Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಗಾಂಧೀಜಿಗೆ ಪ್ರಿಯವಾದ ಅಡುಗೆ- ದಮ್ ಆಲೂ

ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕೆಜಿ ಆಲೂಗೆಡ್ಡೆ
* ಮೂರು ಮುಕ್ಕಾಲು ಕಪ್ ನೀರು
* ರುಚಿಗೆ ತಕ್ಕ ಉಪ್ಪು
* ತುಪ್ಪ ಅಥವಾ ಎಣ್ಣೆ
* ಒಂದು ಈರುಳ್ಳಿ
* ಒಂದು ಟೊಮೆಟೊ (ಪೇಸ್ಟ್)
* ಒಂದು ಕಪ್ ಮೊಸರು
* 4 ಚಮಚ ಬಿಸಿ ನೀರು
* 1 ಹಸಿಮೆಣಸಿನ ಕಾಯಿ ( ಅದರ ಬೀಜ ತೆಗೆದು ಕತ್ತರಿಸಿರಬೇಕು)
* 1 ಚಮಚ ಗರಂ ಮಸಾಲ
ಖಾರಕ್ಕೆ:
* 4 ಬೆಳ್ಳುಳ್ಳಿ ಎಸಳು
* 6-8 ಕಾಳು ಮೆಣಸು
* 4 ಹಸಿ ಏಲಕ್ಕಿ
* 1 ಒಣ ಏಲಕ್ಕಿ
* ಚಕ್ಕೆ
ಮಸಾಲೆ ಪೇಸ್ಟ್:
* ಒಂದು ದೊಡ್ಡ ಈರುಳ್ಳಿ
* 10 ಬೆಳ್ಳುಳ್ಳಿ ಎಸಳು
* ಕರಿಮೆಣಸಿನ ಕಾಳು
* 1 ಚಮಚ ಗಸೆಗಸೆ
* 1 ಚಮಚ ಕೊತ್ತಂಬರಿ ಬೀಜ
* 1 ಚಮಚ ಜೀರಿಗೆ
* 2 ಒಣ ಮೆಣಸು
* 1 ಚಮಚ ಅರಿಶಿಣ
* ಚಿಟಿಕೆಯಷ್ಟು ಜಾಯಿಕಾಯಿ
ತಯಾರಿಸುವ ವಿಧಾನ:
1. ಆಲೂಗೆಡ್ಡೆಯ ಸಿಪ್ಪೆ ಸುಲಿದು, ಅದರ ಮೇಲ್ಬಾಗವನ್ನು ಫೋರ್ಕ್ ನಿಂದ ಗೀರಿ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿ 2 ಗಂಟೆ ಕಾಲ ಇಡಬೇಕು.
2. ಈರುಳ್ಳಿ, ಬೆಳ್ಳುಳ್ಳಿ, ಕರಿಮೆಣಸಿನಕಾಳು, ಗಸೆಗಸೆ, ಕೊತ್ತಂಬರಿ ಬೀಜ, ಜೀರಿಗೆ, ಒಣ ಮೆಣಸು, ಅರಿಶಿಣ, ಜಾಯಿಕಾಯಿ ಹಾಕಿ ಪೇಸ್ಟ್ ಮಾಡಿ ಇಡಬೇಕು.
3. ನಂತರ ಆಲೂಗೆಡ್ಡೆಯನ್ನು ನೀರಿನಿಂದ ತೆಗೆದು ಒಂದು ಪಾತ್ರೆಯಲ್ಲಿ ಇಡಬೇಕು.
4. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಎಲ್ಲಾ ಖಾರ ಪದಾರ್ಥಗಳನ್ನು ಮತ್ತು ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಟೊಮೆಟೊ ಪೇಸ್ಟ್ ಮತ್ತು ಮಸಾಲೆ ಪೇಸ್ಟ್ ಹಾಕಿ 2 ನಿಮಿಷ ಬಿಸಿ ಮಾಡಿ ನಂತರ ಮೊಸರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 10 ನಿಮಿಷ ಕಾಯಿಸಬೇಕು.
5. ನಂತರ ಆಲೂಗೆಡ್ಡೆ ಮತ್ತು ಬಿಸಿ ನೀರು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಇದರ ಮೇಲೆ ಕಾಳು ಮೆಣಸಿನ ಪುಡಿ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿದರೆ ದಮ್ ಆಲೂ ರೆಡಿ.



Click it and Unblock the Notifications











