Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಳೆಗಾಲದಲ್ಲಿ ಆಗಾಗ ಕಾಡುವ ಕೆಮ್ಮು-ಶೀತ ತಡೆಗಟ್ಟಲು ಬೆಸ್ಟ್ ಈ ಕಷಾಯ
ಮಳೆಗಾಲದಲ್ಲಿ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಸಾಮಾನ್ಯ, ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿದ್ದರೆ ವಾರದಲ್ಲಿ ಒಂದು ಬಾರಿಯಾದರೂ ಈ ಬಗೆಯ ಸಮಸ್ಯೆ ಕಾಡುವುದು, ನೀವು ಈ ಸಮಯದಲ್ಲಿ ಮನೆಯಲ್ಲಿ ಕಷಾಯ ಮಾಡಿಡುವುದು ಒಳ್ಳೆಯದು. ಈ ಕಷಾಯ ಪುಡಿಯನ್ನು ಹಾಲಿನಲ್ಲಿ ಹಾಕಿ ಕೊಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಬೇಕಾಗುವ ಸಾಮಗ್ರಿ
1/2 ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
2 ಚಮಚ ಕಾಳು ಮೆಣಸು
1 ಚಮಚ ಸೋಂಪು
5-6 ಏಲಕ್ಕಿ
10 ಲವಂಗ
1/2 ಚಮಚ ಅರಿಶಿಣ ಪುಡಿ
1/2 ಚಮಚ ಶುಂಠಿ ಪುಡಿ
ಸರ್ವ್ ಮಾಡುವಾಗ
ಎರಡೂವರೆ ಕಪ್ ನೀರು
2 ಚಮಚ ಬೆಲ್ಲದ ಪುಡಿ
1/4 ಕಪ್ ಹಾಲು
ಮಾಡುವ ವಿಧಾನ
ಒಂದು ಪ್ಯಾನ್ ತೆಗೆದು 1/2 ಕಪ್ ಕೊತ್ತಂಬರಿ ಬೀಜ, 1/4 ಕಪ್ ಜೀರಿಗೆ, 2 ಚಮಚ
ಕಾಳು ಮೆಣಸು, 1 ಚಮಚ ಸೋಂಪು , ಏಲಕ್ಕಿ, ಲವಂಗ ಸೇರಿಸಿ ಕಡಿಮೆ ಉರಿಯಲ್ಲಿ
ಹುರಿಯಿರಿ.
ಈ ಮಸಾಲೆ ಸಾಮಗ್ರಿಯನ್ನು ಉರಿದಾಗ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ, ರೋಸ್ಟ್
ಮಾಡಿ ಆದರೆ ಅದು ಮಸಿಯಾಗುವಂತೆ ರೋಸ್ಟ್ ಮಾಡಬೇಡಿ.
ನಂತರ ಅವುಗಳನ್ನು ಒಂದು ತಟ್ಟೆಗೆ ಹಾಕಿ
ಸ್ವಲ್ಪ ತಣ್ಣಗಾದ ಮೇ ಅರಿಶಿಣ ಪುಡಿ, ಸ್ವಲ್ಪ ಶುಂಠಿ ಪುಡಿ ಸೇರಿಸಿ ಪುಡಿ ಮಾಡಿ,
ಯಾವುದೇ ನೀರು ಸೇರಿಸಬಾರದು, ಅಲ್ಲದೆ ಬ್ಲೆಂಡರ್ಗೆ ಹಾಕುವಾಗ ಅದರಲ್ಲಿ ಸ್ವಲ್ಪವೂ
ನೀರಿನಂಶ ಇರಬಾರದು, ಬ್ಲೆಂಡರ್ ಒರೆಸಿ ನಂತರ ರೋಸ್ಟ್ ಮಾಡಿದ ಸಾಮಗ್ರಿ ಹಾಕಿ
ಪುಡಿ ಮಾಡಿ.
ಈ ಪುಡಿಯನ್ನು ಗಾಜಿನ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿಡಿ.
ಕಷಾಯ ಮಾಡುವಾಗ
ನೀವು ನೀರು, ಹಾಲು, ಬೆಲ್ಲ ಹಾಕಿ ಕುದಿಸಿ, ನಂತರ ಈ ಮಿಶ್ರಣ ಕುದಿ ಬರುವಾಗ
ಒಂದೂವರೆ ಚಮಚ ಕಷಾಯ ಪುಡಿ ಹಾಕಿ ಮಿಕ್ಸ್ ಮಾಡಿ, ಮತ್ತೆ ಎರಡು ನಿಮಿಷ ಕುದಿಸಿ,
ಉರಿಯಿಂದ ಇಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯಿರಿ.
ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಇದನ್ನು ಟೀ, ಕಾಫಿ ಬದಲಿಗೆ ಒಂದು ಹೊತ್ತು ಕುಡಿಯುವುದರಿಂದ ಸಾಮಾನ್ಯ ಶೀತ, ಕೆಮ್ಮು ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.



Click it and Unblock the Notifications