ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ಮಾಡಿ ನುಚ್ಚುಗೋಧಿಯ ಪಾಯಸ

Posted By:

ಜನವರಿ 22ಕ್ಕೆ ಇಡೀ ದೇಶವೇ ಎದುರು ನೋಡುತ್ತಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ನೆಲೆಸಲಿದ್ದಾನೆ. ಈ ಸಡಗರವನ್ನು ಇಡೀ ದೇಶವೇ ಆಚರಿಸುತ್ತಿದೆ. ಮನೆ-ಮನೆಗಳಲ್ಲಿ ಸಂಭ್ರಮ, ಈ ದಿನ ಶ್ರೀರಾಮ ಆರಾಧಿಸಿ, ಸಿಹಿಯನ್ನು ಮಾಡಲಾಗುವುದು. ಜನವರಿ 22ಕ್ಕೆ ನೀವು ನುಚ್ಚುಗೋಧಿಯ ಪಾಯಸ ಮಾಡಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:

nuchchu godhi recipe

ಬೇಕಾಗುವ ಸಾಮಗ್ರಿ
1/2 ಕಪ್ ನುಚ್ಚು ಗೋಧಿ(ಗೋಧಿ ರವೆ)
1 ಕಪ್ ಬೆಲ್ಲದ ಪುಡಿ
1 ಚಮಚ ಹೆಸರು ಬೇಳೆ
1 ಕಪ್ ಹಾಲು
ಏಲಕ್ಕಿ ಪುಡಿ 1/2 ಚಮಚ
1/2 ಕಪ್ ಪುಡಿ
1/4 ಕಪ್ ತೆಂಗಿನ ತುರಿ
(optional)

ಅಲಂಕಾರಕ್ಕೆ
1 ಚಮಚ ತುಪ್ಪ ಗೋಡಂಬಿ, ಬಾದಾಮಿ

ಮಾಡುವ ವಿಧಾನ:
* ದೊಡ್ಡ ಪಾತ್ರೆಯನ್ನು ಬಿಸಿ ಮಾಡಿ ಉರಿ ಕಡಿಮೆ ಮಾಡಿ ನುಚ್ಚು ಗೋಧಿ ಹಾಕಿ ರೋಸ್ಟ್‌ ಮಾಡಿ, ತುಂಬಾ ರೋಸ್ಟ್ ಮಾಡಬೇಡಿ. 3-4 ನಿಮಿಷ ಹುರಿದರೆ ಸಾಕು. ನಂತರ ತಟ್ಟೆಗೆ ಹಾಕಿ ಬದಿಯಲ್ಲಿ ಇಡಿ.
* ಹೆಸರು ಬೇಳೆಯನ್ನು ಕೂಡ 2-3 ನಿಮಿಷ ಹುರಿಯಿರಿ
* ನುಚ್ಚುಗೋಧಿ ಹಾಗೂ ಹೆಸರು ಬೇಳೆಯನ್ನು ಕುಕ್ಕರ್‌ನಲ್ಲಿ ಹಾಕಿ ಅದರ ಎರಡಯಪಟ್ಟು ನೀರು ಹಾಕಿ ಕಡಿಮೆ ಉರಿಯಲ್ಲಿ 4 ವಿಶಲ್ ಆಗುವವರೆಗೆ ಬೇಯಿಸಿ.
* ಗ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ, ನೀರು ಬೇಕಿದ್ದರೆ ಸ್ವಲ್ಪ ಸೇರಿಸಬಹುದು.
* ಬೆಲ್ಲದ ಪುಡಿ ಕರಗಿದ ಮೇಲೆ ಆ ಬೆಲ್ಲದ ನೀರನ್ನು ಸೋಸಿ, ಬೆಲ್ಲದ ಕಶ್ಮಲ ತಳದದಲ್ಲಿರುತ್ತದೆ, ಅದನ್ನು ಬಿಸಾಡಿ,
* ಈಗ ಬೆಲ್ಲದ ನೀರನ್ನು 5 ನಿಮಿಷ ಕುದಿಸಿ.
* ಅದಕ್ಕೆ ಬೇಯಿಸಿದ ನುಚ್ಚು ಗೋಧಿ ಸೇರಿಸಿ, ಸೌಟ್‌ನಿಂದ ತಿರುಗಿಸಿ.
* ನಂತರ ಹಾಲನ್ನು ಹಾಕಿ ತಿರುಗಿಸಿ
* ಈಗ ಮತ್ತೊಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಅದಕ್ಕೆ ಬಾದಾಮಿ, ಗೋಡಂಬಿ ಹಾಕಿ, ಅದನ್ನು ಪಾಯಸದ ಜೊತೆ ಹಾಕಿ ಮಿಕ್ಸ್ ಮಾಡಿ.
ರೆಡಿಯಾದ ಪಾಯಸವನ್ನು ದೇವರಿಗೆ ಇಟ್ಟು ಸವಿಯಿರಿ.

[ of 5 - Users]
X
Desktop Bottom Promotion