾಗ ಬೇಗನೆ ಹೊಟ್ಟೆ ತುಂಬುತ್ತದ, ಇದು ದೇಹಕ್ಕೆ ಪೋಷಕಾಂಶ
ನೀಡುತ್ತದೆ, ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ರಕ್ತ ಹೀನತೆ ತಡೆಗಟ್ಟುತ್ತದೆ
ಯಾರಿಗೆ ರಕ್ತಹೀನತೆ ಇದೆಯೋ ಅವರು ಈ ಕಡ್ಲೆಯನ್ನು ಸ್ನ್ಯಾಕ್ಸ್ ರೀತಿ
ಸೇವಿಸುತ್ತಾ ಬನ್ನಿ. ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು.
ಗರ್ಭಿಣಿಯರಿಗೆ ಮಕ್ಕಳಿಗೆ ತುಂಬಾ ಒಳ್ಳೆಯದು.



Click it and Unblock the Notifications
