Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಗಣೇಶನಿಗೆ ಕಡಲೆ ಉಸುಳಿ ಹೀಗೆ ಮಾಡಿ ನೋಡಿ
ಗೌರಿ ಗಣೇಶ ಹಬ್ಬ ಬರಲು ಇನ್ನೇನು ಕೆಲವೇ ದಿನಗಳಿವೆ. (ಗೌರಿ-ಆ.31-2011, ಗಣೇಶ-ಸೆ. 1, 2011). ಹಬ್ಬಗಳೆಂದ ಮೇಲೆ ಮನೆಯಲ್ಲಿ ತಿಂಡಿ ಊಟದ್ದೇ ಕಾರುಬಾರು. ಖಾದ್ಯಗಳಲ್ಲಿ ಹೊಸತನವಿದ್ದರೇನೆ ಹಬ್ಬಕ್ಕೆ ಕಳೆ. ಗಣೇಶನಿಗೆ ಪ್ರಿಯವಾದ ಕಡಲೆಕಾಳಿನ ಉಸುಳಿ ಇಲ್ಲದಿದ್ದರೆ ಈ ಹಬ್ಬಕ್ಕೆ ಅರ್ಥವೇ ಇಲ್ಲ.
ಕಡಲೆಕಾಳು ಉಸುಳಿಯನ್ನು ಅತಿ ಸುಲಭವಾಗಿ ಮತ್ತು ವಿಶೇಷವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಈ ಬಾರಿಯ ಗಣೇಶ ಹಬ್ಬಕ್ಕೆ ವಿಶೇಷ ಉಸುಳಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದನ್ನು ಮರೆಯಬೇಡಿ.
ಬೇಕಾಗುವ ಪದಾರ್ಥಗಳು:
* 1 1/2 ಕಪ್ ಕಡಲೆಕಾಳು
* ಮೂರು ಚಮಚ ತುರಿದಿಟ್ಟುಕೊಂಡ ಕಾಯಿ
* ಸಾಸಿವೆ, ಉದ್ದಿನ ಬೇಳೆ, ಉಪ್ಪು
* ಎರಡು ಕೆಂಪು ಮೆಣಸಿನ ಕಾಯಿ
* ಕರಿಬೇವು, ಇಂಗು ಮತ್ತು ಎಣ್ಣೆ
* ಗರಂ ಮಸಾಲ ಸ್ವಲ್ಪ
ಮಾಡುವ ವಿಧಾನ: ಹಬ್ಬದ ಹಿಂದಿನ ದಿನ ಕಡಲೆಕಾಳನ್ನು ಒಂದು ರಾತ್ರಿ ನೆನೆಸಿಡಬೇಕು. ನಂತರ ಕಡಲೆಕಾಳನ್ನು ಚೆನ್ನಾಗಿ ಸೋಸಿ ಬೇಯಿಸಿ ಇಟ್ಟುಕೊಳ್ಳಬೇಕು. ನೀರನ್ನು ಬಸಿದ ನಂತರ ಸ್ವಲ್ಪ ಸಮಯ ಕಡಲೆಕಾಳನ್ನು ಹಾಗೆಯೇ ಆರಲು ಬಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಹಾಕಬೇಕು.
ನಂತರ ಅದಕ್ಕೆ ಕರಿಬೇವು ಹಾಕಿ ಇಂಗು ಮತ್ತು ಸ್ವಲ್ಪ ಗರಂ ಮಸಾಲ ಬೆರೆಸಿ ಹುರಿದುಕೊಳ್ಳಬೇಕು. ಕೊನೆಗೆ ತೆಂಗಿನ ತುರಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಲೆಯಿಂದ ಕೆಳಗೆ ಇಳಿಸಬೇಕು. ಈಗ ಈ ಮಿಶ್ರಣವನ್ನು ಚೆನ್ನಾಗಿ ಕದಡಿ ಅದಕ್ಕೆ ಬೇಯಿಸಿದ ಕಡಲೆಕಾಳನ್ನು ಬೆರೆಸಿಕೊಂಡು ಕಾಯಿ ತುರಿ ಚೆನ್ನಾಗಿ ಹರಡಿಕೊಳ್ಳುವವರೆಗೂ ಉಸುಳಿಯನ್ನು ಉರಿದು ಕೆಳಗಿಳಿಸಬೇಕು.
ಈಗ ಕಡಲೆಕಾಳು ಉಸುಳಿ ನೈವೇದ್ಯಕ್ಕೆ ತಯಾರಾಗಿದೆ. ( ಸೂಚನೆ: ಕಡಲೆಕಾಳು ಬೇಯಿಸುವಾಗಲೂ ಸ್ವಲ್ಪ ಉಪ್ಪು ಬೆರೆಸಿದ್ದರಿಂದ ಉಪ್ಪನ್ನು ಹಾಕುವಲ್ಲಿ ಜಾಗ್ರತೆಯಿಂದಿರಬೇಕು).



Click it and Unblock the Notifications
