Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ಮಾಡಿ ನುಚ್ಚುಗೋಧಿಯ ಪಾಯಸ
ಜನವರಿ 22ಕ್ಕೆ ಇಡೀ ದೇಶವೇ ಎದುರು ನೋಡುತ್ತಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ನೆಲೆಸಲಿದ್ದಾನೆ. ಈ ಸಡಗರವನ್ನು ಇಡೀ ದೇಶವೇ ಆಚರಿಸುತ್ತಿದೆ. ಮನೆ-ಮನೆಗಳಲ್ಲಿ ಸಂಭ್ರಮ, ಈ ದಿನ ಶ್ರೀರಾಮ ಆರಾಧಿಸಿ, ಸಿಹಿಯನ್ನು ಮಾಡಲಾಗುವುದು. ಜನವರಿ 22ಕ್ಕೆ ನೀವು ನುಚ್ಚುಗೋಧಿಯ ಪಾಯಸ ಮಾಡಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:

ಬೇಕಾಗುವ ಸಾಮಗ್ರಿ
1/2 ಕಪ್ ನುಚ್ಚು ಗೋಧಿ(ಗೋಧಿ ರವೆ)
1 ಕಪ್ ಬೆಲ್ಲದ ಪುಡಿ
1 ಚಮಚ ಹೆಸರು ಬೇಳೆ
1 ಕಪ್ ಹಾಲು
ಏಲಕ್ಕಿ ಪುಡಿ 1/2 ಚಮಚ
1/2 ಕಪ್ ಪುಡಿ
1/4 ಕಪ್ ತೆಂಗಿನ ತುರಿ
(optional)
ಅಲಂಕಾರಕ್ಕೆ
1 ಚಮಚ ತುಪ್ಪ ಗೋಡಂಬಿ, ಬಾದಾಮಿ
ಮಾಡುವ ವಿಧಾನ:
* ದೊಡ್ಡ ಪಾತ್ರೆಯನ್ನು ಬಿಸಿ ಮಾಡಿ ಉರಿ ಕಡಿಮೆ ಮಾಡಿ ನುಚ್ಚು ಗೋಧಿ ಹಾಕಿ
ರೋಸ್ಟ್ ಮಾಡಿ, ತುಂಬಾ ರೋಸ್ಟ್ ಮಾಡಬೇಡಿ. 3-4 ನಿಮಿಷ ಹುರಿದರೆ ಸಾಕು. ನಂತರ
ತಟ್ಟೆಗೆ ಹಾಕಿ ಬದಿಯಲ್ಲಿ ಇಡಿ.
* ಹೆಸರು ಬೇಳೆಯನ್ನು ಕೂಡ 2-3 ನಿಮಿಷ ಹುರಿಯಿರಿ
* ನುಚ್ಚುಗೋಧಿ ಹಾಗೂ ಹೆಸರು ಬೇಳೆಯನ್ನು ಕುಕ್ಕರ್ನಲ್ಲಿ ಹಾಕಿ ಅದರ ಎರಡಯಪಟ್ಟು
ನೀರು ಹಾಕಿ ಕಡಿಮೆ ಉರಿಯಲ್ಲಿ 4 ವಿಶಲ್ ಆಗುವವರೆಗೆ ಬೇಯಿಸಿ.
* ಗ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ, ನೀರು ಬೇಕಿದ್ದರೆ
ಸ್ವಲ್ಪ ಸೇರಿಸಬಹುದು.
* ಬೆಲ್ಲದ ಪುಡಿ ಕರಗಿದ ಮೇಲೆ ಆ ಬೆಲ್ಲದ ನೀರನ್ನು ಸೋಸಿ, ಬೆಲ್ಲದ ಕಶ್ಮಲ
ತಳದದಲ್ಲಿರುತ್ತದೆ, ಅದನ್ನು ಬಿಸಾಡಿ,
* ಈಗ ಬೆಲ್ಲದ ನೀರನ್ನು 5 ನಿಮಿಷ ಕುದಿಸಿ.
* ಅದಕ್ಕೆ ಬೇಯಿಸಿದ ನುಚ್ಚು ಗೋಧಿ ಸೇರಿಸಿ, ಸೌಟ್ನಿಂದ ತಿರುಗಿಸಿ.
* ನಂತರ ಹಾಲನ್ನು ಹಾಕಿ ತಿರುಗಿಸಿ
* ಈಗ ಮತ್ತೊಂದು ಪ್ಯಾನ್ನಲ್ಲಿ ತುಪ್ಪ ಹಾಕಿ ಅದಕ್ಕೆ ಬಾದಾಮಿ, ಗೋಡಂಬಿ ಹಾಕಿ,
ಅದನ್ನು ಪಾಯಸದ ಜೊತೆ ಹಾಕಿ ಮಿಕ್ಸ್ ಮಾಡಿ.
ರೆಡಿಯಾದ ಪಾಯಸವನ್ನು ದೇವರಿಗೆ ಇಟ್ಟು ಸವಿಯಿರಿ.



Click it and Unblock the Notifications