Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- News BREAKING: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಸಾವು
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುಗರ್ ಇರುವವರು ಸೇವಿಸಲೇಬೇಕಾದ ಅಡುಗೆ ನೆಲನೆಲ್ಲಿ ತಂಬಳಿ
ನೆಲ್ಲಿಕಾಯಿ ಎಲ್ಲರಿಗೂ ಗೊತ್ತು.ನೆಲ್ಲಿಕಾಯಿ ಮರದಲ್ಲಿ ಬಿಡುತ್ತೆ. ಇದೀಗ ನೆಲ್ಲಿ ಮರವನ್ನು ಒಂದು ಸಣ್ಣ ಕಳೆ ಸಸ್ಯದಂತೆ ಊಹಿಸಿಕೊಳ್ಳಿ. ಎಸ್.. ಅದುವೇ ನೆಲನೆಲ್ಲಿ ಗಿಡ.
ಗಿಡದ ಎಲೆಗಳು ಮುಟ್ಟಿದರೆ ಮುನಿ ಎಲೆಗಳಂತೆ. ಆದರೆ ಆ ಎಲೆಗಳ ಕೆಳಗೆ ಸಣ್ಣಸಣ್ಣ ನೆಲ್ಲಿಕಾಯಿ ಇರುತ್ತದೆ. ಕಳೆಯಂತೆ ಹುಟ್ಟಿಕೊಳ್ಳುವ ಈ ಸಸ್ಯ ನಿಮ್ಮ ದೇಹಕ್ಕೆ ಆರೋಗ್ಯ ಒದಗಿಸುವ ಸಸ್ಯ ಸಂಕುಲಗಳಲ್ಲಿ ಒಂದು.
ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕೂಡ ಕರೆಯಲಾಗುತ್ತದೆ.ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿರುವ ಈ ಸಸ್ಯ ಸಾಸಿವೆ ಗಾತ್ರದ ಚಿಕ್ಕಚಿಕ್ಕ ಕಾಯಿಗಳನ್ನ ಎಲೆಯ ಹಿಂಭಾಗದಲ್ಲಿ ಹೊಂದಿರುತ್ತದೆ.
ಇದನ್ನು ಬೇರೆಬೇರೆ ಭಾಷೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
ಸಂಸ್ಕೃತ-ಭೂಮ್ಯಾಮಲಕಿ,ಶಿವಾ,ಬಹುಪತ್ರಾ,ಬಹುಫಲಾ,ಭೂಯಿಆಂವಲಾ,ತಾಮಲಕಿ
ಹಿಂದಿ-ಜರಾಮ್ಲ,ಭೂಯಿಆಮಲಾ
ಮರಾಠಿ-ಭೂಯಿ ಆಂಬಲಿ,ಭೂಯಿ ಆಂವ್ಲಾ
ತಮಿಳು-ಕಿಝಕಾಯ್ ನೆಲ್ಲಿ
ತೆಲುಗು-ನೆಲ ಉಸಸೀರಿಕೆ
ಮಲಯಾಳಂ-ಕಿಳಾನೆಲ್ಲಿ
ವೈಜ್ಞಾನಿಕ ಹೆಸರು-Phyllanthus amaras
ನೆಲನೆಲ್ಲಿ ಸೊಪ್ಪಿನಿಂದ ತಂಬಳಿ ತಯಾರಿಸುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma Chatra
Recipe Type: Chutney
Serves: 4
-
ಬೇಕಾಗುವ ಸಾಮಗ್ರಿಗಳು
ನೆಲನೆಲ್ಲಿ ಸೊಪ್ಪು - ಒಂದು ಬೌಲ್
ಜೀರಿಗೆ- ಒಂದು ಸ್ಪೂನ್
ಕಾಳುಮೆಣಸು- ನಾಲ್ಕು
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಸ್ಪೂನ್
ತುಪ್ಪ- ಎರಡು ಸ್ಪೂನ್
ಮಜ್ಜಿಗೆ- ಕಾಲ್ಲೀಟರ್
ಬೆಲ್ಲ - ಒಂದೆರಡು ಗೋಲಿ ಗಾತ್ರ
ಬ್ಯಾಡಗಿ ಮೆಣಸು - ಒಂದುಕಾಯಿತುರಿ- ಅರ್ಧ ಬೌಲ್
-
ಮಾಡುವ ವಿಧಾನ
. ನೆಲನೆಲ್ಲಿ ಸೊಪ್ಪನ್ನ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದುಕೊಳ್ಳಿ.
. ಇದಕ್ಕೆ ಕಾಯಿತುರಿ, ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಸೇರಿಸಿ ಎರಡು ಲೋಟ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ನೀರು ಸೇರಿಸಿ ರುಬ್ಬಿಕೊಳ್ಳಿ.
. ರುಬ್ಬಿದ ಮಿಶ್ರಣವನ್ನು ಜರಡಿ ಹಿಡಿದು ರಸವನ್ನು ಬೇರ್ಪಡಿಸಿ.
.ಈ ರಸಕ್ಕೆ ಉಪ್ಪು,ಬೆಲ್ಲ, ಮಜ್ಜಿಗೆ ಸೇರಿಸಿ.
. ನಂತರ ತುಪ್ಪದಲ್ಲಿ ಸಾಸಿವೆ ಚಟಿಪಟಿ ಮಾಡಿ, ಸ್ವಲ್ಪ ಜೀರಿಗೆ ಹಾಕಿ ಬ್ಯಾಡಗಿ ಮೆಣಸಿನ ಒಗ್ಗರಣೆ ಕೊಟ್ಟರೆ ನೆಲನೆಲ್ಲಿ ತಂಬಳಿ ಸವಿಯಲು ಸಿದ್ಧ.
- ನೆಲನೆಲ್ಲಿ ಸೇವನೆಯಿಂದ ಕಾಮಾಲೆ ರೋಗ ನಿವಾರಣೆಯಾಗುತ್ತೆ ಎನ್ನಲಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.ಗಾಯಗಳ ನಿವಾರಣೆಗೆ ಇದು ಉಪಯೋಗಕಾರಿ.ಚರ್ಮರೋಗವನ್ನು ನಿವಾರಿಸುವ ಸಾಮರ್ಥ್ಯ ಇದಕ್ಕಿದೆ. ಅಜೀರ್ಣ ಹೊಟ್ಟೆನೋವು ಸಮಸ್ಯೆ ನಿವಾರಿಸುತ್ತದೆ. ಹೆಪಟೈಟಿಸ್ ಬಿ ಸಮಸ್ಯೆಗೂ ಕೂಡ ಪರಿಣಾಮಕಾರಿ. ಕಿಡ್ನಿ ಸ್ಟೋನ್ ಆಗದಂತೆ ತಡೆಯುವ ಶಕ್ತಿ ಇದಕ್ಕಿದೆ.
- ಸರ್ವ್ - 4
- ಕ್ಯಾಲೋರಿ - 150 cal
- ನಾರಿನಂಶ - 20ಗ್ರಾಂ