Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಶುಗರ್ ಇರುವವರು ಸೇವಿಸಲೇಬೇಕಾದ ಅಡುಗೆ ನೆಲನೆಲ್ಲಿ ತಂಬಳಿ
ನೆಲ್ಲಿಕಾಯಿ ಎಲ್ಲರಿಗೂ ಗೊತ್ತು.ನೆಲ್ಲಿಕಾಯಿ ಮರದಲ್ಲಿ ಬಿಡುತ್ತೆ. ಇದೀಗ ನೆಲ್ಲಿ ಮರವನ್ನು ಒಂದು ಸಣ್ಣ ಕಳೆ ಸಸ್ಯದಂತೆ ಊಹಿಸಿಕೊಳ್ಳಿ. ಎಸ್.. ಅದುವೇ ನೆಲನೆಲ್ಲಿ ಗಿಡ.
ಗಿಡದ ಎಲೆಗಳು ಮುಟ್ಟಿದರೆ ಮುನಿ ಎಲೆಗಳಂತೆ. ಆದರೆ ಆ ಎಲೆಗಳ ಕೆಳಗೆ ಸಣ್ಣಸಣ್ಣ ನೆಲ್ಲಿಕಾಯಿ ಇರುತ್ತದೆ. ಕಳೆಯಂತೆ ಹುಟ್ಟಿಕೊಳ್ಳುವ ಈ ಸಸ್ಯ ನಿಮ್ಮ ದೇಹಕ್ಕೆ ಆರೋಗ್ಯ ಒದಗಿಸುವ ಸಸ್ಯ ಸಂಕುಲಗಳಲ್ಲಿ ಒಂದು.

ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕೂಡ ಕರೆಯಲಾಗುತ್ತದೆ.ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿರುವ ಈ ಸಸ್ಯ ಸಾಸಿವೆ ಗಾತ್ರದ ಚಿಕ್ಕಚಿಕ್ಕ ಕಾಯಿಗಳನ್ನ ಎಲೆಯ ಹಿಂಭಾಗದಲ್ಲಿ ಹೊಂದಿರುತ್ತದೆ.
ಇದನ್ನು ಬೇರೆಬೇರೆ ಭಾಷೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಸಂಸ್ಕೃತ-ಭೂಮ್ಯಾಮಲಕಿ,ಶಿವಾ,ಬಹುಪತ್ರಾ,ಬಹುಫಲಾ,ಭೂಯಿಆಂವಲಾ,ತಾಮಲಕಿ
ಹಿಂದಿ-ಜರಾಮ್ಲ,ಭೂಯಿಆಮಲಾ
ಮರಾಠಿ-ಭೂಯಿ ಆಂಬಲಿ,ಭೂಯಿ ಆಂವ್ಲಾ
ತಮಿಳು-ಕಿಝಕಾಯ್ ನೆಲ್ಲಿ
ತೆಲುಗು-ನೆಲ ಉಸಸೀರಿಕೆ
ಮಲಯಾಳಂ-ಕಿಳಾನೆಲ್ಲಿ
ವೈಜ್ಞಾನಿಕ ಹೆಸರು-Phyllanthus amaras

ನೆಲನೆಲ್ಲಿ ಸೊಪ್ಪಿನಿಂದ ತಂಬಳಿ ತಯಾರಿಸುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma Chatra
Recipe Type: Chutney
Serves: 4
-
ಬೇಕಾಗುವ ಸಾಮಗ್ರಿಗಳು
ನೆಲನೆಲ್ಲಿ ಸೊಪ್ಪು - ಒಂದು ಬೌಲ್
ಜೀರಿಗೆ- ಒಂದು ಸ್ಪೂನ್
ಕಾಳುಮೆಣಸು- ನಾಲ್ಕು
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಸ್ಪೂನ್
ತುಪ್ಪ- ಎರಡು ಸ್ಪೂನ್
ಮಜ್ಜಿಗೆ- ಕಾಲ್ಲೀಟರ್
ಬೆಲ್ಲ - ಒಂದೆರಡು ಗೋಲಿ ಗಾತ್ರ
ಬ್ಯಾಡಗಿ ಮೆಣಸು - ಒಂದುಕಾಯಿತುರಿ- ಅರ್ಧ ಬೌಲ್
-
ಮಾಡುವ ವಿಧಾನ
. ನೆಲನೆಲ್ಲಿ ಸೊಪ್ಪನ್ನ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಿ.
. ಇದಕ್ಕೆ ಕಾಯಿತುರಿ, ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಸೇರಿಸಿ ಎರಡು ಲೋಟ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ನೀರು ಸೇರಿಸಿ ರುಬ್ಬಿಕೊಳ್ಳಿ.
. ರುಬ್ಬಿದ ಮಿಶ್ರಣವನ್ನು ಜರಡಿ ಹಿಡಿದು ರಸವನ್ನು ಬೇರ್ಪಡಿಸಿ.
.ಈ ರಸಕ್ಕೆ ಉಪ್ಪು,ಬೆಲ್ಲ, ಮಜ್ಜಿಗೆ ಸೇರಿಸಿ.
. ನಂತರ ತುಪ್ಪದಲ್ಲಿ ಸಾಸಿವೆ ಚಟಿಪಟಿ ಮಾಡಿ, ಸ್ವಲ್ಪ ಜೀರಿಗೆ ಹಾಕಿ ಬ್ಯಾಡಗಿ ಮೆಣಸಿನ ಒಗ್ಗರಣೆ ಕೊಟ್ಟರೆ ನೆಲನೆಲ್ಲಿ ತಂಬಳಿ ಸವಿಯಲು ಸಿದ್ಧ.
- ನೆಲನೆಲ್ಲಿ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತೆ ಎನ್ನಲಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.ಗಾಯಗಳ ನಿವಾರಣೆಗೆ ಇದು ಉಪಯೋಗಕಾರಿ.ಚರ್ಮರೋಗವನ್ನು ನಿವಾರಿಸುವ ಸಾಮರ್ಥ್ಯ ಇದಕ್ಕಿದೆ. ಅಜೀರ್ಣ ಹೊಟ್ಟೆನೋವು ಸಮಸ್ಯೆ ನಿವಾರಿಸುತ್ತದೆ. ಹೆಪಟೈಟಿಸ್ ಬಿ ಸಮಸ್ಯೆಗೂ ಕೂಡ ಪರಿಣಾಮಕಾರಿ. ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಶಕ್ತಿ ಇದಕ್ಕಿದೆ.
- ಸರ್ವ್ - 4
- ಕ್ಯಾಲೋರಿ - 150 cal
- ನಾರಿನಂಶ - 20ಗ್ರಾಂ



Click it and Unblock the Notifications