Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಮಳೆಗಾಲದಲ್ಲಿ ಆಗಾಗ ಕಾಡುವ ಕೆಮ್ಮು-ಶೀತ ತಡೆಗಟ್ಟಲು ಬೆಸ್ಟ್ ಈ ಕಷಾಯ
ಮಳೆಗಾಲದಲ್ಲಿ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಸಾಮಾನ್ಯ, ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿದ್ದರೆ ವಾರದಲ್ಲಿ ಒಂದು ಬಾರಿಯಾದರೂ ಈ ಬಗೆಯ ಸಮಸ್ಯೆ ಕಾಡುವುದು, ನೀವು ಈ ಸಮಯದಲ್ಲಿ ಮನೆಯಲ್ಲಿ ಕಷಾಯ ಮಾಡಿಡುವುದು ಒಳ್ಳೆಯದು. ಈ ಕಷಾಯ ಪುಡಿಯನ್ನು ಹಾಲಿನಲ್ಲಿ ಹಾಕಿ ಕೊಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಬೇಕಾಗುವ ಸಾಮಗ್ರಿ
1/2 ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
2 ಚಮಚ ಕಾಳು ಮೆಣಸು
1 ಚಮಚ ಸೋಂಪು
5-6 ಏಲಕ್ಕಿ
10 ಲವಂಗ
1/2 ಚಮಚ ಅರಿಶಿಣ ಪುಡಿ
1/2 ಚಮಚ ಶುಂಠಿ ಪುಡಿ
ಸರ್ವ್ ಮಾಡುವಾಗ
ಎರಡೂವರೆ ಕಪ್ ನೀರು
2 ಚಮಚ ಬೆಲ್ಲದ ಪುಡಿ
1/4 ಕಪ್ ಹಾಲು
ಮಾಡುವ ವಿಧಾನ
ಒಂದು ಪ್ಯಾನ್ ತೆಗೆದು 1/2 ಕಪ್ ಕೊತ್ತಂಬರಿ ಬೀಜ, 1/4 ಕಪ್ ಜೀರಿಗೆ, 2 ಚಮಚ
ಕಾಳು ಮೆಣಸು, 1 ಚಮಚ ಸೋಂಪು , ಏಲಕ್ಕಿ, ಲವಂಗ ಸೇರಿಸಿ ಕಡಿಮೆ ಉರಿಯಲ್ಲಿ
ಹುರಿಯಿರಿ.
ಈ ಮಸಾಲೆ ಸಾಮಗ್ರಿಯನ್ನು ಉರಿದಾಗ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ, ರೋಸ್ಟ್
ಮಾಡಿ ಆದರೆ ಅದು ಮಸಿಯಾಗುವಂತೆ ರೋಸ್ಟ್ ಮಾಡಬೇಡಿ.
ನಂತರ ಅವುಗಳನ್ನು ಒಂದು ತಟ್ಟೆಗೆ ಹಾಕಿ
ಸ್ವಲ್ಪ ತಣ್ಣಗಾದ ಮೇ ಅರಿಶಿಣ ಪುಡಿ, ಸ್ವಲ್ಪ ಶುಂಠಿ ಪುಡಿ ಸೇರಿಸಿ ಪುಡಿ ಮಾಡಿ,
ಯಾವುದೇ ನೀರು ಸೇರಿಸಬಾರದು, ಅಲ್ಲದೆ ಬ್ಲೆಂಡರ್ಗೆ ಹಾಕುವಾಗ ಅದರಲ್ಲಿ ಸ್ವಲ್ಪವೂ
ನೀರಿನಂಶ ಇರಬಾರದು, ಬ್ಲೆಂಡರ್ ಒರೆಸಿ ನಂತರ ರೋಸ್ಟ್ ಮಾಡಿದ ಸಾಮಗ್ರಿ ಹಾಕಿ
ಪುಡಿ ಮಾಡಿ.
ಈ ಪುಡಿಯನ್ನು ಗಾಜಿನ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿಡಿ.
ಕಷಾಯ ಮಾಡುವಾಗ
ನೀವು ನೀರು, ಹಾಲು, ಬೆಲ್ಲ ಹಾಕಿ ಕುದಿಸಿ, ನಂತರ ಈ ಮಿಶ್ರಣ ಕುದಿ ಬರುವಾಗ
ಒಂದೂವರೆ ಚಮಚ ಕಷಾಯ ಪುಡಿ ಹಾಕಿ ಮಿಕ್ಸ್ ಮಾಡಿ, ಮತ್ತೆ ಎರಡು ನಿಮಿಷ ಕುದಿಸಿ,
ಉರಿಯಿಂದ ಇಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯಿರಿ.
ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಇದನ್ನು ಟೀ, ಕಾಫಿ ಬದಲಿಗೆ ಒಂದು ಹೊತ್ತು ಕುಡಿಯುವುದರಿಂದ ಸಾಮಾನ್ಯ ಶೀತ, ಕೆಮ್ಮು ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.



Click it and Unblock the Notifications