Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ?
ಗಣೇಶನಿಗೆ ಕಡಲೆ ಉಸುಳಿ ಹೀಗೆ ಮಾಡಿ ನೋಡಿ
ಗೌರಿ ಗಣೇಶ ಹಬ್ಬ ಬರಲು ಇನ್ನೇನು ಕೆಲವೇ ದಿನಗಳಿವೆ. (ಗೌರಿ-ಆ.31-2011, ಗಣೇಶ-ಸೆ. 1, 2011). ಹಬ್ಬಗಳೆಂದ ಮೇಲೆ ಮನೆಯಲ್ಲಿ ತಿಂಡಿ ಊಟದ್ದೇ ಕಾರುಬಾರು. ಖಾದ್ಯಗಳಲ್ಲಿ ಹೊಸತನವಿದ್ದರೇನೆ ಹಬ್ಬಕ್ಕೆ ಕಳೆ. ಗಣೇಶನಿಗೆ ಪ್ರಿಯವಾದ ಕಡಲೆಕಾಳಿನ ಉಸುಳಿ ಇಲ್ಲದಿದ್ದರೆ ಈ ಹಬ್ಬಕ್ಕೆ ಅರ್ಥವೇ ಇಲ್ಲ.
ಕಡಲೆಕಾಳು ಉಸುಳಿಯನ್ನು ಅತಿ ಸುಲಭವಾಗಿ ಮತ್ತು ವಿಶೇಷವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಈ ಬಾರಿಯ ಗಣೇಶ ಹಬ್ಬಕ್ಕೆ ವಿಶೇಷ ಉಸುಳಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದನ್ನು ಮರೆಯಬೇಡಿ.
ಬೇಕಾಗುವ ಪದಾರ್ಥಗಳು:
* 1 1/2 ಕಪ್ ಕಡಲೆಕಾಳು
* ಮೂರು ಚಮಚ ತುರಿದಿಟ್ಟುಕೊಂಡ ಕಾಯಿ
* ಸಾಸಿವೆ, ಉದ್ದಿನ ಬೇಳೆ, ಉಪ್ಪು
* ಎರಡು ಕೆಂಪು ಮೆಣಸಿನ ಕಾಯಿ
* ಕರಿಬೇವು, ಇಂಗು ಮತ್ತು ಎಣ್ಣೆ
* ಗರಂ ಮಸಾಲ ಸ್ವಲ್ಪ
ಮಾಡುವ ವಿಧಾನ: ಹಬ್ಬದ ಹಿಂದಿನ ದಿನ ಕಡಲೆಕಾಳನ್ನು ಒಂದು ರಾತ್ರಿ ನೆನೆಸಿಡಬೇಕು. ನಂತರ ಕಡಲೆಕಾಳನ್ನು ಚೆನ್ನಾಗಿ ಸೋಸಿ ಬೇಯಿಸಿ ಇಟ್ಟುಕೊಳ್ಳಬೇಕು. ನೀರನ್ನು ಬಸಿದ ನಂತರ ಸ್ವಲ್ಪ ಸಮಯ ಕಡಲೆಕಾಳನ್ನು ಹಾಗೆಯೇ ಆರಲು ಬಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಹಾಕಬೇಕು.
ನಂತರ ಅದಕ್ಕೆ ಕರಿಬೇವು ಹಾಕಿ ಇಂಗು ಮತ್ತು ಸ್ವಲ್ಪ ಗರಂ ಮಸಾಲ ಬೆರೆಸಿ ಹುರಿದುಕೊಳ್ಳಬೇಕು. ಕೊನೆಗೆ ತೆಂಗಿನ ತುರಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಲೆಯಿಂದ ಕೆಳಗೆ ಇಳಿಸಬೇಕು. ಈಗ ಈ ಮಿಶ್ರಣವನ್ನು ಚೆನ್ನಾಗಿ ಕದಡಿ ಅದಕ್ಕೆ ಬೇಯಿಸಿದ ಕಡಲೆಕಾಳನ್ನು ಬೆರೆಸಿಕೊಂಡು ಕಾಯಿ ತುರಿ ಚೆನ್ನಾಗಿ ಹರಡಿಕೊಳ್ಳುವವರೆಗೂ ಉಸುಳಿಯನ್ನು ಉರಿದು ಕೆಳಗಿಳಿಸಬೇಕು.
ಈಗ ಕಡಲೆಕಾಳು ಉಸುಳಿ ನೈವೇದ್ಯಕ್ಕೆ ತಯಾರಾಗಿದೆ. ( ಸೂಚನೆ: ಕಡಲೆಕಾಳು ಬೇಯಿಸುವಾಗಲೂ ಸ್ವಲ್ಪ ಉಪ್ಪು ಬೆರೆಸಿದ್ದರಿಂದ ಉಪ್ಪನ್ನು ಹಾಕುವಲ್ಲಿ ಜಾಗ್ರತೆಯಿಂದಿರಬೇಕು).



Click it and Unblock the Notifications