Latest Updates
-
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ
ಗಣೇಶನಿಗೆ ಕಡಲೆ ಉಸುಳಿ ಹೀಗೆ ಮಾಡಿ ನೋಡಿ
ಗೌರಿ ಗಣೇಶ ಹಬ್ಬ ಬರಲು ಇನ್ನೇನು ಕೆಲವೇ ದಿನಗಳಿವೆ. (ಗೌರಿ-ಆ.31-2011, ಗಣೇಶ-ಸೆ. 1, 2011). ಹಬ್ಬಗಳೆಂದ ಮೇಲೆ ಮನೆಯಲ್ಲಿ ತಿಂಡಿ ಊಟದ್ದೇ ಕಾರುಬಾರು. ಖಾದ್ಯಗಳಲ್ಲಿ ಹೊಸತನವಿದ್ದರೇನೆ ಹಬ್ಬಕ್ಕೆ ಕಳೆ. ಗಣೇಶನಿಗೆ ಪ್ರಿಯವಾದ ಕಡಲೆಕಾಳಿನ ಉಸುಳಿ ಇಲ್ಲದಿದ್ದರೆ ಈ ಹಬ್ಬಕ್ಕೆ ಅರ್ಥವೇ ಇಲ್ಲ.
ಕಡಲೆಕಾಳು ಉಸುಳಿಯನ್ನು ಅತಿ ಸುಲಭವಾಗಿ ಮತ್ತು ವಿಶೇಷವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಈ ಬಾರಿಯ ಗಣೇಶ ಹಬ್ಬಕ್ಕೆ ವಿಶೇಷ ಉಸುಳಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದನ್ನು ಮರೆಯಬೇಡಿ.
ಬೇಕಾಗುವ ಪದಾರ್ಥಗಳು:
* 1 1/2 ಕಪ್ ಕಡಲೆಕಾಳು
* ಮೂರು ಚಮಚ ತುರಿದಿಟ್ಟುಕೊಂಡ ಕಾಯಿ
* ಸಾಸಿವೆ, ಉದ್ದಿನ ಬೇಳೆ, ಉಪ್ಪು
* ಎರಡು ಕೆಂಪು ಮೆಣಸಿನ ಕಾಯಿ
* ಕರಿಬೇವು, ಇಂಗು ಮತ್ತು ಎಣ್ಣೆ
* ಗರಂ ಮಸಾಲ ಸ್ವಲ್ಪ
ಮಾಡುವ ವಿಧಾನ: ಹಬ್ಬದ ಹಿಂದಿನ ದಿನ ಕಡಲೆಕಾಳನ್ನು ಒಂದು ರಾತ್ರಿ ನೆನೆಸಿಡಬೇಕು. ನಂತರ ಕಡಲೆಕಾಳನ್ನು ಚೆನ್ನಾಗಿ ಸೋಸಿ ಬೇಯಿಸಿ ಇಟ್ಟುಕೊಳ್ಳಬೇಕು. ನೀರನ್ನು ಬಸಿದ ನಂತರ ಸ್ವಲ್ಪ ಸಮಯ ಕಡಲೆಕಾಳನ್ನು ಹಾಗೆಯೇ ಆರಲು ಬಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಹಾಕಬೇಕು.
ನಂತರ ಅದಕ್ಕೆ ಕರಿಬೇವು ಹಾಕಿ ಇಂಗು ಮತ್ತು ಸ್ವಲ್ಪ ಗರಂ ಮಸಾಲ ಬೆರೆಸಿ ಹುರಿದುಕೊಳ್ಳಬೇಕು. ಕೊನೆಗೆ ತೆಂಗಿನ ತುರಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಲೆಯಿಂದ ಕೆಳಗೆ ಇಳಿಸಬೇಕು. ಈಗ ಈ ಮಿಶ್ರಣವನ್ನು ಚೆನ್ನಾಗಿ ಕದಡಿ ಅದಕ್ಕೆ ಬೇಯಿಸಿದ ಕಡಲೆಕಾಳನ್ನು ಬೆರೆಸಿಕೊಂಡು ಕಾಯಿ ತುರಿ ಚೆನ್ನಾಗಿ ಹರಡಿಕೊಳ್ಳುವವರೆಗೂ ಉಸುಳಿಯನ್ನು ಉರಿದು ಕೆಳಗಿಳಿಸಬೇಕು.
ಈಗ ಕಡಲೆಕಾಳು ಉಸುಳಿ ನೈವೇದ್ಯಕ್ಕೆ ತಯಾರಾಗಿದೆ. ( ಸೂಚನೆ: ಕಡಲೆಕಾಳು ಬೇಯಿಸುವಾಗಲೂ ಸ್ವಲ್ಪ ಉಪ್ಪು ಬೆರೆಸಿದ್ದರಿಂದ ಉಪ್ಪನ್ನು ಹಾಕುವಲ್ಲಿ ಜಾಗ್ರತೆಯಿಂದಿರಬೇಕು).



Click it and Unblock the Notifications











