Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಗಣೇಶನಿಗೆ ಕಡಲೆ ಉಸುಳಿ ಹೀಗೆ ಮಾಡಿ ನೋಡಿ
ಗೌರಿ ಗಣೇಶ ಹಬ್ಬ ಬರಲು ಇನ್ನೇನು ಕೆಲವೇ ದಿನಗಳಿವೆ. (ಗೌರಿ-ಆ.31-2011, ಗಣೇಶ-ಸೆ. 1, 2011). ಹಬ್ಬಗಳೆಂದ ಮೇಲೆ ಮನೆಯಲ್ಲಿ ತಿಂಡಿ ಊಟದ್ದೇ ಕಾರುಬಾರು. ಖಾದ್ಯಗಳಲ್ಲಿ ಹೊಸತನವಿದ್ದರೇನೆ ಹಬ್ಬಕ್ಕೆ ಕಳೆ. ಗಣೇಶನಿಗೆ ಪ್ರಿಯವಾದ ಕಡಲೆಕಾಳಿನ ಉಸುಳಿ ಇಲ್ಲದಿದ್ದರೆ ಈ ಹಬ್ಬಕ್ಕೆ ಅರ್ಥವೇ ಇಲ್ಲ.
ಕಡಲೆಕಾಳು ಉಸುಳಿಯನ್ನು ಅತಿ ಸುಲಭವಾಗಿ ಮತ್ತು ವಿಶೇಷವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಈ ಬಾರಿಯ ಗಣೇಶ ಹಬ್ಬಕ್ಕೆ ವಿಶೇಷ ಉಸುಳಿ ಮಾಡಿ ಗಣೇಶನಿಗೆ ನೈವೇದ್ಯಕ್ಕೆ ಇಡುವುದನ್ನು ಮರೆಯಬೇಡಿ.
ಬೇಕಾಗುವ ಪದಾರ್ಥಗಳು:
* 1 1/2 ಕಪ್ ಕಡಲೆಕಾಳು
* ಮೂರು ಚಮಚ ತುರಿದಿಟ್ಟುಕೊಂಡ ಕಾಯಿ
* ಸಾಸಿವೆ, ಉದ್ದಿನ ಬೇಳೆ, ಉಪ್ಪು
* ಎರಡು ಕೆಂಪು ಮೆಣಸಿನ ಕಾಯಿ
* ಕರಿಬೇವು, ಇಂಗು ಮತ್ತು ಎಣ್ಣೆ
* ಗರಂ ಮಸಾಲ ಸ್ವಲ್ಪ
ಮಾಡುವ ವಿಧಾನ: ಹಬ್ಬದ ಹಿಂದಿನ ದಿನ ಕಡಲೆಕಾಳನ್ನು ಒಂದು ರಾತ್ರಿ ನೆನೆಸಿಡಬೇಕು. ನಂತರ ಕಡಲೆಕಾಳನ್ನು ಚೆನ್ನಾಗಿ ಸೋಸಿ ಬೇಯಿಸಿ ಇಟ್ಟುಕೊಳ್ಳಬೇಕು. ನೀರನ್ನು ಬಸಿದ ನಂತರ ಸ್ವಲ್ಪ ಸಮಯ ಕಡಲೆಕಾಳನ್ನು ಹಾಗೆಯೇ ಆರಲು ಬಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮತ್ತು ಕೆಂಪು ಮೆಣಸಿನ ಕಾಯಿಯನ್ನು ತುಂಡಾಗಿ ಕತ್ತರಿಸಿ ಹಾಕಬೇಕು.
ನಂತರ ಅದಕ್ಕೆ ಕರಿಬೇವು ಹಾಕಿ ಇಂಗು ಮತ್ತು ಸ್ವಲ್ಪ ಗರಂ ಮಸಾಲ ಬೆರೆಸಿ ಹುರಿದುಕೊಳ್ಳಬೇಕು. ಕೊನೆಗೆ ತೆಂಗಿನ ತುರಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಲೆಯಿಂದ ಕೆಳಗೆ ಇಳಿಸಬೇಕು. ಈಗ ಈ ಮಿಶ್ರಣವನ್ನು ಚೆನ್ನಾಗಿ ಕದಡಿ ಅದಕ್ಕೆ ಬೇಯಿಸಿದ ಕಡಲೆಕಾಳನ್ನು ಬೆರೆಸಿಕೊಂಡು ಕಾಯಿ ತುರಿ ಚೆನ್ನಾಗಿ ಹರಡಿಕೊಳ್ಳುವವರೆಗೂ ಉಸುಳಿಯನ್ನು ಉರಿದು ಕೆಳಗಿಳಿಸಬೇಕು.
ಈಗ ಕಡಲೆಕಾಳು ಉಸುಳಿ ನೈವೇದ್ಯಕ್ಕೆ ತಯಾರಾಗಿದೆ. ( ಸೂಚನೆ: ಕಡಲೆಕಾಳು ಬೇಯಿಸುವಾಗಲೂ ಸ್ವಲ್ಪ ಉಪ್ಪು ಬೆರೆಸಿದ್ದರಿಂದ ಉಪ್ಪನ್ನು ಹಾಕುವಲ್ಲಿ ಜಾಗ್ರತೆಯಿಂದಿರಬೇಕು).



Click it and Unblock the Notifications