Just In
- 47 min ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 4 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
Don't Miss
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಕ್ಕರಿಕೆ ಚಿಗುರೆಲೆಗಳ ತಂಬುಳಿ
ಕೆಲವು ನಮ್ಮ ಸುತ್ತಮುತ್ತಲೇ ಇರುವ ಗಿಡಗಳೇ ಆಗಿದ್ದರೂ ಅವುಗಳ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ನೆಕ್ಕರಿಕೆಯೂ ಹಾಗೆಯೇ ಆಗಿರುವ ಸಸ್ಯಸಂಕುಲದಲ್ಲಿ ಒಂದೆನಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಲಭ್ಯವಿದ್ದರೂ ಮಾರುಕಟ್ಟೆ ಪ್ರವೇಶಿಸುವುದಿಲ್ಲ. ಜನರಿಗೆ ಇರದ ಪ್ರಯೋಜನ ತಿಳಿದಿಲ್ಲ. ವಿದೇಶದಲ್ಲಿ ಬಳಕೆಯಲ್ಲಿದ್ದರೂ ನಮ್ಮಲ್ಲಿ ಅಪರಿಚಿತವೆನಿಸಿರುವ ಸಸ್ಯ.
ನೆಕ್ಕರಿಕೆ ಚಿಗುರೆಲೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನ ನೀಡುವ ಎಲೆಗಳಾಗಿವೆ. ಇಂಡೋನೇಷಿಯಾದ ಜನ ಇದನ್ನು ತಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದು ಗೂಗಲ್ ತಿಳಿಸುತ್ತದೆ. ಅನೇಕರು ಇದರ ಹಣ್ಣುಗಳನ್ನು ಕೇಕ್ ಗಳ ತಯಾರಿಕೆಯಲ್ಲಿ ಡ್ರೈಫ್ರೂಟ್ಸ್ ಆಗಿ ಬಳಸುತ್ತಾರಂತೆ.
ನಾವಿಲ್ಲಿ ನೆಕ್ಕರಿಕೆ ಚಿಗುರೆಲೆಗಳಿಂದ ತಂಬಳಿ ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ.
ಈ ಗಿಡವನ್ನು Melastoma malabathricum ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಾಡು ಸಸ್ಯವೆಂದೇ ಹೇಳಬಹುದು. ಈ ಗಿಡದಲ್ಲಿ ನೀಲಿ ಅಥವಾ ಪಿಂಕ್ ಎಂದು ಹೇಳಬಹುದಾದ ಬಣ್ಣದ ಹೂವುಗಳಾಗುತ್ತದೆ.
ಇದರ ಎಲೆಗಳು,ಬೇರುಗಳು, ತೊಗಟೆ ಸೇರಿದಂತೆ ಸಸ್ಯದ ಎಲ್ಲಾ ಭಾಗಗಳೂ ಕೂಡ ಔಷಧೀಯ ವಸ್ತುಗಳಾಗಿವೆ.ನಮ್ಮ ದೇಶದಲ್ಲಿ ಲಭ್ಯವಿರುವ ಅಂದಾಜು 4000 ಸಾಂಬಾರ ಪದಾರ್ಥಗಳಲ್ಲಿ ನೆಕ್ಕರಿಯೂ ಒಂದು.
ಹಾಗಾದ್ರೆ ತಂಬುಳಿ ಮಾಡುವುದು ಹೇಗೆ ತಿಳಿದುಕೊಳ್ಳೋಣ.
Recipe By: Sushma
Recipe Type: Tambuli
Serves: 4
-
ಬೇಕಾಗುವ ಸಾಮಗ್ರಿಗಳು:
ನೆಕ್ಕರಿಕೆ ಚಿಗುರೆಲೆಗಳು- ಒಂದು ಮುಷ್ಠಿ
ಕಾಳುಮೆಣಸು- ಐದರಿಂದ ಆರು ಕಾಳುಗಳು
ಜೀರಿಗೆ- ಒಂದು ಸ್ಪೂನ್
ಮಜ್ಜಿಗೆ- ಅರ್ಧ ಲೀಟರ್
ತೆಂಗಿನತುರಿ- ಒಂದು ಮುಷ್ಟಿ
ಬೆಲ್ಲ- ನಾಲ್ಕೈದು ಗೋಲಿ ಗಾತ್ರದಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಸ್ಪೂನ್
ಕೆಂಪುಮೆಣಸು_1
-
ಮಾಡುವ ವಿಧಾನ:
ಮೊದಲಿಗೆ ಎರಡು ಸ್ಪೂನ್ ಅಡುಗೆ ಎಣ್ಣೆಗೆ ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಹಾಕಿ ಸ್ವಲ್ಪ ಹುರಿಯಿರಿ.
ನಂತರ ಅದಕ್ಕೆ ಹೆಚ್ಚಿದ ನೆಕ್ಕರಿಕೆ ಚಿಗುರೆಲೆಗಳನ್ನು ಹಾಕಿ ಬಾಡಿಸಿ.
ಇದಕ್ಕೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ತಂಬಳಿ ಚಿಗುಟಾಗಿ ಇರಬಾರದು ಎನ್ನಿಸುವವರು ರಸವನ್ನು ಸೋಸಿಕೊಳ್ಳಬಹುದು ಅಥವಾ ಹಾಗೆಯೇ ಬಳಸಲೂ ಬಹುದು.
ರುಬ್ಬಿದ ಮಿಶ್ರಣಕ್ಕೆ ಕಡೆದ ಮಜ್ಜಿಗೆಯನ್ನು ಸೇರಿಸಿ.
ಉಪ್ಪು,ಬೆಲ್ಲ ಹಾಕಿ ಕದಡಿ.
ನಂತರ ಜೀರಿಗೆ,ಸಾಸಿವೆ, ಕೆಂಪುಮೆಣಸು ಹಾಕಿ ತಂಬಳಿಗೆ ಒಗ್ಗರಣೆ ಮಾಡಿದರೆ ನೆಗ್ಗರಿಕೆ ಚಿಗುರೆಲೆಗಳ ತಂಬಳಿ ಸಿದ್ಧವಾಗುತ್ತದೆ.
- ಗಾಯಗಳ ನಿವಾರಣೆಗೆ ಇದು ಸಹಕಾರಿ. ಮಲವಿಸರ್ಜನೆ ಸಮಸ್ಯೆಗೆ ಪರಿಣಾಮಕಾರಿ. ಮೂತ್ರಕೋಶದ ಬಲವರ್ಧನೆಗೆ ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬಾಣಂತಿಯರಿಗೆ ಈ ತಂಬಳಿ ಬಡಿಸುವುದು ವಾಡಿಕೆಯಲ್ಲಿದೆ. ಗರ್ಭಕೋಶ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಚ್ಚಿನ ರಕ್ತಸ್ರಾವವಾಗುತ್ತಿದ್ದರೆ ಈ ತಂಬಳಿ ಮಾಡಿ ಸೇವಿಸುವುದರಿಂದಾಗಿ ಪರಿಹಾರ ಪಡೆಯಬಹುದು. ಪೈಲ್ಸ್ ಸಮಸ್ಯೆಗೆ ಇದು ರಾಮಬಾಣ. ಕ್ಯಾನ್ಸರ್ ನಿವಾರಣೆಯಲ್ಲೂ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.