Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ನಾಲಿಗೆಯ ರುಚಿ ತಣಿಸುವ ವೆಜಿಟೆಬಲ್ ಕರಿ
ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್, ಖನಿಜಾಂಶ ಮತ್ತು ಅತ್ಯಗತ್ಯ ಪೋಷಕಾಂಶಗಳು ತರಕಾರಿಗಳಲ್ಲಿದೆ. ಹಾಗಾಗಿ ತರಕಾರಿಗಳನ್ನು ಬಳಸಿ ಮಾಡುವ ಎಲ್ಲಾ ರೆಸಿಪಿಯೂ ಕೂಡ ಆರೋಗ್ಯಕಾರಿಯಾಗಿರುತ್ತದೆ. ಇಂದು ಬೋಲ್ಡ್ ಸ್ಕೈ ನಿಮಗಾಗಿ ಹಲವು ರೀತಿಯ ತರಕಾರಿಗಳ ಮಿಶ್ರಣದ ಕರಿಯನ್ನು ಪರಿಚಯಿಸುತ್ತಿದ್ದು ಇದು ಖಂಡಿತವಾಗಿಯೂ ನಿಮ್ಮ ಮನ ತಣಿಸುವುದರಲ್ಲಿ ಸಂಶಯವೇ ಇಲ್ಲ.
ವಿಶಿಷ್ಟ ಸ್ವಾದಭರಿತ ಮಸಾಲೆ ಬೆರೆಸಿ ಮಾಡುವ ಈ ಕರಿ ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದಂತೂ ಖಚಿತ. ಹಲವು ತರಕಾರಿಗಳನ್ನು ಈ ಕರಿನಲ್ಲಿ ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗಾದರೆ ಇನ್ನೇಕೆ ತಡ ? ಬನ್ನಿ ತರಕಾರಿ ಕರಿಯನ್ನು ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ
ಬೇಕಾಗುವ ಸಾಮಾಗ್ರಿ:
* 3 ಚಮಚ ಕೆಂಪು ಮೆಣಸಿನ ಪುಡಿ
* 1 ಚಮಚ ಮೆಂತ್ಯೆ ಕಾಳು
* ಈರುಳ್ಳಿ, 2 (ಕತ್ತರಿಸಲಾಗಿರುವ)
* ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
* ಅಗತ್ಯವಿದ್ದಷ್ಟು ಕತ್ತರಿಸಿದ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ
* 1 ಚಮಚ ಗರಂ ಮಸಾಲೆ
* ಉಪ್ಪು ರುಚಿಗೆ ತಕ್ಕಷ್ಟು
* 1/2 ಚಮಚ ಅರಿಶಿಣ
* 1 ಚಮಚ ಧನಿಯಾ ಪುಡಿ
* 1 ಚಮಚ ಕಸೂರಿ ಮೇತಿ
* 2 ಕಪ್ ನೀರು
ತರಕಾರಿ ಕರಿ ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಹಾಗೂ ಮೇಲೆ ತಿಳಿಸಿರುವ ತರಕಾರಿಗಳನ್ನು (ಕತ್ತರಿಸಲಾಗಿರುವ ಟೊಮೆಟೊ, ಕ್ಯಾಪ್ಸಿಕಂ, ಹೂಕೋಸು, ಬಟಾಣಿ) ಸ್ವಲ್ಪ ಕೆಂಪುಮೆಣಸಿನ ಪುಡಿ ಮತ್ತು ಮೆಂತ್ಯೆ ಕಾಳುಗಳೊಂದಿಗೆ ಹುರಿದುಕೊಳ್ಳಿ.
* ತದನಂತರ ಇದಕ್ಕೆ ಈರುಳ್ಳಿ ಮತ್ತು ಇನ್ನಿತರ ಪೇಸ್ಟನ್ನು ಬೆರೆಸಿ ಚೆನ್ನಾಗಿ ಹುರಿದುಕೊಳ್ಳಿ.
* ಅರಿಶಿಣ, ಧನಿಯಾ ಪುಡಿ, ಗರಂ ಮಸಾಲೆ, ಉಪ್ಪು, ನೀರು ಹಾಕಿ ತರಕಾರಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿದರೆ ರುಚಿ ರುಚಿಯಾದ ತರಕಾರಿ ಕರಿ ಸವಿಯಲು ತಯಾರಾಗಿರುತ್ತೆ.
* ಕೊನೆಯಲ್ಲಿ ಇದರ ಮೇಲೆ ಕಸೂರಿ ಮೇತಿ ಹಾಕಿ ಬಿಸಿ ಬಿಸಿಯಾಗಿ ಸೇವಿಸಿ ರುಚಿ ಇನ್ನಷ್ಟು ರುಚಿಕರವಾಗಿರುತ್ತದೆ



Click it and Unblock the Notifications